ಕೋಲಾರ : ಕೋಲಾರದಲ್ಲಿಅರಣ್ಯ ಇಲಾಖೆಯ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಲಾಢ್ಯರು ಮತ್ತು ರಾಜಕೀಯ ವ್ಯಕ್ತಿಗಳು ಅತಿಕ್ರಮಿಸಿರುವ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವಿನ ತಂಟೆಗೆ ಹೋಗದ ಅರಣ್ಯ ಇಲಾಖೆಯು ಬಡವರ ಬೆಳೆಗಳ ಮೇಲೆ ಜೆಸಿಬಿ ಹರಿಸಿ ಪ್ರತಾಪ ತೋರಿಸುವುದು ಸರಿಯಲ್ಲ ಪ್ರತಿಭಟನೆ ನಡೆಸಿ ಉಪ ಅರಣ್ಯಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಅವರಿಗೆ ಮನವಿ ಸಲ್ಲಿಸಲಾಯಿತು. https://ainkannada.com/action-should-be-taken-against-those-who-encroached-on-government-land-sr-hiremath-demands/ ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ ನಾರಾಯಣಗೌಡ ಮಾತನಾಡಿ, ಅರಣ್ಯ ಅಧಿಕಾರಿಗಳು ಅಮಾಯಕ ರೈತರು ಬೆಳೆಗಳ ಕಟಾವಿಗೂ ಅವಕಾಶ ನೀಡದೆ ಜೆಸಿಬಿಗಳನ್ನು ನುಗ್ಗಿಸುತ್ತಿರುವುದು ಸರಿಯಲ್ಲ. ರೈತರ ಮೇಲೆ ಪ್ರತಾಪ ತೋರಿಸುವ ಅರಣ್ಯಧಿಕಾರಿಗಳು ರಾಜಕೀಯ ಹಿನ್ನೆಲೆಯುಳ್ಳ ಬಲಾಡ್ಯರ ಬಳಿಗೂ ಸುಳಿಯದೇ ಇರುವುದು ಸರಿಯೇ ಕಾನೂನಿನಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಪ್ರತ್ಯೇಕ ನ್ಯಾಯವಿದೆಯೇ ಎಂದು ಪ್ರಶ್ನಿಸಿದರು.
Author: Author AIN
ಮುಂಬೈ: ಉಚಿತ ಮಾಸಿಕ ಬಳಕೆಯನ್ನು ಮೀರಿದ ಎಟಿಎಂ ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕವನ್ನು ಮೇ 1 ರಿಂದ ಪ್ರತಿ ವಹಿವಾಟಿಗೆ ರೂ. 2 ರಿಂದ ರೂ. 23 ರಷ್ಟು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಬ್ಯಾಂಕ್ಗಳಿಗೆ ಅನುಮತಿ ನೀಡಿದೆ. ಒಂದು ತಿಂಗಳಿಗೆ ಎಟಿಎಂನಿಂದ 5 ಬಾರಿ ಉಚಿತವಾಗಿ ಹಣವನ್ನು ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಲು ಹೋದರೆ 31 ರೂ.ಗಳನ್ನು ಕಡಿತಗೊಳಿಸುತ್ತಿತ್ತು. ಆದರೆ ಇದೀಗ ಈ ಶುಲ್ಕವನ್ನು 2ರೂ.ಗೆ ಏರಿಕೆ ಮಾಡಿದ್ದು, ಗರಿಷ್ಠ ಮಿತಿ ಮೀರಿ ಡ್ರಾ ಮಾಡಿದ್ರೆ 23 ರೂ. ಕಡಿತಗೊಳ್ಳಲಿವೆ. ಈ ಮೂಲಕ 21 ರೂ.ಯಿಂದ 23 ರೂ.ಗೆ ಏರಿಕೆಯಾಗಿದೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಪ್ರಸ್ತುತ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಖಾತೆ ಹೊಂದಿರುವವರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ ಐದು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರ ಪ್ರಮಾಣದಲ್ಲಿ ಹೆಚ್ಚಳವಾದಾಗ ಆಗ ಈ 2ರೂ.…
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಬಿಸಿಲಿನ ತಾಪಕ್ಕೆ ನಲುಗಿತ್ತು. ಬೇಸಿಗೆಯ ಭಾರೀ ಬಿಸಿಲಿನ ತಾಪಮಾನಕ್ಕೆ ಭಾರತದ ಉತ್ತರ ಹಾಗೂ ಪಶ್ಚಿಮ ಭಾಗಗಳು ಅಕ್ಷರಶಃ ಕಂಗೆಟ್ಟಿತು. ಇದೀಗ ರಾಷ್ಟ್ರ ರಾಜಧಾನಿ ದೆಹಲಿ ಭಾಗಗಳಲ್ಲಿ ಕಳೆದ 2 ದಿನಗಳಲ್ಲಿ ತಾಪಮಾನ 7 ಡಿಗ್ರಿ ಇಳಿಕೆಯಾಗಿದ್ದು, ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ದಿನಗಳ ಹಿಂದೆಯಷ್ಟೇ ದೆಹಲಿಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇತ್ತು. ಶುಕ್ರವಾರದ ವೇಳೆಗೆ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು, ಕಳೆದ ಎರಡೂ ದಿನದಲ್ಲಿ ಈ ತಾಪಮಾನವನ್ನು ಮೀರಿಲ್ಲ ಎಂದು ವರದಿ ಮಾಡಿದೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಸಾಮಾನ್ಯವಾಗಿ ಒಂದು ಪ್ರದೇಶದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗಾಳಿಯ ಒತ್ತಡದಿಂದಾಗಿ ತಾಪಮಾನ ಇಳಿಕೆ ಕಾರಣವಾಗುತ್ತದೆ. ದೆಹಲಿಯ ಪೂರ್ವದಲ್ಲಿರುವ ಗೋರಖ್ಪುರ ಹಾಗೂ ಪಶ್ಚಿಮದಲ್ಲಿರುವ ಅಮೃತಸರದಲ್ಲಿ 10 ಗ್ರೇಡಿಯಂಟ್ ಪಾಯಿಂಟ್ ಗಾಳಿಯ ಒತ್ತಡವಿರುವುದರಿಂದ ದೆಹಲಿಯಲ್ಲಿ ತಾಪಮಾನ ಇಳಿಕೆಗೆ ಕಾರಣವಾಗಿದೆ.
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ಸಿಎಂ ಆಪ್ತ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರನ್ನು ಭೇಟಿಯಾಗಿದ್ದಾರೆ. ಇತ್ತೀಚಿಗಷ್ಟೇ ದೆಹಲಿಗೆ ತೆರಳಿ HD ಕುಮಾರಸ್ವಾಮಿರವನ್ನು ಭೇಟಿಯಾಗಿದ್ದರು. ಸಿದ್ದರಾಮಯ್ಯನವರ ಬಣದ ಆಪ್ತರೆಂದು ಗುರಿತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರ ಭೇಟಿ ಅದರಲ್ಲೂ ದೆಹಲಿಯಿಂದ ವಾಪಸ್ಸಾದ ಬಳಿಕ ಪರಸ್ಪರ ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಇನ್ನೂ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ನಾನು ಮತ್ತು ಮಹದೇವಪ್ಪ 30 ವರ್ಷಗಳಿಂದಲೂ ಪರಸ್ಪರ ಭೇಟಿಯಾಗುತ್ತಲೇ ಇರುತ್ತೇವೆ. ಬಹಳಷ್ಟು ಸಚಿವರ ಜೊತೆಯೂ ಈ ರೀತಿ ಚರ್ಚೆಯಾಗುತ್ತಿರುತ್ತವೆ. ವಿಶೇಷತೆ ಇಲ್ಲ ಎಂದರು. ಹನಿಟ್ರ್ಯಾಪ್ ಬಗ್ಗೆ ಸಚಿವ ರಾಜಣ್ಣ ನೀಡಿರುವ ದೂರಿನಲ್ಲಿ ಬೆಂಗಳೂರಿನ ಪ್ರಭಾವಿ ನಾಯಕರಿದ್ದಾರೆ ಎಂದು ಪ್ರಸ್ತಾಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ ಯಾರ ಕೈವಾಡ ಎಂಬುದನ್ನು ಕಂಡುಹಿಡಿಯುವುದು ಪೊಲೀಸರ ಕರ್ತವ್ಯ. ನಾವು ಹೇಳಲು ಬರುವುದಿಲ್ಲ. ರಾಜಣ್ಣ ಹೆಸರಿಸಿರುವಂತೆ ನಾಯಕರನ್ನು ಹುಡುಕಲು ಸಮಯ ಬೇಕಾಗುತ್ತದೆ. ದೇಶಾದ್ಯಂತ ಬಹಳಷ್ಟು ಮಂದಿಯಿದ್ದಾರೆ. ಬಹಳಷ್ಟು ಘಟನೆಗಳು ಕೂಡ ನಡೆದಿವೆ. ಇಂತವರೇ ಮಾಡಿದ್ದಾರೆ ಎಂದು ಹೇಳಲು…
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಂದು ರಿಲೀಸ್ ಆಗಲಿದ್ದಾರೆ. ಇವರು ಗೆಳೆಯರು ಜಾಮೀನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ವಿನಯ್ ಗೌಡ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಮಚ್ಚಿನ ಕಥೆ ಬಗ್ಗೆ ವಿನಯ್ ಮಾತು “ಎಲ್ಲರಿಗೂ ನಮಸ್ಕಾರ. ಇಡೀ ನಾಡಿನ ಜನತೆ, ನನ್ನ ಅಭಿಮಾನಿಗಳು, ಸ್ನೇಹಿತರಿಗೆ ಕ್ಷಮೆ ಕೇಳುತ್ತೇನೆ. ನೀವು ಒಂದು ಮಚ್ಚಿನ ಕತೆಯನ್ನು ನೋಡುತ್ತಿದ್ದೀರಿ. ನಾವು ಮಚ್ಚು ಹಿಡಿದು ರೀಲ್ಸ್ ಮಾಡಿದ್ದೆವು. ಇದರಿಂದ ತುಂಬ ಜನರಿಗೆ ಸಮಸ್ಯೆ ಆಗಿದೆ. ನಮ್ಮನ್ನು ಹೊರಗಡೆ ಕರೆದುಕೊಂಡು ಬರಲು ನನ್ನ ಕುಟುಂಬ, ಸ್ನೇಹಿತರು ಒದ್ದಾಡಿದ್ದಾರೆ. ಪೊಲೀಸ್ ಠಾಣೆ, ಕೋರ್ಟ್, ಕೇಂದ್ರ ಕಾರಾಗೃಹ ಎಂದು ಹಗಲು-ರಾತ್ರಿ ಓಡಾಡಿದ್ದಾರೆ. ರಜತ್ಗೆ ಕೊಟ್ಟಿದ್ದ ಪ್ರಾಪರ್ಟಿ ಅದಾಗಿತ್ತು, ನಾನು ತಗೊಂದು 18 ಸೆಕೆಂಡ್ ರೀಲ್ಸ್ ಮಾಡಿದ್ದೇನೆ. ಪೊಲೀಸರು ಸಾಮಾನ್ಯ ಪ್ರಜೆ ರೀತಿ ತಮಗೂ ತನಿಖೆ ಮಾಡಿದ್ದಾರೆ. ಅರಿವಿಲ್ಲದೇ ಆಗಿರುವ…
ವಿಜಯನಗರ : ಸಮಾಜ ಪರಿವರ್ತನಾ ಸಂಸ್ಥೆ ಸುದೀರ್ಘ ಹೋರಾಟಕ್ಕೆ ಜಯ ಸಿಗುತ್ತೆ ಎನ್ನುವ ವಿಶ್ವಾಸ ಇದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸರ್ಕಾರಿ ಜಮೀನು ಒತ್ತುವರಿ ತೆರವು ವಿಚಾರವಾಗಿ ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್ ಹಿರೇಮಠ ಪ್ರತಿಕ್ರಿಯೆ ನೀಡಿದ್ದಾರೆ. ಹೊಸಪೇಟೆಯಲ್ಲಿಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಪ್ರಭಾವಿ ವ್ಯಕ್ತಿಗಳಿಂದ 71 ಎಕರೆ ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗಿದೆ. ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟದ ಬಳಿಕ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಬೆಂಚ್ ತೆರವು ಆದೇಶ ಮಾಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ತೆರವು ಕಾರ್ಯಚರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಕುಮಾರಸ್ವಾಮಿ ಅವ್ರ ರಾಮನಗರ ಜಿಲ್ಲೆಯ ಕೇತಗಾಯನಹಳ್ಳಿ 14 ಎಕರೆ ಒತ್ತುವರಿ ಭೂಮಿಗೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಒಟ್ಟು 71 ಎಕರೆ 30 ಗುಂಟೆ ಒತ್ತುವರಿಯಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಜಾಗೆ ತೆರವು ಮಾಡಿ ಸರ್ಕಾರದ ವಶಕ್ಕೆ ತೆಗೆದುಕೊಳ್ತಾರೆ ಅಂತಾ ವಿಶ್ವಾಸವಿದೆ https://www.youtube.com/watch?v=dashV_C7m1M ಸರ್ಕಾರಿ ಜಾಗ ಒತ್ತುವರಿ ಮಾಡಿದ…
ಬೆಳಗಾವಿ : ಹಲ್ಲೆ ಮಾಡಿದವರನ್ನ ಬಂಧಿಸಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ನೊಂದ ಕುಟುಂಬವೊಂಧು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಘಟನೆ ಮನೀಡಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಡ್ರಾವಿ ಗ್ರಾಮದ ಅಕ್ಷತಾ ಅವರ ಕುಟುಂಬ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಗೆ ಮನವಿ ಸಲ್ಲಿದ್ದಾರೆ. ಎರಡು ಎಕರೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 25 ಜನರಿಂದ ನಮ್ಮ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ಆರೋಪಿಸಿದ್ದಾರೆ. ನಮಗೆ ಸೇರಿದ ಜಮೀನು ಕರೆವ್ವ ದೇವಸ್ಥಾನಕ್ಕೆ ಸೇರಿದು ಎಂಬುವುದು ಕೆಲವರು ವಾದ ಮಾಡುತ್ತಿದ್ದಾರೆ. ನಮ್ಮ ಹೆಸರಿನಲ್ಲಿಯೇ ಎಲ್ಲ ದಾಖಲೆಗಳಿವೆ. ನಮ್ಮ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದರವನ್ನ ಬಂಧಿಸುವಂತೆ ಅಕ್ಷತಾ ಒತ್ತಾಯಿಸಿದ್ದಾರೆ. https://ainkannada.com/commission-scam-in-egg-money-for-anganwadi-children-video-goes-viral/ ಹಲ್ಲೆ ಸಂಬಂಧ ದೂರು ಕೊಟ್ಟರು ಆರೋಪಿಗಳ ಜತೆಗೆ ಸ್ಥಳೀಯ ಪೊಲೀಸರು ಶಾಮೀಲು ಆಗಿದ್ದಾರೆ. ನಮ್ಮ ಮೇಲೆ ಹಲ್ಲೆಗೈದ ಆರೋಪಿಗಳ ಜತೆಗೆ ಪೊಲೀಸರು ಜ್ಯೂಸ್ ಸೇವನೆ ಮಾಡ್ತಾರೆ. ಹಲ್ಲೆಗೈದ ಯಾವೊಬ್ಬ ಆರೋಪಿಗಳನ್ನ ಬಂಧಿಸುವ ಕೆಲಸ ಮಾಡಲ್ಲ. ಮೂಡಲಗಿ…
ಬೆಳಗಾವಿ : ಇಲ್ಲಿ ಹಿಂದುಗಳೇ ಮುಸ್ಲಿಂ ಮೂಲ ದೇವರ ಆರಾಧಕರು, ನಾಡಿನಲ್ಲಿ ಎಷ್ಟೇ ಕೋಮು ಸಂಘರ್ಷಗಳಾದ್ರೂ, ಇಲ್ಲಿ ಮಾತ್ರ ಅಂತಹ ಅಹಿತಕ್ಕೆ ಸ್ಥಳವಿಲ್ಲ, ಎಲ್ಲರೂ ಏಕತೆಯ ಭಾವನೆಯಿಂದ ನಡೆದುಕೊಂಡು ಮಾದರಿ ಗ್ರಾಮವಾಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಲ್ಲೂತ್ತಿ ಅನ್ನೋ ಪುಟ್ಟ ಗ್ರಾಮದಲ್ಲಿ ಹಿಂದೂ ಜನಾಂಗದ ಮಧ್ಯೆ ಕೇವಲ ಒಂದೇ ಒಂದು ಮುಸ್ಲಿಂ ಕುಟುಂಬ ಕುಟುಂಬ ಮಾತ್ರ ವಾಸಿಸುತ್ತದೆ . ಆದರೆ ಇಲ್ಲಿ ಮುಸ್ಲಿಂ ಮನೆತನವನ್ನು ಎಲ್ಲರು ಅತಿ ಗೌರವದಿಂದ ಕಾಣುತ್ತಾರೆ .ಅದರಂತೆ ಹಿಂದೂ ಮುಸ್ಲಿಂ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಹಬ್ಬ ಹರಿದಿನಗಳ ಜೊತೆ ಜಾತ್ರೆ ಉತ್ಸವಗಳನ್ನ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. https://ainkannada.com/social-activist-zubeida-nadaf-awarded-honorary-doctorate-degree/ ಅದರಂತೆ ಗ್ರಾಮದಲ್ಲಿ ಮುಸ್ಲಿಂ ದೇವರಲ್ಲಿ ಒಬ್ಬರಾದ ಮೀರಾಸಾಬ್ ಉರುಸ್ ಹಬ್ಬವನ್ನು ಇಡೀ ಗ್ರಾಮವೇ ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡುತ್ತಾರೆ. ವರ್ಷದ ಯುಗಾದಿ ಹಬ್ಬದ ಮೊದಲು ಈ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಉರುಸ್ ಹಬ್ಬದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನೈವೈದ್ಯ ಹಿಡಿದು ಎರಡು ದಿನಗಳ ಕಾಲ…
ಐಪಿಎಲ್ 2025 ರ ಭಾಗವಾಗಿ ಶುಕ್ರವಾರ ನಡೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿತು. ಐಪಿಎಲ್ ಇತಿಹಾಸದಲ್ಲಿ ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿಗೆ ಇದು ಎರಡನೇ ಗೆಲುವು. 2008 ರಲ್ಲಿ, ಐಪಿಎಲ್ನ ಮೊದಲ ವರ್ಷದಲ್ಲಿ, ಆರ್ಸಿಬಿ ಚೆಪಾಕ್ನಲ್ಲಿ ಸಿಎಸ್ಕೆ ತಂಡವನ್ನು ಸೋಲಿಸಿತು. ಅದಾದ ನಂತರ ಆರ್ಸಿಬಿ ಮತ್ತೆಂದೂ ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಗೆದ್ದಿಲ್ಲ. ಒಂದು ರೀತಿಯಲ್ಲಿ ಈ ಗೆಲುವು ಆರ್ಸಿಬಿ ಅಭಿಮಾನಿಗಳಿಗೆ ಅಪಾರ ಸಂತೋಷ ತಂದಿತು. ಆದಾಗ್ಯೂ, ಈ ಪಂದ್ಯದಲ್ಲಿ ಸಿಎಸ್ಕೆ ಸೋಲಿನ ನಂತರ, ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ವರದಿಗಾರ ಕೇಳಿದ ಪ್ರಶ್ನೆಗೆ ಫ್ಲೆಮಿಂಗ್ ಸ್ವಲ್ಪ ಗಂಭೀರವಾಗಿ ಪ್ರತಿಕ್ರಿಯಿಸಿದರು. ಆರ್ಸಿಬಿ ವಿರುದ್ಧ ಸೋತ ಮಾತ್ರಕ್ಕೆ ಅವರು ತಮ್ಮನ್ನು ತಾವು ಕಡಿಮೆ ಅಂದಾಜು ಮಾಡಿಕೊಳ್ಳಬಾರದು ಮತ್ತು ಐಪಿಎಲ್ನಲ್ಲಿ ಯಾರು ಗೆಲ್ಲುತ್ತಾರೆಂದು ನಾವು ನೋಡೋಣ ಎಂದು ಹೇಳುವ ಮೂಲಕ ಅವರು ಸಾಮೂಹಿಕ ಎಚ್ಚರಿಕೆ ನೀಡಿದರು. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಹಾಗಾದರೆ ವರದಿಗಾರ ಕೇಳಿದ್ದು ಏನೆಂದರೆ… ಮುಂಬೈ ಇಂಡಿಯನ್ಸ್ ವಿರುದ್ಧದ…
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬೋದ ಬಹುನಿರೀಕ್ಷಿತ ಸಿನಿಮಾ ಕೆಡಿ. ಶಿವ ಶಿವ ಅಂತಾ ಎಲ್ಲೆಡೆ ಹವಾ ಸೃಷ್ಟಿಸಿರುವ ಕೆಡಿ ಅಂಗಳದಿಂದ ಮತ್ತೊಂದು ಸಿಂಗಿಂಗ್ ಬಿಡುಗಡೆಯಾಗಿದೆ. ಸೆಟ್ ಆಗೋಲ್ಲ ಹೋಗೆ ನಂಗು ನಿಂಗು ಅಂತಾ ಧ್ರುವ ಸರ್ಜಾ, ಬ್ಯೂಟಿಫುಲ್ ಬೊಂಬೆ ರೀಷ್ಮಾ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಪ್ರೇಮ್ ಪೊಣಿಸಿದ ಕ್ಯಾಚಿ ಮ್ಯಾಚಿ ಸಾಹಿತ್ಯದ ಹಾಡಿಗೆ ಮಿಕಾ ಸಿಂಗ್ ಕನ್ನಡದಲ್ಲಿ ಕಂಠ ಕುಣಿಸಿದ್ದಾರೆ. ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಹಾಡು ಸಖತ್ ವಿಭಿನ್ನವಾಗಿ ಮೂಡಿ ಬಂದಿದೆ. ಕೆಡಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಭಾಷೆಯಲ್ಲಿಯೂ ಸೆಟ್ ಆಗೋಲ್ಲ ಹೋಗೆ ಹಾಡನ್ನು ಬಿಡುಗಡೆ ಮಾಡಲಾಗಿದೆ. https://www.youtube.com/watch?v=CAEF7OOsEYc&ab_channel=AnandAudio ರಿಲೀಸ್ ಯಾವಾಗ? ಕೆಡಿ ಸಿನಿಮಾ ಯಾವಾಗ ಬರಲಿದೆ ಅಂತಾ ಕಾಯ್ತಿದ್ದ ಧ್ರುವ ಸರ್ಜಾ ವಿಐಪಿಗಳಿಗೆ ಸಖತ್ ಸುದ್ದಿ ಸಿಕ್ಕಿದೆ. ಈ ವರ್ಷವೇ ಕಾಳಿದಾಸನಾಗಿ ಧ್ರುವ ಕಮಾಲ್ ಮಾಡಲು ತೆರೆಗೆ ಬರಲಿದ್ದಾರೆ. ಆಗಸ್ಟ್ ನಲ್ಲಿ ಚಿತ್ರವನ್ನು ಬೆಳ್ಳಿಪರದೆಗೆ ಅಖಾಡಕ್ಕೆ ಇಳಿಸಲು ಚಿತ್ರತಂಡ ಸಜ್ಜಾಗಿದೆ. ಕೆಡಿಯಲ್ಲಿ…