Author: Author AIN

ಬೆಂಗಳೂರು: ನಗರದ ಪುರಭವನದಲ್ಲಿ ಇಂದು 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಮಾಡಿದ್ದಾರೆ. ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯವನ್ನು ಚುನಾಯಿತ ಕೌನ್ಸಿಲರ್‌ಗಳ ಅನುಪಸ್ಥಿತಿಯಲ್ಲಿ ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡಿಸಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಈ ಸಲ ದಾಖಲೆ ಗಾತ್ರದ ಬಜೆಟ್‌ ಮಂಡನೆಯಾಗಿದೆ. ಈ ಬಾರಿ 19,900 ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಈ ಬಜೆಟ್​ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾಗಿ ಬಜೆಟ್ ಮಂಡನೆಯಾಗಿದೆ ಇದುವರೆಗೆ ಪಾಲಿಕೆ 12 ರಿಂದ 13 ಸಾವಿರ ಕೋಟಿ ವರೆಗೆ ಬಜೆಟ್ ಮಂಡಿಸಿದ್ದು, https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಇದೇ ಮೊದಲ ಬಾರಿಗೆ 20 ಸಾವಿರ ಕೋಟಿ ಆಸುಪಾಸಿನ ಬಜೆಟ್ ಮಂಡಿಸಿದೆ. 19,92,708 ಕೋಟಿ ಗಾತ್ರದ ಬಜೆಟ್ ಗೆ ಆಡಳಿತಗಾರ ಉಮಾಶಂಕರ್ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಶೇಕಡಾ 62 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಪಾಲಿಕೆ ಬಜೆಟ್​ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರಿನಲ್ಲಿ 7 ಫಿಸಿಯೋಥೆರಪಿ‌ ಕೇಂದ್ರಗಳ ಸ್ಥಾಪನೆ. ಗರ್ಭಿಣಿಯರು, ನವಜಾತ ಶಿಶುಗಳ ಆರೈಕೆಗೆ ‘ಸೇವ್…

Read More

ರಾಯಚೂರು :   ರಾಯಚೂರಿನಲ್ಲಿ ಅಂಗನವಾಡಿ ಮಕ್ಕಳ ಮೊಟ್ಟೆ ಹಣದಲ್ಲಿ ಕಮಿಷನ್ ದಂಧೆ ನಡೆಯುತ್ತಿರುವ ಬೆಳಕಿಗೆ ಬಂದಿದೆ.  ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿದ್ದು, ಬಳಿಕ ಮೇಲ್ವೀಚಾರಕಿ ಮೂಲಕ ಹಣ ವಸೂಲಿ ಮಾಡಿರುವ ಘಟನೆ ವದುರ್ಗ ಪಟ್ಟಣದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.   ಅಂಗನವಾಡಿ ಕಾರ್ಯಕರ್ತೆಯರಿಂದ ಮೊಟ್ಟೆ ಹಣದಲ್ಲಿ 50 % ಕಮಿಷನ್ ವಿಡಿಯೋ ವೈರಲ್‌ ಆಗಿದ್ದು, ಮೇಲ್ವೀಚಾರಕಿ ಕಮಲಾಕ್ಷಿ ವಿರುದ್ಧ ಹಣ ವಸೂಲಿ ಆರೋಪ ಕೇಳಿ ಬಂದಿದೆ. https://ainkannada.com/social-activist-zubeida-nadaf-awarded-honorary-doctorate-degree/ ಕಮಲಾಕ್ಷಿ, ದೇವದುರ್ಗ ತಾಲ್ಲೂಕಿನ ಮಸರಕಲ್​ ವಲಯದ ಮೇಲ್ವೀಚಾರಕಿಯಾಗಿದ್ದು, ಈಕೆ ದೇವದುರ್ಗ ಮಾಜಿ ಸಚಿವ  ಕೆ ಶಿವನಗೌಡ ನಾಯಕ್ ಸಹೋದರಿ ಕೂಡ ಹೌದು. ಸಮಿತಿ ಮೂಲಕ ಮೊಟ್ಟೆ ಖರೀದಿಸೋದು ನಿಯಮವಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುತ್ತೋಲೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಾಲ ವಿಕಾಸ ಸಮಿತಿಗೆ ಹಣ ಹಾಕದೇ ನೇರವಾಗಿ ಕಾರ್ಯಕರ್ತೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ.

Read More

ಮ್ಯಾನ್ಮಾರ್ ನಲ್ಲಿ ಅಲ್ಲಿನ ಸ್ಥಳೀಯ ಕಾಲಮಾನ ಮಧ್ಯಾಹ್ನ 12.30ರ ಸುಮಾರಿಗೆ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿತ್ತು, ಅದರ ಬೆನ್ನಲ್ಲೇ ಮಧ್ಯರಾತ್ರಿ ಮತ್ತೆ ಅಲ್ಲಿ ಭೂಮಿ ಕಂಪಿಕಿಸಿದೆ. ರಿಕ್ಟರ್ ಮಾಪಕದಲ್ಲಿ 4.4ರಷ್ಟು ತೀವ್ರತೆಯುಳ್ಳ ಭೂಕಂಪ ಉಂಟಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇನ್ನೂ ಇದೀಗ ಮತ್ತೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದೆ. ಮಧ್ಯ ರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಇದೀಗ ಒಟ್ಟು ಸಾವಿನ ಸಂಖ್ಯೆ 1000ಕ್ಕೆ ದಾಟಿದೆ. 2000 ಜನರು ಗಾಯಗೊಂಡಿದ್ದಾರೆ. ರಾಜಧಾನಿ ನೇಪಿಡಾವ್‌ನಲ್ಲಿರುವ ಆಸ್ಪತ್ರೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಇನ್ನು ಮುಸ್ಲಿಂ ಜನರಿಗೆ ಈಗಾಗಲೇ ಅವರ ಪುಣ್ಯ ಹಬ್ಬ ಪ್ರಾರಂಭವಾಗಿದೆ. ಈ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಆಸ್ಪತ್ರೆಗಳನ್ನು, ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಭೂಕಂಪದಿಂದ ಮಸೀದಿಗಳು ಧ್ವಂಸ ಆಗಿದೆ. ಅದಕ್ಕಾಗಿ ಈ ಕ್ರಮವನ್ನು ಅನುಸರಿಸಿಕೊಂಡಿದ್ದಾರೆ. ಸತ್ತವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವ ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಮಿನ್ ಆಂಗ್…

Read More

ಹುಬ್ಬಳ್ಳಿ;  ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನ ಪರಿಗಣಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಜುಬೇದಾ ನಧಾಫ್ ಅವರಿಗೆ ತಮಿಳುನಾಡಿನ ಏಷಿಯಾ ಇಂಟರ್ ನ್ಯಾಶನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ‌ಪ್ರದಾನ ಮಾಡಲಾಯಿತು. ಬೆಂಗಳೂರಿನ ಹೊಸೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ 2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಿಳುನಾಡಿನ ಮಾಜಿ ಶಾಸಕ ಹಾಗೂ ಐ ಎನ್ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಮನೋಕರನ್  ಹಾಗೂ ಆಂದ್ರಪ್ರದೇಶದ ನಿವೃತ್ತ ನ್ಯಾಯಾಧೀಶ ಡಾ‌.ಜೆ.ಹರಿಡಾಸ್ ಪದವಿ ನೀಡಿ ಗೌರವಿಸಿದರು. ಅತಿಥಿಗಳಾಗಿ ಕರಾಠೆ ವಿಶ್ವ ದಾಖಲೆಯ ಡಾ.ಕರಾಟೆ ಎ.ಪಿ.ಶ್ರೀನಾಥ್, ಹಿರಿಯ ಪತ್ರಕರ್ತ ಡಾ. ಎಸ್. ಗುಣಶೇಖರನ್, ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಡಿ.ದೇವಸಂಗ್ಮಣಿ, ಸೌತ್ ವೆಸ್ಟರ್ನ್ ರೈಲ್ವೆ ಪ್ರಧಾನ ಕಾರ್ಯದರ್ಶಿ ಜೆಮ್ಸ್ ತಮಿಳುನಾಡಿನ ಪೈನೂರ್ ಪಂಚಾಯತ್ ಅಧ್ಯಕ್ಷ ಮುತ್ತುಕುಮಾರ್,ಕಲಾವಿದ, ಗಾಯಕ ಹಾಗೂ ನಿರ್ದೇಶಕ ಡಾ.ಜನಾರ್ದನ ಕೆ.ಬಿ. ಚಲನಚಿತ್ರ ನಿರ್ದೇಶಕ ಎಚ್.ಎಸ್.ನಾರಾಯಣ ಸ್ವಾಮಿ ,ಗುತ್ತಿಗೆದಾರ ಹಾಗೂ ಡೆವಲಪರ್ ಡಾಪವನ ಹನುಮಯ್ಯಾ ನರೇಂದ್ರ ಉಪಸ್ಥಿತರಿದ್ದರು.…

Read More

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ವಿಶೇಷ ಮೈಲಿಗಲ್ಲು ತಲುಪಿದರು. ಚೆನ್ನೈ ತಂಡ 50 ರನ್‌ಗಳಿಂದ ಸೋತರೂ, ಜಡೇಜಾ ಐಪಿಎಲ್ ಇತಿಹಾಸದಲ್ಲಿ 3000 ರನ್ ಗಳಿಸಿದ ಮತ್ತು 100+ ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶುಕ್ರವಾರ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತೊಮ್ಮೆ ತಮ್ಮ ಆಲ್‌ರೌಂಡ್ ಪ್ರತಿಭೆಯಿಂದ ಪ್ರಭಾವಿತರಾದರು. ಜಡೇಜಾ ಇದುವರೆಗೆ 242 ಪಂದ್ಯಗಳಲ್ಲಿ 129.47 ಸ್ಟ್ರೈಕ್ ರೇಟ್‌ನಲ್ಲಿ 3001 ರನ್ ಗಳಿಸಿದ್ದಾರೆ, ಈ ಪ್ರಕ್ರಿಯೆಯಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 160 ವಿಕೆಟ್‌ಗಳನ್ನು ಪಡೆದ ಸೌರಾಷ್ಟ್ರದ ಸ್ಪಿನ್ನರ್, 2012 ರ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ 5/16 ರ ಅತ್ಯುತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಈ ಅಪರೂಪದ ಮೈಲಿಗಲ್ಲು ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ಸಮಯದಲ್ಲಿ ಬಂದಿತು. ಸಿಎಸ್‌ಕೆ ತಂಡವು ಆರ್‌ಸಿಬಿ ವಿರುದ್ಧ ಮೊದಲ ಸೋಲನ್ನು ಅನುಭವಿಸಿತು. ಈ…

Read More

ಬೆಂಗಳೂರು: ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ಸಂಬಂಧ ರಾಜೇಂದ್ರ ಕ್ಯಾರಸಂದ್ರದಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರೆ ತನಿಖೆ ಮಾಡಿ ಆ ನಾಯಕ ಯಾರು ಅಂತ ಹೇಳಬೇಕು. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಕಾದು ನೋಡೋಣ ಎಂದಿದ್ದಾರೆ. ಮಹಾನಾಯಕರು ದೇಶದಲ್ಲಿ ತುಂಬಾ ಜನ ಇದ್ದಾರೆ. ಇಂತಹ ಘಟನೆಗಳು ಸಹ ಅನೇಕ ಇವೆ. ಬೇರೆ ರಾಜ್ಯಗಳಲ್ಲಿ ಇಂತಹ ಘಟನೆ ಆಗಿವೆ. ಇವರೆ, ಅವರೆ ಹೀಗೆ ಮಾಡಿದ್ದಾರೆ ಎಂದು ಹೇಳೋಕೆ ಅಗಲ್ಲ. ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದಿದ್ದಾರೆ.

Read More

ವಿಜಯಪುರ : ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ ಖಂಡಿಸಿ ವಿಜಯಪುರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಯತ್ನಾಳ್ ಆಪ್ತರೇ ಗೈರಾಗಿದ್ದಾರೆ. ಶುಕ್ರವಾರ ಸಂಜೆ ವಿಜಯಪುರ ನಗರದ ಸಿದ್ದೇಶ್ವರ ದೇಗುಲದಿಂದ ಗಾಂಧಿ ಚೌಕ್ ವರೆಗೆ  ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಅನರ್ಹಗೊಂಡ 17 ಬಿಜೆಪಿ ಪಾಲಿಕೆ ಸದಸ್ಯರ ಪೈಕಿ ಕೇವಲ ಇಬ್ಬರೇ ಭಾಗಿಯಾಗಿದ್ದು, ಇನ್ನುಳಿದವರು ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅನರ್ಹ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಪಾಟೀಲ್, ಹಾಗೂ ರಾಜಶೇಖರ ಕುರಿಯವರ ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಯತ್ನಾಳ್‌ ಆಪ್ತರು ಬಿಜೆಪಿಯಿಂದ ಕ್ರಮದ ಭೀತಿಯಿಂದ ದೂರ ಉಳಿದಿದ್ದಾರೆ. ಅನರ್ಹ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಪ್ರತಿಭಟನಾ ರ್ಯಾಲಿ ಇದೆ ಎಂದಿದ್ದವರು, ಇದೀಗ ನಾಪತ್ತೆಯಾಗಿದ್ದಾರೆ. https://ainkannada.com/yediyurappas-son-pressured-me-into-getting-me-expelled-mla-yatnal-alleges/ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡ್ತೀವಿ ಎಂದಿದ್ದ ಪ್ರೇಮಾನಂದ ಬಿರಾದಾರ ಸೇರಿದಂತೆ ಅನರ್ಹ ಬಿಜೆಪಿ ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಶಿವರುದ್ರ ಬಾಗಲಕೋಟೆ, ರಾಹುಲ್ ಜಾಧವ್, ಮಲ್ಲಿಕಾರ್ಜುನ ಗಡಗಿ, ವಿಠ್ಠಲ ಹೊಸಪೇಟೆ, ಎಂ ಎಸ್ ಕರಡಿ, ಸುನೀತಾ ಒಡೆಯರ್,…

Read More

ನಾನು ಬರೋವರೆಗೂ ಮಾತ್ರ ಬೇರೆಯವರ, ನಾನು ಬಂದ್ಮೇಲೆ ನನ್ ನಂದೇ ಹವಾ..ಕೆಜಿಎಫ್ ಬಂದ್ಮೇಲೆ ಇಂಡಿಯನ್ ಸಿನಿದುನಿಯಾದಲ್ಲಿ ನ್ಯಾಷನಲ್ ಸ್ಟಾರ್ ಯಶ್ ಹವಾ ಹೇಗಿದೆ ಅನ್ನೋದನ್ನು ನಾವೇನು ಹೊಸದಾಗಿ ಹೇಳೋದು ಬೇಡ. ಕೆಜಿಎಫ್ ಸರಣಿ ಸಿನಿಮಾ ಮೂಲಕ ಚಿನ್ನದ ಕಥೆ ಹರವಿಟ್ಟಿದ್ದ ರಾಕಿಭಾಯ್ ಟಾಕ್ಸಿಕ್ ಮೂಲಕ ಡ್ರಗ್ಸ್ ಜಗತ್ತಿನ ಕರಾಳ ಲೋಕದ ಕಥೆಯನ್ನು ಬಿಚ್ಚಿಡೋದಿಕ್ಕೆ ಹೊರಟ್ಟಿದ್ದಾರೆ. ಈ ಬಾರಿ ಅಣ್ತಮ್ಮಾನ ಬಳಗದಲ್ಲಿ ಸ್ಯಾಂಡಲ್ ವುಡ್ ಜೊತೆಗೆ ಬಾಲಿವುಡ್, ಹಾಲಿವುಡ್ ತಾರೆಯರು, ತಂತ್ರಜ್ಞಾನರು ದುಡಿಯುತ್ತಿದ್ದಾರೆ. ಸಣ್ಣ ಝಲಕ್ ಮೂಲಕ ಟಾಕ್ಸಿಕ್ ಅಭಿಮಾನಿಗಳ ವಲಯದಲ್ಲಿ ಟೆಂಪರ್ ಹೆಚ್ಚಿಸಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಟಾಕ್ಸಿಕ್ ಪ್ಯಾನ್ ಇಂಡಿಯಾ ಜಗತ್ತಿನ ತುಂಬೆಲ್ಲಾ ಮೆರವಣಿಗೆ ಹೊರಡುತ್ತಿದೆ. ಟಾಕ್ಸಿಕ್ ಜೊತೆಯಲ್ಲಿ ಯಶ್ ನಟಿಸಿ ನಿರ್ಮಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಪ್ರಾಜೆಕ್ಟ್ ರಾಮಾಯಣ. ಬಾಲಿವುಡ್ ಬರ್ಫಿ ಬಾಯ್ ರಣ್ಬೀರ್ ಕಪೂರ್ ನಟಿಸುತ್ತಿರುವ ರಾಮಾಯಾಣಲ್ಲಿ ಮೇಹೂ ವಿಲನ್ ಅಂತಾ ಯಶ್ ಈಗಾಲೇ ಘೋಷಣೆ ಮಾಡಿದ್ದಾರೆ. ರಾವಣನಾಗಿ ಅಬ್ಬರಿಸೋದಿಕ್ಕೆ ರಾಕಿಭಾಯ್ ಸನ್ನದ್ಧರಾಗಿದ್ದಾರೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ…

Read More

ಬೆಂಗಳೂರು: ಬೈಕ್ ಸವಾರನಿಗೆ ಕಸದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಥಣಿಸಂಧ್ರ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಬೈಕ್ ಸವಾರ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಿಬಿಎಂಪಿ ಕಸದ ಲಾರಿಗೆ ಅಪಘಾತ ಸಂಭವಿಸುತ್ತಿರುವುದು ಥಣಿಸಂಧ್ರದಲ್ಲಿ ನಾಲ್ಕನೇ ಪ್ರಕರಣವಾಗಿದ್ದು, https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕಸದ ಲಾರಿಗೆ ಬೆಂಕಿ ಹಚ್ಚಿದ್ದಾರೆ. ಕಸದ ಲಾರಿಗೂ ಬೆಂಕಿ ಬೀಳ್ತಿದ್ದಂತೆ ಲಾರಿಯಿಂದ ಚಾಲಕ ಕೆಳಗಿಳಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾರದ್ದು ತಪ್ಪು ಅಂತ ಇನ್ನೂ ಖಚಿತವಾಗಿಲ್ಲ ಆದ್ದರಿಂದ ಇನ್ನಷ್ಟೆ ತನಿಖೆಯಿಂದ ತಿಳಿಯಬೇಕಿದೆ.

Read More

ಏಷ್ಯಾದ ದೇಶಗಳಾದ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಭೂಕಂಪಗಳು ಸಂಭವಿಸಿವೆ. ಭೂದೇವಿಯ ಕೋಪಕ್ಕೆ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ತತ್ತರಿಸುತ್ತಿವೆ. https://www.youtube.com/watch?v=Mh-q9gXIL2A ನೂರಾರು ಜನರು ಸತ್ತರು. ಅನೇಕ ಜನರು ಈಗಾಗಲೇ ಅವಶೇಷಗಳ ಅಡಿಯಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಸತತವಾಗಿ ಸಂಭವಿಸಿದ ಈ ಬೃಹತ್ ಭೂಕಂಪಗಳು ಜನರನ್ನು ಭಯಭೀತಗೊಳಿಸಿದವು. ಸಾವಿರಾರು ಜನರು ನಿರಾಶ್ರಿತರಾದರು. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಅವರು ಸರ್ವಶಕ್ತನ ಕೈಗಾಗಿ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ, 2025 ರಲ್ಲಿ ದೊಡ್ಡ ಭೂಕಂಪಗಳು ಸಂಭವಿಸುತ್ತವೆ ಎಂಬ ವಿಶ್ವಪ್ರಸಿದ್ಧ ಭವಿಷ್ಯ ಹೇಳುವ ಬಾಬಾ ವಂಗಾ ಅವರ ಭವಿಷ್ಯ ನಿಜವಾಗುತ್ತದೆಯೇ ಎಂಬ ಕಲ್ಪನೆಯನ್ನು ಪರಿಗಣಿಸಲು ಪ್ರಾರಂಭಿಸಲಾಗಿದೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಚರ್ಚೆಯ ವಿಷಯವಾಗಿದೆ. ಬಾಬಾ ವಂಗಾ ಯಾರು? ಬಾಬಾ ವಂಗಾ, ಪ್ರಸಿದ್ಧ ಕುರುಡು ಬಲ್ಗೇರಿಯನ್ ಅತೀಂದ್ರಿಯ. ಅವಳು ಹೇಳಿದ ಅನೇಕ ವಿಷಯಗಳು ಈಗಾಗಲೇ ನಿಜವಾಗಿವೆ. ನೈಸರ್ಗಿಕ ವಿಕೋಪಗಳು, ಯುದ್ಧಗಳು, ಸಾಂಕ್ರಾಮಿಕ ರೋಗಗಳು, ಅಮೆರಿಕದಲ್ಲಿ ಅಲ್-ಖೈದಾ ಭಯೋತ್ಪಾದಕರು ನಡೆಸಿದ 9/11 ದಾಳಿಗಳು ಮತ್ತು ಬ್ರೆಕ್ಸಿಟ್ ಸೇರಿದಂತೆ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಈಗ, ಬಾಬಾ ವಂಗಾ…

Read More