ನಟರಾಕ್ಷಸ ಡಾಲಿ ಧನಂಜಯ್ ಪತ್ನಿ ಧನತ್ಯಾ ಜೊತೆ ಮೊದಲ ಬಾರಿಗೆ ಅರಸೀಕೆರೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ತಮ್ಮ ಡಾಲಿ ಪಿಕ್ಚರ್ಸ್ ನಡಿ ಮುಡಿ ಬಂದಿರುವ ವಿದ್ಯಾಪತಿ ಸಿನಿಮಾದ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ. ಅಂದಹಾಗೇ ಏಪ್ರಿಲ್ 10ಕ್ಕೆ ವಿದ್ಯಾಪತಿ ತೆರೆಗೆ ಬರ್ತಿದೆ. ಡಾಲಿ ಸಿಂಪ್ಲಿಸಿಟಿ ಡಾಲಿ ಧನಂಜಯ್, ಪತ್ನಿ ಧನ್ಯತಾ ಹಾಗೂ ಇಡೀ ಕುಟುಂಬ ಇಂದು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಸಿಕ್ಕಾಪಟ್ಟೆ ಬಿಸಿಲು ಇರೋದ್ರಿಂದ ಡಾಲಿ ಅಲ್ಲಿಯೇ ನೆರಳಿದ್ದ ಕಲ್ಲಿನ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ಡಾಲಿ ಸರಳತೆ ನೋಡಿ ಫ್ಯಾನ್ಸ್ ಸೋ ಕ್ಯೂಟ್ ಎನ್ನುತ್ತಿದ್ದಾರೆ. ಧನಂಜಯ್ ಭತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅಣ್ಣ ಫ್ರಮ್ ಮೆಕ್ಸಿಕೋ, ಜಿಂಗೋ , ಉತ್ತರಕಾಂಡ ಚಿತ್ರಗಳಲ್ಲಿ ಡಾಲಿ ಬ್ಯುಸಿಯಾಗಿದ್ದಾರೆ. ಏ.10ಕ್ಕೆ ವಿದ್ಯಾಪತಿ ತೆರೆಗೆ ಡಾಲಿ ಪಿಕ್ಚರ್ಸ್ ಈಗಾಗಲೇ ಸಾಕಷ್ಟು ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿತ್ತಾ ಬಂದಿದೆ. ಈ ಹಿಂದೆ ಟಗರು ಪಲ್ಯ ಮೂಲಕ ಮೋಡಿ ಮಾಡಿದ್ದ…
Author: Author AIN
ಬೆಂಗಳೂರು: ಸಚಿವರ ಮೇಲಿನ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ ಎಂಬ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಜಿ ಕಳುಹಿಸಿದ ಮೇಲೆ ಡಿಪಾರ್ಟ್ಮೆಂಟ್ ಆದೇಶ ಮಾಡುತ್ತದೆ ಅದಕ್ಕೆ ಸರ್ಕಾರದ ಆದೇಶ ಬರಲ್ಲ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಸಿಐಡಿ ಅವರು ತನಿಖೆ ಮಾಡುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಸಿಕ್ಕಿರುವ ಮಾಹಿತಿ ಇಲ್ಲ. ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡುವಾಗ ಏನು ಹೇಳಲು ಆಗಲ್ಲ. ತನಿಖೆ ಪೂರ್ಣ ಆದ್ಮೇಲೆ ಎಲ್ಲವನ್ನು ವಿವರವಾಗಿ ಹೇಳುತ್ತಾರೆ ಎಂದು ಹೇಳಿದರು.
ಮಂಗಳೂರು : ಗಾಂಜಾ ಮತ್ತು ಚರಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ, ಚರಸ್, ಗಾಂಜಾ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಿಂದ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಖರೀದಿಸಿಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. https://ainkannada.com/deal-for-70-lakhs-5-lakhs-advance-explosive-audio-secret-of-rajendras-attempted-murder-case/ ನಗರದ ಶಿವಭಾಗ್ 5 ನೇ ಕ್ರಾಸ್ ರಸ್ತೆಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ತೈಸಿರ್ ಇಸ್ಮಾಯಿಲ್ ಹುಸೈನ್ ಹಾಗೂ ರೋಯಸ್ಟನ್ ಕ್ಸವಿಯರ್ ಲೋಬೋ ಎಂಬವರನ್ನು ವಶಕ್ಕೆ ಪಡೆದಿದ್ದು, ಬಂಧಿತರಿಂದ ಸುಮಾರು 8,00,000/- ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಹೈಡ್ರೋವೀಡ್, ಗಾಂಜಾ,ಚರಸ್ ಮತ್ತು ಗಾಂಜಾವನ್ನು ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳು ಐಷಾರಾಮಿ ಜೀವನ…
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಮಂಡಿಸಿದರು. ಇದು 1961 ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುತ್ತದೆ. ಹಳೆಯ ನಿಯಮಗಳಿಗೆ ಬದಲಾವಣೆಗಳನ್ನು ಮಾಡುವುದರ ಜೊತೆಗೆ, ಪ್ರಸ್ತುತ ತಂತ್ರಜ್ಞಾನಕ್ಕೆ ಅನುಗುಣವಾಗಿ ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಆದಾಗ್ಯೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಏಕೆ ಪರಿಚಯಿಸಲಾಯಿತು ಎಂಬುದನ್ನು ವಿವರಿಸಿದರು. 1961 ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುವ ಈ ಮಸೂದೆಯು ಸರ್ಕಾರಕ್ಕೆ ಲೆಕ್ಕವಿಲ್ಲದ ಹಣ ಮತ್ತು ಅಕ್ರಮ ಚಟುವಟಿಕೆಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಾಗಿ ಮೂಲ ನಿಯಮಗಳಿಗೆ ಅನುಗುಣವಾಗಿದೆ. ಭಾಷೆಯನ್ನು ಸರಳಗೊಳಿಸುವುದು ಮತ್ತು ಅನಗತ್ಯ ವಿಭಾಗಗಳನ್ನು ತೆಗೆದುಹಾಕುವುದು ಇದರ ಉದ್ದೇಶವಾಗಿದೆ. ಅಪರಾಧಿಗಳನ್ನು ಹಿಡಿಯಲು ಹೆಚ್ಚಿನ ಡಿಜಿಟಲ್ ಪುರಾವೆಗಳ ಹುಡುಕಾಟಕ್ಕೆ ಇದು ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತಿದೆ. ಹೊಸ ಆದಾಯ ತೆರಿಗೆ ಮಸೂದೆ, 2025, ಡಿಜಿಟಲ್…
ಬೆಂಗಳೂರು: ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ. ಭ್ರಮೆಯಿಂದ ಕೇಂದ್ರದವರು ಹೊರಗೆ ಬರಬೇಕು. ರಾಮಾಯಣ, ಮಹಾಭಾರತದಲ್ಲೂ ಅಪಮಾನ ಮಾಡಿರೋದಿದೆ. ಹಾಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಬಿಎಸ್ವೈ ಕುಟುಂಬವನ್ನು ನಾನು ಹೊರಗೆ ಇಡೋವರೆಗೂ ಬಿಡೋದಿಲ್ಲ ಅಂತ ಶಪಥ ಮಾಡಿದ್ದಾರೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ನಾನು ಮತ್ತೆ ದೆಹಲಿಗೆ ಹೋಗಲ್ಲ. ಮರುಪರಿಶೀಲನೆಗೆ ನಾನು ಮನವಿ ಮಾಡಲ್ಲ. ನಾನು ಹಿಂದೂ ಪರವಾಗಿ ಹೋರಾಟ ಮಾಡ್ತೇನೆ. ಇಡೀ ರಾಜ್ಯ ಸುತ್ತುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ. ಹಿಂದೂಗಳ ರಕ್ಷಣೆ ಮಾಡುವವರು ಯಾರೂ ಇಲ್ಲ. ಉ.ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ್ಮ ಹಿಂದೆ ಬಹಳ ದೊಡ್ಡ ಶಕ್ತಿ ಇದೆ ಎಂದು ಹೇಳಿದರು.
ಕನ್ನಡ ಕಿಸ್ ಕುವರಿ ಶ್ರೀಲೀಲಾ ಈಗ ಬಹುಬೇಡಿಕೆ ನಟಿಯಾಗಿ ಬೆಳೆಯುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಜಿಗಿದ ಈ ನಟಿ ಈಗ ಬಾಲಿವುಡ್ ಗೆ ಹಾರಿದ್ದಾರೆ. ಬಿಟೌನ್ ಗೆ ಮೊದಲ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಡೇಟಿಂಗ್ ಮ್ಯಾಟರ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಬಾಲಿವುಡ್ ಸುರಸುಂದರ ಕಾರ್ತಿಕ್ ಆರ್ಯನ್ ಜೊತೆ ಡಾಕ್ಟರಮ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ನಡುವೆಯೇ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು ನೀನೇ ನನ್ನ ಜೀವ ಅಂತಾ ಕಾರ್ತಿಕ್ ಆರ್ಯನ್ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರಾ ಅನ್ನೋ ಅನುಮಾನಕ್ಕೆ ಇದು ತುಪ್ಪ ಸುರಿದಂತಿದೆ. ಈ ಫೋಟೋ ಬೆನ್ನತ್ತಿದಾಗ ಅದು ಸಿನಿಮಾದ್ದೂ ಅನ್ನೋದು ಬಹಿರಂಗವಾಗಿದೆ. ಪ್ರಕೃತಿ ಮಧ್ಯೆ ಕುಳಿತು ಶ್ರೀಲೀಲಾರನ್ನು ಕಾರ್ತಿಕ್ ನೋಡ್ತಿರೋ ಫೋಟೋ ಹಂಚಿಕೊಂಡು, ಅದಕ್ಕೆ ‘ನೀನೇ ನನ್ನ ಜೀವನ’ ಎಂದು ಅಡಿಬರಹ ನೀಡಿದ್ದಾರೆ. ಇದು…
ತುಮಕೂರು : ಪರಿಷತ್ ಸದಸ್ಯ ರಾಜೇಂದ್ರ ಮೇಲೆ ಕೊಲೆ ಯತ್ನ ಆರೋಪ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಎಂಎಲ್ ಸಿ ರಾಜೇಂದ್ರ ದೂರಿನ ಆಧಾರದ ಮೇಲೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸೋಮ ಅಲಿಯಾಸ್ ಜಯಪುರ ಸೋಮ, A2 ಭರತ್ , A3 ಅಮಿತ್ , A4 ಗುಂಡಾ A5 ಯತೀಶ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಿಎನ್ ಎಸ್ ಕಲಂ 109, 329(4), 61(2) ಹಾಗೂ 190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅನಾಮಧೇಯ ಮೂಲಗಳಿಂದ ಆಡಿಯೋ ಸಿಕ್ಕಿದ್ದು, ಅದೇ ಆಡಿಯೋದಲ್ಲಿ ರಾಜೇಂದ್ರ ಸುಪಾರಿ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. https://ainkannada.com/attempted-murder-council-member-rajendra-files-complaint-with-tumkur-sp/ ಆಡಿಯೋದಲ್ಲಿ ಸ್ಫೋಟಕ ರಹಸ್ಯ..!? ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡ ಮತ್ತು ಯತೀಶ್ ಎಂಬುವರು ಕೊಲೆಗೆ ಸಂಚು ರೂಪಿಸಿರುವುದು ಬಹಿರಂಗಗೊಂಡಿದ್ದು, ಒಟ್ಟು 70 ಲಕ್ಷಕ್ಕೆ ಡೀಲ್, 5 ಲಕ್ಷ ಮುಂಗಡವಾಗಿ ಪಡೆದಿದ್ದರು ಎನ್ನಲಾಗಿದೆ. ರಾಜೇಂದ್ರ ಅವರ ಮಗಳ ಜನ್ಮದಿನವೇ ರಾಜೇಂದ್ರರನ್ನ…
ಸಮಂತಾ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿ ಆಸ್ಟ್ರೇಲಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆಸ್ಟ್ರೇಲಿಯಾದ ಸುಂದರ ಜಾಗದಲ್ಲಿ ಜಾಲಿ ಮಾಡಿರುವ ಸ್ಯಾಮ್ ಅಲ್ಲಿಯು ಫಿಟ್ನೆಸ್ ಮಂತ್ರ ಮರೆತಿಲ್ಲ. ಸಿಡ್ನಿ ಸೌಂದರ್ಯಕ್ಕೆ ಸೋತ ಸಮಂತಾ ವರ್ಕೌಟ್, ಬಾಡಿ ಮಸಾಜ್ ಮೊರೆ ಹೋಗಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಸಮಯ ಸಿಕ್ಕಾಗಲೆಲ್ಲಾ ಒಂಟಿಯಾಗಿಯೇ ಟ್ರಿಪ್ ಗೆ ಹೋಗ್ತಾರೆ. ಸಮಯ ಕಳೆಯುತ್ತಾರೆ. ಅಂತೆಯೇ ಈ ಬಾರಿ ಸಮಂತಾ ಬೇಬಿ ಆಸ್ಟ್ರೇಲಿಯಾದಲ್ಲಿ ಏಕಾಂತವನ್ನು ಏಂಜಾಯ್ ಮಾಡುತ್ತಿದ್ದಾರೆ. ನಾಗಚೈತನ್ಯರಿಂದ ದೂರವಾದ್ಮೇಲೆ ಹೊಸ ದಾರಿ ಕಂಡುಕೊಂಡಿರುವ ಸಮಂತಾ ಬಾಲಿವುಡ್ ಸಿನಿಮಾರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಚಿತ್ರ ನಿರ್ಮಾಣಕ್ಕೂ ಸಮಂತಾ ಇಳಿದಿದ್ದು, ಈ ನಡುವೆಯೇ ಅವರು ನಿರ್ಮಾಪಕ ರಾಜ್ ನಿಡಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಇದಕ್ಕೆ ಇಲ್ಲಿವರೆಗೂ ಸಮಂತಾ ಪ್ರತಿಕ್ರಿಯೆ ನೀಡಿಲ್ಲ. ಇದು ಗಾಳಿ ಸುದ್ದಿಯೋ ಅನ್ನೋದನ್ನು ನಟಿ ಖಚಿತ ಮಾಡಿಲ್ಲ.
ಚಿತ್ರದುರ್ಗ : ಯುಗಾದಿ ಹಬ್ಬಕ್ಕೆ ಊರಿಗೆ ಬರುತ್ತಿದ್ದ ಕೂಲಿ ಕಾರ್ಮಿಕರು ಇದೀಗ ಮಸಣ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಹೆಗ್ಗೆರೆ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಕುಮಾರನಾಯ್ಕ್, ಶಂಕರಿಬಾಯಿ ಮತ್ತು ಶ್ವೇತಾ ಎಂದು ಗುರುತಿಸಲಾಗಿದೆ. ಗಾಯಗೊಂಡ 9 ಜನರ ಹೆಸರು ತಿಳಿದು ಬರಬೇಕಿದೆ. ಮೃತರು ಚಳ್ಳಕೆರೆ ತಾಲೂಕಿನ ತಳಕು ಮೂಲದರಾಗಿದ್ದು, ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಯುಗಾದಿ ಹಬ್ಬಕ್ಕೆ ವಾಪಸ್ ಊರಿಗೆ ಬರುತ್ತಿದ್ದ ವೇಳೆ ಅವಘಡ ನಡೆದಿದೆ. https://ainkannada.com/street-vendors-fight-over-shop-one-of-them-gets-cut-on-the-head/ ಟಿಟಿ ವಾಹನ ಬೆಂಗಳೂರಿನಿಂದ ಚಳ್ಳಕೆರೆ ತಳುಕಿಗೆ ಬರುತ್ತಿದ್ದಾಗ, ಟಿಪ್ಪರ್ ಲಾರಿ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಲಯಾಳಂನ ಸ್ಟಾರ್ ಹೀರೋಗಳಾದ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿದ ಇತ್ತೀಚಿನ ಚಿತ್ರ ಎಲ್ 2: ಎಂಪೂರನ್. ಮಾರ್ಚ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಂದರ್ಭದಲ್ಲಿ, ಈ ಚಿತ್ರದ HD ಮುದ್ರಣ ಆನ್ಲೈನ್ನಲ್ಲಿ ಪ್ರಸಾರವಾಗುವುದನ್ನು ನೋಡಿ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಕ್ಷಕರು ಆಘಾತಕ್ಕೊಳಗಾದರು. ಈ ಮುದ್ರಣವನ್ನು ಚಿತ್ರಮಂದಿರದಿಂದ ನಕಲು ಮಾಡಲಾಗಿಲ್ಲ ಎಂಬ ಅನುಮಾನಗಳಿವೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರದ ಮಲಯಾಳಂ, ಹಿಂದಿ ಮತ್ತು ತಮಿಳು ಆವೃತ್ತಿಗಳನ್ನು ಆನ್ಲೈನ್ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಟೆಲಿಗ್ರಾಮ್ ಮತ್ತು ಇತರ ವೇದಿಕೆಗಳಲ್ಲಿ ಮುದ್ರಣಗಳು ಲಭ್ಯವಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳ ನಕಲಿ ಆವೃತ್ತಿಗಳು ಹೆಚ್ಚಾಗಿ ಆನ್ಲೈನ್ನಲ್ಲಿ ಪ್ರಸಾರವಾಗುತ್ತವೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಆದರೆ, ಆನ್ಲೈನ್ನಲ್ಲಿ ವೈರಲ್ ಆಗುವ ಚಲನಚಿತ್ರಗಳ ಗುಣಮಟ್ಟ ಕಳಪೆಯಾಗಿದೆ. ಈ ಆವೃತ್ತಿಗಳು ಸಾಮಾನ್ಯವಾಗಿ ಕಳಪೆ ದೃಶ್ಯಗಳು ಮತ್ತು ಧ್ವನಿಯನ್ನು ಹೊಂದಿರುತ್ತವೆ. ಎಂಪುರಾನ್ ಚಿತ್ರ ಎಂದು ಪ್ರಸಾರವಾಗುತ್ತಿರುವ ನಕಲಿ ಆವೃತ್ತಿಯು 1080…