ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಎದುರಾಗುತ್ತಿವೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ವೇಗವಾಗಿ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತು. https://ainkannada.com/the-darkest-black-stains-need-to-be-white-so-mix-this-ingredient-for-the-shampoo/ ಕ್ರೀಸ್ಗೆ ಬಂದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಪ್ರಭಾವಿತರಾದರು. ವಿಕೆಟ್ಗಳು ಬಿದ್ದರೂ ಅವರು ಇನ್ನೊಂದು ತುದಿಯಲ್ಲಿ ನಿಂತರು. ಹಾಗೆ ಮಾಡುವುದರ ಮೂಲಕ, ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಬ್ಯಾಟ್ಸ್ಮನ್ ದಾಖಲೆಯನ್ನು ಮುರಿದರು. ಈ ಸಾಧನೆ ಮಾಡುವಲ್ಲಿ, ಸ್ಮಿತ್ ತಮ್ಮ ದೇಶವಾಸಿ ವಾರೆನ್ ಬಿಯರ್ಡ್ಸ್ಲಿ ಅವರ 575 ರನ್ಗಳನ್ನು ಮೀರಿಸಿದರು. ಅರ್ಧಶತಕದ ಸಮಯದಲ್ಲಿ ಲಾರ್ಡ್ಸ್ನಲ್ಲಿ ಎಂಟು ಇನ್ನಿಂಗ್ಸ್ಗಳಲ್ಲಿ 551 ರನ್ಗಳನ್ನು ಗಳಿಸಿದ ದಂತಕಥೆಯ ಬ್ಯಾಟ್ಸ್ಮನ್ ಡಾನ್ ಬ್ರಾಡ್ಮನ್ ಅವರನ್ನು ಸಹ ಅವರು ಮೀರಿಸಿದ್ದಾರೆ ಎಂಬುದು ಗಮನಾರ್ಹ. 36 ವರ್ಷದ ಈ ಆಟಗಾರ ಪ್ರಸಿದ್ಧ ವೇದಿಕೆಯಲ್ಲಿ ಮೂರು ಅರ್ಧಶತಕಗಳು ಮತ್ತು ಎರಡು ಶತಕಗಳನ್ನು…
Author: Author AIN
ಐಪಿಎಲ್ 2025 ಜೂನ್ 3 ರಂದು ಕೊನೆಗೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ವಿಜೇತರನ್ನು ಪಡೆದುಕೊಂಡಿದೆ. ಈಗ ಐಪಿಎಲ್ ಮುಗಿದ 10 ದಿನಗಳ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಪ್ರಾರಂಭವಾದ ಮತ್ತೊಂದು ಲೀಗ್ ಪ್ರಾರಂಭವಾಗಲಿದೆ. https://ainkannada.com/the-darkest-black-stains-need-to-be-white-so-mix-this-ingredient-for-the-shampoo/ ಆದರೆ, ಅಭಿಮಾನಿಗಳ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ ಇದು ಯಾವ ಲೀಗ್. ಅಲ್ಲದೆ, ಐಪಿಎಲ್ನಂತಹ ಉತ್ಸಾಹವನ್ನು ನಾವು ಇದರಲ್ಲಿ ನೋಡುತ್ತೇವೆಯೇ ಅಥವಾ ಇಲ್ಲವೇ, ಈ ಲೀಗ್ ಅನ್ನು ಎಲ್ಲಿ ನೇರಪ್ರಸಾರ ವೀಕ್ಷಿಸಬೇಕು ಎಂಬಂತಹ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.. ಮಿನಿ ಐಪಿಎಲ್ ಯಾವಾಗ ಪ್ರಾರಂಭವಾಗುತ್ತದೆ? ಪ್ರಪಂಚದಾದ್ಯಂತದ ಅನೇಕ ಲೀಗ್ಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ ಆಯೋಜಿಸಲಾಗಿದೆ. ಆದರೆ ಅಮೆರಿಕದಲ್ಲಿ ಆಡುವ ಪ್ರಮುಖ ಲೀಗ್ ಕ್ರಿಕೆಟ್ ಅನ್ನು ಮಿನಿ ಐಪಿಎಲ್ ಎಂದೂ ಕರೆಯುತ್ತಾರೆ. ಏಕೆಂದರೆ ಈ ಲೀಗ್ನಲ್ಲಿ ಐಪಿಎಲ್ನಂತೆಯೇ ಬಹುತೇಕ ಅದೇ ತಂಡಗಳಿವೆ. ಅಂದರೆ, ಸರಳವಾಗಿ ಹೇಳುವುದಾದರೆ, ಇದು ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಸಹೋದರ ಫ್ರಾಂಚೈಸ್ ಆಗಿದೆ, ಉದಾಹರಣೆಗೆ ಮುಂಬೈ ಇಂಡಿಯನ್ಸ್ನ ಎಂಐ ನ್ಯೂಯಾರ್ಕ್,…
ತೆಲಂಗಾಣ ಹಾಡುಗಳಿಂದ ಜನಪ್ರಿಯ ಗಾಯಕಿ ಮಂಗ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವ ಮಂಗ್ಲಿ ತಮ್ಮ ಹುಟ್ಟುಹಬ್ಬದ ಪಾರ್ಟಿಯಲ್ಲಿ ತೊಂದರೆಗೆ ಸಿಲುಕಿದರು. ಮಂಗಳವಾರ ರಾತ್ರಿ, ಮಂಗ್ಲಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಚೆವೆಲ್ಲಾ ತ್ರಿಪುರಾ ರೆಸಾರ್ಟ್ನಲ್ಲಿ ಪಾರ್ಟಿ ನೀಡಿದರು . ಆದಾಗ್ಯೂ, ಪಾರ್ಟಿಯಲ್ಲಿ ಗಾಂಜಾ ಮತ್ತು ಡ್ರಗ್ಸ್ ಬಳಸಲಾಗುತ್ತಿದೆ ಎಂಬ ಮಾಹಿತಿ ಬಂದ ನಂತರ, ಪೊಲೀಸ್ ತಂಡ ದಾಳಿ ನಡೆಸಿತು. ಇದರ ಭಾಗವಾಗಿ, ದಾಮೋದರ್ ಎಂಬ ವ್ಯಕ್ತಿ ಗಾಂಜಾ ಸೇವಿಸುತ್ತಾ ಸಿಕ್ಕಿಬಿದ್ದಿದ್ದಾನೆ. ತೆಲುಗು ಯುವ ಚಲನಚಿತ್ರ ತಾರೆ ದಿವಿ, ಯುವ ಗೀತರಚನೆಕಾರ ಕಾಸರ್ಲಾ ಶ್ಯಾಮ್, ಯುವ ಗಾಯಕ ಧನುಂಜಯ್ ಮತ್ತು ನಿರ್ಮಾಪಕ ಕೂಡ ಈ ಪಾರ್ಟಿಯಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ. https://ainkannada.com/the-darkest-black-stains-need-to-be-white-so-mix-this-ingredient-for-the-shampoo/ ಮಂಗ್ಲಿ ಕೂಡ ಈ ವಿವಾದದ ಬಗ್ಗೆ ವಿವರಣೆ ನೀಡಿದ್ದಾರೆ. ಮಂಗ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.. ನನ್ನ ಹುಟ್ಟುಹಬ್ಬದ ಪಾರ್ಟಿಯನ್ನು ಕುಟುಂಬದ ಸಮಾರಂಭದಂತೆ ಆಚರಿಸುವ ಉದ್ದೇಶದಿಂದ ನಾನು ನನ್ನ ಪೋಷಕರು, ಕುಟುಂಬ ಸದಸ್ಯರು ಮತ್ತು ಸಂಬಂಧಿಕರನ್ನು ಆಹ್ವಾನಿಸಿದೆ. ಆದರೆ, ಮದ್ಯ…
ಗೌರಿಬಿದನೂರು:ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.ಅವರು ಇಂದು ಗೌರಿಬಿದನೂರಿನಲಗಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಪಾಲರು ತಾವಾಗಿಯೇ ಬರಲಿಲ್ಲ: ಆಹ್ವಾನ ನೀಡಲಾಗಿತ್ತು. ಜೂನ್ 4 ರಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಆರ್.ಸಿ. ಬಿ ಯ ವತಿಯಿಂದ ಆರ್.ಸಿ. ಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನನಗೆ ಅಂದು ಬೆಳಿಗ್ಗೆ 11.29 ನಿಮಿಷಕ್ಕೆ ಕೆ.ಎಸ್.ಸಿ.ಎ ವತಿಯಿಂದ ಶಂಕರ್ ಮತ್ತು ಜಯರಾಮ್ ಅವರು ಆಹ್ವಾನ ನೀಡಿ ಮನವಿ ಮಾಡಿಕೊಂಡರು. https://ainkannada.com/just-eat-this-leaf-and-eat-the-juice-and-melt-cholesterol/ ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನು ಆಹ್ವಾನ ಮಾಡಿರುವುದಾಗಿ ತಿಳಿಸಿದರು. ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಾಚಾರವಾಗಿದ್ದು ಅದು ತಪ್ಪು ಎಂದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದು ನೀವು ಬನ್ನಿ ಎಂದು ಆಹ್ವಾನಿಸಿದೆ…
ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕರ್ನಾಟಕದ ಹಲವು ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮಾಜಿ ಸಚಿವರು, ಶಾಸಕರು ಮತ್ತು ಸಂಸದರ ಮನೆಗಳಲ್ಲಿ ಪರಿಶೀಲನೆ ಮಾಡಲಾಗಿದೆ. ಇನ್ನೂ ಈ ವಿಚಾರವಾಗಿ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯೇ ನೀಡಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು ವಾಲ್ಮಿಕಿ ಹಗರಣದಲ್ಲಿ ತಪ್ಪಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಸಚಿವರ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ. ರಾಜಕೀಯ ಕಾರಣಗಳಿಗೆ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ. https://ainkannada.com/just-eat-this-leaf-and-eat-the-juice-and-melt-cholesterol/ ಜಾತಿ ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ನೀಡಿದ ಬಗ್ಗೆ ಮಾತನಾಡಿದ ಅವರು, ಈಗ ಮಾಡಿರುವ ವರದಿ ಹಳೆಯದಾಗಿದೆ. ಜಯ ಪ್ರಕಾಶ್ ಹೆಗಡೆ ವರದಿ ಅವೈಜ್ಞಾನಿಕ ಎಂದರು. ಆದರೆ ಹೇಗೆ ಎಂದು ಯಾರು ಹೇಳಿಲ್ಲ. ಮುಂದಿನ ದಿನಗಳಲ್ಲಿ ಹೇಗೆ ಸಮೀಕ್ಷೆ ಬರುತ್ತೆ ಎಂದು ಜನರು ಎದುರು ನೋಡುತ್ತಿದ್ದಾರೆ. ಇಂತಹದೇ ಆರೋಪಗಳು ಮುಂದೆಯೂ ಬರಬಹುದು. ಅವೈಜ್ಞಾನಿಕ ಏನು ಎಂಬುದು…
ಮೈಸೂರು: ಮುಖ್ಯಮಂತ್ರಿ ಬದಲಾವಣೆ ಮಾತು ಕೇಳಿ ಬರ್ತಿದ್ದಂತೆ, ಇತ್ತ ಬದಲಾವಣೆಯ ಮಾತೇ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿಗೆ ಯಾವುದೇ ಗಂಡಾಂತರ ಇಲ್ಲ. 5 ವರ್ಷ ಅವರೇ ಮುಖ್ಯಮಂತ್ರಿ ಎಂದಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿಯೇ ಮುಂದುವರಿಯುತ್ತಾರೆ. 5 ವರ್ಷ ಕೂಡ ಅವರೇ ಸಿಎಂ ಎಂದ್ರು. ಅಲ್ಲದೇ ಈ ಬಗ್ಗೆ ಹೈಕಮಾಂಡ್ ಯಾವುದೇ ಗಡುವು ನೀಡಿಲ್ಲ. ನಿನ್ನೆ ಕೂಡ ಈ ಬಗ್ಗೆ ಯಾವುದೇ ಚರ್ಚೆಯೂ ಆಗಿಲ್ಲ ಎಂದು ಹೇಳಿದ್ದಾರೆ. https://www.youtube.com/watch?v=xpPNGdHnlTQ ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ರೀತಿ ಘಟನೆಗಳು ನಡೆದಾಗ ಯಾವುದೇ ಕ್ರಮ ಆಗಿಲ್ಲ. ನಾವು ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದೇವೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. https://ainkannada.com/just-eat-this-leaf-and-eat-the-juice-and-melt-cholesterol/ ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶದ ಕುಂಭಮೇಳ…
ದಾವಣಗೆರೆ: ತಮ್ಮ ವ್ಯವಹಾರಗಳ ಮೇಲೆ ವ್ಯಾಮೋಹ ಇರುವವರನ್ನು ಸಂಪುಟದಲ್ಲಿ ಮುಂದುವರಿಸುವ ಅಗತ್ಯವಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ, ಅದು ನಡೆಯಬೇಕು ಮತ್ತು ಹೊಸಬರಿಗೆ ಹಾಗೂ ಯುವಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು. https://www.youtube.com/watch?v=4ime-zZF0Pk ಸಂಪುಟದಲ್ಲಿರುವ 8-10 ಸಚಿವರಿಗೆ ಮಂತ್ರಿಯಾಗಿ ಕೆಲಸ ಮಾಡುವುದಕ್ಕಿಂತ ತಮ್ಮ ವ್ಯವಹಾರಗಳನ್ನು ನೋಡಿಕೊಂಡು ಹೋಗುವುದು ಹೆಚ್ಚು ಮುಖ್ಯವಾಗಿದೆ, ಅಂಥವರನ್ನು ಸಂಪುಟದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ, ನಿಮ್ಮ ವ್ಯಹಾರಗಳ ಮೇಲೆ ಗಮನ ಹರಿಸಿ ಅಂತ ಬಿಡುಗಡೆ ಮಾಡಬೇಕು ಎಂದು ಬಸವರಾಜು ಹೇಳಿದರು. ನೀವೂ ಸಚಿವ ಸ್ಥಾನದ ಆಕಾಂಕ್ಷಿಯೇ ಅಂತ ಕೇಳಿದಾಗ, ನಾನೇನೂ ಸನ್ಯಾಸಿ ಅಲ್ಲವಲ್ಲ ಎಂದು ಅವರು ಹೇಳಿದರು. https://ainkannada.com/just-eat-this-leaf-and-eat-the-juice-and-melt-cholesterol/ ಮರು ಜಾತಿಗಣತಿ ವಿಚಾರವಾಗಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ. ಈ ಬಗ್ಗೆ ಸಿಎಂ ದೆಹಲಿಯಲ್ಲಿ ಮಾತಾಡಿದಂತೆ ಕಾಣುತ್ತದೆ. ಮರು ಜಾತಿಗಣತಿ ಮಾಡುವುದಾದರೆ ನಾನು ಆ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ.…
ರಾಮನಗರ: ಇದು ರೀಲ್ಸ್ ರಾಣಿಯ ಕಣ್ಣೀರಿನ ಕಥೆಯಾಗಿದೆ. ಇನ್ಸ್ಟಾಗ್ರಾಂ ಮೂಲಕ ಅಂತರ್ಜಾತಿ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ ಭೂಪ ಎಸ್ಕೇಪ್ ಆಗಿರುವ ಘಟನೆ ರಾಮನಗರ ತಾಲೂಕಿನಲ್ಲಿ ನಡೆದಿದೆ. ಪತಿ ಪ್ರತಾಪ್ ಗಾಗಿ ಪತ್ನಿ ರಕ್ಷಿತಾ ಗೋಳಾಟ ನಡೆಸುತ್ತಿದ್ದಾರೆ. ಎರಡು ವರ್ಷಗಳ ಕೆಳಗೆ ಇನ್ಸ್ಟಾಗ್ರಾಂ ಮೂಲಕ ಇಬ್ಬರ ನಡುವೆ ಪರಿಚಯವಾಗಿ ಪರಿಚಯ ಪ್ರೀತಿಯಾಗಿ, ವಿರೋಧದ ನಡುವೆ ತಿರುಪತಿಯಲ್ಲಿ ಪ್ರತಾಪ್ ನನ್ನ ಮದುವೆಯಾಗಿದ್ದಳು. https://ainkannada.com/just-eat-this-leaf-and-eat-the-juice-and-melt-cholesterol/ ನಂತರ ಒಂದು ವರ್ಷ ಸಂಸಾರ ಕೂಡ ಮಾಡಿದ್ದಾರೆ. ಆದರೆ ಹೆಂಡತಿಗೆ ಹೇಳದೇ ಏಕಾಏಕಿ ಗಂಡ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರೋ ಪತಿಗಾಗಿ ಪತ್ನಿ ಪರದಾಡುತ್ತಿದ್ದಾಳೆ. ಒಂದೇ ವರ್ಷಕ್ಕೆ ಹೆಂಡತಿ ಬಿಟ್ಟು ಪತಿ ಪ್ರತಾಪ್ ಎಸ್ಕೇಪ್ ಆಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರಿಗೂ ಮಾಹಿತಿ ನೀಡದೇ ಎಸ್ಕೇಪ್ ಆಗಿದ್ದಾರೆ. ಕಳೆದ ಸುಮಾರು ಐದು ತಿಂಗಳಿಂದ ಗಂಡ ಪ್ರತಾಪ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪತ್ನಿ ಗೋಳಾಡುತ್ತಿದ್ದಾಳೆ. ಈ ಸಂಬಂಧ ಇದೀಗ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾಳೆ. ಇತ್ತ ಇನ್ಸ್ಟಾಗ್ರಾಂ ಮೂಲಕ ಪರಿಚಯ…
ದೊಡ್ಡಬಳ್ಳಾಪುರ: ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದ ಕೊನ್ನಘಟ್ಟ ಗ್ರಾಮದಲ್ಲಿ ನಡೆದಿದೆ. ನಾಗಚೈತನ್ಯ (8) ಮೃತ ಬಾಲಕನಾಗಿದ್ದು, https://ainkannada.com/just-eat-this-leaf-and-eat-the-juice-and-melt-cholesterol/ ಅಣ್ಣ ತಂಗಿ ಜೊತೆಯಲ್ಲಿ ಕೃಷಿ ಹೊಂಡದ ಕಡೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಆಯತಪ್ಪಿ ಅಣ್ಣ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಕೂಡಲೇ ಪೋಷಕರಿಗೆ ತಂಗಿ ವಿಚಾರ ತಿಳಿಸಿದ್ದಾಳೆ. ಪೋಷಕರು ಹೋಗಿ ನೋಡುವ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ನಲ್ಲಿ ನಡೆದಿದೆ. ರತ್ನ (54) ಸಾವನ್ನಪ್ಪಿದ್ದ ಮಹಿಳೆಯಾಗಿದ್ದು, ಪತಿ ಜೊತೆ ಮಗಳ ಮನೆಗೆ ಹೋಗ್ತಿದ್ದ ವೇಳೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದು ಮೈ ಮೇಲೆ ಹರಿದಿದೆ. https://ainkannada.com/just-eat-this-leaf-and-eat-the-juice-and-melt-cholesterol/ ಇದರಿಂದ ಮಹಿಳೆ ಮೃತಪಟ್ಟಿದ್ದಾರೆ. ಇನ್ನೂ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಘಿದೆ.