ಸೂರ್ಯೋದಯ – 5:54 ಬೆ. ಸೂರ್ಯಾಸ್ತ – 6:32 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ವೈಶಾಖ ಮಾಸ, ತಿಥಿ – ತದಿಗೆ ನಕ್ಷತ್ರ – ರೋಹಿಣಿ ಯೋಗ – ಶೋಭನ ಕರಣ – ಗರಜೆ *ಮಳೆ ನಕ್ಷತ್ರ :ಭರಣಿ* ರಾಹು ಕಾಲ -12:00 ದಿಂದ 01:30 ವರೆಗೆ ಯಮಗಂಡ – 07:30 ದಿಂದ 09:00 ವರೆಗೆ ಗುಳಿಕ ಕಾಲ – 10:30 ದಿಂದ 12:00 ವರೆಗೆ ಬ್ರಹ್ಮ ಮುಹೂರ್ತ – 4:18 ಬೆ. ದಿಂದ 5:06 ಬೆ. ವರೆಗೆ ಅಮೃತ ಕಾಲ – 1:25 ಮ. ದಿಂದ 2:51 ಮ. ವರೆಗೆ ಅಭಿಜಿತ್ ಮುಹುರ್ತ – ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob.…
Author: AIN Author
ಬೆಂಗಳೂರು:- ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವೂ ಬಾರತಕ್ಕೆ ಸೇರಿದ್ದಾಗಿದೆ. ಆದರೆ ಇಂದು ಇವೆಲ್ಲವೂ ನಮ್ಮ ಪಾಲಿಗೆ ಇಲ್ಲದೇ ದೇಶ ಅತಂತ್ರ ಸ್ಥಿತಿಯಲ್ಲಿದೆ ಎಂದು ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಅವರು ಆತಂಕ ಹೊರ ಹಾಕಿದ್ದಾರೆ. https://ainkannada.com/siddaramaiah-never-said-that-it-is-being-spread-h-m-revannas-justification/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವೂ ಭಾರತಕ್ಕೆ ಸೇರಿದ್ದವು. ಆದರೆ ಇಂದು ಪ್ರಪಂಚದ ಬೇರೆ-ಬೇರೆ ದೇಶಗಳಾಗಿ ಗುರುತಿಸಿಕೊಂಡಿದೆ. ಇದನ್ನು ನಾವು ಅವಲೋಕನ ಮಾಡಿಕೊಳ್ಳಬೇಕು. ಮತ್ತೊಂದೆಡೆ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಆದ್ರೂ ಹಿಂದೂ ಎಂಬ ಕಾರಣಕ್ಕೆ ಈಗಲೂ ಅಪಮಾನ, ಅಪ್ರಚಾರ ಆಗುತ್ತಲೇ ಇದೆ. ಇದು ಧರ್ಮಕ್ಕೆ ಪೆಟ್ಟು ಕೊಡುತ್ತಿದೆ ಎಂದು ಬೇಸರ ಹೊರ ಹಾಕಿದರು. ನಮ್ಮ ಭೂಮಿಯಲ್ಲೇ ನಮಗೆ ಅವಮಾನ ಆಗುತ್ತಿದೆ. ಅಂದ್ರೆ ಇದಕ್ಕೆ ಕಾರಣ ನಾವೇ. ನಾವೇ ದುರ್ಬಲರು, ಅಸಂಘಟಿತರಾಗಿದ್ದೇವೆ, ಹೇಡಿಗಳಾಗಿದ್ದೇವೆ. ಹೀಗಾಗಿ ಧೈರ್ಯ, ಸ್ಥೈರ್ಯ ಬರಬೇಕು ಎಂದರು. ಸ್ವಾತಂತ್ರ್ಯ ಮುಂಚೆ ಬ್ರಿಟಿಷರೇ ಭಾರತ ಬಿಟ್ಟು ಹೋಗಿ…
ಕಲಬುರ್ಗಿ:- ಪಾಕ್ ವಿರುದ್ಧ ಯುದ್ಧ ಬೇಡ ಅಂತ ಸಿದ್ದರಾಮಯ್ಯ ಹೇಳಿಯೇ ಇಲ್ಲ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಸಮರ್ಥನೆ ಮಾಡಿಕೊಂಡಿದ್ದಾರೆ. https://ainkannada.com/the-state-government-has-extended-the-tenure-of-director-general-of-police-alok-mohan/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ಘಟನೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಹೇಳಿಯೇ ಇಲ್ಲ. ಏನಿದ್ದರೂ ಮೊದಲು ಭದ್ರತೆ ಖಚಿತಪಡಿಸಿಕೊಂಡು ನಂತರ ಯುದ್ಧ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದರು. ಸಿಎಂ ಯುದ್ಧ ಬೇಡ ಎಂದಿಲ್ಲ. ದೇಶದ ಅಖಂಡತೆ ಮತ್ತು ಸಾರ್ಮಭೌಮತ್ವಕ್ಕೆ ಧಕ್ಕೆ ಬಂದಲ್ಲಿ ಹಾಗೂ ಅನಿವಾರ್ಯತೆ ಎನಿಸಿದರೆ ಯುದ್ಧ ಮಾಡಿ ಎಂದಿದ್ದಾರೆ. ಮೇಲಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪಷ್ಪಪಡಿಸಿದ್ದಾರೆ ಎಂದರು. ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ತಮ್ಮ ಪಕ್ಷದ ಬೆಂಬಲ ಇರುತ್ತದೆ ಎಂದು ಹೇಳಿದ ಮೇಲೆ ಇನ್ನೇನಿದೆ. ಇಷ್ಟು ದಿನ ತೂಕಡಿಸುತ್ತಾ, ಈಗ ಅಲ್ಲಿ…
ಬೆಂಗಳೂರು :- ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಯೋನಿವೃತ್ತಿ ಹೊಂದಬೇಕಿದ್ದ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿಯನ್ನು 22 ದಿವಸಗಳ ಮಟ್ಟಿಗೆ ರಾಜ್ಯ ಸರ್ಕಾರ ವಿಸ್ತರಿಸಿದೆ. ಅಂದರೆ ಮೇ 21ರವರೆಗೆ ವಿಸ್ತರಣೆ ಮಾಡಲಾಗಿದೆ. https://ainkannada.com/industry-active-yuva-suri-movie-tomorrow-sivanna-a-for-anand-movie-muhurta-on-may-2/ ರಾಜ್ಯ ಪೊಲೀಸ್ ಇಲಾಖೆಗೆ ನೂತನ ಡಿಜಿಪಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ. ಡಿಜಿಪಿ ಅಲೋಕ್ ಮೋಹನ್ ಅವರು ತಮ್ಮ ಸೇವೆಯನ್ನು ಮೂರು ತಿಂಗಳ ಕಾಲ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು ಎಂದು ವರದಿಯಾಗಿತ್ತು
ನೀವು ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಬೆಂಗಳೂರಿನಲ್ಲಿ Job ಸರ್ಚ್ ಮಾಡಿ ಸಾಕಾಗಿದ್ಯಾ! ಹಾಗಿದ್ರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.. ಟು ವೀಲರ್ ರೈಡರ್ಸ ಕಮ್ ಡಿಲೇವರಿ ಬಾಯ್ಸಗಳಿಗೆ ಕೈತುಂಬಾ ಸಂಬಳ ಸಿಗುವ JOB ಆಫರ್ ಇಲ್ಲಿದೆ ನಿಮಗಾಗಿ.. ಸೀಹಿ ಸುದ್ದಿ MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಎಂಬ ಪ್ರೈವೇಟ್ ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಡೇಲಿವರಿ ಹುದ್ದೆಗಳ ಭರ್ತಿಗೆ ಬೆಂಗಳೂರಿನಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಆಯ್ಕೆಯಾದವರಿಗೆ ಆಕರ್ಷಕ ಸಂಬಳದ ಜೊತೆಗೆ ಹಲವು ಸೌಲಭ್ಯಗಳು ಸಿಗಲಿದೆ. ಹೌದು ತಿಂಗಳಿಗೆ 20 ಸಾವಿರ ಪಿಕ್ಸೇಡ್ salary ಸಿಗಲಿದೆ ಮತ್ತು ವಿಶೇಷವಾಗಿ ಯಾವುದೇ ಟಾರ್ಗೇಟ್ಸ ಇರುವುದಿಲ್ಲ ಪಿಕ್ಸೇಡ್ salary ಸಿಗುತ್ತಿದೆ ನೀವು ಸೇರಿದ ಮೊದಲ ತಿಂಗಳು Joining Bonus ಎಂದು 1 ಸಾವಿರ ಬೋನಸ್ ಕೊಡಲಾಗುವುದು… ಕೆಲಸದ ವೇಳೆ ಬೇಳಿಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ ತಿಂಗಳಿಗೆ 26 ದಿನ ಕೆಲಸ 4 ದಿನ ರಜೆ ಇರುತ್ತದೆ ಅಲ್ಲದೇ.. ತಿಂಗಳಿಗೆ ಇನ್ಸೆಂಟಿವ್…
ಬಾಗಲಕೋಟೆ:- ಅಮಾನವೀಯ ಕೃತ್ಯ ಒಂದು ಬಾಗಲಕೋಟೆಯಲ್ಲಿ ಜರುಗಿದೆ. ನಿಧಾನವಾಗಿ ಹೋಗಪ್ಪ ಎಂದು ಬುದ್ಧಿವಾದ ಹೇಳಿದಕ್ಕೆ ಎನ್ಡಬ್ಲೂಕೆಎಸ್ಆರ್ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಕಟ್ಟಿಗೆಯಿಂದ ಹೊಡೆದಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಜರುಗಿದೆ. https://ainkannada.com/singer-prithvi-bhatt-shares-a-photo-with-her-husband-fans-congratulate-the-newlyweds/ ಚಲಿಸುತ್ತಿದ್ದ NWKRTC ಬಸ್ಗೆ ಬೈಕ್ ಸವಾರ ಅಡ್ಡ ಬಂದಿದ್ದರು. ಆಗ, ಬಸ್ ಚಾಲಕ ನಿಧಾನವಾಗಿ ಹೋಗಪ್ಪ ಅಂತ ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೇ NWKRTC ಬಸ್ ಚಾಲಕನ ಜೊತೆ ಬೈಕ್ ಸವಾರ ವಾಗ್ವಾದಕ್ಕೆ ಇಳಿದಿದ್ದಾನೆ. ಚಾಲಕನಿಗೆ ನಿಂದಿಸಿ, ಬಳಿಕ ತನ್ನ ತಂದೆಗೆ ಕರೆ ಮಾಡಿದ್ದಾನೆ. ಜಗದಾಳ ಬಳಿ ಬೊಲೆರೊ ವಾಹನದಲ್ಲಿ ಜನರನ್ನು ಕರೆತಂದು ಚಾಲಕ ಮತ್ತು ನಿರ್ವಾಹಕರ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.
ದೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ಇನ್ನು ಇದೇ ತಿಂಗಳು 30ರಂದು ಅಕ್ಷಯ ತೃತೀಯ ಇದೆ. ಈ ಬಾರಿ ಅಕ್ಷಯ ತೃತೀಯ ಚಿನ್ನ ಪ್ರಿಯರಿಗೆ ಹಾಗೂ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಸ್ವಲ್ಪ ಸಿಹಿ ಹಾಗೂ ಸ್ವಲ್ಪ ಕಹಿ ತಂದಿದೆ ಅಂತಲೇ ಹೇಳಬಹುದು. ಆದರೆ, ಬಂಗಾರ ಪ್ರಿಯರ ಆತಂಕವನ್ನು ದೂರ ಮಾಡುವುದಕ್ಕೆ ಚಿನ್ನದ ಮಳಿಗೆಗಳು ಹಾಗೂ ಚಿನ್ನದ ಉದ್ಯಮಿಗಳು ಮುಂದಾಗಿದ್ದಾರೆ. https://ainkannada.com/do-you-also-have-the-habit-of-consuming-ragi-malt-if-so-this-problem-is-not-unique-to-you/ ಹೌದು, 2025ರ ಅಕ್ಷಯ ತೃತೀಯ ಹಬ್ಬ ಬಂದೇ ಬಿಟ್ಟಿದೆ. ನಾಳೆ ದೇಶಾದ್ಯಂತ ಅಕ್ಷಯ ತೃತೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ಅಂದ್ರೆ ಚಿನ್ನವನ್ನು ಕೊಳ್ಳುವ ಶುಭ ದಿನ. ನಾಳೆ ಅನೇಕರು ಚಿನ್ನದ ಅಂಗಡಿಗೆ ತೆರಳಿ ಚಿನ್ನ ಕೊಳ್ಳಲು ಮುಂದಾಗಿದ್ದಾರೆ. ಚಿನ್ನಾಭರಣ ಪ್ರಿಯರಿಗೆ ಬಂಗಾರದ ಅಂಗಡಿಗಳು ಈಗಾಗಲೇ ಭರ್ಜರಿ ಆಫರ್ ಕೊಟ್ಟು ಸ್ವಾಗತ ಕೋರುತ್ತಿವೆ. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಆದರೆ ಒಂದು ಸಮಾಧಾನಕರ ಸುದ್ದಿ ಏನಂದ್ರೆ 1 ಲಕ್ಷದ ಗಡಿ…
ರಾಗಿ ಎಷ್ಟು ಆರೋಗ್ಯಕ ಆಹಾರ ಅನ್ನೋದನ್ನ ವಿವರಿಸಿ ಹೇಳಬೇಕಿಲ್ಲ. ದೇಹಕ್ಕೆ ಎಷ್ಟೋ ಅಗತ್ಯ ಪೋಷಕಾಂಶಗಳನ್ನು ನೀಡುವ ರಾಗಿಯಿಂದ ತೂಕ ಕೂಡಾ ಇಳಿಸಿಕೊಳ್ಳಬಹುದು. ಮಧುಮೇಹಿಗಳಿಗೆ ಕೂಡಾ ಇದು ಉತ್ತಮ ಆಹಾರ. ರಾಗಿಮುದ್ದೆ, ರಾಗಿರೊಟ್ಟಿ ಹೀಗೆ ಪ್ರತಿದಿನ ನೀವು ರಾಗಿಯಿಂದ ತಯಾರಿಸಿದ ಆಹಾರ ಸೇವಿಸಿದರೆ ನಿಮ್ಮಷ್ಟು ಆರೊಗ್ಯವಂತರು ಮತ್ತಾರೂ ಇಲ್ಲ ಎನ್ನಬಹುದು. ಹಾಗೇ ನೀವು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಕಾಫಿ ಟೀ ಕುಡಿಯುವ ಬದಲಿಗೆ ರಾಗಿ ಮಾಲ್ಡ್ ಡ್ರಿಂಕ್ ಸೇವಿಸಿದರೆ ಇನ್ನೂ ಒಳ್ಳೆಯದು. https://ainkannada.com/beware-people-water-has-an-expiration-date-like-today-think-a-hundred-times-before-drinking-it/ ರಾಗಿ ಮಾಲ್ಟ್ ಅನ್ನು ದಿನಕ್ಕೆ ಒಂದು ಬಾರಿಯಾದರೂ ಸೇವನೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದನ್ನು ಕುಡಿಯುವುದರಿಂದ ದೇಹಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ. ಆತಂಕ, ಖಿನ್ನತೆ ಕಡಿಮೆಯಾಗುತ್ತದೆ ರಾಗಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಜೀವಸತ್ವಗಳು, ಖನಿಜಗಳು, ನಾರುಗಳು, ಕೊಬ್ಬುಗಳು, ಪ್ರೋಟೀನ್ಗಳು ಮುಂತಾದ ಎಲ್ಲಾ ಅಗತ್ಯ ಮ್ಯಾಕ್ರೋನ್ಯೂಟ್ರಿಯೆಂಟ್ಗಳನ್ನು ಒಳಗೊಂಡಿದ್ದು, ಪ್ರತಿದಿನ ರಾಗಿ ಮಾಲ್ಟ್ ಕುಡಿಯುವುದರಿಂದ ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆ…
ಹಾಸನ:- ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ. 43 ವರ್ಷದ ಸತೀಶ್ ಮೃತ ವ್ಯಕ್ತಿ. ಹದಿನೈದು ವರ್ಷಗಳ ಹಿಂದೆ ಹಾಸನದ ವಿದ್ಯಾ ಎಂಬುವವರ ಜೊತೆ ಮದುವೆಯಾಗಿದ್ದರು. https://ainkannada.com/beware-people-water-has-an-expiration-date-like-today-think-a-hundred-times-before-drinking-it/ ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು ಹಲವು ಬಾರಿ ಕುಟುಂಬಸ್ಥರು ರಾಜೀ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಜಗಳ, ವೈಮನಸ್ಸು ಸರಿಯಾಗಿರಲಿಲ್ಲ. ನಿನ್ನೆ ಬೆಳಗ್ಗೆ ಮನೆಯಲ್ಲೇ ಸತೀಶ್ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬಹಳಷ್ಟು ಜನರು ನಿಂತುಕೊಂಡೇ ನೀರನ್ನು ಕುಡಿಯುತ್ತಾರೆ. ಹೀಗೆ ನಿಂತು ನೀರು ಕುಡಿಯೋ ಅಭ್ಯಾಸ ಒಳ್ಳೆಯದಲ್ಲ ಅಂತ ಹಿರಿಯರು ಹೇಳೋದನ್ನು ಕೇಳಿರಬಹುದು. ಹಾಗಿದ್ದರೆ ನಿಜವಾಗಿಯೂ ನಿಂತು ನೀರು ಕುಡಿಯೋದ್ರಿಂದ ಒಳ್ಳೆಯದಾ ? ಅಲ್ಲವಾ? ಅದು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡುತ್ತದಾ? ಇದಕ್ಕೆಲ್ಲ ಇಲ್ಲಿದೆ ಉತ್ತರ. https://ainkannada.com/even-if-youre-not-you-shouldnt-cut-your-nails-on-this-day-so-which-day-is-best/ ನಿಂತು ನೀರು ಕುಡಿಯಬೇಡಿ ಎನ್ನುವುದಕ್ಕೆ ಕಾರಣ: ನಾವು ಎದ್ದುನಿಂತು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನರಮಂಡಲವನ್ನು ಹಾಳುಮಾಡಬಹುದು. ನಿಂತು ನೀರು ಕುಡಿಯುವುದರಿಂದ ದೇಹಕ್ಕೆ ಹೋಗುವ ನೀರಿನ ವೇಗ ಹೆಚ್ಚಾಗುತ್ತದೆ. ಅದರಿಂದ ನಮ್ಮ ಆರೋಗ್ಯಕ್ಕೆ ಕೆಲವು ರೀತಿಯಲ್ಲಿ ಹಾನಿಕಾರಕವಾಗಬಹುದು ಎಂದು ಹೇಳಲಾಗುತ್ತದೆ. ನಿಮಗೆ ಗೊತ್ತಾ? ನೀರಿಗೂ ಎಕ್ಸ್ಪೈರ್ಡ್ ಡೇಟ್ ಇರುತ್ತದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ನೀರಿನ ಬಾಟಲಿಗಳಿಂದ ನೀರು ಕುಡಿಯುವ ಮೊದಲು ಅದು ಕುಡಿಯಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ರೀತಿ ಅವಧಿ ಮೀರಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ…