Author: AIN Author

ಸಸ್ಯಗಳು ನಮ್ಮ ಅದೃಷ್ಟವನ್ನು ಬದಲಾಯಿಸಬಹುದು ಎಂದು ಹೇಳುವುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ವಾಸ್ತು ಮಾತ್ರವಲ್ಲ, ಇತರ ಧಾರ್ಮಿಕ ಗ್ರಂಥಗಳಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಆದರೆ ಅವುಗಳನ್ನು ತಪ್ಪಾದ ಸ್ಥಳದಲ್ಲಿ ಅಥವಾ ದಿಕ್ಕಿನಲ್ಲಿ ಇರಿಸಿದರೆ, ಮಾತ್ರ ತಪ್ಪಾಗಬಹುದು. ಇಂದಿನ ಲೇಖನದಲ್ಲಿ ವಾಸ್ತು ಪ್ರಕಾರ ಮನೆಯಲ್ಲಿ ಎಲ್ಲಿ ಮತ್ತು ಯಾವ ಗಿಡಗಳನ್ನು ನೆಡಬೇಕು ಮತ್ತು ಅವುಗಳಿಂದಾಗುವ ಲಾಭಗಳೇನು ಎಂಬುದನ್ನು ವಿವರಿಸಲಾಗಿದೆ. https://ainkannada.com/bank-customers-notice-heres-a-list-of-holidays-in-may-how-is-it-in-karnataka/ ನಿಮ್ಮ ಮನೆಯಲ್ಲಿ ಯಾವಾಗಲೂ ಶಾಂತಿ, ಸಕಾರಾತ್ಮಕತೆ ಮತ್ತು ಅನುಕೂಲಕರ ವಾತಾವರಣವಿರಬೇಕೆಂದು ನೀವು ಬಯಸಿದರೆ, ಕೆಲವು ವಿಶೇಷ ಸಸ್ಯಗಳನ್ನು ಬೆಳೆಸುವುದು ಉತ್ತಮ ಪರಿಹಾರವಾಗಿದೆ. ತಜ್ಞರ ಪ್ರಕಾರ, ಕೆಲವು ಸಸ್ಯಗಳು ಮನೆಯಲ್ಲಿರುವ ಗಾಳಿಯನ್ನು ಶುದ್ಧೀಕರಿಸುವುದಲ್ಲದೆ, ಮನಸ್ಸಿನ ಶಾಂತಿಯನ್ನು ಸಹ ನೀಡುತ್ತವೆ. ಈಗ ಅಂತಹ ಐದು ಅದ್ಭುತ ಸಸ್ಯಗಳ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ (Off)ಟಟ ಕೆಲವು ವಿಶೇಷ ಸಸ್ಯಗಳನ್ನು ಇಟ್ಟರೆ, ಅದೃಷ್ಟ (luck), ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ಆಕರ್ಷಿಸಬಹುದು ಎಂಬ ನಂಬಿಕೆಗಳಿವೆ. ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರ ಪ್ರಕಾರ,…

Read More

ಬ್ಯಾಂಕ್‌ ಅಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ, ಬೇಗ ಮುಗಿಸ್ಕೋಬೇಕು ಅಂತಿದ್ದರೆ ಇನ್ನೂ ಮೂರು ದಿನ ನಿಮ್ಮ ಕೆಲಸ ಆಗಲ್ಲ ಬಿಡಿ. ಏಕೆಂದರೆ ಇಂದಿನಿಂದ ಅಂದರೆ ಏಪ್ರಿಲ್ 29 ರಿಂದ ಮೇ 1 ರವರೆಗೆ ಸತತ ಮೂರು ದಿನಗಳ ಕಾಲ ಭಾರತದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ. ಶ್ರೀ ಪರಶುರಾಮ ಜಯಂತಿ, ಅಕ್ಷಯ ತೃತೀಯ-ಬಸವ ಜಯಂತಿ, ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ನಿಮಿತ್ತ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. https://ainkannada.com/what-did-nani-the-natural-star-who-tasted-the-taste-of-kicchas-hand-say/ ಕರ್ನಾಟಕದಲ್ಲಿ ಭಾನುವಾರ, ಶನಿವಾರಗಳ ಆರು ದಿನಗಳನ್ನು ಹೊರತುಪಡಿಸಿದರೆ, ಕಾರ್ಮಿಕ ದಿನಕ್ಕೆ ಮಾತ್ರವೇ ರಜೆ ಇದೆ. ಹೀಗಾಗಿ, ಮೇ ತಿಂಗಳಲ್ಲಿ ಕರ್ನಾಟಕಕ್ಕೆ ಏಳು ದಿನ ಮಾತ್ರವೇ ಬ್ಯಾಂಕುಗಳು ಬಂದ್ ಆಗಿರುತ್ತವೆ. 2025ರ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಮೇ 1, ಬುಧವಾರ: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ (ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಅಸ್ಸಾಮ್ ಸೇರಿ ಬಹುತೇಕ ರಾಜ್ಯಗಳಲ್ಲಿ ರಜೆ) ಮೇ 4: ಭಾನುವಾರದ ರಜೆ ಮೇ 8,…

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮೊಬೈಲ್‌ ಕಳ್ಳತನ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಐದು ಸಾವಿರಕ್ಕೂ ಅಧಿಕ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಏನಿದು ಪ್ರಕರಣ ಅನ್ನೋದನ್ನ ನೋಡೋದಾದರೆ. ಕಳೆದ 2024ರ ನವೆಂಬರ್‌ 23ರಂದು ರಾಷ್ಟ್ರೀಯ ಹೆದ್ದಾರಿ-44ರ ಮೂಲಕ ಉತ್ತರಪ್ರದೇಶದ ನೋಯ್ಡಾದಿಂದ ಬೆಂಗಳೂರು ಕಡೆಗೆ ಬರೋಬ್ಬರಿ 6,640 ಮೊಬೈಲ್‌ಗಳನ್ನ ಹೊತ್ತಿದ್ದ ಟ್ರಕ್‌ವೊಂದು ಬಂದಿತ್ತು. ಆದರೆ ಈ ಟ್ರಕ್‌ ಬೆಂಗಳೂರನ್ನು ತಲುಪದ ಕಾರಣ ಕಂಪನಿಯವರು ಜಿಪಿಎಸ್‌ ಮೂಲಕ ಚೆಕ್‌ ಮಾಡಿಸಿದಾಗ  ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾ ವೊಂದರ ಬಳಿ ಟ್ರಕ್‌ ಪತ್ತೆಯಾಗಿತ್ತು. ಆದರೆ ಟ್ರಕ್‌ನಲ್ಲಿದ್ದ 6640 ಮೊಬೈಲ್‌ಗಳಲ್ಲಿ ಸುಮಾರು 5140 ಮೊಬೈಲ್‌ಗಳನ್ನು ಕಳ್ಳತನ ಮಾಡಲಾಗಿತ್ತು. https://ainkannada.com/arrest-of-those-who-robbed-a-bank-three-years-ago/ ಈ ಸಂಬಂಧ ಪ್ರಕರಣ ದಾಖಲಿಸಿಕೊಂಢು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಇದೀಗ 7 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಟ್ರಕ್…

Read More

ಕೋಲಾರ: ಬೆಳದು ನಿಂತಿದ್ದ ಮಗ ಮನೆಯ ಜವಾಬ್ದಾರಿ ಇಲ್ಲದೇ ಸ್ನೇಹಿತರೊಂದಿಗೆ ಓಡಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ ತಂದೆ ತಾಯಿ ಮಗನಿಗೆ ಬೈದು ಬುದ್ದಿವಾದ ಹೇಳಿದ್ದಾರೆ. ಹೀಗೆ ತಂದೆತಾಯಿ ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣಾದ ಘಟನೆ ಕೋಲಾರ   ಜಿಲ್ಲೆಯ ಮುಳಬಾಗಿಲು ಪಟ್ಟಣದ ಕುಂಬಾರಪಾಳ್ಯದಲ್ಲಿ ನಡೆದಿದೆ. ಕುಂಬಾರಪಾಳ್ಯ ನಿವಾಸಿ ಗಣೇಶ್ (29) ಮೃತನಾಗಿದ್ದು, ಗಣೇಶ್ ವರ್ಷದ ಹಿಂದೆಯಷ್ಟೇಗೆ ಗಣೇಶ್‌ಗೆ ಮದುವಯಾಗಿತ್ತು. ಆದರೆ ಮದುವೆಯಾಗಿದ್ದರು ಗಣೇಶ್‌ ಬೇಜಾವಾಬ್ದಾರಿತನಿಂದ ವರ್ತಿಸುತ್ತಿದದ್ದ. ಹೆಂಡತಿ ಮಕ್ಕಳನ್ನ ಚನ್ನಾಗಿ ನೋಡಿಕೋ, ಜವಾಬ್ದಾರಿಯಿಂದಿರು ಎಂದಿದ್ದ ತಂದೆ ತಾಯಿ ಬುದ್ದಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://ainkannada.com/list-the-animals-for-their-health-deputy-director-g-n-ramesh/ ಸದ್ಯ ಈ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ.

Read More

ಕೋಲಾರ : ಜಾನುವಾರಗಳಿಗೆ ಕಾಲುಬಾಯಿ ಲಸಿಕೆ ಹಾಗೂ ಚರ್ಮಗಂಟು ರೋಗದ ಎರಡು ಲಸಿಕೆಗಳನ್ನು ವಿಜ್ಞಾನಿಗಳ ಸಮ್ಮತಿಯಿಂದ, ಕೇಂದ್ರ ಸರ್ಕಾರ ಪಶು ಇಲಾಖೆಯಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗಕ್ಕೆ ಪ್ರತಿಯೊಬ್ಬ ರೈತರು ಜಾನುವಾರಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಪಶು ಇಲಾಖೆಯ ಉಪನಿರ್ದೇಶಕ ಜಿ. ಎನ್. ರಮೇಶ್ ಮನವಿ ಮಾಡಿದರು. https://ainkannada.com/law-college-lecturer-accused-of-making-anti-national-remarks/ ತಾಲೂಕಿನ ತೊರದೇವಂಡಹಳ್ಳಿಯ ಗ್ರಾಮದಲ್ಲಿ 7ನೇ ಸುತ್ತಿನ  ಜಾನುವಾರಗಳಿಗೆ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು 2 ಲಕ್ಷ 10 ಸಾವಿರ ಜಾನುವಾರು ಗಳು ಇದ್ದು,ಲಸಿಕಾ ಅಭಿಯಾನವನ್ನು ಏಪ್ರಿಲ್ 26 ರಿಂದ ಜೂನ್ 9 ವರೆಗೂ 45 ದಿನ ಗಳವರೆಗೂ ಜಾನುವಾರು ಲಸಿಕಾ ಕಾರ್ಯ ನಡೆಯುತ್ತದೆ ಎಂದರು.  ರೈತರು ತಮ್ಮ ಜಾನುವಾರಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಮತ್ತು ಚರ್ಮ ಗಂಟು ರೋಗದ ಲಸಿಕೆಯನ್ನು ಹಾಕಿಸಬೇಕು, ಒಂದು ವೇಳೆ ನಾನಾ ಕಾರಣಗಳಿಂದ ಜಾನುವಾರು ಲಸಿಕೆಯಿಂದ ತಪ್ಪಿ ಹೋಗಿದ್ದರೆ, ಅಂತಹ ಜಾನುವಾರುಗಳನ್ನು ಗುರುತಿಸಿ ಮುಂದಿನಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.  

Read More

ಚಿತ್ರದುರ್ಗ : ಕಾನೂನು ಕಾಲೇಜಿನ ಉಪನ್ಯಾಸಕಿಯೊಬ್ಬರು ಪಾಕಿಸ್ತಾನದ ಪರ ಮಾತನಾಡಿದ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ಎಸ್ ಜೆ ಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಅಂಬಿಕಾ ಮೇಲೆ ಈ ಒಂದು ಗಂಭೀರ ಆರೋಪ ಕೇಳಿ ಬಂದಿದೆ. ಮಂಗಳವಾರ ಬೆಳಗ್ಗೆ 11.30 ಕ್ಕೆ ಈ ಬಗ್ಗೆ ಎಬಿವಿಪಿ ವತಿಯಿಂದ ಕಾಲೇಜು ಮುಂಬಾಗ ಪ್ರತಿಭಟನೆ ನಡೆಸಿ ಉಪನ್ಯಾಸಕಿ ಅಮಾನತ್ತಿಗೆ ಆಗ್ರಹಿಸಿದ್ದಾರೆ.‌ ಇನ್ನೂ  ಪ್ರಬಲವಾದ ಭಾರತ ದೇಶದ ಅಕ್ಕಪಕ್ಕ ಇರುವಂತಹ ನೆರೆಹೊರೆ ಸಣ್ಣ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪಘಾನಿಸ್ಥಾನ ಭಾರತದ ರಾಜಕೀಯ ಪಕ್ಷಗಳ ತಿಕ್ಕಾಟಕ್ಕೆ ಬಲಿಪಶು ಆಗುತ್ತಿವೆ ಎಂದು ಪಾಕಿಸ್ತಾನವನ್ನು ಓಲೈಸಿ ದೇಶ ವಿರೋಧ ಪ್ರಚೋದನೆಗಳನ್ನು ತರಗತಿಯ ವೇಳೆ ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕಿ ಮಾತನಾಡಿದ್ದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. https://ainkannada.com/12-year-old-boy-hangs-himself-heartbreaking-incident-in-chamarajanagar/ ಕಾಲೇಜು ಆಡಳಿತ ಮಂಡಳಿ ಆ ಉಪನ್ಯಾಸಕಿಯನ್ನು ಅಮಾನತ್ತು ಮಾಡಬೇಕು. ಮತ್ತು ಆ ಉಪನ್ಯಾಸಕಿ ಬಹಿರಂಗವಾಗಿ ವಿದ್ಯಾರ್ಥಿಗಳ ಮುಂದೆ ಕ್ಷಮೆ ಕೇಳಬೇಕು ಎಂದು ಎ.ಬಿ.ವಿ.ಪಿ. ಆಗ್ರಹಿಸಿದೆ. ಈ ಬಗ್ಗೆ ಗುರುರಾಜ್ ಎಂಬ ವಿಧ್ಯಾರ್ಥಿ ಭಗವದ್ಗೀತೆಯ…

Read More

ಚಾಮರಾಜನಗರ : 12 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಶೀಲಾರವರ ಪುತ್ರ ಪ್ರಜ್ವಲ್ ಎಂಬುತಾನೆ ಮೃತಪಟ್ಟ ಬಾಲಕನಾಗಿದ್ದಾನೆ.   ಘಟನೆಯ ವಿವರ:  ಪ್ರಜ್ವಲ್ ತನ್ನ ಸಂಬಂಧಿಕರ ಮಗುವಾದ ಅಭಿಷೇಕ್ ಜೊತೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ  ಆ ಮಗುವಿನ ಕಾಲಿಗೆ ಪೆಟ್ಟಾಗಿತ್ತು. ಈ ವೇಳೆ ಮಗುವಿನ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡ ಪ್ರಜ್ವಲ್, ಮಗುವಿಗೆ ಏನಾದರೂ ಆಗುವುದೆಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವೇಲ್ ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಕ್ಕಪಕ್ಕದವರು ತಕ್ಷಣವೇ ಪ್ರಜ್ವಲ್‌ನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾಗ…

Read More

ಹುಬ್ಬಳ್ಳಿ: ದೇಶಾದ್ಯಂತ ಸದ್ದು ಮಾಡಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸದೇ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ನಡೆಸುವಂತೆ ಧಾರವಾಡ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಏ. 29ರಿಂದ ಸಾಕ್ಷಿ-ಪುರಾವೆಗಳ ಪರಾಮರ್ಶೆ ಆರಂಭವಾಗಲಿದೆ. ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಧಾರವಾಡ ಹೈಕೋರ್ಟ್‌ಗೆ ಮಾನವಿ ಮಾಡಿದ್ದ. ಆರೋಪಿ ಪರ ವಕೀಲ ಝಡ್. ಆರ್. ಮುಲ್ಲಾ, ಫಯಾಜ್ ಪರ ವರ್ಗಾವಣೆ ಕುರಿತು ವಾದ ಮಂಡಿಸಿದ್ದರು. https://ainkannada.com/girl-murder-case-court-orders-cremation-of-unaccounted-for-accuseds-heirs/ ನೇಹಾ ಹಿರೇಮಠ ಹತ್ಯೆ ಪ್ರಕರಣ ವಿಚಾರಣೆಯನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹತ್ಯೆ ನೋಡಿರುವ ಪ್ರಮುಖ 99 ಸಾಕ್ಷಿಗಳು ಹುಬ್ಬಳ್ಳಿಯಲ್ಲಿವೆ. ಕೃತ್ಯ ನಡೆದಿರುವುದು ಹುಬ್ಬಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ. ಹುಬ್ಬಳ್ಳಿ ವಕೀಲರಿಂದ ಫಯಾಜ್ ಪರ ವಕೀಲರಿಗೆ ಯಾವುದೇ ಬೆದರಿಕೆ ಇಲ್ಲ. ಇಲ್ಲಿಯೇ ವಿಚಾರಣೆ ಆರಂಭಿಸಬೇಕೆಂದು ನೇಹಾ ಪಾಲಕರ ಪರ ರಾಘವೇಂದ್ರ ಎಸ್., ಎಂ.ಬಿ. ಹಿರೇಮಠ, ಪ್ರಕಾಶ ಅಂದಾನಿಮಠ ವಕೀಲರ ತಂಡ…

Read More

ಹುಬ್ಬಳ್ಳಿ : ಅಪ್ರಾಪ್ತ ಬಾಲಕಿ ಕೊಲೆ ಮಾಡಿ ಪೊಲೀಸ್ ಎನ್​ಕೌಂಟರ್​ಗೆ ಬಲಿಯಾದ ಬಿಹಾರ ಮೂಲದ ರಿತೇಶಕುಮಾರ ಅಂತ್ಯ ಸಂಸ್ಕಾರಕ್ಕೆ ಕೋರ್ಟ್ ಆದೇಶಿಸಿದ್ದು, ಕೆಎಂಸಿಆರ್‌ಐ, ಸಿಐಡಿ ಪೊಲೀಸರು ನಿರಾಳ ಆಗಿದ್ದಾರೆ. ಈ ನಡುವೆ ಈತನ ಮೂಲ ಯಾವುದು? ಕುಟುಂಬಸ್ಥರು ಯಾರು? ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಏ.13ರಂದು ರಿತೇಶ್‌ ಕುಮಾರ್‌  5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲೆಡೆ ತೀವ್ರ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಪೊಲೀಸರು ಒತ್ತಡಕ್ಕೆ ಮಣಿದು ಸಂಜೆ ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಆತ ಇದ್ದ ಶೆಡ್ ಬಳಿ ಕರೆದುಕೊಂಡು ಹೋಗಿದ್ದರು. ರಾಯನಾಳ ಬ್ರಿಡ್ಜ್ ಬಳಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಈತ ಪರಾರಿಯಾಗುವ…

Read More

ರಾಯಚೂರು/ಬೆಳಗಾವಿ : ಕಾಶ್ಮೀರದಲ್ಲಿನ ಉಗ್ರ ಕೃತ್ಯ ಖಂಡಿಸಿ ರಾಯಚೂರಿನಲ್ಲಿ ಹಿಂದೂ ಹಿತ ರಕ್ಷಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಸಲಾಯಿತು. ರಾಯಚೂರು ನಗರದ ನೇತಾಜಿ ವೃತ್ತದಿಂದ ಚಂದ್ರಮೌಳೇಶ್ವರ ಸರ್ಕಲ್ ವರೆಗೆ ಜಾಥಾ ನಡೆಸಿದ್ದು, ಕ್ಯಾಂಡಲ್, ಮೊಬೈಲ್ ಟಾರ್ಚ್ ಹಿಡಿದು ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. https://ainkannada.com/three-bodies-found-in-car-in-vc-canal-in-mandya/ ಇನ್ನೂ ಪಂಜಿನ ಮೆರವಣಿಗೆ ಮಾಡೋ ಮೂಲಕ ಉಗ್ರ ಕೃತ್ಯ ಖಂಡಿಸಲಾಯಿತು.  ಪ್ರತಿಭಟನೆಯಲ್ಲಿ ಬಿಜೆಪಿ ನಗರ ಶಾಸಕ ಶಿವರಾಜ್ ಪಾಟೀಲ್, ಮಠಾಧೀಶರು, ಹಿಂದು ಸಂಘಟನೆ ಕಾರ್ಯಕರ್ತರು,ಮಹಿಳೆಯರು, ಸಾರ್ವಜನಿಕರು ಭಾಗಿಯಾಗಿದ್ದು,  ಇಸ್ಲಾಂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯ ವಿರುದ್ಧವೂ ಪ್ರತಿಭಟನೆ ಇನ್ನೊಂದೆಡೆ ಪಾಕಿಸ್ತಾನದ ವಿರುದ್ಧ ಯುದ್ದ ಅಗತ್ಯವಿಲ್ಲ ಎಂಬ ಸಿಎಂ ‌ಸಿದ್ದರಾಮಯ್ಯ ಹೇಳಿಕೆ ಖಂಡಿಸಿ, ಬೆಳಗಾವಿ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ರೈತರು ಪ್ರತಿಭಟನೆ ನಡೆಸಿದರು.  ಇದೇ ವೇಳೆ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಮೇಲೆ ಕೈಎತ್ತಿದ್ದನ್ನ ಖಂಡಿಸಿ ಸಿಎಂ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಆಕ್ರೋಶ ಭ್ರಷ್ಟ ಸಿಎಂ, ದೇಶದ್ರೋಹಿ‌ಸಿ‌…

Read More