ಬಾಗಲಕೋಟೆ: ವಿವಾರ ಬೆಳಿಗಿನ ಜಾವ ಜಿಲ್ಲಾ ಕ್ರೀಡಾಂಗಣದಲ್ಲಿ ಕರಾಟೆ ಪಟುಗಳು ಹಾಗೂ ಆರ್ಮಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಕಠಿಣ ತರಬೇತಿ ಮುಗಿದ ನಂತರ ಕರಾಟೆ ಮತ್ತು ವಿವಿಧ ಕ್ರೀಡೆಗಳ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ದೇಶವಾಸಿಗಳಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. https://ainkannada.com/a-slight-break-in-gold-prices-do-you-know-what-the-gold-rate-is-in-bangalore/ ಈ ವೇಳೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಕರಾಟೆ ಚೀಪ್ ಕೋಚ್ ಎಸ್. ಆರ್. ರಾಠೋಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಆರ್ಮಿ ತರಬೇತಿ ಕೇಂದ್ರದ ಉಮಾಕಾಂತ್ ತೇಲಕರ್ ಸೇರಿದಂತೆ ವಿವಿಧ ಕ್ರೀಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು
Author: AIN Author
ಚಿನ್ನದ ಹಬ್ಬ ಅಕ್ಷಯ ತೃತೀಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಆಭರಣ ಪ್ರಿಯರ ಚಿತ್ತ ಚಿನ್ನದ ದರದತ್ತ ನೆಟ್ಟಿದೆ. ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಕಾಣುತ್ತಿದ್ದು, ಮಧ್ಯಮವರ್ಗದ ಜನರಿಗೆ ಗಗನಕುಸುಮವಾಗುತ್ತಿದೆ. ಇನ್ನು ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಬೇಕು ಎಂದು ಕನಸು ಕಂಡಿದ್ದವರಿಗೆ ಇತ್ತೀಚಿನ ದರ ಏರಿಕೆಯು ಬಿಗ್ ಶಾಕ್ ನೀಡಿತು. ಆದರೆ ಇಂದು ಚಿನ್ನದ ದರ ಅಲ್ಪ ಇಳಿಕೆ ಕಂಡಿದೆ. ಇದು ಗೋಲ್ಡ್ ಪ್ರಿಯರಿಗೆ ಸ್ವಲ್ಪ ಸಮಾಧಾನ ತಂದಿದೆ. https://ainkannada.com/dengue-scare-in-bengaluru-how-many-cases-were-registered-in-just-three-months-here-is-the-shocking-report/ ವಾರದ ಆರಂಭದ ಎರಡು ದಿನದಲ್ಲಿ ಗ್ರಾಮ್ಗೆ 350ಕ್ಕೂ ಹೆಚ್ಚು ರುಪಾಯಿಗಳಷ್ಟು ಏರಿಕೆಗೊಂಡಿದ್ದ ಚಿನ್ನದ ಬೆಲೆ ನಂತರ ಇಳಿಕೆಯಾಗತೊಡಗಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಬಹಳ ಅಲ್ಪ ಇಳಿಕೆ ಆಗಿದೆ. ಗ್ರಾಮ್ಗೆ 3 ರೂ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,020 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,210 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ…
ಬೆಂಗಳೂರು:- ನಗರದಲ್ಲಿ ಡೆಂಘಿ ಭೀತಿ ಹೆಚ್ಚಾಗಿದ್ದು, ಸಿಟಿ ಮಂದಿ ಗಾಬರಿಗೊಂಡಿದ್ದಾರೆ. ಕಳೆದ ಮೂರುವರೇ ತಿಂಗಳಲ್ಲಿ 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ. ರಾಜಧಾನಿಯಲ್ಲಿ ಈಗ ಡೆಂಘಿ ಭೀತಿ ಶುರುವಾಗಿದೆ. ಅಕಾಲಿಕ ಬೇಸಿಗೆಯ ಮಳೆಗೂ ಡೆಂಘಿ ಪ್ರಕರಣ ಕಂಡು ಬರುತ್ತಿವೆ. ಕಳೆದ ವಾರದ ಹಿಂದಷ್ಟೆ ನಗರದಲ್ಲಿ ಸುರಿದ ಮಳೆಯಿಂದ ಡೆಂಘಿ ಹರಡುವ ಸಾಧ್ಯತೆ ಹೆಚ್ಚಿದೆ. https://ainkannada.com/hubballi-shri-moojagus-advice-for-a-grand-basava-jayanti-celebration/ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಡೆಂಘಿ ಕೇಸ್ ಹೆಚ್ಚಳವಾಗಿವೆ. ಪೂರ್ವ ಮುಂಗಾರು ಮಳೆ ಎಫೆಕ್ಟ್ ಬೇಸಿಗೆಯಲ್ಲಿಯೇ ಡೆಂಘಿ ಕೇಸ್ ಹೆಚ್ಚಳ ಕಂಡು ಬರುತ್ತಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿದ್ದು, 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ನಗರದಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ. ಪ್ರತಿ ವರ್ಷ ಮುಂಗಾರು ಮಳೆ ಕಾಣಿಸಿಕೊಂಡ ಬಳಿಕ ಈ ಜ್ವರ ಹೆಚ್ಚಿನವರನ್ನು ಬಾಧಿಸುತ್ತಿತ್ತು. ಆದರೆ ಈಗ ಬೇಸಿಗೆಯಲ್ಲಿಯೇ ಸೊಳ್ಳೆ ಕಾಟದಿಂದ ಡೆಂಘಿ ಜ್ವರ ಹೆಚ್ಚಳವಾಗಿದೆ. ಕಳೆದ ವರ್ಷ ಡೆಂಘಿ…
ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರಹ ಮಠದಲ್ಲಿ ನಡೆಯುವ ಶ್ರೀ ಬಸವೇಶ್ವರ ಜಯಂತಿಯನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಬೇಕು ಎಂದು ಜಗದ್ಗುರು ಡಾ.ಗುರುಸಿದ್ದ ರಾಜಯೋ ಗೀಂದ್ರ ಮಹಾಸ್ವಾಮಿಗಳ ಹೇಳಿದರು. https://ainkannada.com/bidar-a-different-kind-of-protest-by-sticking-a-pakistani-flag-on-the-road-to-condemn-the-terrorist-attack/ ನಗರದ ಮೂರು ಸಾವಿರ ಮಠದ ಆವರಣದಲ್ಲಿಂದು ಶ್ರೀ ಜಯಂತಿ ಅಂಗವಾಗಿ ಕಾರ್ಯಕ್ರಮದ ಸಾನಿಧ್ಯವಹಿಸಿ ಷಟ್ ಸ್ಥಲ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ಇಂದಿನಿಂದ ಆರಂಭಗೊಂಡು ಏಪ್ರಿಲ್ 30 ರವರೆಗೆ ವಿವಿಧ ಕಾರ್ಯ ಕ್ರಮಗಳನ್ನ ಅತ್ಯಂತ ಯಶಸ್ವಿಯಾಗಿ ಅಪಾರ ಭಕ್ತರ ನಡುವೆ ನಡೆಸಿಕೊಂಡು ಹೋಗಬೇಕು ಎಂದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಮಾತನಾಡಿ, ಇಂದಿನಿಂದ ಬಸವ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎನ್ ಕೌಂಟರ್ ಮಾಡಿದ ಪಿಎಸ್ ಐ ಅನಸೂಯಾ, ರಾಜ್ಯಕ್ಕೆ ಪಿಯುಸಿ ಯಲ್ಲಿ ಐದನೇ ರಾಂಕ್ ಪಡೆದ ವಿದ್ಯಾರ್ಥಿನಿ ನಾಗವೇಣಿ ಹಾಗೂ ಪತ್ರಕರ್ತರಿಗೆ ಸನ್ಮಾನ…
ಬೀದರ್:- ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪಾಕಿಸ್ತಾನದ ವಿರುದ್ದ ಬೀದರ್ ನಲ್ಲಿ ವಿಭಿನ್ನ ಹೋರಾಟ ನಡೆದಿದೆ. https://ainkannada.com/tragedy-while-going-to-watch-kabaddi-50-year-old-man-dies-where-did-the-incident-take-place/ ಬೀದರ್ನ ಅಂಬೇಡ್ಕರ್ ವೃತ್ತದಲ್ಲಿ ನಡು ರಸ್ತೆಯಲ್ಲಿ ಪಾಕಿಸ್ತಾನ ಧ್ವಜ ಅಂಟಿಸಿ ಯುವಕರು ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ರಸ್ತೆಗೆ ಧ್ವಜ ಅಂಟಿಸಿ, ಪಾಕ್ ಧ್ವಜ ಹರಿದು ಯುವಕರು ಘೋಷಣೆ ಕೂಗಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ಎರಡು ಮಾರ್ಗಗಳಲ್ಲಿ ಧ್ವಜ ಅಂಟಿಸಲಾಗಿದ್ದು, ಅದಕ್ಕೆ ಕಾಲಿನಿಂದ ಒದ್ದು ಆಕ್ರೋಶ ಹೊರ ಹಾಕಲಾಗಿದೆ.
ಮಂಡ್ಯ:- ಜಿಲ್ಲೆಯ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಕಬಡ್ಡಿ ಆಟ ನೋಡಲು ಹೋದ 50 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜರುಗಿದೆ. https://ainkannada.com/terrorist-attack-in-pahalgam-nia-takes-over-investigation-centre/ ಸಾವಿರಾರು ಜನರು ಕಬಡ್ಡಿ ಆಟವನ್ನ ನೋಡಲು ಸೇರಿದ್ರು. ಹೀಗೆ ಪಂದ್ಯ ವೀಕ್ಷಣೆ ಮಾಡುವ ವೇಳೆ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿಟ್ಟಿದೆ. ಪರಿಣಾಮ ಗ್ಯಾಲರಿಯಲ್ಲಿ ಇದ್ದ ಜನರೆಲ್ಲಾ ದಪ್ ಅಂತ ಕೆಳಗಡೆ ಬಿದ್ದಿದ್ದಾರೆ. ಪರಿಣಾಮ ಕಬಡ್ಡಿ ಪಂದ್ಯ ವೀಕ್ಷಿಸಲು ಬಂದಿದ್ದ 50 ವರ್ಷದ ಪಾಪಣ್ಣಚಾರಿ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಸಂಬಂಧಿಕರು ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ಯಾಲರಿ ಕುಸಿದ ಘಟನೆಯಲ್ಲಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಸದ್ಯ 13 ಜನರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ.
ಶ್ರೀನಗರ:- ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತ ತನ್ನ ಕೆಲಸ ಆರಂಭಿಸಿದೆ. ಲಷ್ಕರ್-ಎ-ತೊಯ್ಬಾ ಉಗ್ರಗಾಮಿಗಳಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳನ್ನು ಸ್ಫೋಟಿಸಿ ಧ್ವಂಸ ಮಾಡಿದೆ. ಇವರಿಬ್ಬರೂ ಪಹಲ್ಗಾಮ್ ದಾಳಿಯ ಪ್ರಮುಖ ಆರೋಪಿಗಳಾಗಿದ್ದರು. https://ainkannada.com/ksrtc-bus-overturns-after-driver-loses-control-more-than-20-injured/ ಇನ್ನೂ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನಿಖೆ ಹೊಣೆಯನ್ನು NIAಗೆ ವಹಿಸಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ NIA ಟೀಮ್, ಅಧಿಕೃತವಾಗಿ ತನಿಖೆಗೆ ಇಳಿದಿದೆ. ತನಿಖೆಗೆ ನಿಯೋಜಿಲ್ಪಟ್ಟ ಎನ್ಐಎ ತಂಡ ಈಗಾಗಲೇ ಪಹಲ್ಗಾಮ್ ತಲುಪಿದೆ, ದಾಳಿ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ಧಿಗೆ ಪಡೆದುಕೊಳ್ಳಲು NIA ಮುಂದಾಗಿದೆ.
ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಜರುಗಿದೆ. https://ainkannada.com/rainstorm-trees-and-plants-uprooted-a-disaster-averted/ ಟಿ ನರಸೀಪುರ ತಾಲೂಕಿನ ಮುಡುಕನಪುರ ಗ್ರಾಮದ ರಾಜಮಣಿ, ಕೃತಿಕಾ ರುಕ್ಮಿಣಿ ಮಂಜುನಾಥ್ ಸಂಜೀವ್ ಮಹೇಶ್ ಕಾವ್ಯ ಪ್ರತಾಪ್ ಮಹೇಶ್, ನಿಂಗಯ್ಯ, ಯಳಂದೂರು ತಾಲೂಕಿನ ಮೆಲ್ಲಳ್ಳಿ ಗ್ರಾಮದ ಜ್ಯೋತಿ ಗಾಯಗೊಂಡವರಾಗಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಾಪಸ್ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ತಾಳುಬೆಟ್ಟ ಮಹದೆಶ್ವರಬೆಟ್ಟ ಮಾರ್ಗ ಸಮೀಪ ಪಲ್ಟಿಯಾಗಿದೆ. ತಕ್ಷಣ ದಾರಿ ಹೋಕರು ತುರ್ತು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನೆ ನಡೆದ ಹಲವು ಅರ್ಧ ತಾಸುಗಳು ಆಂಬುಲೇನ್ಸ್ ಸಿಗದೆ ಪರದಾಡಿದ್ದಾರೆ ಬಳಿಕ ಪ್ರಾಧಿಕಾರದ ಆಂಬುಲೇನ್ಸ್ ಸೇರಿ ಖಾಸಗಿ ವಾಹನ ದ ಮುಖಾಂತರ ಮಹದೇಶ್ವರಬೆಟ್ಟ ಕೊಳ್ಳೇಗಾಲ ಆಸ್ಪತ್ರೆ ಗೆ ಚಿಕಿತ್ಸೆ ರವಾನಿಸಿಲಾಗಿದೆ
ರಾಯಚೂರು:- ಜಿಲ್ಲೆಯ ವಿವಿಧೆಡೆ ಗುಡುಗು, ಗಾಳಿಸಹಿತ ಮಳೆ ಬಿದ್ದಿದ್ದು, ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಜತ್ತಿ ಲೈನ್, ಗಾಂಧಿಮೈದಾನ, ಕಾಕಾ ನಗರದ ಬಳಿ ಗಿಡ ಮರಗಳು ನೆಲಕ್ಕೆ ಉರುಳಿವೆ. https://ainkannada.com/what-is-the-reason-why-the-water-in-the-pot-stays-cool-even-when-the-sun-is-shining-do-you-know-whats-special-about-it/ ಹಟ್ಟಿ ಪಟ್ಟಣದ ಹಲವೆಡೆ ಅಲಿಕಲ್ಲು ಬಿದ್ದಿದೆ. ಮರಗಳ ಕೊಂಬೆಗಳು ಮನೆಗಳ ಮೇಲ್ಚಾವಣಿಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಅಲ್ಲದೇ ಗುರುಗುಂಟಾ ರಸ್ತೆಯ ಕೋಠಾ ಕ್ರಾಸ್ ಬಳಿಯಲ್ಲಿ ನಿರ್ಮಾಣ ಹಂತದ ದೊಡ್ಡ ವಾಣಿಜ್ಯ ಸಂಕೀರ್ಣ ಉರುಳಿ ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಲಿಂಗಸೂರು ಪಟ್ಟಣದ ಟಾಟಾ ಮೋಟಾರ್ಸ್ ಬಸವ ಕಾರ್ ಷಡ್ ಮೇಲ್ ಚಾವಣಿ ಹಾರಿಹೋಗಿದೆ ಕೆಲವು ತಗ್ಗು ಪ್ರದೇಶದ ಮನೆಗಳಲ್ಲಿ ಮಳೆ ನೀರು ಹೋಗಿವೆ. ನೀರು ಹೊರಹಾಕಲು ನಿವಾಸಿಗಳು ಹರ ಸಾಹಸ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ 40 ಡಿಗ್ರಿ ಸೆಲ್ಸಿಯಸ್ ಆಸುಪಾಸು ಬಿಸಿಲಿ ಇದ್ದರಿಂದ ಬಿಸಿಲಿನಿಂದ ಬಸವಳಿದ ಜನರಿಗೆ ಸಂಜೆ 5 ಗಂಟೆಗೆ ಸುರಿದ ಗಾಳಿ ಮಳೆಯಿಂದ ತಂಪೆರಗಿತು. ಮರಗಳು ಬಿದ್ದ ಕಾರಣ ವಿದ್ಯುತ್ ಕಡಿತವಾಗಿ ಸಾರ್ವಜನಿಕರು ಪರದಾಡಿದರು.…
ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಜನ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ನೆತ್ತಿ ಸುಡುವ ಬಿಸಿಲಿದೆ. ದಿನೇ, ದಿನೇ ಬಿಸಿಲು ಹೆಚ್ಚಾಗುತ್ತಲೇ ಇದೆ. ಬಿಸಿಲಿನಿಂದ ಸೆಖೆ ತಡೆಯಲು ಸಾಧ್ಯವಾಗದೇ ಜನ ಫ್ಯಾನ್, ಎಸಿ, ರೆಫ್ರಿಜರೇಟರ್ ಖರೀದಿಸುವತ್ತಾ ಮುಖ ಮಾಡಿದ್ದಾರೆ. ಬಹುತೇಕ ಮಂದಿ ಉರಿ ಬಿಸಿಲಿನ ನಡುವೆ ಫ್ರಿಜ್ನಲ್ಲಿರುವ ಕೋಲ್ಡ್ ವಾಟರ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ಮತ್ತೆ ಕೆಲವರು ನೈಸರ್ಗಿಕ ತಣ್ಣೀರನ್ನು ಕುಡಿಯಲು ಇಷ್ಟಪಡುತ್ತಾರೆ. https://ainkannada.com/pahalgam-attack-case-teacher-leaves-islam-out-of-frustration/ ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಟ್ಟು ಅಲ್ಲಿಂದ ನೀರು ಕುಡಿಯುತ್ತಾರೆ. ಕೆಲವರಿಗೆ ರೆಫ್ರಿಜರೇಟರ್ ನೀರು ಸರಿಹೋಗುವುದಿಲ್ಲ. ಅದರಿಂದ ಗಂಟಲು ನೋವು, ಶೀತದಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದರೆ ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದರಿಂದ ಇದು ಸಂಭವಿಸುವುದಿಲ್ಲ. ಮಣ್ಣಿನ ಮಡಿಕೆಯಲ್ಲಿರುವ ನೀರು ಆರೋಗ್ಯದ ಮೇಲೆ ಸಮಸ್ಯೆ ಬೀರಲ್ಲ. ಅದರ ರುಚಿಯಲ್ಲಿ ಸಿಹಿ ಇರುತ್ತದೆ. ಪ್ರಶ್ನೆ ಏನೆಂದರೆ ಮಣ್ಣಿನ ಮಡಕೆಯಲ್ಲಿರುವ ನೀರು ಹೇಗೆ ತಂಪಾಗಿರುತ್ತದೆ. ವಾಸ್ತವವಾಗಿ.. ಮಡಿಕೆಯ ಗೋಡೆಗಳಲ್ಲಿ ಲೆಕ್ಕವಿಲ್ಲದಷ್ಟು ಸಣ್ಣ, ಸಣ್ಣ ರಂಧ್ರಗಳಿರುತ್ತವೆ. ಅವುಗಳ ಮೂಲಕ ನೀರು ಸೋರುತ್ತಲೇ…