Author: AIN Author

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಲೋಹಿಯಾ ನಗರದಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ರಕ್ಷಾ ನಿಖಿಲ್ ಕಾಡ್ಸೆ ಹಾಗೂ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಪರಿಶೀಲನೆ ನಡೆಸಿದರು. https://ainkannada.com/students-should-have-both-education-and-intelligence-mla-kottur-manjunath/ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕಾಮಗಾರಿ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ ಸಚಿವರು ಹಾಗೂ ಶಾಸಕರು ಮಾಹಿತಿ ಪಡೆದುಕೊಂಡರು.  ಇನ್ನೂ ಸ್ಮಾರ್ಟ್ ಸಿಟಿಯ ಟೈಮ್ ಬಾಂಡ್ ಮುಗಿದಿದ್ದರೂ ಕೂಡ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಹಾಗೂ ಕ್ರೀಡೆಗೆ ಪೂರಕವಾದ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Read More

ಕೋಲಾರ : ವಿದ್ಯಾರ್ಥಿಗಳಿಗೆ  ವಿದ್ಯೆ ಒಂದೇ ಇದ್ದರೆ ಆಗುವುದಿಲ್ಲ, ಬುದ್ದಿ ಒಂದೇ ಇದ್ದರೂ ಆಗುವುದಿಲ್ಲ. ವಿದ್ಯೆ, ಬುದ್ದಿ ಎರಡು ಜೊತೆಯಲ್ಲಿ ಇರಬೇಕು. ಇವೆರಡೂ ಇದ್ದರೆ ಸಮಾಜದಲ್ಲಿ ನಾವು ಮುಂದೆ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವರು ಹೇಳಿದರು. ನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. https://ainkannada.com/car-overturns-in-the-middle-of-the-road-passengers-escape-unhurt/ ಯುಪಿಎಸ್ ಅಲ್ಲಿ ಪಾಸ್ ಆಗಿರುವ ಕೋಲಾರದ ಹುಡುಗ ಎಲ್ಲೂ ಸಹ ಟ್ರೈನಿಂಗ್ ಹೋಗಿಲ್ಲ‌, ಕೋಚಿಂಗ್ ಹೋಗಿಲ್ಲ. ದೆಹಲಿಗೆ ಹೋಗಿ ಯಾವುದೇ ತರಹದ ಕೋಚಿಂಗ್ ಸೆಂಟರ್ ಗೆ  ಹೋಗಿಲ್ಲ. ಮನೆಯಲ್ಲಿ ಓದಿ ಯುಪಿಎಸ್ ಪಾಸ್ ಆಗಿದ್ದಾನೆ. ವರ್ಷಾನುಗಟ್ಟಲೆ ಓದಿ‌ ಕೋಚಿಂಗ್ ಪಡೆದುಕೊಂಡು‌ ಇದ್ದರು ಪಾಸ್ ಆಗುವುದಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳು ಮನೆಯಲ್ಲಿ‌ ಕುಳಿತುಕೊಂಡು ಓದಿದರೆ ಪರೀಕ್ಷೆಯಲ್ಲಿ ಪಾಸ್ ಹಾಗುತ್ತಾರೆ. ಇದು ಕೋಲಾರ ಜಿಲ್ಲೆಯ ಮಹಿಮೆ, ಅಷ್ಟು ಬುದ್ದಿವಂತರು ಈ ಜಿಲ್ಲೆಯಲ್ಲಿ‌ ಇದ್ದಾರೆ.…

Read More

ಬಾಗಲಕೋಟೆ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಸಚಿವ ಆರ್‌.ಬಿ.ತಿಮ್ಮಾಪುರ್‌ ಎಂದು ಆರೋಪಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಬೇಹುಗಾರಿಕೆ ಪೆಲ್ಯೂರ್ ಆಗ್ತಿರೋದು ಇದೇ ಮೊದಲಲ್ಲ. ಕಾರ್ಗಿಲ್ ಯುದ್ದ ಆದಾಗ,ಪುಲ್ವಾಮಾದಲ್ಲಿ ಫೇಲ್ ಆಯ್ತು ಮತ್ತೆ ಇವಾಗ ಫೇಲ್ ಆಗಿದೆ. ಇದನ್ನು ಕೇಳಿದರೆ ಹಿಂದು ಐಡಿ ಕಾರ್ಡ್ ನೋಡಿದರೂ ಗುಂಡು ಹೊಡೆದರು ಅಂತ ಹೇಳ್ತಾರೆ. ಮುಸ್ಲಿಂರನ್ನು ಕೊಂದಿಲ್ವಾ ಅವರು. ಯಾರೆ ಸತ್ತರೂ ಅದನ್ನು ರಾಜಕೀಯವಾಗಿ ಹೇಗೆ ಲಾಭ ತಗೊಬೇಕು ಅನ್ನೋದೆ ನಮ್ಮ ಧ್ಯೇಯ ಆದರೆ. ದೇಶದ ಪರಿಸ್ಥಿತಿ ಎಲ್ಲಿಗೆ ಹೋಗಬೇಕು ಎಂದರು.  ಚುನಾವಣೆ ಬಂದಾಗ ಕಾರವಾರದಲ್ಲಿ ಯಾರೋ ಸತ್ತರೆ ಮುಸ್ಲಿಂರೆ ಕೊಂದ್ರು ಅಂದ್ರು. ಆನಂತರ ಅಸಹಜ ಸಾವು ಅಂತ‌ ಬಂತು. ಎಲ್ಲವನ್ನೂ ಎಲೆಕ್ಷನ್ ದೃಷ್ಟಿಯಿಂದ ನೋಡಿಕೊಂಡರೆ ಇದು ಸರಿನಾ? ಎಂದು ಪ್ರಶ್ನಿಸಿದರು. https://ainkannada.com/brahmin-community-launches-fierce-protest-against-terrorists-heinous-act/ ಕಲಬುರಗಿಯಲ್ಲಿ ಮಹಿಳೆಯರಿಂದ  ಪಾಕ್ ಧ್ವಜ ‌ರಕ್ಷಣೆ ವಿಚಾರವಾಗಿ ಮಾತನಾಡಿ, ರಸ್ತೆ ಮೇಲೆ ಅಂಟಿಸಿದ ಪಾಕ್ ಧ್ವಜ ರಕ್ಷಣೆ ಮಾಡಿದವರು ಯಾರಾಗಿದಾರೆ.…

Read More

ಗದಗ : ಗದಗ ಹೊರವಲಯದಲ್ಲಿ ನಡುರಸ್ತೆಯಲ್ಲೇ ಕಾರೊಂದು ಧಗಧಗನೇ ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್‌ ಬಚಾವ್‌ ಆಗಿದ್ದಾರೆ. ಈರಣ್ಣ ಜಾಲಿಹಾಳ ಅವರು ತಮ್ಮ ಕುಟುಂಬದವರೊಂದಿಗೆ ಕಾರಿನಲ್ಲಿ ಗದಗನಿಂದ ಹನುಮಸಾಗರಕ್ಕೆ ಹೊರಟಿದ್ದರು. ಕಾರು ಚಲಿಸುತ್ತಿರುವ ವೇಳೆ ಇಂಜಿನ್‌ನಲ್ಲಿ ಸ್ವಲ್ಪ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಈರಣ್ಣ ಅವರ ಕುಟುಂಬ ತಕ್ಷಣವೇ ಕಾರಿನಿಂದ ಕೆಳಗಿಳಿದಿದೆ. https://ainkannada.com/ksrtc-bus-collides-with-bike-bike-rider-dies-on-the-spot-protest-condemning-the-incident/ ಬಳಿಕ ಕಾರು ಏಕಾಏಕಿ ಹೊತ್ತು ಉರಿದಿದ್ದು, ಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು.‌ ಅವುಗಳನ್ನು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಇಂದು ವಾರಸುದಾರರಿಗೆ ಹಿಂತಿರುಗಿಸಿ ಕಾರ್ಯಕ್ಷಮತೆ ತೋರಿದ್ದಾರೆ. ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಪ್ರಾಪರ್ಟಿ ಪರೇಡ್ ನಡೆಸಿ ಪೊಲೀಸರು ವಾರಸುದಾರರಿಗೆ ಪ್ರಾಪರ್ಟಿ ವಾಪಸ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಡೆದ ಪ್ರಾಪರ್ಟಿ ಪರೇಡ್ ನಲ್ಲಿ ಒಟ್ಟು 7,02,29,764 ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಪ್ರಾಪರ್ಟಿ ಪರೇಡ್ ಮೂಲಕ ಸಂಬಂಧಪಟ್ಟ   3,46,08,100 ರೂ ಕಿಮ್ಮತ್ತಿನ ವಸ್ತುಗಳನ್ನು ಹಿಂದಿರುಗಿಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 225 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು 345 ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ. https://ainkannada.com/sexual-assault-case-against-minor-boy-life-imprisonment-for-culprit/ ಇನ್ನೂ ಅಪರಾಧ ಪ್ರಕರಣಗಳ ವಿವರ ನೋಡುವದಾದ್ರೆ 97 ಬಂಗಾರ ಬೆಳ್ಳಿ ಕಳ್ಳತನ ಪ್ರಕರಣಗಳಲ್ಲಿ 152 ಆರೋಪಿಗಳ ಹೆಡೆಮುರಿ ಕಟ್ಟಿ  2,39,85,110…

Read More

ಬಾಗಲಕೋಟೆ : ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಏ.೩೦ ರಂದು ನಡೆಯಲ್ಲಿರುವ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅವರಿಂದ ಕೊಡಮಾಡುವ ಬಸವಶ್ರೀ ಪ್ರಶಸ್ತಿಗೆ, ರಬಕವಿ ಭಾರತ್‌ ಗ್ಯಾಸ್ ಸಂಸ್ಥೆಯ ವರ್ತಕರಾದ ಸೋಮಶೇಖರ್ ಕೊಟ್ರಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಕಾರಣಕ್ಕೆ ರಬಕವಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಸೇರಿ, ಕೊಟ್ರಶೆಟ್ಟಿ ಅವರನ್ನು ಬೇಟಿಮಾಡಿ ಸನ್ಮಾನಿಸಿ ಅಭಿನಂದಿಸುವಲ್ಲಿ ಗೌರವಿಸಿದರು. ಸೋಮಶೇಖರ ಕೊಟ್ರಶಟ್ಟಿ ಅವರು ತಮ್ಮ ಸಂಸ್ಥೆಯಿಂದ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದವರು. ಜೋತೆಗೆ ಸರ್ವಹಿತ ಚಿಂತನೆಗಳಲ್ಲಿ ಭಾಗಿಯಾಗಿ, ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕೈಜೋಡಿಸಿ ಸರ್ವ ಸಮುದಾಗಳಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆ ಅಪಾರವಾಗಿದೆ. ಬಾಗಲಕೋಟೆ ಜಿಲ್ಲಾಡಳಿತವು ಬಸವಶ್ರೀ ಪ್ರಶಂಸ್ತಿಗೆ ಇವರನ್ನು ಆಯ್ಕೆ ಮಾಡಿರುವುದು ಅವಳಿ ನಗರಕ್ಕೆ ಸಂತಸ ತಂದಿದೆ ಎಂದು ವಕೀಲರಾದ ಜಿ.ಎಮ್.ಅಮ್ಮಣಗಿಮಠ ಹೇಳಿದರು. https://ainkannada.com/1-lakh-rupees-grant-for-the-seva-samiti-community-hall-of-sri-allama-prabhu-temple/ ಇದೇ ಸಂದರ್ಭದಲ್ಲಿ ಶಿವಾನಂದ ಮಠದ, ಮ್ರುತ್ಯುಂಜಯ ಹುಲಗೇರಿಮಠ, ದಯಾನಂದ ಬಾಗಲಕೋಟಮಠ, ಸಂಜಯ ಅಮ್ಮಣಗಿಮಠ, ಮಾದೇವಯ್ಯ ಮಠಪತಿ, ಚಿಕ್ಕಯ್ಯ ಮಠದ, ಮಹಾದೇವಯ್ಯ ನಂದೈಗೊಳ, ಗಂಗಯ್ಯ ಹಿರೇಮಠ,…

Read More

ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಶ್ರೀ ಅಲ್ಲಮಪ್ರಭು ದೇವಸ್ಥಾನ ಸೇವಾ ಸಮಿತಿಯ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ,) ಜಮಖಂಡಿ ವತಿಯಿಂದ 1 ಲಕ್ಷ ರೂಪಾಯಿ ಮಂಜೂರಾತಿಯಾಗಿದ್ದು,  ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಮಖಂಡಿ ತಾಲೂಕಿನ ಯೋಜನಾಧಿಕಾರಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ಕೊಟ್ಟು, ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಅಲ್ಲಾ,, ಇದು   ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಪ್ರವರ್ತಿತ ಪ್ರತಿ ನಿಧಿ (ಬಿ. ಸಿ)ಯಾಗಿ ಬ್ಯಾಂಕಿನ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತಿದ್ದೂ, ಇದರೊಟ್ಟಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮುದಾಯ ಅಭಿವೃದ್ಧಿ ವಿಭಾಗದಲ್ಲಿ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಶಾಸನ ನೀಡುವುದು, ವಿಶೇಷ ಚೇತನರಿಗೆ ಅವರಿಗೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ಒದಗಿಸುವುದು, ವೃತ್ತಿ ಪರ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ ಶಿಪ್ ಕೊಡುವುದು,ದೇವಸ್ಥಾನ ಗಳ ಜೀರ್ನೋದ್ಧಾರ, ಹಿಂದೂ ರುದ್ರ ಭೂಮಿ ಅಭಿವೃದ್ಧಿ,…

Read More

ತುಮಕೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ. ಆಪಾದಿತ ಬಸವರಾಜುಗೆ ಒಂದು ಲಕ್ಷ ದಂಡ ಸೇರಿ ಬಾಲಕನಿಗೆ 9 ಲಕ್ಷ ಪರಿಹಾರ ನೀಡುವಂತೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ ಪೋಕ್ಸೋ ಕೋರ್ಟ್ ಆದೇಶ ನೀಡಿದೆ. https://ainkannada.com/two-boys-die-in-gumballi-lake/ ಏನಿದು ಪ್ರಕರಣ..? ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಹಾಸ್ಟಲ್ ನಲ್ಲಿ ಉಳಿದುಕೊಂಡಿದ್ದನು. ಹಾಸ್ಟೆಲ್ ನಿಂದ ಬರುವಾಗ ಆರೋಪಿ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿದ್ದನು. ಆದಾದ ಬಳಿಕ ಆರೋಪಿ ಬಸವರಾಜು ಬಾಲಕನಿಗೆ ಕುರ್ ಕುರೆ ಹಾಗೂ ಚಿಕನ್ ಕೊಡಿಸುವ ಆಮಿಷವೊಡ್ಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯಿಂದ ಹೆದರಿದ ಬಾಲಕ ಯಾರಿಗೂ ವಿಷಯ ತಿಳಿಸದೆ ಅನಾರೋಗ್ಯಕ್ಕೆ ತುತ್ತಾಗಿದ್ದ. ಬಳಿಕ ತಂದೆಗೆ ಕರೆ ಮಾಡಿ ಊರಿಗೆ ವಾಪಸ್ ಹೋಗಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿ ಚಿಂತಾಜನಕವಾಗಿದ್ದ ಬಾಲಕನನ್ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ವೇಳೆ ವೈದ್ಯರು ಪರೀಕ್ಷೆ…

Read More

ಚಾಮರಾಜನಗರ : ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿರುವ  ಘಟನೆ ಚಾಮರಾಜನಗರ ಜಿಲ್ಲೆ  ಗುಂಬಳ್ಳಿ ಕೆರೆಯಲ್ಲಿ ನಡೆದಿದೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕೃಷ್ಷಪುರ ಗ್ರಾಮದ ಅಭಯ್ ಹಾಗೂ ವೃಷಬೇಂದ್ರ ಎಂಬ ಬಾಲಕರು ಕೆರೆಗೆ ಈಜಲು ಹೋಗಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. https://ainkannada.com/police-department-should-work-to-maintain-law-and-order-minister-ishwar-khandre/ ಬೇಸಿಗೆಯಾದ್ದರಿಂದ ಕೆರೆಯಲು ಈಜಲು ತೆರಳಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿಲಾಗಿದೆ. ಇವರಿಬ್ಬರ ಬಟ್ಟೆಗಳು ಕೆರೆ ದಡದಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಯಳಂದೂರು ಪೊಲೀಸರು  ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನು ಅಗ್ನಿಶಾಮಕ ಸಿಬ್ಬಂದಿ, ನುರಿತ ಈಜುಗಾರರು ಕೆರೆಯಲ್ಲಿ ಶವಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದು ಇನ್ನೂ ಶವಗಳು ಪತ್ತೆಯಾಗಿಲ್ಲ ಎಂದು ತಿಳಿದಿದೆ.

Read More

ಬೀದರ್‌ : ಬೀದರ್‌ ನಲ್ಲಿ ಗನ್ ತೋರಿಸಿ ಮನೆ ದರೋಡೆ ಹಾಗೂ ಕಲಬುರಗಿಯಲ್ಲಿ ಎಟಿಎಂ ದರೋಡೆ  ಖಾಕಿ ಮೇಲೆ ಫೈರಿಂಗ್ ವಿಚಾರ ಬೀದರ ನಲ್ಲಿ ಸಚಿವ ಈಶ್ವರ್‌ ಖಂಡ್ರೆ ಪ್ರತಿಕ್ರಿಯೆ ನೀಡಿದರು. ಬೀದರ್‌ ಹಾಗೂ ಕಲಬುರಗಿಯಲ್ಲಿ ದರೋಡೆ ಆಗಿದೆ. ಇದಕ್ಕೆ ಪೋಲಿಸರು ಹೆಚ್ಚಿನ ರೀತಿಯಲ್ಲಿ ಶ್ರಮ ಮಾಡಿ ಕಲಬುರಗಿಯಲ್ಲಿ ಆರೋಪಿಗಳಿಗೆ ಪೊಲೀಸರು ಬಂಧಿಸಿದ್ದಾರೆ. https://ainkannada.com/kalaburagi-firing-on-accused-in-atm-robbery-case/ ಬೀದರ ನಲ್ಲಿ ದೊಡ್ಡ  ದರೋಡೆ ಆಗಿದ್ದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದು ಅತ್ಯಂತ ಗಂಬೀರ ಪ್ರಕರಣವಾಗಿದೆ. ಪೋಲಿಸ್‌ ಇಲಾಖೆ ಈ ದರೋಡೆಕೋರರು ಯಾರೆ ಇರಲಿ ಏಲ್ಲೆ ಇರಲಿ ಅವರನ್ನು ಬಂಧಿಸಿ ದರೋಡೆಕೋರರ ಬಂಧಿಸಬೇಕು. ದರೋಡೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಪೊಲೀಸ್‌ ‌ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೆಲಸ ಮಾಡಬೇಕು ಎಂದರು.

Read More