Author: AIN Author

ನೆಲಮಂಗಲ:- ನೇಣುಬಿಗಿದ ಸ್ಥಿತಿಯಲ್ಲಿ ಯುವ ವಕೀಲೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀನಿವಾಸಪುರ ಶೆಡ್ ನಲ್ಲಿ ಜರುಗಿದೆ. https://ainkannada.com/thrilling-win-against-rajasthan-what-did-captain-rajat-say-in-the-joy-of-victory/ ಮತ್ತೊಂದೆಡೆ ವಕೀಲೆ ಮೃತದೇಹ ಕಂಡು ಕುಟುಂಬದ ಜೊತೆಗಿದ್ದ ಯುವಕನೂ ಕೂಡ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಕೀಲೆ ರಮ್ಮಾ(26) ಹಾಗೂ ಮನೆಯ ಮತ್ತೊಬ್ಬ ಪುನೀತ್(25) ಸೂಸೈಡ್ ಮಾಡಿಕೊಂಡವರು. ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ ಮೃತದೇಹ ಪತ್ತೆಯಾದರೆ, ಕೆಂಪಲಿಂಗನಹಳ್ಳಿಯ ಮನೆಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ರಮ್ಯಾ ಸಾವಿಗೆ ಉದ್ಯಮಿ ದಿನೇಶ್ ಕಾರಣ ಅಂತ ರಮ್ಯಾ ಮಾವನಿಗೆ ವಾಯ್ಸ್ ಮೇಸೆಜ್ ಕಳಿಸಿ ಸಾವನ್ನಪ್ಪಿದ್ದಾರೆ. ಇದೀಗ ಅರೋಪಿ ದಿನೇಶ್ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಗ್ರಾನೈಟ್ ಕಲ್ಲು ವ್ಯವಹಾರ ಮಾಡ್ತಿದ್ದ ದಿನೇಶ್,ತಾಯಿ ಸಮಾಧಿ ನಿರ್ಮಾಣ ವೇಳೆ ರಮ್ಯಾಗೆ ಪರಿಚಯವಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಶೆಡ್ ಬಳಿ ಬಂದು ರಮ್ಯಾರನ್ನ ಕೊಂದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಕೂಡ ಸಾವನ್ನಪ್ಪಿದ್ದಾನೆ. ಇನ್ನೂ ವಕೀಲೆ ಸಾವಿನ…

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಒಂದು ರೀತಿ ಪಂದ್ಯ ಸೋಲತ್ತೆ ಎಂದು ಕೊಂಡಿದ್ದ ಆರ್ ಸಿಬಿಗೆ 19ನೇ ಓವರ್ ಪಂದ್ಯದ ಚಿತ್ರಣ ಬದಲಿಸಿತು. https://ainkannada.com/india-pakistan-exchange-of-fire-on-border-in-wake-of-pahalgam-attack/ ಟಾಸ್ ಸೋತರೂ ಪಂದ್ಯದ ಫಲಿತಾಂಶವನ್ನು ಬದಲಿಸುವಲ್ಲಿ ಯಶಸ್ವಿಯಾದ ಆರ್​ಸಿಬಿ ತನ್ನ ಸಾಂಘಿಕ ಪ್ರದರ್ಶನದಿಂದ ತವರಿನಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ಮತ್ತೊಮ್ಮೆ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅದ್ಭುತ ಅರ್ಧಶತಕಗಳ ಆಧಾರದ ಮೇಲೆ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಇದು ಈ ತಂಡದ ವಿರುದ್ಧ ಆರ್‌ಸಿಬಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಸ್ತವವಾಗಿ ರಾಜಸ್ಥಾನ್ ಇನ್ನಿಂಗ್ಸ್​ನ ಮೊದಲಾರ್ಧದಲ್ಲಿ ಗೆಲುವಿನ ಫೇವರೇಟ್…

Read More

ನವದೆಹಲಿ:- ಮಂಗಳವಾರ ಅಂದ್ರೆ ಕಳೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದಾರೆ. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಗುರುವಾರ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. https://ainkannada.com/india-pakistan-exchange-of-fire-on-border-in-wake-of-pahalgam-attack/ ಸಭೆಯಲ್ಲಿ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರೆ, ವಿಪಕ್ಷಗಳ ನಾಯಕರಲ್ಲಿ ಪ್ರಧಾನವಾಗಿ ಲೋಕಸಭೆಯ ವಿರೋಧ ಪಕ್ಷಗಳ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಮ್ ಆದ್ಮಿ ಪಾರ್ಟಿಯ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರವೂ ಸಹ ಭದ್ರತಾ ವೈಫಲ್ಯದಿಂದಲೇ ಪಹಲ್ಗಾಮ್ ಘಟನೆ ಆಗಿರುವುದಾಗಿ…

Read More

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಭಾರತ-ಪಾಕ್‌ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಗಡಿ ನಿಯಂತ್ರಣ ರೇಖೆಯ ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ತನ್ನ ನೆಲೆಯಿಂದ ತಡರಾತ್ರಿ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದೆ. https://ainkannada.com/taking-a-selfie-with-you-strange-road-rage-case-in-bengaluru/ ಪಾಕಿಸ್ತಾನ ಸೇನೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದು, ಪ್ರತಿಯಾಗಿ ಭಾರತವೂ ಗುಂಡು ಹಾರಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸೈನಿಕರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

Read More

ಬೆಂಗಳೂರು::- ನಗರದಲ್ಲಿ ವಿಚಿತ್ರ ರೋಡ್ ರೇಜ್ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಕ್ಯಾಬ್ ಚಾವಕನೋರ್ವ ಲೇಡಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ನಡುರಸ್ತೆಯಲ್ಲೇ ಕಿರಿಕ್ ಮಾಡಿದ್ದಾನೆ. https://ainkannada.com/is-the-ant-infestation-increasing-in-your-home-if-so-do-this-its-not-a-fluke/ ಕಾರು ಡ್ರೈವಿಂಗ್ ಮಾಡ್ತಿದ್ದ ಲೇಡಿ ಜೊತೆ ಕಾರು ಚಲಾಯಿಸುತ್ತಿದ್ದ ಚಾಲಕ ಕಿರಿಕ್ ತೆಗೆದಿರುವ ವಿಡಿಯೋ ವೈರಲ್ ಆಗಿದೆ. ಲೆಫ್ಟ್ ಗೆ ಬರ್ತಿದ್ದಂಗೆ ಕಾರು ಚಾಲಕ ಕಿರಿಕ್ ತೆಗೆದಿದ್ದಾನೆ. ಅಶ್ಲೀಲವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಗಾಡಿ ವಿಂಡೋ ಕೆಳಗಡೆ ಮಾಡಿ ಸೆಲ್ಫಿ ತಗೋತ್ತೀನಿ ಎಂದು ಕಿರಿಕ್ ತೆಗೆದಿದ್ದಾನೆ. ನಿಮ್‌ ಜೊತೆ ಸೆಲ್ಫಿ ತಗೋತ್ತೀನಿ ಎಂದು ಕಿರಿಕ್ ತೆಗೆದು ಪುಂಡನ ರೀತಿ ವರ್ತಿಸಿರುವ ಘಟನೆ ಸರ್ಜಾಪುರ‌ ಮುಖ್ಯರಸ್ತೆಯ ಹರಳೂರಿನಲ್ಲಿ ಘಟನೆ ಜರುಗಿದೆ.

Read More

ದಿನಾ ಮನೆಯನ್ನು ಗುಡಿಸಿ, ಒರೆಸಿ, ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ, ಜಿರಳೆ, ಸೊಳ್ಳೆ ಹಾಗೂ ಇರುವೆಗಳ ಕಾಟವನ್ನು ಮಾತ್ರ ತಡೆಯಲು ಸಾಧ್ಯವಿಲ್ಲ! ಇವು ಮೂವರೂ ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳು! ಯಾವ ಸಮಯದಲ್ಲಿ ಹೇಗೆ ಮನೆಯೊಳಗೆ ಬಂದು ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಇರುವೆಗಳು ಮನೆಗೆ ಬರಲು ಮೊದಲ ಕಾರಣವೆಂದರೆ ಆಹಾರ. ಯಾವುದೇ ಆಹಾರವನ್ನೇ ಆಗಲಿ ಇರುವೆಗಳು ಗುಂಪಾಗಿಯೇ ತೆಗೆದುಕೊಂಡು ಹೋಗುತ್ತವೆ. ಹೆಣ್ಣು ಇರುವೆಗಳನ್ನು ರಾಣಿ ಮತ್ತು ಗಂಡು ಇರುವೆಗಳನ್ನು ಡ್ರೋನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇವೆರಡೂ ಸಹ ಒಟ್ಟಾಗಿ ಕೆಲಸ ಮಾಡುತ್ತವೆ. ಇವು ನಿರಂತರವಾಗಿ ಆಹಾರ ಮತ್ತು ನೀರನ್ನು ಹುಡುಕುತ್ತಿರುತ್ತವೆ., ಇಂತಹ ವೇಳೆ ಇರುವೆ ದೊಡ್ಡ ಪ್ರಮಾಣದ ಆಹಾರ ಪದಾರ್ಥ ಅಥವಾ ಸಿಹಿ ಪದಾರ್ಥವನ್ನು ಕಂಡುಕೊಂಡಾಗ, ಅವು ವಿಶೇಷ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ, ಅದು ಇತರ ಇರುವೆಗಳಿಗೆ ಸಂಕೇತ ನೀಡುತ್ತದೆ. ಇವುಗಳನ್ನು ಅನುಸರಿಸಿ ಇತರ ಇರುವೆಗಳು ಸಹ ಅದೇ ಮಾರ್ಗವನ್ನು ಅನುಸರಿಸುತ್ತವೆ ಮತ್ತು ಆಹಾರವನ್ನು ತೆಗೆದುಕೊಂಡು ಸಾಲಾಗಿ ಬರುತ್ತವೆ. ಹೀಗೆ…

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರ್ ಆರ್ ವಿರುದ್ಧ ಗೆದ್ದು ಬೀಗಿದೆ. ಆದರೆ ಗೆಲುವಿನ ಸನಿಹದಲ್ಲಿ ಬಂದು ರಾಜಸ್ಥಾನ್ ಪಂದ್ಯ ಕೈಚೆಲ್ಲಿದೆ. https://ainkannada.com/cm-siddaramaiah-who-gave-the-bjp-to-the-bjp-said/ ಪಂದ್ಯದ ಸೋಲಿನ ನಂತರ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು, ‘ನಾವು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆವು. ಈ ಪಿಚ್​ನಲ್ಲಿ 210 ರಿಂದ 215 ರನ್‌ ಕಲೆಹಾಕಬಹುದು ಎಂದು ನಾವು ಭಾವಿಸಿದ್ದೇವು. ಆದರೆ ನಾವು ಆರ್‌ಸಿಬಿಯನ್ನು 205 ರನ್​​ಗಳಿಗೆ ಕಟ್ಟಿಹಾಕಿದೆವು. ಈ ಗುರಿ ಬೆನ್ನಟ್ಟಿದಾಗ ಪಂದ್ಯದ ಮೊದಲಾರ್ಧದಲ್ಲಿ ನಾವು ಉತ್ತಮ ಸ್ಥಾನದಲ್ಲಿದ್ದೆವು. ಆದರೆ ಆ ನಂತರ ನಮ್ಮ ಬ್ಯಾಟಿಂಗ್‌ ಹಳಿತಪ್ಪಿತು. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ವಿಶೇಷವಾಗಿ ಸ್ಪಿನ್ ಬೌಲರ್‌ಗಳ ವಿರುದ್ಧ, ನಾವು ಆಕ್ರಮಣಶೀಲತೆಯನ್ನು ತೋರಿಸಲಿಲ್ಲ’ ಎಂದರು. ಇನ್ನು ಮಧ್ಯಮ ಕ್ರಮಾಂಕದ ವೈಫಲ್ಯ ಮಾನಸಿಕ ಒತ್ತಡದಿಂದಾಗಿ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಾಗ್, ‘ಹೌದು,…

Read More

ಬೆಂಗಳೂರು:- ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು ಈ ಹಿಂದೆ ಕಲಬುರಗಿಯಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆದಿದ್ದು ಇಂದು ಚಾಮರಾಜನಗರದಲ್ಲಿ ನಡೆಸಿದ್ದೇವೆ. ಬೆಳಗಾವಿ ವಿಭಾಗದಲ್ಲಿ ವಿಜಯಪುರ, ಬೆಂಗಳೂರು ವಿಭಾಗದ ಸಂಪುಟ ಸಭೆಯನ್ನು ನಂದಿಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ. https://ainkannada.com/more-than-20-districts-of-karnataka-today/ ಬಿಜೆಪಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸುಳ್ಳು ಆರೋಪ ಮಾಡ್ತಾ ಇದಾರೆ. ಸರ್ಕಾರವು ಎಲ್ಲಾ ಹಣನೂ ಗ್ಯಾರಂಟಿಗೆ ಹಾಕಿ ಅಭಿವೃದ್ದಿಗೆ ಕೆಲಸಗಳಿಗೆ ದುಡ್ಡೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಾ, ಸರ್ಕಾರದ ವಿರುದ್ಧ ದ್ವೇಷದ ಕಾರಣಕ್ಕೆ ಈ ಸುಳ್ಳು ಹೇಳಲಿದ್ದು ಸರ್ಕಾರದ ಬಳಿ ಹಣ ಇಲ್ಲದಿದ್ದರೇ 3600 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ಕೊಡಲು ಆಗುತ್ತಿತ್ತಾ ಎಂದು ಕಿಡಿಕಾರಿದರು. ನಾವೂ ಹೇಳಿದ್ದನ್ನೆ ಮಾಡೋದು ಬಿಜೆಪಿಗರಂತೆ ಜನರಿಗೆ ಸುಳ್ಳು ಹೇಳಿಕೊಂಡು ತಿರುಗೊಲ್ಲ ಎಂದು ಕುಟುಕಿದರು.

Read More

ಬೆಂಗಳೂರು:- ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainkannada.com/rcb-vs-rr-rcb-has-finally-laughed-at-home/ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ ಎಚ್​ಎಎಲ್​ನಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರೊಷ್ಠ ಉಷ್ಣಾಂಶ, 21.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಆರ್ ಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ತವರಿನ ಸೋಲಿನ ಹಸಿವನ್ನು ನೀಗಿಸಿಕೊಂಡಿತು. https://ainkannada.com/these-piles-earn-a-huge-amount-of-money-from-a-source-fridays-fate-25-april-2025/ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ 205 ರನ್ ಗಳಿಸಿತು. ಇದಾದ ನಂತರ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಬಲವಾದ ಇನ್ನಿಂಗ್ಸ್ ರಾಜಸ್ಥಾನಕ್ಕೆ ಗೆಲುವಿನ ಭರವಸೆ ನೀಡಿತು. ಆದರೆ ಜೋಶ್ ಹ್ಯಾಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಪಂದ್ಯವನ್ನು ತಿರುಗಿಸಿ ಬೆಂಗಳೂರಿಗೆ ಗೆಲುವು ತಂದುಕೊಟ್ಟರು ಬೆಂಗಳೂರು ತಂಡವು ರಾಜಸ್ಥಾನವನ್ನು 11 ರನ್‌ಗಳಿಂದ ಸೋಲಿಸಿ ತವರಿನಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಈ ಆರನೇ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ವಿರಾಟ್ ಕೊಹ್ಲಿ 70 ರನ್ ಗಳಿಸಿದರೆ, ಪಡಿಕ್ಕಲ್ 50 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ 4 ವಿಕೆಟ್‌ಗಳನ್ನು ಪಡೆಯುವ…

Read More