Author: AIN Author

2025ರ ಐಪಿಎಲ್ ನಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋಲು ಕಂಡಿದೆ. https://ainkannada.com/om-prakash-murder-case-did-he-murder-by-putting-salt-powder-in-his-eyes-explosive-information-revealed/ ಪಂಜಾಬ್ ವಿರುದ್ಧ ಗೆಲ್ತಿದ್ದಂತೆಯೇ ಆರ್​ಸಿಬಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆದುಕೊಂಡಿದೆ. ಐದನೇ ಸ್ಥಾನಕ್ಕೆ ಕುಸಿದ್ದಿದ್ದ ಆರ್​ಸಿಬಿ, ದಿಢೀರ್ ಅಂತಾ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು, ನಿನ್ನೆ ಸೋತಿರುವ ಪಂಜಾಬ್​ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 8 ಪಂದ್ಯಗಳನ್ನು ಆಡಿರುವ ಆರ್​ಸಿಬಿ, ಐದು ಪಂದ್ಯಗಳನ್ನು ಗೆದ್ದು, ರನ್​​ರೇಟ್ ಆಧಾರದ ಮೇಲೆ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನು 7 ಪಂದ್ಯಗಳಲ್ಲಿ ಐದು ಗುಜರಾತ್​ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ. ಪಂತ್​​ ನೇತೃತ್ವದ ಎಲ್​ಎಸ್​ಜಿ ಐದನೇ ಸ್ಥಾನದಲ್ಲಿದ್ದರೆ, ಮುಂಬೈ ನಾಲ್ಕು ಪಂದ್ಯ ಗೆದ್ದು ಆರನೇ ಸ್ಥಾನದಲ್ಲಿದೆ. ಕೆಕೆಆರ್ 7, ರಾಜಸ್ಥಾನ್ ರಾಯಲ್ಸ್ 8, ಸನ್ ರೈಸರ್ಸ್​ ಹೈದ್ರಾಬಾದ್​ 9 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 10ನೇ ಸ್ಥಾನದಲ್ಲಿದೆ.

Read More

ಹುಬ್ಬಳ್ಳಿ  : ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ ಸುಮಾರು 28 ಕಿಲೋ ಮೀಟರ್‌ ಸಮುದ್ರದಲ್ಲಿ ಈಜಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸೆಕ್ಟ‌ರ್ ಮುರುಗೇಶ್ ಚನ್ನಣ್ಣವರ್ ರಾಮ ಸೇತು ಸಮುದ್ರ ಮಾರ್ಗದಲ್ಲಿ 28 ಕಿ.ಮಿ.ಈಜುವ ಮೂಲಕ ಕರ್ನಾಟಕ ಪೊಲಿಸ್ ಇಲಾಖೆಗೆ  ಕೀರ್ತಿ ತಂದಿದ್ದಾರೆ. ಇವರ ಜೊತೆಗೆ ಹುಬ್ಬಳ್ಳಿಯ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬೆಂಗಾಳ ಮತ್ತು ಹರಿಯಾಣದ ಇಬ್ಬರು ಅಂಗವಿಕಲ ಕ್ರೀಡಾಪಟುಗಳನ್ನು ಒಳಗೊಂಡ ವಿಶೇಷ ಈಜು ತಂಡವು ಹಿಂದೂಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಅಲ್ಲದೆ ಆಕಾಶದೆತ್ತರಕ್ಕೆ ಚಿಮ್ಮುವ ಅಲೆಗಳ ನಡುವೆಯೇ ಈಜಿ ಕೇವಲ 8 ಗಂಟೆ 30 ನಿಮಿಷದಲ್ಲಿ ನಿಗದಿತ ಗುರಿ ಮುಟ್ಟಿ ಅದ್ಭುತ ಸಾಧನೆ ಮಾಡಿದೆ. ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಅವರ ಜೊತೆ ಬೋಟಿನಲ್ಲಿ ಶ್ರೀಲಂಕಾಗೆ ಹೋಗಿದ್ದ ಐರನ್ ಮ್ಯಾನ್, ಅಲ್ಲದೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ…

Read More

ಅಥಣಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಂತೇಶ ಹಿಪ್ಪರಗಿ ಬಂಧಿತ ಆರೋಪಿಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಈ ವಿಚಾರವನ್ನು ಪೊಲೀಸರ ಬಳಿ ಹೇಳಿಕೊಂಡಿದ್ದು, ಹೆತ್ತವರು ಐಗಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. https://ainkannada.com/i-dont-want-a-conductor-give-me-a-watchman-job-ministers-protest-against-individuals-demand-for-janata-darshan/ ಪೋಕ್ಸೋ ಕೇಸ್ ದಾಖಲಿಸಿಕೊಂಡ ಐಗಳಿ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ ನೇತೃತ್ವದಲ್ಲಿ ಜನತಾದರ್ಶನ ನಡೆಯಿತು. ಈ ವೇಳೆ ಕೆಎಸ್ ಆರ್‌ಟಿಸಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸನೇ ಬೇಕು ಎಂದು ವ್ಯಕ್ತಿಯೋರ್ವ ಪಟ್ಟು ಹಿಡಿದಿದ್ದು, ಸಚಿವರು ಗರಂ ಆದ ಘಟನೆಯೂ ನಡೆಯಿತು. https://ainkannada.com/mp-ramesh-jigajinagi-demands-implementation-of-internal-reservation/ ಕೆಎಸ್‌ಆರ್‌ಟಿಸಿಯಲ್ಲಿ ಆತನಿಗೆ ಕಂಡಕ್ಟರ್ ಹುದ್ದೆ ಸಿಕ್ಕಿದೆ. ಆದರೆ ಆತ ಸಚಿವ ಸಂತೋಷ್ ಲಾಡ್ ಮುಂದೆ ನನಗೆ ಸೆಕ್ಯುರಿಟಿ ಕೆಲಸನೇ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಆಗ ಸಚಿವ ಸಂತೋಷ್‌ ಲಾಡ್‌ ಕೈಯಿಗೆ ಬಂದಿರೋ ಸರಕಾರಿ ಕೆಲಸ ಕಳಕೋಬೇಡ ಎಂದು ಬುದ್ದಿ ಮಾತು ಹೇಳಿದರು. ಆರೂ ಸಹ ಕಂಡಕ್ಟರ್ ಆಗೋದು ಬೇಡ, ನಾವು ವಾಚಮನ್ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಸಚಿವರು ಕಂಡಕ್ಟರ್ ಆದ್ರೆ ಇವನ ಮರಿಯಾದೆ ಹೋಗುತ್ತೆ. ನಿನಗೆ ವಾಚಮನ್ ಕೆಲಸ ಬೇಕೆಂದ್ರೆ 6 ವರ್ಷ ವೇಯ್ಟ್‌ ಮಾಡು . ವಾಚಮನ್ ಕೆಲಸ ಸಿಕ್ಕಾಗ ವಾಚಮನ ಕೆಲಸ ಮಾಡು ಎಂದು ಗರಂ ಆಗಿ…

Read More

ವಿಜಯಪುರ : ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಬೇಕೆಂದು ಸಂಸದ ರಮೇಶ್ ಜಿಗಿಜಿಣಿಗಿ ಆಗ್ರಹಿಸಿದರು.  ವಿಜಯಪುರ ನಗರದಲ್ಲಿ  ಮಾತನಾಡಿದ ಅವರು,  ಸದಾಶಿವ ಆಯೋಗ ಒಳ ಮೀಸಲಾತಿ ಜಾರಿಯಾಗಬೇಕೆಂದು 2011-12 ರಲ್ಲಿ ವರದಿ ಸಲ್ಲಿಸಿದೆ. 2015-16 ರಲ್ಲಿ ಕಾಂತರಾಜ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಹಾಗಾದರೆ ಮೊದಲು ಸಲ್ಲಿಕೆಯಾದ ವರದಿ ಯಾವುದು ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.ʼ ಒಂದೆಡೆ ಅಹಿಂದ ನಾಯಕನೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಒಳ ಮೀಸಲಾತಿ ಜಾರಿ ಮಾಡದ ಕಾರಣ ದಲಿತರು ಯಾಕೆ ಸಿದ್ಧರಾಮಯ್ಯನ ಹಿಂದೆ ಹೋಗಬೇಕು..? 1983 ರಲ್ಲಿ ಒಳ ಮೀಸಲಾತಿ ಆಗಬೇಕೆಂದು ಒತ್ತಾಯ ಮಾಡಿದವನೇ ನಾನು. ಇದು ಯಾರಿಗೂ ವಿಷಯ ಗೊತ್ತಿಲ್ಲ. ಒಳ ಮೀಸಲಾತಿ ಜಾರಿ ಆಗಲೇಬೇಕು ಇಲ್ಲದಿದ್ದರೆ ನಿಮ್ಮನ್ನು ಬಿಡಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. https://www.youtube.com/watch?v=Ch60aFkrDMQ ಮುಂದೆ ನಮ್ಮ ಸರ್ಕಾರ ಬರಲಿ ಏನು ಮಾಡುತ್ತೇವೆ ಎಂದು ತೋರಿಸುತ್ತೇವೆ. ಒಳ ಮೀಸಲಾತಿಗಾಗಿ ಹೋರಾಟ ಮಾಡಿ ಎಷ್ಟೋ ಜನ ಪ್ರಾಣ ಬಿಟ್ಟರು. ಒಳ ಮೀಸಲಾತಿ ಜಾರಿ ಮಾಡಬೇಕು…

Read More

ರಾಯಚೂರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ನಲ್ಲೇ ಗರ್ಭೀಣಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಬಳಿ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೊಂಬಳಕಲ್ ಗ್ರಾಮದ ಶಾಂಭವಿ ಎಂಬುವರು ಬಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗಳು ಕಾರವಾರಕ್ಕೆ ಕೂಲಿ ಕೆಲಸಕ್ಕಾಗಿ ಗುಳೆ ಹೋಗಿದ್ದರು. ಕಾರವಾರದಿಂದ  ಗ್ರಾಮಕ್ಕೆ ವಾಪಸ್‌ ಹಿಂತಿರುಗುತ್ತಿದ್ದಾಗ ಬಸ್‌ನಲ್ಲೇ ಶಾಂಭವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಮೇರಿ ಎಂಬುವವರು ಹೆರಿಗೆ ಮಾಡಿಸಿದ್ದಾರೆ. https://www.youtube.com/watch?v=OjI6xKufRA0 ಹೆರಿಗೆ ಬಳಿಕ ಅಂಬ್ಯುಲೆನ್ಸ್ ಮೂಲಕ ಬಾಣಂತಿಯನ್ನು ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಕೆಕೆಆರ್‌ಟಿಸಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ.

Read More

ಧಾರವಾಡ : ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗೆ  ಜನಿವಾರ ಕತ್ತರಿಸಿದ ಸಂಬಂಧ ಧಾರವಾಡದಲ್ಲಿ  ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಶಾಸಕ ಅರವಿಂದ ಬೆಲ್ಲದ್, ಸೀತಾರಾಮ ಸಿದ್ಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಜಿಲ್ಲಾ ಪಂಚಾಯತ್‌ಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಜಟಾಪಟಿ ನಡೆದಿದೆ. ಒಂದೆಡೆ ಜಿಲ್ಲಾ ಪಂಚಾಯತ್‌ ನಲ್ಲಿ ಸಚಿವ ಸಂತೋಷ್‌ ಲಾಡ್‌ ಜನತಾ ದರ್ಶನ ನಡೆಸುತ್ತಿದ್ದರು. ಇನ್ನೊಂದು ಕಡೆ ಪ್ರತಿಭಟನಾಕಾರರು ಜನತಾ ದರ್ಶನಕ್ಕೆ ನುಗ್ಗಲು ಪ್ರತಿಭಟನಕಾರರ ಯತ್ನಿಸಿದರು. https://ainkannada.com/if-you-touch-sanatan-dharma-we-will-cut-off-your-hand-umesh-vandala/ ಕೋರ್ಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ರ್ಯಾಲಿ ನಡೆಯುತ್ತಿತ್ತು. ಆದರೆ ಮಾರ್ಗಮಧ್ಯೆ ಪ್ರತಿಭಟನಾಕಾರರು ಜಿಲ್ಲಾ ಪಂಚಾಯತ್‌ಗೆ ನುಗ್ಗಿದ್ದು, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರ ಹರಸಾಹಸ ಪಡುವಂತಾಯಿತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಜಟಾಪಟಿ ನಡೆಯಿತು.

Read More

ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ‌ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಮತ ಬ್ಯಾಂಕ್ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಇದರ ವಿರುದ್ಧ ಈಗಾಗಲೇ ಜನ ಆಕ್ರೋಶ ಹೊಂದಿದ್ದಾರೆ.ಹೀಗಾಗಿ ವಿರೋಧ ಪಕ್ಷವಾಗಿ ನಾವು ಸುಮ್ಮನೇ ಇರಲಾಗಲ್ಲ. ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಎರಡು ಹಂತದಲ್ಲಿ ಮುಗಿದ ಜನಾಕ್ರೋಶ ಯಾತ್ರೆ ನಡೆಯಲಿದ್ದು, ಮೂರನೇ ಹಂತದಲ್ಲಿ 25 ರಂದು ಚಿತ್ರದುರ್ಗಕ್ಕೆ ಯಾತ್ರೆ ಬರಲಿದೆ ಎಂದರು. ರಾಜ್ಯದಲ್ಲಿ ಕಾನೂನು ಸರಿಯಿಲ್ಲ ಅಂದ್ರೆ ಏನೂ ನಡೀತಿಲ್ಲ ಅಂತರ್ಥ. ನಿವೃತ್ತ ಡಿಐಜಿ ಕೊಲೆಯಾಗಿದ್ದು, ಹೆಂಡತಿ ಮಗಳು ಮಾಡಿದ್ದಾರೆ ಅಂತಿದ್ದಾರೆ. ಆದರೆ ಈ ಕುರಿತು ಉನ್ನತ ತನಿಖೆ ಆಗಬೇಕು. ಹಲವರು ಶಾಸಕರು, ಸಚಿವರ ಹೆಸರು ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡರು. ಮಾಜಿ ಸಚಿವ ನಾಗೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಚಾವ್ ಗೆ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.…

Read More

ವಿಜಯಪುರ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬ್ರಾಹ್ಮಣ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  ಬ್ರಾಹ್ಮಣ ಸಮಾಜದ ಹೋರಾಟಕ್ಕೆ ಮರಾಠ, ದಲಿತ, ರಜಪೂತ, ಭಾವಸಾರ ಕ್ಷತ್ರೀಯ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ನವಮಿ ಉತ್ಸವ ಸಮಿತಿ ಸೇರಿ ಹಿಂದೂ ಸಂಘಟನೆಗಳ ಬೆಂಬಲ ನೀಡಿವೆ. ಪ್ರತಿಭಟನೆ ವೇಳೆ ಶ್ರೀ ರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ್ ವಂದಾಲ ಮಾತನಾಡಿ, ಸನಾತನ ಧರ್ಮಕ್ಕೆ ಕೈಹಾಕಿದರೆ ಕೈ ಕತ್ತರಿಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಹಣೆಗೆ ವಿಭೂತಿ, ಕುಂಕುಮ ಹಾಗು ಬಳೆ ಹಾಕಬೇಡಿ ಅಂತಾರೆ. ಸನಾತನ ಧರ್ಮಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸುವ ಕೆಲಸ ನಾವು ಮಾಡುತ್ತೇವೆ. ಯಾವುದೇ ಧರ್ಮದ ಭಾವನೆಗಳ ಆಚರಣೆಗೆ ಕೈ ಹಾಕುವ ಕೆಲಸ ಮಾಡಿದ್ರೆ, ಅದರ ಹಿಂದೆ ಸರ್ಕಾರ ಇತ್ತಂದ್ರೆ ಆ ಸರ್ಕಾರ ಕಿತ್ತು ಹಾಕುವ ಕೆಲಸ ಮಾಡುತ್ತೀವಿ ಎಂದರು. https://ainkannada.com/january-controversy-minister-ishwar-khandre-meets-student-who-was-denied-cet-exam/ ಪ್ರತಿಭಟನೆ ವೇಳೆ ದಲಿತ ಮುಖಂಡ ಸೇರಿದಂತೆ ಹಲವರು ಜನಿವಾರ…

Read More

ಬಳ್ಳಾರಿ : ನಗರದ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಉಚಿತವಾಗಿ ಅನ್ನದಾನ ಮಾಡುವ ಸೇವೆಯನ್ನು ಸಂಸ್ಥೆಯೊಂದು ನಡೆಸಿಕೊಂಡು ಬರುತ್ತಿದೆ. ಆರೋಗ್ಯ ಸಮಸ್ಯೆಗಳಿಂದ ನೊಂದಿರುವ ಸಂದರ್ಭದಲ್ಲಿ ಹಣಕಾಸು ವೆಚ್ಚದ ಕಾರಣಕ್ಕಾಗಿ ಊಟಕ್ಕಾಗಿ ಪರದಾಡುವ ಬಡವರಿಗೆ ಈ ಉಚಿತ ಅನ್ನದಾನ ಸೇವೆ ವರದಾನವಾಗಿದೆ. ಈ ರೀತಿಯ ಶ್ಲಾಘನೀಯ ಕಾರ್ಯವನ್ನು ಬಿಮ್ಸ್‌ನ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಎನ್.ಟಿ.ಆರ್ ಅನ್ನಪ್ರಸಾದ ಸೇವಾ ಟ್ರಸ್ಟ್ ಮಾಡಿಕೊಂಡು ಬರುತ್ತಿದೆ. ಸರ್ಕಾರಿ ಆಸ್ಪತ್ರೆ ಅಂದ್ರೆನೆ ಅಲ್ಲಿಗೆ ಬರುವವರು ಕಡು ಬಡವರು, ಸಂಕಷ್ಟದಲ್ಲಿರುವವರು ಅನ್ನೋದು ಖಚಿತ. ಇಲ್ಲಿ ಬರುವ ರೋಗಿಗಳಿಗೆ ಉಚಿತ ಸೇವೆ ಸಿಗಬಹುದು. ಆದರೆ ರೋಗಿಗಳಿಗೆ ಹಾಗೂ ರೋಗಿಗಳನ್ನು ಹಾರೈಕೆ ಮಾಡಲು ಬರುವ ಜನರಿಗೆ ಉಚಿತ ಊಟ ಸಿಗೋದಿಲ್ಲ. ಹೀಗೆ ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆ ಸೇರಿದಂತೆ ವಿವಿದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಎನ್.ಟಿ.ಆರ್ ಅನ್ನಪ್ರಸಾದ ಸೇವಾ ಟ್ರಸ್ಟ್ ವತಿಯಿಂದ ಉಚಿತ ಅನ್ನದಾನ ಸೇವೆ ನಡೆಯುತ್ತಿದೆ. https://www.youtube.com/watch?v=EFLk2m9v5pQ ಎನ್ ಟಿ.ಆರ್ ಅನ್ನಪ್ರಸಾದ…

Read More