ಬೀದರ್ : ಜನಿವಾರ ಹಾಕಿದ್ದಕ್ಕೆ ಕೆ-ಸಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿ ವಂಚಿತನಾದ ಸುಚಿವೃತ್ಗೆ ಸಚಿವ ಈಶ್ವರ್ ಖಂಡ್ರೆ ಧೈರ್ಯ ತುಂಬಿದ್ದು, ಬಿಕೆಐಟಿಯಲ್ಲಿ ಉಚಿತ ಸೀಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಬೀದರ್ನ ವಂಚಿತ ವಿದ್ಯಾರ್ಥಿ ಸುಚಿವೃತ್ ಮನೆಗೆ ಸಚಿವರಾದ ಜಿಲ್ಲಾ ಉಸ್ತುವಾರಿ ಈಶ್ವರ್ ಖಂಡ್ರೆ, ರಹೀಂಖಾನ್ ಭೇಟಿ ನೀಡಿದ್ದು, ಸುಚಿವೃತ್ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. https://ainkannada.com/protest-condemning-attack-on-bar-council-member-sadashiva-reddy/ ಬೆಂಗಳೂರಿನಿಂದ ನೇರವಾಗಿ ಬೀದರ್ನ ಚೌಬಾರ್ ಬಳಿಯ ಸುಚಿವೃತ್ ಮನೆಗೆ ಭೇಟಿ ನೀಡಿದ ಖಂಡ್ರೆ, ಸುಚಿವೃತ್ಗೆ ಆತ್ಮಸ್ಥೈರ್ಯ ಹೇಳಿದರು. ಇದೇ ವೇಳೆ ಪರೀಕ್ಷೆ ವೇಳೆ ಆ ರೀತಿ ಮಾಡಬಾರದಿತ್ತು, ಮಾಡಿದ್ದು ತಪ್ಪು. ಇಂಜಿನಿಯರಿಂಗ್ ಕೋರ್ಸ್ ಮಾಡುತ್ತೀನಿ ಅಂದರೆ ನಮ್ಮ ಕಾಲೇಜಿನಲ್ಲಿಯೇ ಉಚಿತ ಪ್ರವೇಶ ಕೊಡುತ್ತೇವಿ ಅಂತಾ ಭರವಸೆ ನೀಡಿದರು. ಭಾಲ್ಕಿಯ ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಕೊಡುವ ಭರವಸೆ ನೀಡಿದರು.
Author: AIN Author
ಹುಬ್ಬಳ್ಳಿ: ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ವಕೀಲರು ಹೊಸ ಕೋರ್ಟ್ ಆವರಣದಲ್ಲಿ ಕೆಂಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಮೇಲಿನ ಹಲ್ಲೆ ಅಕ್ಷಮ್ಯ ಅಪರಾಧ ಆಗಿದ್ದು ವಕೀಲರು ಬಲಗೈಗೆ ಕೆಂಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿ, ತಹಶೀಲ್ದಾರ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದರು. ಕೇಸು ಕೊಡುವ ನೆಪದಲ್ಲಿ ಏ.16ರಂದು ಅವರ ಕಚೇರಿಗೆ ಬಂದು ಪೈಪಿನಿಂದ ಹಲ್ಲೆ ಮಾಡಲಾಗಿದೆ. ಓರ್ವ ಹಲ್ಲೆ ನಡೆಸುತ್ತಿದ್ದರೆ , ಇನ್ನೋರ್ವ ಹೊಡೆಯುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. https://ainkannada.com/heavy-rains-in-many-parts-of-chamarajanagar-district-downed-electric-poles/ ಹಲ್ಲೆಕೋರರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕೆಂದು ಇದರ ಜೊತೆಗೆದಾಳಿ ನಡೆಸಿದ ದುರುಳರಿಗೂ ಸದಾಶಿವ ರೆಡ್ಡಿಯವರ ಅವರಿಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯ ಮಾಡಿದರು.
ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮನಪುರ, ಶೀಲವಂತಪುರ, ಕೊಡಸೋಗೆ ಗ್ರಾಮದಲ್ಲಿ ಭಾನುವಾರ ಸುರಿದ ಬಿರುಗಾಳಿ ಸಮೇತ ಮಳೆಗೆ ಬಾಳೆ ವಿದ್ಯುತ್ ಕಂಬ ನೆಲಕ್ಕೆ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಭಾನುವಾರ ಸಂಜೆ ದಿಢೀರನೆ ಸುರಿದ ಬಾರಿ ಮಳೆಗಾಳಿಗೆ ಈ ಅವಘಡ ಸಂಭವಿಸಿದ್ದು ರೈತರು ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. https://ainkannada.com/see-what-happened-to-the-man-who-went-to-take-a-selfie-in-front-of-an-elephant-crazy-video-of-a-kerala-man/ ಭಾರೀ ಬಿರುಗಾಳಿ ಮಳೆಗೆ ಜನ ತತ್ತರಿಸಿದ್ದು ಸಾರ್ವಜನಿಕರ ರಸ್ತೆಯಲ್ಲಿಯೇ ವಿದ್ಯುತ್ ಕಂಬಗಳು ಒಂದರ ಮೇಲೊಂದರೆಂತೆ ಧರೆಗುರುಳಿದೆ ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದ ಸುಲ್ತಾನ್ ಬತ್ತೇರಿ ಮಾರ್ಗವಾಗಿಸಂಚರಿಸುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದೊಳಗೆ ಆಹಾರ ಅರಸಿ ನಿಂತಿದೆ. ಈ ವೇಳೆ ಆನೆ ಮುಂದೆ ಸೆಲ್ಪಿ ವಿಡಿಯೋ ತೆಗೆಯಲು ಕೇರಳದ ವಾಹನ ಸವಾರನೊಬ್ಬ ಆನೆ ಮುಂದೆ ಸಾಗಿದ್ದಾನೆ. ಮೊಬೈಲ್ ಬೆಳಕನ್ನು ಆನೆ ಮುಂದೆ ಬಿಟ್ಟು ಕಿರಿಕ್ ಮಾಡಿ ಸೆಲ್ಪಿ ಫೋಟೋಗೆ ಮುಂದಾಗಿದ್ದಾನೆ. ಆ ವೇಳೆ ಆನೆ ಘರ್ಜಿಸಿ ದಾಳಿಗೆ ಮುಂದಾಗಿದೆ. ಎದ್ದು ಬಿದ್ದು ಓಡಿಬಂದ ಕೇರಳಿಗ ಸ್ಕೂಟರ್ ಕಿಕ್ ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಘಟನೆ ಕಂಡ ಕೇರಳ ಪ್ರವಾಸಿಗರು ನಿನಗೆ ತಲೆ ಕೆಟ್ಟಿದೆಯಾ ಆನೆ ಮುಂದೆ ಸೆಲ್ಪಿ ತೆಗೆಯೋಕೆ ಹೋಗಿದಿಯಲ್ಲ, ಬುದ್ದಿ ಇದಿಯಾ ನಿಂಗೆ ಅಂತ ಕ್ಯಾಕರಿಸಿ ಬೈದಿದ್ದಾರೆ. https://ainkannada.com/wind-and-rain-in-hassan-ksrtc-employee-dies-after-stepping-on-a-fallen-electric-wire/ ಅರಣ್ಯ ಇಲಾಖೆಯವರು ಅರಣ್ಯದೊಳಗೆ ಪ್ರಾಣಿಗಳ ವಾಹನ ನಿಲ್ಲಿಸಬೇಡಿ ಎಂದು ಅನೇಕ ಬಾರಿ ಎಚ್ಚರಿ ಹಾಗೂ ಅರಿವು ಮೂಡಿಸಿದರೂ ಕೂಡ ವಾಹನ ಸವಾರರು ತಮ್ಮ ಹುಚ್ಚಾಟ ಮಾತ್ರ ಬಿಡ್ತಾನೇ ಇಲ್ಲ ಅಚ್ಟಕ್ಕೂ ಪ್ರಾಣಿಗಳ ಮುಂದೆ ಹುಚ್ಚಾಟ…
ಹಾಸನ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ. ಝೊಮ್ಯಾಟೋ ಫುಡ್ ಡೆಲಿವರಿ ಬಾಯ್ ಸಾವನ್ನಪ್ಪಿದ್ದಾನೆ. ಹಾಸನ ಹೊರವಲಯದ ಬೂವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯಲ್ಲಿ ಈ ಅವಘಡ ನಡೆದಿದೆ. ಮುತ್ತತ್ತಿ ಗ್ರಾಮದ ಎಸ್.ಬಿ.ಎಂ. ಲೇಔಟ್ನ ನಿವಾಸಿ ಶರತ್(40) ಮೃತ ದುರ್ದೈವಿ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಫುಡ್ ಡೆಲಿವರಿ ಮಾಡಲು ಗೆಂಡೆಗಟ್ಟೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಶರತ್ ತಲೆಗೆ ತೀವ್ರ ಪೆಟ್ಟು ಬಿದ್ದು, ಶರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. https://ainkannada.com/wind-and-rain-in-hassan-ksrtc-employee-dies-after-stepping-on-a-fallen-electric-wire/ ಮತ್ತೊಬ್ಬ ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು..
ಹುಬ್ಬಳ್ಳಿ: ಲೋಕೋ ಪೈಲಟ್ಗಳು, ಸಹ ಲೋಕೋ ಪೈಲಟ್ಗಳು ಹಾಗೂ ರೈಲ್ವೆ ವ್ಯವಸ್ಥಾಪಕರಿಗೆ ಅವರ ವಿಶ್ರಾಂತಿ ಅವಧಿಯಲ್ಲಿ ವಾಸ್ತವ್ಯಕ್ಕೆ ರನ್ನಿಂಗ್ ರೂಮ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಟಿ.ವಿ. ವಿಷ್ಣುಭೂಷಣ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ನೈರುತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗದಲ್ಲಿ 9, ಬೆಂಗಳೂರು ವಿಭಾಗದಲ್ಲಿ 4, ಮೈಸೂರು ವಿಭಾಗದಲ್ಲಿ 9 ಸೇರಿದಂತೆ ಒಟ್ಟು 22 ರನ್ನಿಂಗ್ ರೂಮ್ಗಳು ಕಾರ್ಯ ನಿರ್ವಹಿಸುತ್ತಿವೆ. ರನ್ನಿಂಗ್ ರೂಮ್ನಲ್ಲಿ ಧ್ಯಾನ, ಯೋಗಾಸನ ಹಾಗೂ ಒಳಾಂಗಣ ಕ್ರೀಡೆಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ, ಗ್ರಂಥಾಲಯ ನಿರ್ಮಿಸಲಾಗಿದೆ. ಸುರಕ್ಷತೆಗಾಗಿ ಎಲ್ಲೆಡೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಬೆಡ್, ಶೌಚಾಲಯ, ಕುಡಿಯುವ ನೀರು, ಸ್ವಚ್ಛ ಹೊದಿಕೆ, ಸೊಳ್ಳೆ ಪರದೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. https://ainkannada.com/wind-and-rain-in-hassan-ksrtc-employee-dies-after-stepping-on-a-fallen-electric-wire/ ಲೋಕೋ ಪೈಲಟ್ಗಳಿಗೆ ಕೇವಲ ₹5ಗೆ ಊಟ, ಉಪಾಹಾರ ಒದಗಿಸಲಾಗುತ್ತಿದೆ. ಒಂದು ಬಾರಿ ಊಟಕ್ಕೆ ₹65 ವೆಚ್ಚವಾಗಲಿದ್ದು, ಅದರಲ್ಲಿ ₹60 ಅನ್ನು ರೈಲ್ವೆ ಇಲಾಖೆ ಭರಿಸಲಿದೆ. ಬೇರೆ ಕಡೆಯಿಂದ…
ಹಾಸನ: ಹಾಸನದಲ್ಲಿ ಭಾರೀ ಗಾಳೆಮಳೆಗೆ ಕೆಎಸ್ಆರ್ಟಿಸಿ ನೌಕರ ಬಲಿಯಾಗಿದ್ದಾರೆ. ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ತುಳಿದು ನಂದೀಶ್ (41) ಸಾವನ್ನಪ್ಪಿದ್ದಾರೆ. ಹಾಸನ ನಗರದ ಬಿಟಿ ಕೊಪ್ಪಲಿನಲ್ಲಿ ಈ ಘಟನೆ ನಡೆದಿದೆ. ನಂದೀಶ್ ಅವರು ವಾಕಿಂಗ್ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿಯಾದಂತಾಗಿದೆ. https://ainkannada.com/no-one-is-safe-in-the-state-except-muslims-arvind-bellad/ ಶನಿವಾರ ರಾತ್ರಿ ಸುರಿದ ಬಾರಿ ಮಳೆ ಗಾಳಿಗೆ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮುಂಜಾನೆ ವಾಕಿಂಗ್ ಮಾಡುವಾಗ, ನಂದೀಶ್ ತಂತಿ ತುಳಿದಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಲವರು ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಕಷ್ಟಪಟ್ಟು ಪ್ರಯತ್ನಿಸುತ್ತಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವ್ಯಾಯಾಮದ ಜೊತೆಗೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುವ ಕೆಲವು ಆಹಾರಗಳನ್ನು ಸಹ ಸೇವಿಸಲು ಪ್ರಾರಂಭಿಸುವುದು ಮುಖ್ಯ. ಮೊಸರಿನ ಸಹಾಯದಿಂದ ತೂಕ ಇಳಿಸಿಕೊಳ್ಳುವುದು ಮಾತ್ರವಲ್ಲದೆ ದೇಹದಲ್ಲಿ ಇರುವ ಇತರ ಅನೇಕ ಸಮಸ್ಯೆಗಳನ್ನು ಸಹ ಗುಣಪಡಿಸಬಹುದು. https://ainkannada.com/no-one-is-safe-in-the-state-except-muslims-arvind-bellad/ ಹಾಲಿನ ಉಪ ಉತ್ಪನ್ನ ಎಂದೇ ಕರೆಯಲಾಗುವ, ಮೊಸರಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ.ವಿಶೇಷವಾಗಿ ಮನೆಯಲ್ಲೇ ರೆಡಿ ಮಾಡಿದ ಮೊಸರಿನಲ್ಲಿ ಅಧಿಕ ಪ್ರಮಾಣದ ಪ್ರೋಟೀನ್, ಮೂಳೆಗಳ ಆರೋಗ್ಯ ವೃದ್ಧಿಗೆ ಬೇಕಾಗು ವಂತಹ ಕ್ಯಾಲ್ಸಿಯಂ ಅಂಶಗಳು, ವಿಟಮಿನ್ಸ್ ಗಳಾದ ವಿಟಮಿನ್ ಬಿ2, ವಿಟಮಿನ್ ಬಿ12 ಹಾಗೂ ಹೃದಯಕ್ಕೆ ಸಹಕಾರಿಯಾಗಿರುವ ಪೊಟ್ಯಾಶಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಕೂಡ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಮೊಸರಿನಲ್ಲಿ ಹಾಲಿನಲ್ಲಿ ಇರುವಷ್ಟೇ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ. ಆದರೆ…
ಚಿತ್ರದುರ್ಗ:- ಬೆಲೆ ಕುಸಿತದಿಂದ ಕಂಗಾಲಾದ ರೈತರು ಟೊಮೆಟೊ ಬೆಳೆಯನ್ನು ಕಟಾವು ಮಾಡದೇ ಹೊಲದಲ್ಲೇ ಬಿಟ್ಟಿದ್ದಾರೆ. https://ainkannada.com/no-one-is-safe-in-the-state-except-muslims-arvind-bellad/ ಕೋಟೆನಾಡು ಚಿತ್ರದುರ್ಗದಲ್ಲಿ ಟೊಮೆಟೊದಿಂದ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೆಟೊ ಬೆಲೆ ಕುಸಿತದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಾಲೂಕಿನ ಸಜ್ಜನಕೆರೆ ಗ್ರಾಮದ ರೈತರು ಯಾವುದೇ ಬೆಳೆ ಬೆಳೆದರೂ ಒಂದಲ್ಲ, ಒಂದು ರೀತಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಈ ಬಾರಿ ಟೊಮೆಟೊ ಬೆಳೆದು ಅಪಾರ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದರೂ ಕೂಡ ಟೊಮೆಟೊ ಬೆಲೆ ಕುಸಿತದಿಂದಾಗಿ ಮತ್ತೆ ಅನ್ನದಾತರು ಸಾಲ ಶೂಲಕ್ಕೆ ಸಿಲುಕುವಂತಾಗಿದೆ. 25 ಕೆ.ಜಿಯ ಟೊಮೆಟೊ ಬಾಕ್ಸ್ಗೆ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಸಾಗಾಣೆ ವೆಚ್ಚ ಹಾಗೂ ಕೂಲಿಯ ಹಣವೂ ರೈತರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಕಟಾವು ಮಾಡದೇ ಗಿಡದಲ್ಲೇ ಬಿಟ್ಟು ರೈತರು ಆಕ್ರೋಶ ಹೊರಹಾಕಿದ್ದಾರೆ
ಧಾರವಾಡ ; ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪ ಮಾಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ಧರಾಮಯ್ಯ ನವರ ಸರ್ಕಾರ ಮುಸ್ಲಿಮರಿಗೆ ಬಿಟ್ಟು ಬೇರೆ ಯಾರಿಗೂ ಸರ್ಕಾರನೇ ಇಲ್ಲ ಎಂಬಂತೆ ಮಾಡುತ್ತಿದ್ದುಈ ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲಾ ಎಂದು ಕಿಡಿ ಕಾರಿದರು. https://ainkannada.com/blackmailed-by-ex-lover-young-woman-hangs-herself-out-of-fear-for-her-dignity-what-was-in-the-death-note/ ಇವತ್ತು ಜನಿವಾರ ಕೇವಲ ಒಂದೇ ಸಮಾಜಕ್ಕೆ ಅಲ್ಲ, ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿದ್ದು. ಮಹಾಭಾರತದ ಕಾಲದಿಂದ ನಾವು ನೋಡಿದ್ದೇವೆ. ಬ್ರಾಹ್ಮಣ ಸಮಾಜ, ಜೈನ ಸಮಾಜದಲ್ಲಿ ಜನಿವಾರ ಹಾಕುವಂತ ಪದ್ಧತಿ ಇದೆ. ಲಿಂಗಾಯತರು ಶಿವ ದಾರ ಹಾಕ್ತಾರೆ. ಬೇರೆ ಬೇರೆ ಪದ್ಧತಿ ಸನಾತನ ಧರ್ಮದಲ್ಲಿ ಇವೆ ಇವತ್ತು ಮುಸ್ಲಿಮರಿಗೆ ಬುರ್ಕಾ ಹಾಕಲು ವಿರೋಧ ಇಲ್ಲಾ, ಹಿಜಾಬ್ ಹಾಕಲು ವಿರೋಧ ಇಲ್ಲಾ. ಆದರೆ…