Author: AIN Author

ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್ ಅಂತರದ ಜಯ ದಾಖಲಿಸಿತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮನೆಯಾಚೆ ಅಮೋಘ ಪ್ರದರ್ಶನ ಮುಂದುವರೆಸಿದೆ. ಪಂಜಾಬ್ ತಂಡವನ್ನು ಅವರದ್ದೇ ತವರಿನಲ್ಲಿ ಮಣಿಸುವ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಐದನೇ ಗೆಲುವು ದಾಖಲಿಸಿ ಪ್ಲೇ ಆಫ್‌ಗೆ ಹತ್ತಿರವಾಗುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸಂಘಟಿತ ಆಟ ಎದ್ದು ಕಂಡಿತು. https://ainkannada.com/what-may-be-delayed-for-this-piles-wedding-the-future-of-mondays-heap/ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ತವರಿನ ಸೋಲಿನ ಸೇಡನ್ನು ಬೆಂಗಳೂರು ತೀರಿಸಿಕೊಂಡಿತು. ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ…

Read More

ಸೂರ್ಯೋದಯ – 5:59 ಬೆ ಸೂರ್ಯಾಸ್ತ – 6:30ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಅಷ್ಟಮಿ ನಕ್ಷತ್ರ – ಉತ್ತರಾಷಾಢ ಯೋಗ – ಸಾಧ್ಯ ಕರಣ – ಬಾಲವ *ಮಳೆ ನಕ್ಷತ್ರ :ಅಶ್ವಿನಿ* ರಾಹು ಕಾಲ – 07:30 ದಿಂದ 09:00 ವರೆಗೆ ಯಮಗಂಡ – 10:30 ದಿಂದ 12:00 ವರೆಗೆ ಗುಳಿಕ ಕಾಲ – 01:30 ದಿಂದ 03:00 ವರೆಗೆ ಬ್ರಹ್ಮ ಮುಹೂರ್ತ – 4:23 ಬೆ. ದಿಂದ 5:11 ಬೆ. ವರೆಗೆ ಅಮೃತ ಕಾಲ – 5:59 ಬೆ. ದಿಂದ 7:38 ಬೆ. ವರೆಗೆ ಅಭಿಜಿತ್ ಮುಹುರ್ತ – 11:49 ಬೆ. ದಿಂದ 12:39 ಮ. ವರೆಗೆ ಮೇಷ ರಾಶಿ ಅಡುಗೆ ಗುತ್ತಿಗೆದಾರರಿಗೆ ಧನಲಾಭ, ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ…

Read More

ಬೆಂಗಳೂರು:- ಮಾಜಿ ಡಿಜಿ ಅಂಡ್ ಐಜಿಪಿ ಓಂ ಪ್ರಕಾಶ್ ರಾವ್ ಅವರ ಶವ ರಕ್ತಸಿಕ್ತವಾಗಿ ಪತ್ತೆಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಹೆಂಡ್ತಿ ಅಥವಾ ಮಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. https://ainkannada.com/ramesh-jarkiholi-at-aiholes-sons-wedding-great-conversation-with-raju-kage/ ಪೊಲೀಸ್ರು ಸ್ಥಳಕ್ಕೆ ಹೋದ್ರು ಹೆಂಡ್ತಿ ಬಾಗಿಲು ತೆಗೆದಿಲ್ಲ. ಇದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಮನೆಯೆಲ್ಲಾ ರಕ್ತ ಸಿಕ್ತ ವಾಗಿದೆ. ಸದ್ಯ ಪತ್ನಿಯನ್ನು ವಶಕ್ಕೆ ಪಡೆದಿರೋ ಹೆಚ್ ಎಸ್ ಆರ್ ಲೇಔಟ್ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಇನ್ನೂ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನೂ ಓಂ ಪ್ರಕಾಶ್ ಕೊಲೆ ಹಿನ್ನೆಲೆ ರಾಜ್ಯಾ ಪೊಲೀಸ್ ಮಹಾನಿರ್ದೇಶಕರು ದೌಡಾಯಿಸಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಲೋಕ್ ಮೋಹನ್ ಅವರು ಕೂಡ ಭೇಟಿ ನೀಡಿ ಪರಿಶೀಲಿಸಿದರು. ಇನ್ನೂ ಘಟನೆ ಬಗ್ಗೆ ಗೃಹ ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನೂ ಮೃತ ಓಂ ಪ್ರಕಾಶ್ ಗೆ ಒಟ್ಟು ಇಬ್ಬರು ಮಕ್ಕಳು.…

Read More

ಚಿಕ್ಕೋಡಿ : ಅಥಣಿ ಪಟ್ಟಣದಲ್ಲಿ ರಾವಸಾಹೇಬ ಐಹೊಳೆ ಮಗನ ಮದುವೆಯಲ್ಲಿ ರಮೇಶ ಜಾರಕಿಹೋಳಿ ಭಾಗಿಯಾಗಿ, ನವವಧುವರರಿಗೆ ಶುಭ ಹಾರೈಸಿದ್ದಾರೆ. ಇನ್ನೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಗೋಕಾಕ ರೆಬಲ್ ಶಾಸಕ ರಮೇಶ ಜಾರಕಿಹೋಳಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿದ್ದು, ಚರ್ಚೆ ಗ್ರಾಸವಾಗಿದೆ. ಇನ್ನೊಂದೆಡೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೋಳಿ ನಡುವೆ ಭಿನ್ನಾಭಿಪ್ರಾಯ ಜೋರಾಗೇ ನಡೆಯುತ್ತಲಿದ್ದು, ಇದೀಗ ಅಥಣಿಯ ಶಾಸಕ ರಮೇಶ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಸ್ಥಳೀಯರಲ್ಲಿ ಗುಸು ಗುಸು ಶುರುವಾಗಿದೆ.

Read More

ಬಾಳೆಹಣ್ಣು ವರ್ಷ ಪೂರ್ತಿ ಸಿಗುವ ಒಂದು ನೈಸರ್ಗಿಕ ಹಣ್ಣಾಗಿದೆ. ವಿಟಮಿನ್ ಸಿ ಸಹಿತ ಇದರಲ್ಲಿ ಖನಿಜಾಂಶಗಳು ಮತ್ತು ಪೌಷ್ಟಿಕ ಸತ್ವಗಳು ಸಾಕಷ್ಟು ಸಿಗುತ್ತವೆ. ಹಾಗಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿಯಿಂದ ಹಿಡಿದು ನಮ್ಮ ಸೌಂದರ್ಯದವರೆಗೂ ಬಾಳೆಹಣ್ಣಿನ ಪಾತ್ರ ಇರುತ್ತದೆ. ಎಷ್ಟೇ ಸುಸ್ತಾಗಿದ್ದರೂ ನಮ್ಮ ದೇಹಕ್ಕೆ ತಕ್ಷಣವೇ ಶಕ್ತಿ ಮತ್ತು ಚೈತನ್ಯ ಕೊಡುವಂತಹ ಸಾಮರ್ಥ್ಯ ಬಾಳೆಹಣ್ಣಿಗೆ ಇದೆ. ಇದರಲ್ಲಿ ನಾರಿನ ಅಂಶ ಅಧಿಕವಾಗಿದ್ದು ನಾವು ತಿನ್ನುವ ಆಹಾರ ನಮಗೆ ಮಲ ಬದ್ಧತೆ ಉಂಟು ಮಾಡದಂತೆ ಇದು ನೋಡಿಕೊಳ್ಳುತ್ತದೆ. https://ainkannada.com/punjab-gave-rcb-a-modest-target-will-bengaluru-give-a-revenge-punch/ ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ನೀವು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಕಾಣಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ. ನೀವು ಅಧಿಕ ತೂಕ ಹೊಂದಿದ್ದರೆ, ಬಾಳೆಹಣ್ಣುಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇದು ನರಮಂಡಲವನ್ನು ಬಲಪಡಿಸುತ್ತದೆ. ತಜ್ಞರ ಪ್ರಕಾರ, ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ ಪೋಷಕಾಂಶಗಳ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತದೆ.…

Read More

ಮುಲ್ಲನ್ಪುರ್​​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಆರ್ ಸಿಬಿ ಹಾಗೂ ಪಂಜಾಬ್ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. https://ainkannada.com/the-sinful-husband-who-killed-his-wife-and-came-to-the-station-with-a-gun/ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್​ ಕಿಂಗ್ಸ್ ಟೀಮ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿದೆ. ಆರ್​ಸಿಬಿ ಬೌಲರ್​ಗಳ ಅಬ್ಬರಕ್ಕೆ ಪಂಜಾಬ್​ ಬ್ಯಾಟರ್ಸ್​ ಆಡಲಾಗದೇ ಈ ಟಾರ್ಗೆಟ್ ನೀಡಿದ್ದಾರೆ. ಮುಲ್ಲನ್ಪುರ್​​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ಒರ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇವರ ನಿರ್ಧಾರ ಸರಿಯಾಗಿಯೇ ಇತ್ತು ಎಂದು ತಂಡ ಆರಂಭದ ನಂತರ ಗೊತ್ತಾಯಿತು. ಪಂಜಾಬ್ ಪರವಾಗಿ ಆರಂಭಿಕ ಬ್ಯಾಟರ್​ಗಳಾಗಿ ಕ್ರೀಸ್​ಗೆ ಬಂದ​ ಪ್ರಿಯಾಂಶ್ ಆರ್ಯ 22 ಹಾಗೂ ಪ್ರಭಸಿಮ್ರನ್ ಸಿಂಗ್ 33 ರನ್​ಗೆ ಔಟ್ ಆದರು. ಈ ಇಬ್ಬರು ಓಪನರ್ಸ್​ ಕೃನಾಲ್ ಪಾಂಡ್ಯ ಬೌಲಿಂಗ್​ನಲ್ಲಿ ಟಿಮ್​ ಡೇವಿಡ್​ಗೆ ಕ್ಯಾಚ್​ ಕೊಟ್ಟಿರುವುದು ಅಚ್ಚರಿಯಂತೆ ಕಾಣಿಸಿತು. ನಾಯಕ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಮೈದಾನಕ್ಕೆ…

Read More

ಗುವಾಹತಿ: ಪಾಪಿ ಪತಿಯೋರ್ವ ಪತ್ನಿಯ ಹತ್ಯೆಗೈದು ಆಕೆಯ ರುಂಡದ ಸಮೇತ ಪೊಲೀಸರ ಎದುರಿಗೆ ಶರಣಾಗಿರುವ ಘಟನೆ ಅಸ್ಸಾಂನ ಚಿರಾಂಗ್‌ನಲ್ಲಿ ವರದಿಯಾಗಿದೆ. ಕೌಟುಂಬಿಕ ಕಲಹದಿಂದಾಗಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿದ್ದು, ಆಕೆಯ ರುಂಡವನ್ನು ಹೊತ್ತು ಸೈಕಲ್‌ನಲ್ಲಿ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. https://ainkannada.com/harassment-by-wife-mother-in-law-hanged-engineer/ ಬಿತೀಶ್ ಹಜೋಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬಜಂತಿ ಎಂಬಾಕೆಯನ್ನು ಕೊಂದು ಬಳಿಕ ಆಕೆಯ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆಕೆಯ ತಲೆಯನ್ನು ತನ್ನ ಸೈಕಲ್ ನಲ್ಲಿ ಹೇರಿಕೊಂಡು ಬಲ್ಲಮ್‌ಗುರಿ ಹೊರಠಾಣೆ ತಲುಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.  ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಜಂತಿಯನ್ನು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು:- ಅಡುಗೆ ಪ್ರಿಯರಿಗೆ ಶಾಕಿಂಗ್​ ನ್ಯೂಸ್​ ಎದುರಾಗಿದ್ದು, ಬೆಂಗಳೂರಲ್ಲಿ ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ತೆಂಗಿನಕಾಯಿ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿದ್ದು, ತೆಂಗಿನಕಾಯಿ ಕೊಳ್ಳುವುದು ಜೇಬಿಗೆ ಭಾರವಾಗಿದೆ. https://ainkannada.com/harassment-by-wife-mother-in-law-hanged-engineer/ ದೈನಂದಿನ ಜೀವನದಲ್ಲಿ ತೆಂಗಿನಕಾಯಿ ಬಳಸುವ ಗ್ರಾಹಕರಿಗೆ ಭಾರೀ ಹೊಡೆತ ಬಿದ್ದಿದೆ. ಪ್ರತಿ ಕೆ.ಜಿ.ಗೆ ₹65 ರಿಂದ ₹85ರಂತೆ ತೆಂಗಿನಕಾಯಿ ಮಾರಾಟವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನಕಾಯಿ ಅತ್ಯಧಿಕ ದರ ತಲುಪಿದೆ. ಅಲ್ಲದೇ ಶತಕ ಬಾರಿಸುವ ಹಂತಕ್ಕೆ ಬಂದಿದೆ. ಈ ಬಾರಿ ಬೇಸಿಗೆಯಲ್ಲಿ ಕರ್ನಾಟಕದ ಎಳನೀರಿಗೆ ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ

Read More

ಲಕ್ನೋ: ಪತ್ನಿ ಮತ್ತು ಆಕೆಯ ಮನೆಯವರ ವಿರುದ್ಧ ಕಿರುಕುಳ ಆರೋಪ ಮಾಡಿ ಇಂಜಿನಿಯರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದೆ.   33 ವರ್ಷದ ಎಂಜಿನಿಯರ್ ಮೋಹಿತ್ ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದು, ಅದರಲ್ಲಿ ತಮ್ಮ ಅತ್ತೆ-ಮಾವ ಬೆದರಿಕೆಯೊಡ್ಡಿದ್ದಾರೆ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ‘ನನ್ನ ಮರಣದ ನಂತರವೂ ನನಗೆ ನ್ಯಾಯ ಸಿಗದಿದ್ದರೆ, ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ’ ಎಂದು ಹೇಳಿಕೊಂಡಿದ್ದಾರೆ. https://ainkannada.com/shooting-indian-student-dies-in-canada/ ಯಾದವ್ ಕಳೆದ ಗುರುವಾರ ಇಟಾವಾದ ಜಾಲಿ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಅವರು ಕೊಠಡಿಯಿಂದ ಹೊರಬರದೇ ಇದ್ದಾಗ ಸಿಬ್ಬಂದಿಗೆ ಅನುಮಾನ ಬಂದು ರೂಮ್‌ ಪರಿಶೀಲನೆ ನಡೆಸಿದಾಗ ಯಾದವ್‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.     ಔರೈಯಾ ಜಿಲ್ಲೆಯ ನಿವಾಸಿಯಾಗಿದ್ ಯಾದವ್, ಸಿಮೆಂಟ್ ಕಂಪನಿಯಲ್ಲಿ ಫೀಲ್ಡ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2023ರಲ್ಲಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಬಿಹಾರದಲ್ಲಿ…

Read More

ಬೆಂಗಳೂರು:- ಕೋರಮಂಗಲ, ಆಡುಗೋಡಿ ಸೇರಿ ಹಲವೆಡೆ ಭಾರೀ ಮಳೆ ಆಗಿದೆ. ಕೋರಮಂಗಲ, ಆಡುಗೋಡಿ, ಎಲೆಕ್ಟ್ರಾನ್ ಸಿಟಿ ಸುತ್ತಮುತ್ತ ಇಂದು ಮಳೆಯಾಗಿದ್ದು, ಬಿಸಿಲ ಬೇಗೆಗೆ ಕಾದಿದ್ದವರು ಫುಲ್ ಕೂಲ್ ಆಗಿದ್ದಾರೆ. https://ainkannada.com/kohli-is-no-1-on-instagram-too-how-many-crores-does-king-virat-earn-per-post/ ನಗರದ ಹಲವೆಡೆ ಇಂದು ಸಂಜೆ ಮುಂಗಾರು ಪೂರ್ವ ಮಳೆಯಾಗಿದ್ದು, ರಸ್ತೆಯಲ್ಲಿ ಸಿಲುಕಿದ್ದ ವಾಹನ ಸವಾರರು ಪರದಾಡುವ ದೃಶ್ಯ ಕಂಡು ಬಂದಿದೆ. ಕೆಲ ದಿನಗಳಿಂದ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ಬೆಂಗಳೂರಲ್ಲಿ ಮುಂದಿನ ಕೆಲವು ದಿನಗಳು ವರುಣನ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಏಪ್ರಿಲ್ 24, 25ರಂದು ಮತ್ತೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇನ್ನು ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಯ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read More