ಕೊಪ್ಪಳ : ಕೋರ್ಟ್ ಕಾರನ್ನು ಜಪ್ತಿ ಮಾಡುವ ಆದೇಶ ನೀಡಿದ ನಡುವೆಯೇ ಜಿಲ್ಲಾಧಿಕಾರಿ ತಮ್ಮ ಕಾರನ್ನು ಸರ್ವೀಸ್ಗೆ ಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೊಸಪೇಟೆ ಟೊಯೋಟಾ ಶೋ ರೂಂನಲ್ಲಿ ಕೊಪ್ಪಳ ಡಿಸಿ ಕಾರು ಪತ್ತೆಯಾಗಿದ್ದು, ಕೋರ್ಟ್ ಆದೇಶದ ನೀಡಿದ ಬಳಿಕ ಕಾರು ಸರ್ವಿಸ್ ಮಾಡಿಸುವ ಅಗತ್ಯ ಇದ್ಯಾ ಅಥವಾ ಜಪ್ತಿಯಿಂದ ತಪ್ಪಿಸಿಕೊಳ್ಳುವ ನೆಪವಾ ಎಂಬ ಪ್ರಶ್ನೆ ಮೂಡಿದೆ. https://ainkannada.com/the-case-of-students-being-removed-from-their-uniforms-during-the-cet-exam-this-is-what-the-law-minister-said/ ಏನಿದು ಪ್ರಕರಣ..? ಗಂಗಾವತಿ ನಗರಸಭೆ ಮಾಲೀಕರಿಗೆ ಮಾಹಿತಿ ನೀಡದೇ ಖಾಸಗಿ ಭೂಮಿಯಲ್ಲಿ ರಸ್ತೆ ನಿರ್ಮಿಸಿತ್ತು. ಈ ಸಂಬಂಧ ಹಿನ್ನೆಲೆ ಗಂಗಾವತಿ ಕಲ್ಮಠ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿದ್ದು, ಪರಿಹಾರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಜಿಲ್ಲಾಧಿಕಾರಿ ನಳಿನ್ ಅತುಲ್ ನ್ಯಾಯಾಲಯ ಸೂಚನೆಯನ್ನು ನಿರ್ಲಕ್ಷ್ಯ ಮಾಡಿದ್ದರು. ಈ ಸಂಬಂಧ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯವು ಡಿಸಿ ಕಾರ್ ಜಪ್ತಿಗೆ ಆದೇಶ ನೀಡಿತ್ತು. ಆದರೆ ಈ ಆದೇಸ ಬಂದ ಬಳಿಕ ಜಿಲ್ಲಾಧಿಕಾರಿ ಸರ್ಕಾರಿ ವಾಹನ ಸಂಖ್ಯೆ ಕೆಎ 01…
Author: AIN Author
IPL 2025 ರಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಅತ್ಯದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. https://ainkannada.com/tt-vehicle-collision-case-with-indigo-plane-here-is-the-clarification-given-by-kempegowda-airport-board/ 7 ಪಂದ್ಯಗಳಲ್ಲಿ 27 ಓವರ್ಗಳನ್ನು ಎಸೆದಿರುವ ಪ್ರಸಿದ್ಧ್ ಕೃಷ್ಣ ಒಟ್ಟು 201 ರನ್ ನೀಡುವ ಮೂಲಕ 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅದು ಕೂಡ ಪ್ರತಿ ಓವರ್ನಲ್ಲಿ ಕೇವಲ 7.44 ಎಕಾನಮಿಯಲ್ಲಿ ರನ್ ಬಿಟ್ಟು ಕೊಡುವ ಮೂಲಕ ಎಂಬುದು ವಿಶೇಷ. ಈ ಮೂಲಕ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಪ್ರಸಿದ್ಧ್ ಕೃಷ್ಣ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್. 7 ಪಂದ್ಯಗಳಲ್ಲಿ 28 ಓವರ್ಗಳನ್ನು ಎಸೆದಿರುವ ಕುಲ್ದೀಪ್ ಯಾದವ್ 6.25ರ ಎಕಾನಮಿಯಲ್ಲಿ 175 ರನ್ ನೀಡುವ ಮೂಲಕ ಒಟ್ಟು 12 ವಿಕೆಟ್ಗಳನ್ನು ಕಬಳಿಸಿದ್ದಾರೆ ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ನೂರ್ ಅಹ್ಮದ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 7 ಪಂದ್ಯಗಳಲ್ಲಿ 24 ಓವರ್ಗಳನ್ನು ಎಸೆದಿರುವ ನೂರ್ ಅಹ್ಮದ್ 171…
ಬೆಂಗಳೂರು:-ಇಂಡಿಗೋ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಏರ್ಪೋರ್ಟ್ ಮಂಡಳಿ ಸ್ಪಷ್ಟನೆ ಕೊಟ್ಟಿದೆ. https://ainkannada.com/crime-news-sinful-son-kills-father-who-was-strict-with-him/ ಇಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಕೂದಲಳತೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಕಳೆದ ಹಲವು ದಿನಗಳಿಂದ ಇಂಜಿನ ರಿಪೇರಿಯಿಂದ ಏರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ಇಂಡಿಗೋ ವಿಮಾನ ನಿಂತಿತ್ತು. ಆದರೆ ಚಾಲಕನ ಅಜಾಗರೂಕತೆಯಿಂದ ಪ್ಲೈಟ್ ನ ಮುಂಬಾಗಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಟಿಟಿ ವಾಹನವು, ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡುತ್ತಿತ್ತು. ಅದರಂತೆ ಸಿಬ್ಬಂದಿಯನ್ನ ಬಿಟ್ಟು ಬರ್ತಿದ್ದ ವೇಳೆ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ಬಗ್ಗೆ ಕೆಂಪೇಗೌಡ ಏರ್ಪೋರ್ಟ್ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಏ.18ರ ಮಧ್ಯಾಹ್ನ…
ಬೆಂಗಳೂರು:- ಸ್ಟ್ರಿಕ್ಟ್ ಮಾಡ್ತಿದ್ದರು ಅಂತಾ ತನ್ನ ತಂದೆಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗ ತಡರಾತ್ರಿ ನಡೆದಿದೆ. https://ainkannada.com/attention-people-are-you-swallowing-dolo-650-pills-for-fever-and-headache-do-you-know-how-dangerous-this-is/ ಮಗ ಬೋಲು ಅರಬ್ನಿಂದ ನಿವೃತ್ತ ಯೋಧ 47 ವರ್ಷದ ಇಸ್ಲಾಂ ಅರಬ್ ರನ್ನ ಕೊಲೆ ಮಾಡಲಾಗಿದೆ. ಸದ್ಯ ವಿವೇಕನಗರ ಪೊಲೀಸರಿಂದ ಆರೋಪಿ ಬೋಲು ಅರಬ್ನನ್ನು ಬಂಧಿಸಲಾಗಿದೆ. ಬೋಲು ಅರಬ್, ಬಿಕಾಂ ಮೊದಲನೇ ವರ್ಷದಲ್ಲಿ ಓದುತ್ತಿದ್ದಾನೆ. ತಂದೆ ಇಸ್ಲಾಂ ಅರಬ್ ಮನೆಯಲ್ಲಿ ಕಟ್ಟುನಿಟ್ಟಾಗಿದ್ದರು. ಮಗನಿಗೆ ಹೆಚ್ಚಾಗಿ ಹಣ ಖರ್ಚು ಮಾಡಲು ಬಿಡುತ್ತಿರಲಿಲ್ಲ. ಕಾಲೇಜಿನಿಂದ ತಡವಾಗಿ ಬಂದರೆ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ತಂದೆ ಮೇಲೆ ಪುತ್ರ ಬೇಸರಗೊಂಡಿದ್ದ. ಆದರೆ ತಂದೆ ಮಗನನ್ನ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆತನನ್ನು ದೊಡ್ಡ ಆರ್ಮಿ ಅಧಿಕಾರಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಮೊದಲಿಗೆ ಯಾರೋ ಐದಾರು ಜನ ಬಂದು ಹೊಡೆದು ಹೋದರು ಎಂದಿದ್ದ ಪುತ್ರ, ಅನುಮಾನಗೊಂಡ ಪೊಲೀಸರು ಮನೆ ಬಳಿಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಯಾರು ಮನೆಗೆ ಬಂದಿರುವ ದೃಶ್ಯ…
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ.. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ಸೂಚಿಸಿದರು.. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟು ಕೊಂಡಿದ್ದಾರೆ.. ಕೊಂಚ ಶೀತ ನೆಗಡಿ ತಲೆನೋವು ಜ್ವರ ಕಾಣಿಸಿಕೊಂಡರು ಸಹ ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೂಲಕ ರೋಗ ಗುಣಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.. https://ainkannada.com/janiwar-controversy-i-condemn-such-an-incident-g-parameshwara/ ಆದರೆ ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವನೆ ಮಾಡುವುದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರತೀಯರು ಸ್ವಲ್ಪ ತಲೆನೋವಾಗಲಿ, ಜ್ವರವಾಗಲಿ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ನಿಖರವಾದ ಪ್ರಮಾಣದ ಬಗ್ಗೆ ತಿಳಿದಿಲ್ಲ. ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್…
ಮಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಯ ಸಿಕ್ಕಾಗೆಲ್ಲಾ ಸಹ ದೇಗುಲಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. https://ainkannada.com/caste-census-report-no-hasty-decision-work-to-provide-justice-after-knowing-the-truth-dcm-dk/ ಹೌದು, ಕಳೆದ ವಾರವಷ್ಟೇ ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಪಡೆದಿದ್ದ ಡಿಸಿಎಂ ಇಂದು ಬೆಳ್ಳಂಬೆಳಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದಿದ್ದಾರೆ. ಧರ್ಮಸ್ಥಳದಲ್ಲಿ ಒಂದು ಸುತ್ತು ದೇವಸ್ಥಾನ ಪ್ರದಕ್ಷಿಣೆ ಹಾಕಿ, ಮಂಜುನಾಥಸ್ವಾಮಿಯ ದರ್ಶನ ಪಡೆದು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಂಜುನಾಥನ ದರ್ಶನದ ಬಳಿಕ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರರನ್ನ ಭೇಟಿಯಾಗಿದ್ದು, ಅವರ ಕಾಲಿಗೆ ಬಿದ್ದು ಆಶೀರ್ವಾದ ಸಹ ಪಡೆದಿದ್ದಾರೆ. ಬಳಿಕ ಕೆಲ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು :- ಕರ್ನಾಟಕದಲ್ಲಿ ಜನಿವಾರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/hat-trick-defeat-for-rr-royals-surrender-to-lucknow-super-game-thrilling-2-run-win/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನಗೆ ಹೆಚ್ಚು ಮಾಹಿತಿ ಇಲ್ಲ. ನಾನೂ ಕೂಡ ಖಂಡಿಸಿದ್ದೇನೆ. ಯಾಕೆ ಆ ರೀತಿ ಮಾಡಿದ್ರು, ಯಾರ್ ಸೂಚನೆ ಕೊಟ್ರು ಅನ್ನೋದು ಗೊತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಯಾಕೆ ತೆಗಿಸಿದ್ರು, ಏನ್ ಕಾರಣನೋ ಗೊತ್ತಿಲ್ಲ ಎಂದರು. ಜಾತಿಜನಗಣತಿ ವರದಿ ಜಾರಿಗೆ ವಿರೋಧ ವಿಚಾರವಾಗಿ ಮಾತನಾಡಿ, ಅವ್ರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಕ್ಯಾಬಿನೆಟ್ ತೀರ್ಮಾನ ಮಾಡುತ್ತೆ. ಜಟಿಲ ಅಂಥಾ ನನಗೇನೂ ಕಾಣ್ತಿಲ್ಲ. ಕೆಲವು ಸಚಿವರು ಕೇಳಿದ್ದಾರೆ, ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ. ಮೇ 2 ಕ್ಕೆ ಸಭೆ ಕರೆದಿದ್ದಾರೆ ಎಂದರು. ರಿಕ್ಕಿ ರೈ ಮೇಲೆ ಶೂಡೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾರ್ ಮಾಡಿದ್ರೂ ಅಂತಾ ತನಿಖೆ ಮಾಡ್ತಿದ್ದಾರೆ. ಸಿಕ್ಕಿದ್ಮೇಲೆ ಗೊತ್ತಾಗುತ್ತೆ. ಇಂಥದ್ರಲ್ಲಿ ಊಹಾಪೋಹ ಮಾಡೋಕೆ ಆಗಲ್ಲ. ಗುಂಡು ಹಾರಿಸಿದವರು ಸಿಕ್ಕಿದ ನಂತ್ರ…
ಹುಬ್ಬಳ್ಳಿ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಬಿಜೆಪಿಯವರು ಹಿಡಿದುಕೊಂಡಿರುವ ಅಸ್ತ್ರವಾಗಿಸಿಕೊಂಡು, ಕೇವಲ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡತಾ ಇದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಜೆಗಳು ಅಂತಾ ಒಪ್ಪಿಕೊಂಡ ಮೇಲೆ ನ್ಯಾಯಯುತ ಹಕ್ಕನ್ನ ಕೊಡಬೇಕು. ಈ ಬಗ್ಗೆ ಯಾಕೆ ಅಸೂಯೆ ಇದರಲ್ಲಿ ತಮ್ಮ ಉದ್ದೇಶ ಏನು..? ರಾಷ್ಟ್ರದಲ್ಲಿ ದೇಶ ರಾಷ್ಟ್ರ ಕಟ್ಟುವುದರಲ್ಲಿ ಒಂದು ಎಲ್ಲರಿಗಿಂತ ಮುಂದೆ ಇದ್ದಾರೆ. ಅಲ್ಪ ಸಂಖ್ಯಾತರಿಗೆ ಏನಾದರೂ ಸೌಲಭ್ಯ ಕೊಟ್ಟರೆ ಟೀಕೆ ಟಿಪ್ಪಣಿ ಆಗಿದ್ದು ನೀವು ಟಿಪ್ಪು ಸುಲ್ತಾನ್ರ ಟೊಪ್ಪಿಗೆ ಹಾಕಿಕೊಂಡು ತಿರುಗಾಡುತ್ತಿರೆ. ಇದು ನಿಮಗೆ ಬಹಳ ಯೋಗ್ಯ ಅನ್ನಿಸುತ್ತಾ ಇದ್ದು ಬಿಜೆಪಿಯವರೆಗೆ ಬೇಕಾದಾಗ ಇಪ್ತಿಯಾರ್ ಕೂಟ ಮಾಡುತ್ತಾರೆ ಎಂದದರು. ಇನ್ನೂ ಜಾತಿ ಗಣತಿ ವರದಿ ಕುರಿತು ಮೇ.2ರಂದು ಇನ್ನೊಂದು ಸಲ ಸಚಿವ ಸಂಪುಟ ಸಭೆ ಕರೆದ ವಿಚಾರವಾಗಿ ಮಾತನಾಡಿ, ಜಾತಿ ಗಣತಿ ವರದಿ ಸಂಪೂರ್ಣ ಅಧ್ಯಯನ ಆಗಿರಲಿಲ್ಲ.…
ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 2 ರನ್ ಗಳ ರೋಚಕ ಗೆಲುವು ಸಾಧಿಸಿದೆ. https://ainkannada.com/teenage-infatuation-a-premature-baby-thrown-into-the-trash/ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಲಕ್ನೋ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್ಗಳಲ್ಲಿ 5 ವಿಕೆಟಿ ನಷ್ಟಕ್ಕೆ 178 ರನ್ ಹೊಡೆದು ಸೋಲನ್ನು ಒಪ್ಪಿಕೊಂಡಿತ್ತು. ಕೊನೆಯ ಓವರ್ವರೆಗೂ ಗೆಲುವು ರಾಜಸ್ಥಾನ ಕಡೆಗೆ ವಾಲಿತ್ತು. ಕೊನೆಯ 6 ಎಸೆತಗಳಲ್ಲಿ 9 ರನ್ ಬೇಕಿತ್ತು.ಕ್ರೀಸ್ನಲ್ಲಿ ಹೆಟ್ಮೇಯರ್ ಮತ್ತು ಧ್ರುವ್ ಜುರೇಲ್ ಇದ್ದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್ ಮತ್ತು 2 ರನ್ ತೆಗೆದ ಹೆಟ್ಮೇಯರ್ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗುವ ಮೂಲಕ ಪಂದ್ಯ ರೋಚಕ ಘಟ್ಟದತ್ತ ತಿರುಗಿತು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5 ಎಸೆತದಲ್ಲಿ ದುಬೆ ಸಿಕ್ಸ್ ಸಿಡಿಸಲು ಹೋದರು. ಆದರೆ ಮಿಲ್ಲರ್ ಕ್ಯಾಚ್ ಡ್ರಾಪ್ ಮಾಡಿದ ಕಾರಣ 2 ರನ್ ಓಡಿದರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು.…
ಬೆಂಗಳೂರು:- ಹದಿಹರೆಯದ ವಯಸ್ಸಿನಲ್ಲಿ ಅಪ್ರಾಪ್ತ ಇಬ್ಬರು ಪ್ರೀತಿಯಲ್ಲಿ ಬಿದ್ದು ಪುಟ್ಟ ಕಂದಮ್ಮನನ್ನೇ ಬಲಿಕೊಟ್ಟಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಅಚ್ಚರಿ ಏನೆಂದರೆ ಸ್ನೇಹಿತರೇ ಸೇರಿಕೊಂಡು ಡೆಲಿವರಿ ಮಾಡಿರುವ ಬಗ್ಗೆ ಗೊತ್ತಾಗಿದೆ. https://ainkannada.com/former-municipal-council-member-brutally-murdered-in-karwar/ 2ನೇ ತಾರೀಖು ಮಂಗಳವಾರ ರಾತ್ರಿ ಈ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಲಹಂಕದ ಗಾಂಧಿನಗರ ಏರಿಯಾದಲ್ಲಿ ಸೈಕಲ್ ನಲ್ಲಿ ಬಂದಿದ್ದ ವ್ಯಕ್ತಿ ಕಸದ ರಾಶಿಯಲ್ಲಿ ಕವರ್ ಬಿಸಾಕಿ ಹೋಗಿದ್ದ. ಮನೆ ಹತ್ತಿರದಲ್ಲೇ ವಾಸವಿರುವ ವೃದ್ಧನ ಕೈಯಲ್ಲಿ ಈ ಕಸ ಬಿಸಾಡಿ ಎಂದು ಯುವತಿ ಶಿಶುವಿದ್ದ ಕವರ್ ಅನ್ನು ಕೊಟ್ಟಿದ್ದಾಳೆ. ಆಗ ವೃದ್ಧ ಅದರ ಅರಿವಿಲ್ಲದೇ ಆ ಕವರ್ ಅನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಹೋಗಿದ್ದಾರೆ. ಬಳಿಕ ಪೌರಕಾರ್ಮಿಕರು ಬೆಳಗ್ಗೆ ಕಸ ಸ್ವಚ್ಛ ಮಾಡುವಾಗ ಶಿಶುವಿನ ಶವ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಪೊಲೀಸರಿಂದ ತನಿಖೆ ಶುರು ಮಾಡಿ ಸುತ್ತಮುತ್ತಲ ಸಿಸಿಟಿವಿ ಸರ್ಚ್…