ತುಳಸಿ ಸಸ್ಯವನ್ನು ಪ್ರತಿ ಹಿಂದೂ ಮನೆಯ ವಿಶಿಷ್ಟ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ, ಪ್ರತಿಯೊಂದು ಹಿಂದೂ ಧರ್ಮೀಯರ ಮನೆಯಲ್ಲೂ ತುಳಸಿ ಗಿಡವನ್ನು ನೆಡುವ ಸಂಪ್ರದಾಯವಿದೆ. ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಪೂಜ್ಯ, ಪವಿತ್ರ ಮತ್ತು ದೇವತೆ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ, ಮನೆಯಲ್ಲಿ ತುಳಸಿ ಇದ್ದರೆ, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಈ ವಿಷಯಗಳನ್ನು ನೋಡಿಕೊಂಡರೆ, ಎಲ್ಲಾ ದೇವತೆಗಳ ವಿಶೇಷ ಅನುಗ್ರಹವು ನಮ್ಮ ಮನೆಯ ಮೇಲಿರುತ್ತದೆ. https://ainkannada.com/midnight-firing-on-former-don-muthappa-rais-younger-son-ricky-rais-condition-critical/ ಇನ್ನೂ ಮಧುಮೇಹವನ್ನೂ ಗುಣ ಪಡಿಸಲು ವಿಜ್ಞಾನಿಗಳು ಇಲ್ಲಿಯವರೆಗೂ ಯಾವುದೇ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ. ಹೀಗಿರುವಾಗ, ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕು. ಏನು ತಿನ್ನಬಹುದು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ನೀವು ಯಾವಾಗಲೂ ಜಾಗರೂಕರಾಗಿರಬೇಕು. ಆಯುರ್ವೇದದಲ್ಲಿ ತುಳಸಿ ಸಸ್ಯವನ್ನು ಔಷಧೀಯ ಸಸ್ಯಗಳ ರಾಣಿ ಎಂದು ಕರೆಯಲಾಗುತ್ತದೆ. ತುಳಸಿಯಲ್ಲಿ ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಇವುಗಳನ್ನು ಸೇವಿಸುವುದರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿ ಶಕ್ತಿಯ…
Author: AIN Author
ಬೆಂಗಳೂರು/ ಬಿಡದಿ:- ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ನಲ್ಲಿ ದುಷ್ಕರ್ಮಿಗಳು ಫೈರಿಂಗ್ ನಡೆಸಿರುವ ಘಟನೆ ಬಿಡದಿಯ ಮುತ್ತಪ್ಪ ರೈ ನಿವಾಸದ ಮುಂದೆಯೇ ಜರುಗಿದೆ. https://ainkannada.com/is-it-a-threat-from-lizards-if-so-grow-these-types-of-plants-at-home-and-there-wont-be-any/ ತಡರಾತ್ರಿ ೧೨.೫೦ ಸುಮಾರಿಗೆ ಈ ಘಟನೆ ಜರುಗಿದೆ. ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…
ಯಾವುದೇ ನೇರ ಅಪಾಯವಿಲ್ಲದಿದ್ದರೂ ಸಹ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಕಾಣಿಸಿಕೊಂಡರೆ ಅನೇಕರು ಭಯಪಡುತ್ತಾರೆ. ಅವುಗಳನ್ನು ಓಡಿಸಲು ವಿವಿಧ ರೀತಿಯ ಸ್ಪ್ರೇಗಳನ್ನು ಬಳಸಲಾಗುತ್ತದೆ. ಆದರೆ, ಇವುಗಳ ಬಳಕೆಯಿಂದ ಮನೆಯೊಳಗೆ ಆಂತರಿಕ ಮಾಲಿನ್ಯ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳು ಮತ್ತು ವೃದ್ಧರಿರುವ ಮನೆಯಲ್ಲಿ ಅವುಗಳನ್ನು ಬಳಸದಿರುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ https://ainkannada.com/snakes-and-dogs-are-not-neglected-in-your-dream-learn-first/ ಬೇಸಿಗೆ ಆರಂಭವಾಗಿ ಮಳೆಗಾಲ ಮುಗಿಯುವವರೆಗೂ ಹಲ್ಲಿಗಳು ಹೆಚ್ಚಾಗಿ ಮನೆಗಳಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಗೋಡೆ, ಗೋಡೆಯ ಸಂಧಿಗಳಿಂದ ಇಣುಕಿ ಕೆಳಗಿಳಿದು ನೆಲದ ಮೇಲೆ ಸರಿದಾಡುತ್ತವೆ. ಇದು ನಿಮಗೂ ಸಮಸ್ಯೆಯಾಗಿ ಕಾಡುತ್ತಿರಬಹುದು… ಹೆಚ್ಚಾಗಿ ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಈ ಗಿಡಗಳನ್ನು ಮನೆಯಲ್ಲಿ ಬೆಳೆಸಿ. ಹಲ್ಲಿಗಳನ್ನು ತೊಡೆದುಹಾಕಲು ಇಂತಹ ಮನೆಮದ್ದುಗಳು ಪರಿಣಾಮಕಾರಿಯಾಗಿದ್ದು, ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ. ಮನೆಯ ಆವರಣದಲ್ಲಿ ಬೇವಿನ ಮರವನ್ನು ನೆಟ್ಟರೆ ಹಲ್ಲಿಗಳು ಮನೆಗೆ ಬರುವುದನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದರ ಕಟುವಾದ ವಾಸನೆಯು ಹಲ್ಲಿಗಳನ್ನು…
ನಾವು ನಿದ್ದೆಗೆ ಜಾರಿದಾಗ ಕೆಲವೊಮ್ಮೆ ಕೆಲವೊಂದು ದೃಶ್ಯಗಳು ಕಣ್ಣಿಗೆ ಕಟ್ಟುತ್ತದೆ. ಕೆಲವೊಮ್ಮೆ ಈ ಘಟನೆಗಳು ಭವಿಷ್ಯದಲ್ಲಿ ನಿಜವಾದರೆ, ಇನ್ನು ಕೆಲವು ಕನಸಾಗಿಯೇ ಉಳಿದು ಬಿಡುತ್ತದೆ. ನಿದ್ದೆಯಿಂದ ಎದ್ದಾಕ್ಷಣ ನಾವು ಕಂಡ ಕನಸುಗಳ ಬಗ್ಗೆ ಯೋಚಿಸಬೇಕು. ಆ ಕನಸು ನಮಗೆ ಏನನ್ನು ಸೂಚಿಸುತ್ತದೆ ಎಂಬೂದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ಕನಸುಗಳು ತಿಳಿಸುತ್ತದೆ ಎಂಬ ನಂಬಿಕೆಯಿದೆ. https://ainkannada.com/rainfall-in-bellary-power-poles-huge-trees/ ನಿಮ್ಮ ಮುಂದೆ ಅಥವಾ ನಿಮ್ಮ ಕನಸಿನಲ್ಲಿ ನಾಯಿ, ಹಾವು ಅಥವಾ ಕಾಗೆ ಬಂದು ಕೆಲ ಸೂಚನೆ ಕೊಡ್ತಾವಂತೆ. ಇವು ಮುಂಬರುವ ಅಪಾಯದ ಬಗ್ಗೆ ಹೇಗೆ ಎಚ್ಚರಿಸುತ್ತವೆ ಗೊತ್ತಾ? ಕೆಟ್ಟ ಸಮಯಗಳು ಹತ್ತಿರ ಬಂದಾಗ, ಪ್ರಾಣಿಗಳು, ಪಕ್ಷಿಗಳು ಮತ್ತು ಕನಸುಗಳ ಮೂಲಕ ನಮಗೆ ಎಚ್ಚರಿಕೆಗಳು ಕೊಡುತ್ತೆ ಎನ್ನಲಾಗುತ್ತೆ. ಖ್ಯಾತ ಜ್ಯೋತಿಷಿ ಆಚಾರ್ಯ ಸಂತೋಷ್ ಕುಮಾರ್ ಚೌಬೆ ಅವರ ಪ್ರಕಾರ, ನಾಯಿಗಳು, ಹಾವುಗಳು ಮತ್ತು ಕಾಗೆಗಳಂತಹ ಪ್ರಾಣಿಗಳು ಮತ್ತು ಪಕ್ಷಿಗಳು ಕೆಟ್ಟ ಶಕುನಗಳನ್ನು ನೀಡುತ್ತವಂತೆ. ಈ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸಮಯಕ್ಕೆ ತಕ್ಕ ಕ್ರಮಗಳನ್ನು…
ಬಳ್ಳಾರಿ:- ನಗರದಲ್ಲಿ ಶುಕ್ರವಾರ ಬಿರುಗಾಳಿ ಸಮೇತ ಜೋರಾಗಿ ಮಳೆ ಸುರಿದಿದ್ದು, ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ನಗರಕ್ಕೆ ಕೊಂಚ ಮಟ್ಟಿಗೆ ತಂಪೆರೆದಿದೆ. https://ainkannada.com/rcb-is-a-huge-disaster-in-the-home-yard-punjab-who-won-bharjari-in-bangalore-and-won-the-2nd-place/ ನಿನ್ನೆ ಬೆಳಗ್ಗೆಯಿಂದ ಬಿಸಿಲಿನ ತಾಪಮಾನ ಜಾಸ್ತಿಯಿದ್ದು, ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಧ್ಯಾಹ್ನ 3.45 ಗಂಟೆಗೆ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿದು, ಬಿಸಿಲಿಗೆ ಕಾದು ಕೆಂಡವಾಗಿದ್ದ ನಗರವನ್ನು ತಂಪಾಗಿಸಿತು. ಇನ್ನೂ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿ ಆಗಿದೆ. ಬಳ್ಳಾರಿಯ ಹಲವೆಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ನಗರದ ಹೊಸಪೇಟೆ ಹಾಗೂ ಸಿರಗುಪ್ಪ ರಸ್ತೆಯಲ್ಲಿ ಮರಗಳು ಬಿದ್ದಿದ್ದರೆ ಬೆಂಗಳೂರು ರಸ್ತೆಯಲ್ಲಿ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಆಗಿತ್ತು. ಬಳಿಕ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ತವರಲ್ಲೇ ಮೂರು ಪಂದ್ಯಗಳನ್ನು ಸೋತಿದೆ. https://ainkannada.com/this-pile-will-discuss-the-things-that-need-not-be-discussed-in-the-family-saturdays-rashi-future-19-april-2025/ ಮಳೆಯಿಂದ 14 ಓವರ್ಗಳಿಗೆ ಕಡಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 9 ವಿಕೆಟ್ ಕಳೆದುಕೊಂಡು 95ರನ್ಗಳಿಸಿತ್ತು. 96ರನ್ಗಳ ಗುರಿಯನ್ನ ಪಂಜಾಬ್ ಕಿಂಗ್ಸ್ 13 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲಯವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಗೆಲುವು ಪಡೆದು 2ನೇ ಸ್ಥಾನಕ್ಕೇರಿದರು. 96 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೂಡ 96 ರನ್ಗಳ ಅಲ್ಪಮೊತ್ತದ ಗುರಿಯನ್ನ ಸುಲಭವಾಗಿ ಬೆನ್ನಟ್ಟಲಿಲ್ಲ. 12. ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕಷ್ಟಪಟ್ಟು ಗೆಲುವು ಸಾಧಿಸಿತು. ಆರಂಭಿಕರಾದ ಪ್ರಭಸಿಮ್ರನ್ ಸಿಂಗ್ 11 ಎಸೆತಗಳಲ್ಲಿ 16 ಭುವನೇಶ್ವರ್ ಬೌಲಿಂಗ್ನಲ್ಲಿ ಟಿಮ್ ಡೇವಿಡ್ಗೆ ಕ್ಯಾಚ್ ನೀಡಿದರು. ನಂತರ 4ನೇ ಓವರ್ನಲ್ಲಿ ಪ್ರಿಯಾಂಶ್ ಆರ್ಯ 9 ಎಸೆತಗಳಲ್ಲಿ 13 ರನ್ಗಳಿಸಿ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.…
ಸೂರ್ಯೋದಯ – 6:01 ಬೆ. ಸೂರ್ಯಾಸ್ತ – 6:29 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಷಷ್ಠಿ ನಕ್ಷತ್ರ – ಮೂಲ ಯೋಗ – ಶಿವ ಕರಣ – ವಣಿಜ ರಾಹು ಕಾಲ – 09:00 ದಿಂದ 10:30 ವರೆಗೆ ಯಮಗಂಡ – 01:30 ದಿಂದ 03:00 ವರೆಗೆ ಗುಳಿಕ ಕಾಲ – 06:00 ದಿಂದ 07:30 ವರೆಗೆ ಬ್ರಹ್ಮ ಮುಹೂರ್ತ – 4:25 ಬೆ. ದಿಂದ 5:13 ಬೆ. ವರೆಗೆ ಅಮೃತ ಕಾಲ – ಇಲ್ಲ ಅಭಿಜಿತ್ ಮುಹುರ್ತ – 11:50 ಬೆ. ದಿಂದ 12:40 ಮ. ವರೆಗೆ ಮೇಷ ರಾಶಿ: ಬೆಳೆ ಕಾಳು ವ್ಯಾಪಾರಸ್ಥರಿಗೆ ಅಧಿಕ ಲಾಭ, ಕುಟುಂಬದ ಸಮಸ್ಯೆಗಳು ಒಮ್ಮತ ಮನಸ್ಸಿನಿಂದ ಬಗೆಹರಿಯಲಿವೆ, ಜವಾಬ್ದಾರಿಯ ಹುದ್ದೆ ಸಿಗಲಿದೆ, ನಟ ನಟಿಯರಿಗೆ ಪೋಷಕ ನಟ ನಟಿ ಕಲಾವಿದರಿಗೆ…
ಬೆಳಗಾವಿ: ಪಾರ್ಟಿ ಮಾಡಲು ಕುರಿ ಕೊಡದ ಮೂರು ಜನ ಕುರಿಗಾಯಿಗಳ ಮೇಲೆ ಏಳು ಜನ ದುಷ್ಕರ್ಮಿಗಳಿಂದ ಹಲ್ಲೆಗೈದು ಪರಾರಿಯಾಗಿರುವ ಘಟನೆ ನಡೆದಿದೆ. https://ainkannada.com/case-filed-on-january-11-kea-takes-action-dc-instructed-to-submit-a-report/ ಬೆಳಗಾವಿ ಹೊರವಲಯದ ಮಜ್ಜಗಾವಿಯಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಬೀಡುಬಿಟ್ಟಿದ್ದ ಕುರಿ ಕಳ್ಳತನಕ್ಕೆ ಬಂದಿದ್ದ ಖದೀಮರ ಗ್ಯಾಂಗ್ ಪಾರ್ಟಿ ಮಾಡಲು ಕುರಿ ಕೊಡಿ ಎಂದು ಕುರಿಗಾಯಿಗಳಿಗೆ ಧಮ್ಕಿ ಹಾಕಿದ್ದಾರೆ. ಕುರಿ ಕೊಡದೇ ಇದ್ದಾಗ ಏಕಾಏಕಿ ಹಲ್ಲೆಗೈದು ಪರಾರಿಯಾಗಿದ್ದಾರೆ. ಗಾಯಾಳು ಕುರಿಗಾರರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಲಿಸಲಾಗಿದೆ. ಆನಂದ ಕಲ್ಲೊಳ್ಳರ್, ಯಲ್ಲಪ್ಪ ಕಲ್ಲೊಳ್ಕರ್, ಗಂಗಾರಾಮ್ ಬೆಳಗಾಂವಕರ್ ಅವರ ಕಣ್ಣು, ಕೈ, ಹೊಟ್ಟೆ, ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು:- ಜನಿವಾರ ತೆಗೆಸಿ ಸಿಇಟಿ ಪರೀಕ್ಷೆಗೆ ಅವಕಾಶ ನೀಡಿದ ಎರಡೂ ಪ್ರತ್ಯೇಕ ಪ್ರಕರಣಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. https://ainkannada.com/mental-depression-woman-commits-suicide-by-jumping-from-fifth-floor-after-killing-two-children/ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಪತ್ರ ಬರೆದು, ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ. ವಸ್ತ್ರ ಸಂಹಿತೆಯಲ್ಲಿ ಎಲ್ಲಿಯೂ ಜನಿವಾರ ತೆಗೆಸಬೇಕೆಂದು ಹೇಳಿರಲಿಲ್ಲ. ಆದರೂ ಎರಡು ಕೇಂದ್ರಗಳಲ್ಲಿ ಈ ರೀತಿಯ ಅಧಿಕ ಪ್ರಸಂಗ ಮಾಡಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಹೈದರಾಬಾದ್:-ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ಜರುಗಿದೆ. ಮೃತರನ್ನು ಆಶಿಶ್ ರೆಡ್ಡಿ, ಅರ್ಷಿತ್ ರೆಡ್ಡಿ, 33 ವರ್ಷದ ತೇಜಸ್ವಿನಿ ಎಂದು ಗುರುತಿಸಲಾಗಿದೆ. ಮೊದಲಿಗೆ ಮಹಿಳೆಯು, ತೆಂಗಿನಕಾಯಿ ತುರಿಯುವ ಮಣೆಯಿಂದ ಮಕ್ಕಳಿಗೆ ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. https://ainkannada.com/cet-exam-rejection-for-being-held-on-january-this-is-a-most-despicable-act-ta-sharavana-outraged 7 ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ನಲ್ಲಿ ಬರೆದಿದ್ದಾರೆ.