Author: AIN Author

ಬೆಂಗಳೂರು/ಶಿವಮೊಗ್ಗ:- ಜನಿವಾರ ಹಾಕಿ ಬಂದಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಘಟನೆಗೆ ಸಂಬಂಧಿಸಿದಂತೆ ಪರಿಷತ್ ಶಾಸಕ ಟಿಎ ಶರವಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/tipper-collides-with-bike-cook-bhatt-dies-on-the-spot/ ಈ ಸಂಬಂಧ ಮಾತನಾಡಿದ ಟಿಎ ಶರವಣ, ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ಧರಿಸಿದ್ದ ಕಾರಣಕ್ಕೆ ಸಿ ಇ ಟಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವುದು ಅತ್ಯಂತ ಹೇಯ ಹಾಗೂ ಅಮಾನುಷ ವರ್ತನೆಯಾಗಿದೆ. ಧರ್ಮದ ಆಧಾರದ ಮೇಲೆ ಮನುಷ್ಯರ ಮೇಲೆ ಆಡಳಿತ ಯಂತ್ರ ನಡೆಸುತ್ತಿರುವ ಇಂಥ ದೌರ್ಜನ್ಯ ವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಭಾರತದ ಇತಿಹಾಸದಲ್ಲೇ ಇಂಥ ಅವಮಾನಕರ ಘಟನೆ ಇನ್ನೊಂದು ನಡೆದಿಲ್ಲ. ಹಿಂದೂ ಸಂಸ್ಕೃತಿಗೆ , ಆಚರಣೆಗೆ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಇಂಥ ಅಪಚಾರಕ್ಕೆ ಕೊನೆಯೇ ಇಲ್ಲ. ಜನಿವಾರ ಧರಿಸಿ ಬಂದ ಕಾರಣಕ್ಕೆ ಸಿ ಇ ಟಿ ಪರೀಕ್ಷೆ ಗೆ ನಿರಾಕರಿಸಿ, ಬಾಲಕರ ಬದುಕಿಗೆ ಈ ಸರಕಾರ ಕೊಳ್ಳಿ ಇಟ್ಟಿದೆ. ವಿದ್ಯಾರ್ಥಿಯ ಭವಿಷ್ಯಕ್ಕೆ ಸರಕಾರ ಕೊಳ್ಳಿ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಮದ್ಯ ಪ್ರವೇಶ ಮಾಡಬೇಕೆಂದು…

Read More

ಚಾಮರಾಜನಗರ:- ಚಾಮರಾಜನಗರದ ಕಲ್ಯಾಣ ಮಂಟಪದಲ್ಲಿ ಅಡುಗೆ ಕೆಲಸವನ್ನು ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ಸು ಬರುತ್ತಿದ್ದಾಗ ಕಾಳನಹುಂಡಿ ಗೇಟ್ ಬಳಿ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಕುಲಗಾಣ ಗ್ರಾಮದ ಮಲ್ಲೇಶ್ (45) (ಅಡುಗೆ ಭಟ್ಟರು ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. https://ainkannada.com/rain-disrupts-rcb-vs-punjab-match-cancellation-likely/ ಮೃತ ಮಲ್ಲೇಶ್ ಅಡುಗೆ ಭಟ್ಟರಾಗಿ ಕೆಲಸ ನಿವ೮ಹಿಸುತ್ತಿದ್ದು ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ಅಡುಗೆ ಕೆಲಸ ಮುಗಿಸಿಕೊಂಡು ಸ್ವಗ್ರಾಮ ಕುಲಗಾಣಕ್ಕೆ ತೆರಳುತ್ತದ್ರು ಎನ್ನಲಾಗಿದೆ ಈ ವೇಳೆ ಟಿಪ್ಪರ್ ಡಿಕ್ಕಿಯಾಗಿ ಮಲ್ಲೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಚಾಮರಾಜನಗರ ಗ್ರಾಮಾಂತರ ಪೋಲೀಸರು ಮೃತ ದೇಹವನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

Read More

ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ಆದ್ರೆ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ. https://ainkannada.com/indecent-behavior-with-a-girl-young-man-gets-a-religious-punishment/ ಕಳೆದ ಕೆಲವು ದಿನಗಳಿಂದ, ಬೆಂಗಳೂರಿನಲ್ಲಿ ರಾತ್ರಿ 2 ರಿಂದ 3 ಗಂಟೆಗಳ ಕಾಲ ಮಳೆಯಾಗುತ್ತಿದೆ. ಆದ್ದರಿಂದ, ಪಂದ್ಯ ಕಡಿಮೆ ಓವರ್‌ಗಳೊಂದಿಗೆ ನಡೆಯುವ ನಿರೀಕ್ಷೆಯಿದೆ. ಇನ್ನೂ ತುಂತುರು ಮಳೆಯಾಗುತ್ತಿದ್ದು, ಬಿಸಿಸಿಐ ಅಧಿಕಾರಿಗಳು ಯಾವುದೇ ಛತ್ರಿ ಅಥವಾ ಜಾಕೆಟ್‌ಗಳಿಲ್ಲದೆ ಬೌಂಡರಿಯ ಬಳಿ ಕಾಯುತ್ತಿದ್ದಾರೆ. ತುಂತುರು ಮಳೆ ದು ಸಂಪೂರ್ಣವಾಗಿ ನಿಲ್ಲುವವರೆಗೆ ಆಟ ಸಾಧ್ಯವಿಲ್ಲ. 5 ಓವರ್‌ಗಳ ಪಂದ್ಯಕ್ಕಾಗಿ ರಾತ್ರಿ 10.54 ರ ವರೆಗೂ ಕಾದು ನಂತರ ತಡವಾಗಿ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.

Read More

ಬಳ್ಳಾರಿ:- ಹುಡುಗಿಯ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ಗಣಿಜಿಲ್ಲೆ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಜರುಗಿದೆ. https://ainkannada.com/mysore-the-bull-known-as-nanjundappas-bull-dies/ ಆರೋಪಿಯು, ಕುಟುಂಬದವರ ಜೊತೆ ಶಾಪಿಂಗ್ ಬಂದ ಯುವತಿ ಬಳಿ ದುರ್ವರ್ತನೆ ತೋರಿದ್ದಾನೆ. ಇದ್ರಿಂದ ಬೇಸತ್ತ ಹುಡುಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಯುವಕನನ್ನು ನಿಲ್ಲಿಸಿ ಧರ್ಮದೇಟು ಕೊಡಲಾಗಿದೆ. ನಗರದ ರಾಯಲ್ ವೃತ್ತದ ಬೆಂಗಳೂರ್ ರಸ್ತೆಯಲ್ಲಿ ಘಟನೆ ಜರುಗಿದೆ.

Read More

ಮೈಸೂರು:-ʻನಂಜುಂಡಪ್ಪನ ಗೂಳಿʼ ಅಂತಲೇ ಪ್ರಸಿದ್ಧಯಾಗಿದ್ದ ಹೋರಿ ಸಾವನ್ನಪ್ಪಿದೆ. ಪ್ಲಾಸ್ಟಿಕ್ ಕವರ್ ನಲ್ಲಿದ್ದ ಪ್ರಸಾದ ತಿಂದು ಈ ಅವಘಡ ಸಂಭವಿಸಿದೆ. ಜಿಲ್ಲೆಯ ನಂಜನಗೂಡಿನ ದೇವಸ್ಥಾನದಲ್ಲಿ ಈ ಘಟನೆ ಜರುಗಿದೆ. https://ainkannada.com/super-star-mohan-lal-son-dating-german-woman/ ಈ ಹೋರಿಯು, ʻನಂಜುಂಡಪ್ಪನ ಗೂಳಿʼ ಅಂತಲೇ ಪ್ರಸಿದ್ಧಯಾಗಿತ್ತು. ಪ್ರತಿ ನಿತ್ಯ ಅಂಗಡಿ ಮನೆಗಳಿಗೆ ತೆರಳುತ್ತಿತ್ತು. ಇಲ್ಲಿನ ಜನ ಪ್ರತಿದಿನ ನಂಜುಂಡಪ್ಪನ ಗೂಳಿಗೆ ಹಣ್ಣು, ಬೆಲ್ಲ, ಕಲಗಚ್ಚು, ನೀರು, ತರಕಾರಿ ನೀಡುತ್ತಿದ್ದರು. ಸದ್ಯ ಗೂಳಿ ಸಾವನ್ನಪ್ಪಿದ ಘಟನೆ ಕಂಡು ಮರುಗಿದ ಜನರು ಪ್ಲಾಸ್ಟಿಕ್ ಬಳಸದಂತೆ ಪ್ರವಾಸಿಗರು, ಭಕ್ತರಲ್ಲಿ ಮನವಿ ಮಾಡಿದ್ದಾರೆ. ಹರಕೆಯ ಹೋರಿಗೆ ಕಪಿಲಾ ನದಿ ತೀರದಲ್ಲಿ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

Read More

ಚಿತ್ರದುರ್ಗ: ಬೆಂಗಳೂರು ಹಾಗೂ ಹೊಸಪೇಟೆಗಳ ಮಧ್ಯೆ ಸಂಚರಿಸುವ ರೈಲುಗಳಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಅಮೃತಾಪುರಗಳಲ್ಲಿ ನಿಲುಗಡೆ ಮಾಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಸರಕಾರದ ಅನುಮತಿ ಮೇರೆಗೆ ರೈಲು ನಿಲುಗಡೆಗೆ ಕ್ರಮ ಕೈಗೊಂಡಿದ್ದು, ಸಂಸದ ಗೋವಿಂದ‌ ಕಾರಜೋಳ ರೈಲು ನೊಲುಗಡೆಗೆ ಹಸಿರು ನಿಶಾನೆ ತೋರಿದ್ರು. https://ainkannada.com/akshay-kumars-kesari-2-hit-by-piracy-hours-before-release/ ಬೆಂಗಳೂರಿಂದ‌ ಹೊಸದುರ್ಗ-ಹೊಳಲಗಕೆರೆ- ಚಿಕ್ಕಜಾಜೂರು-ಚಳ್ಳಕೆರೆ ಮಾರ್ಗವಾಗಿ ಹೊಸಪೇಟೆಗೆ ಹಾಗೂ ಹೊಸಪೇಟೆಯಿಂದ ಇದೇ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಟ್ರೈನ್ ಗಳು ಹೊಳಲ್ಕೆರೆ ಹಾಗೂ ಅಮೃತಾಪುರ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ರೈಲು ವ್ಯವಸ್ಥೆ ಇದ್ದೂ ಇಲ್ಲದಂತಾಗಿತ್ತು. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ವಿಚಾರಚನ್ನು ಸಂಸದ ಗೋವಿಂದ ಕಾರಜೋಳ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು ಈ ಎರಡು ಕಡೆಗಳಲ್ಲೊ ರೈಲು ನಿಲಿಗಡೆಗೆ ಅವಕಾಶ ಮಾಡಿಕೊಟ್ಟಿದ್ದು, ಸ್ಥಳೀಯರಲ್ಲಿ ಸಂಭ್ರಮಕ್ಕೆ ಕಾರವಾಗಿದೆ.

Read More

ಬೆಂಗಳೂರು:- ಇತ್ತೀಚೆಗೆ ಬೆಂಗಳೂರಿನ ಯಾವುದೇ ‌ಮೂಲೆಗೆ ಹೋದ್ರು ಒಂದಲ್ಲ ‌ಒಂದು ಅವಾಂತರ ಸೃಷ್ಟಿ ಮಾಡಿ ಸೈಕೋಗಳ ಹಾಗೆ ವರ್ತನೆ ಮಾಡೋರ ಸಂಖ್ಯೆಗೆನೂ ಕಡಿಮೆಯಿಲ್ಲ , ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡೋದು ವಾಹನಗಳಿಗೆ ಹಾನಿ ಮಾಡೋದು ಕಂಡು‌ ಬರ್ತಿದೆ.ಕುಡಿದ ನಶೆಯಲ್ಲಿ ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಗಳನ್ನು ಹೊಡೆದು ಅಟ್ಟಹಾಸ ಮೆರೆದಿದ್ದವನ್ನು ಪೊಲೀಸರು ‌ಅರೆಸ್ಟ್ ಮಾಡಿದ್ದಾರೆ… https://ainkannada.com/mallikarjun-kharge-himself-will-bring-down-the-karnataka-government-sriramulu/ ಹೌದು.. ಕೈಯಲ್ಲಿ ಲಾಂಗ್ ಹಿಡಿದುಕೊಂಡು ಸಿನಿಮಾದಲ್ಲಿ ಬರುವ ವಿಲನ್‌ ಹಾಗೆ ಕಣ್ಣ ಮುಂದೆ ನಿಲ್ಲಿಸಿದ ವಾಹನಗಳ ಗ್ಲಾಸ್ ನ್ನ ಪುಡಿ ಪುಡಿ ಮಾಡುತ್ತಿರವ ಕುಡುಕನ ಅವಾಂತರ ಕಂಡು ಕೆಆರ್ ಪುರಂ ನ ಜನ ಒಂದು ಕ್ಷಣ ಭಯ ಭೀತರಾಗಿದ್ರು ಎಲ್ಲಿ ತಮ್ಮ ಪ್ರಾಣಕ್ಕು ಕುತ್ತು ಬರುತ್ತೋ ಅಂತ ಭಯದಿಂದ ‌ಓಡಿದ್ರು. ಇಂದು ಬೆಳಗ್ಗೆ ಸುಮಾರು 5.30 ರ ಸಮಯದಲ್ಲಿ ಕೆ ಆರ್ ಪುರಂ ನ ಮಾರ್ಕೆಟ್ ನಲ್ಲಿ‌ ಇದ್ದಕ್ಕಿದ್ದಂತೆ ನಶೆಯಲ್ಲಿ ತೇಲಾಡುತ್ತಿದ್ದ ಯಜವಕನೊಬ್ಬ ಕೈಯಲ್ಲಿ ಲಾಂಗು ಹಿಡಿದು ಕೊಂಡು ಆವಜ್ ಹಾಕಿಕೊಂಡು ‌ಸುಮಾರು‌‌…

Read More

ಕಲಬುರಗಿ:- ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಬೀಳಿಸುತ್ತಾರೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ. https://ainkannada.com/this-time-the-rcb-cup-is-expected-to-win-anil-kumble-is-a-great-statement/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತಮ್ಮ ಮಗನನ್ನ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆಯವರೇ ಈ ಸರ್ಕಾರ ಬಿಳಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗಾಗಲೇ ಸಿಎಂ ಗಾದಿಗೆ ಫೈಟ್ ಮಾಡುತ್ತಿದ್ದಾರೆ. ಇದರ ನಡುವೆಯೇ ಮೂರನೇ ವ್ಯಕ್ತಿ ಪ್ರವೇಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಸಿಎಂ ಮಾಡಲು ಅವರೇ ಸರ್ಕಾರವನ್ನ ಬೀಳಿಸುತ್ತಾರೆ ಎಂದಿದ್ದಾರೆ. ಮೊನ್ನೆ ಖರ್ಗೆ ಅವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬಿಳಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬಿಳಿಸೋಕೆ. ಇಬ್ಬರ ಕಾದಾಟದಲ್ಲಿ ತಮ್ಮ ಮಗನನ್ನ ಸಿಎಂ ಮಾಡಲು ಖರ್ಗೆಯವರೇ ಪ್ಲ್ಯಾನ್‌ ಮಾಡಿದ್ದಾರೆ ಎಂದು ಗುಡುಗಿದರು. ತಂದೆ, ಮಕ್ಕಳು ಸೇರಿ ರಿಪಬ್ಲಿಕ್ ಆಫ್ ಕಲಬುರಗಿಯನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಅಲ್ಲಿಗೆ ಭೇಟಿ ಕೊಟ್ಟರೇ ಅವರ ಕಾರ್ಯಕರ್ತರು ದಬ್ಬಾಳಿಕೆ ಮಾಡುತ್ತಾರೆ. ಅದಕ್ಕೆ ತಕ್ಕ ಉತ್ತರ…

Read More

ಬೆಂಗಳೂರು:- ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಹಣಾಹಣಿ ಶುರುವಾಗಲಿದೆ. https://ainkannada.com/ipl-2025-rcb-cancels-the-match-between-punjab-kings-heres-the-reason/ ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿರುವ ಆರ್​ಸಿಬಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಆರ್​ಸಿಬಿಯ ಅದ್ಭುತ ಆರಂಭಕ್ಕೆ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಖುಷಿ ವ್ಯಕ್ತಪಡಿಸಿದ್ದಾರೆ. ಆರ್​ಸಿಬಿ ಮುಂದೆಯೂ ಹೀಗೇ ಆಡಲಿ. 18ನೇ ಆವೃತ್ತಿಯ ಅರ್ಧ ಟೂರ್ನಿ ಕೂಡ ಇನ್ನೂ ಮುಗಿದಿಲ್ಲ. ನಮ್ಮ ಆರ್​ಸಿಬಿ ಇನ್ನೂ ಬೆಂಗಳೂರಿನಲ್ಲಿ ಗೆದ್ದಿಲ್ಲ. ಈ ಬಾರಿ ಆರ್​ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. 18 ವರ್ಷ ಆಗಿದೆ. ಇವತ್ತಿನ ಮ್ಯಾಚ್​ಗೆ ಆಲ್ ದ ಬೆಸ್ಟ್ ಹೇಳುವೆ. ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿದ್ದೆ. ಅದೇ ಸಮಸ್ಯೆ ನನಗೆ ಎಂದಿದ್ದಾರೆ. ಆರ್​ಸಿಬಿ ಪರ 42 ಪಂದ್ಯಗಳನ್ನು ಆಡಿರುವ ಅನಿಲ್ ಕುಂಬ್ಳೆ 45 ವಿಕೆಟ್ ಪಡೆದುಕೊಂಡಿದ್ದಾರೆ. ಬೌಲಿಂಗ್ ಎಕನಾಮಿ ರೇಟ್ 6.58 ಇದೆ. ಇವರ ನಾಯಕತ್ವದ ಅಡಿಯಲ್ಲಿ 2010ರಲ್ಲಿ ಆರ್​ಸಿಬಿ ಸೆಮಿ ಫೈನಲ್ ಪ್ರವೇಶ ಮಾಡಿತ್ತು.…

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೇನು ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಶಾಕಿಂಗ್ ಸುದ್ದಿ ಏನಪ್ಪಾ ಅಂದ್ರೆ ಪಂದ್ಯ ನಡೆಯೋದು ಡೌಟ್ ಎನ್ನಲಾಗಿದೆ. https://ainkannada.com/bull-dies-after-eating-discarded-prasad-containing-plastic/ ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ಅರ್ಭಟ ಜೋರಾಗಿದೆ. ಸಂಜೆ ಆದರೆ ಸಾಕು ಕಳೆದರೆಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಧ್ಯಾಹ್ನದ ವೇಳೆ ಮಳೆ ಮೋಡಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ ಈ ದಿನ ಕೂಡ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗೆ ಆಟದ ನಡುವೆ ಅಥವಾ ಆಟಕ್ಕಿಂತ ಮುಚ್ಚೆ ಧಾರಾಕಾರವಾಗಿ ಮಳೆಯಾದರೆ ಆಟ ನಡೆಯುವುದು ಕಷ್ಟವಿದೆ. ವಿಶೇಷವಾಗಿ ನಿರಂತರವಾಗಿ ಮಳೆಯಾದರೆ ಆಟ ಮುಂದೂಡುವ ಸಾಧ್ಯತೆಗಳು ಇವೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಳದಲ್ಲಿ ಮಳೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಳೆ ಬಂದರೆ ನೆಲಕ್ಕೆ ದೊಡ್ಡ ದೊಡ್ಡ ಟಾರ್ಪಲಿನ್ ಹಾಸಲಾಗುತ್ತದೆ. ಇದರಿಂದ ನೆಲ ಒದ್ದೆಯಾಗುವುದಿಲ್ಲ. ಅಲ್ಲದೆ ನೀರು ಹರಿದು ಹೋಗಲು ದೊಡ್ಡ ಚರಂಡಿ ವ್ಯವಸ್ಥೆ ಕೂಡ ಇದೆ.…

Read More