ಬೆಂಗಳೂರು:- ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಹಣಾಹಣಿ ಶುರುವಾಗಲಿದೆ. https://ainkannada.com/ipl-2025-rcb-cancels-the-match-between-punjab-kings-heres-the-reason/ ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿರುವ ಆರ್ಸಿಬಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಆರ್ಸಿಬಿಯ ಅದ್ಭುತ ಆರಂಭಕ್ಕೆ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಖುಷಿ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ಮುಂದೆಯೂ ಹೀಗೇ ಆಡಲಿ. 18ನೇ ಆವೃತ್ತಿಯ ಅರ್ಧ ಟೂರ್ನಿ ಕೂಡ ಇನ್ನೂ ಮುಗಿದಿಲ್ಲ. ನಮ್ಮ ಆರ್ಸಿಬಿ ಇನ್ನೂ ಬೆಂಗಳೂರಿನಲ್ಲಿ ಗೆದ್ದಿಲ್ಲ. ಈ ಬಾರಿ ಆರ್ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. 18 ವರ್ಷ ಆಗಿದೆ. ಇವತ್ತಿನ ಮ್ಯಾಚ್ಗೆ ಆಲ್ ದ ಬೆಸ್ಟ್ ಹೇಳುವೆ. ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿದ್ದೆ. ಅದೇ ಸಮಸ್ಯೆ ನನಗೆ ಎಂದಿದ್ದಾರೆ. ಆರ್ಸಿಬಿ ಪರ 42 ಪಂದ್ಯಗಳನ್ನು ಆಡಿರುವ ಅನಿಲ್ ಕುಂಬ್ಳೆ 45 ವಿಕೆಟ್ ಪಡೆದುಕೊಂಡಿದ್ದಾರೆ. ಬೌಲಿಂಗ್ ಎಕನಾಮಿ ರೇಟ್ 6.58 ಇದೆ. ಇವರ ನಾಯಕತ್ವದ ಅಡಿಯಲ್ಲಿ 2010ರಲ್ಲಿ ಆರ್ಸಿಬಿ ಸೆಮಿ ಫೈನಲ್ ಪ್ರವೇಶ ಮಾಡಿತ್ತು.…
Author: AIN Author
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೇನು ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಶಾಕಿಂಗ್ ಸುದ್ದಿ ಏನಪ್ಪಾ ಅಂದ್ರೆ ಪಂದ್ಯ ನಡೆಯೋದು ಡೌಟ್ ಎನ್ನಲಾಗಿದೆ. https://ainkannada.com/bull-dies-after-eating-discarded-prasad-containing-plastic/ ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ಅರ್ಭಟ ಜೋರಾಗಿದೆ. ಸಂಜೆ ಆದರೆ ಸಾಕು ಕಳೆದರೆಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಧ್ಯಾಹ್ನದ ವೇಳೆ ಮಳೆ ಮೋಡಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ ಈ ದಿನ ಕೂಡ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗೆ ಆಟದ ನಡುವೆ ಅಥವಾ ಆಟಕ್ಕಿಂತ ಮುಚ್ಚೆ ಧಾರಾಕಾರವಾಗಿ ಮಳೆಯಾದರೆ ಆಟ ನಡೆಯುವುದು ಕಷ್ಟವಿದೆ. ವಿಶೇಷವಾಗಿ ನಿರಂತರವಾಗಿ ಮಳೆಯಾದರೆ ಆಟ ಮುಂದೂಡುವ ಸಾಧ್ಯತೆಗಳು ಇವೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಳದಲ್ಲಿ ಮಳೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಳೆ ಬಂದರೆ ನೆಲಕ್ಕೆ ದೊಡ್ಡ ದೊಡ್ಡ ಟಾರ್ಪಲಿನ್ ಹಾಸಲಾಗುತ್ತದೆ. ಇದರಿಂದ ನೆಲ ಒದ್ದೆಯಾಗುವುದಿಲ್ಲ. ಅಲ್ಲದೆ ನೀರು ಹರಿದು ಹೋಗಲು ದೊಡ್ಡ ಚರಂಡಿ ವ್ಯವಸ್ಥೆ ಕೂಡ ಇದೆ.…
ಮೈಸೂರು: ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಸಮೇತ ಬಿಸಾಡಿದ್ದ ಪ್ರಸಾದ ತಿಂದು ಹೋರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ದೇವಸ್ಥಾನದಲ್ಲಿ ಹರಕೆಯ ಹೋರಿಯು ಸಾವನ್ನಪ್ಪಿದ್ದು, ಗ್ರಾಮಸ್ಥರು, ಕಪಿಲಾ ನದಿ ತೀರದಲ್ಲಿ ಹೋರಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. https://ainkannada.com/three-month-old-calf-dies-due-to-doctors-negligence-complaint-filed-against-government-doctor/ ʻನಂಜುಂಡಪ್ಪನ ಗೂಳಿʼ ಅಂತಲೇ ಪ್ರಸಿದ್ಧಯಾಗಿದ್ದ ಹೋರಿಯು ಪ್ರತಿ ನಿತ್ಯ ಅಂಗಡಿ ಮನೆಗಳಿಗೆ ತೆರಳುತ್ತಿತ್ತು. ಇಲ್ಲಿನ ಜನರು ಪ್ರತಿದಿನ ನಂಜುಂಡಪ್ಪನ ಗೂಳಿಗೆ ಹಣ್ಣು, ಬೆಲ್ಲ, ಕಲಗಚ್ಚು, ನೀರು, ತರಕಾರಿ ನೀಡುತ್ತಿದ್ದರು. ಆದರೆ ಇದೀಗ ಈ ಹೋರಿ ಪ್ಲಾಸ್ಟಿಕ್ ಸಮೇತ ಬಿದಿದ್ದ ಪ್ರಸಾದ ತಿಂದು ಸಾವನ್ನಪ್ಪಿದ್ದು, ಘಟನೆಯಿಂದ ಮರುಗಿದ ಸುತ್ತಮುತ್ತಲ ಜನರು, ಪ್ರವಾಸಿಗರು, ಭಕ್ತರು ಹೆಚ್ಚಾಗಿ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದ್ದಾರೆ.
ಬೆಳಗಾವಿ : ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಅಥಣಿ ತಾಲೂಕಿನ ಭರಮಣಕೊಡಿ ಮೂಲದ ದಂಪತಿಗಳ ಮಗುವಿಗೆ ನಿನ್ನೆ ಪೋಲಿಯೋ, ಪೇಂಟಾ 1, ಐ ಪಿ ವಿ 1, ಪಿವಿಸಿ 1,ರೋಟಾ 1, ವೈರಸ್ ಡ್ರಾಪ್ ನೀಡಲಾಗಿತ್ತು, ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅಥಣಿ ಖಾಸಗಿ ಆಸ್ಪತ್ರೆ ಮಗುವನ್ನ ದಾಖಲಿಸಲಾಗಿತ್ತು, ನಂತರ ಮಗುವನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ . ಅಷ್ಟರಲ್ಲೇ ಮಗು ಉಸಿರು ಚೆಲ್ಲಿದೆ. https://ainkannada.com/evil-people-killed-a-pregnant-cow-for-meat/ ಮಗು ಕಳೆದುಕೊಂಡ ಕುಟುಂಬಸ್ಥರು ಡೋಸ್ ನೀಡಿದ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಮಗುವಿಗೆ ಪ್ರಮಾಣಕ್ಕಿಂತ ಹೆಚ್ಚು ಲಸಿಕೆ ನೀಡಿದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಮಗು ಕುಟುಂಬಸ್ಥರು ಸರ್ಕಾರಿ ವೈದ್ಯರ ವಿರುದ್ದ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏನೂ ಅರಿಯದ ಹಸುಗೂಸು ತಾಯಿಯಿಂದ ದೂರವಾಗಿದ್ದು, ಯಾರದೋ ಎಡವಟ್ಟಿನಿಂದ ಮಗುವಿನ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಬೀದರ್ : ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಸಿಬ್ಬಂದಿಗಳು ಅವಕಾಶ ನೀಡದ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಗಳ ಬಗ್ಗೆ ತನಿಖೆ ಮಾಡಿ ಕೂಡಲೇ ವರದಿ ನೀಡಲು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. https://ainkannada.com/exam-center-staff-refused-to-write-cet-exam-because-it-was-scheduled-for-january/ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಇಂದು ವಿದ್ಯಾರ್ಥಿಯ ಭವಿಷ್ಯ ನಾಶವಾಗಿದೆ ಎಂದು ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ಹೀಗಾಗಿ ಉಪ ವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ, ನಿಯಮಾನುಸಾರ ತಪ್ಪ ಮಾಡಿದವರ ಮೇಲೆ ಶಿಸ್ತು ಕ್ರಮವಹಿಸಬೇಕು. ಹಾಗೂ 24 ಗಂಟೆಯ ಒಳಗಾಗಿ ವರದಿಯನ್ನು ಸಲ್ಲಿಸಬೇಕು ಎಂದು ಪತ್ರದ ಮೂಲಕ ಬೀದರ್ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯಿಂದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ : ಬೆಂಗಳೂರಿನ ಹಲವೆಡೆ ಏಕಾಏಕಿ ಮಳೆಯಾಗಿದ್ದು, ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ಮಳೆಯಿಂದಾಗಿ, ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿದೆ. https://ainkannada.com/heavy-wind-and-rain-goddess-maramma-dressed-in-a-huge-neem-tree/ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಗ್ರಾಮದ ಆಂಜಿನಮ್ಮ ಮತ್ತು ವಿಜಿಯಮ್ಮ, ನಂಜಮ್ಮ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ, ಹಾಡೋನಹಳ್ಳಿ ಪಂಚಾಯತಿ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಲಿಲ್ಲ. ಇದರಿಂದಾಗಿ ಇದೀಗ ಮನೆಗೆ ನೀರು ನುಗ್ಗಿದ್ದು, ಮನೆ ಮಾಲೀಕರು ಪರದಾಡುವಂತಾಗಿದೆ.
ಬಾಗಲಕೋಟೆ : ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟಿಗಳು ಹಾಗೂ ಪೀಠಾಧ್ಯಕ್ಷರ ಮಧ್ಯದ ಬಿರುಕು ಉಂಟಾಗಿದೆ. ಏಫ್ರಿಲ್ 20ರಂದು ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆದಿದ್ದ ಸಮಾಜದ ರಾಜ್ಯಮಟ್ಟದ ಸಭೆಯನ್ನ ರದ್ದುಪಡಿಸಿದ ಬೆನ್ನಲ್ಲೇ ಇದೀಗ ಏ.19 ರಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಕರೆದಿದ್ದ ಸಭೆ ಸಹ ತಾತ್ಕಾಲಿಕ ಮುಂದೂಡಿಕೆಯಾಗಿದೆ. ಕೂಡಲಸಂಗಮದಲ್ಲಿ ಸಭೆ ಮುಂದೂಡಿರುವ ಬಗ್ಗೆ ಮಾಹಿತಿ ನೀಡಿದ ವಿಜಯಾನಂದ ಕಾಶಪ್ಪನವರ್, ಕೂಡಲಸಂಗಮ ಪೀಠದ ಪಂಚಮಸಾಲಿ ಟ್ರಸ್ಟ್ ಕರೆದಿದ್ದ ಸಭೆಯನ್ನ ಹಿರಿಯರು, ಸಮಾಜದ ಜನಪ್ರತಿನಿಧಿಗಳ ಸಲಹೆ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಶೀಘ್ರದಲ್ಲೆ ಕೂಡಲಸಂಗಮ ಪೀಠದಲ್ಲೇ ಟ್ರಸ್ಟಿಗಳು ಹಾಗೂ ಸಮಾಜದ ಸಚಿವರು, ಶಾಸಕರು, ಸಂಸದರು, ಪದಾಧಿಕಾರಿಗಳ ಒಳಗೊಂಡಂತೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದರು. https://ainkannada.com/if-you-continue-you-guarantee-action-against-you-jayamritunjaya-sri-lingayata-panchamasaali-trust-warned/ ಅಲ್ಲದೇ ನಾಳೆ ಸಭೆಗೆ ಬರಲು ರಾಜ್ಯಾದ್ಯಂತ ಸಮಾಜದವರು ಮುಂದಾಗಿದ್ದರು. ಇದೀಗ ಸಭೆಯನ್ನು ಮುಂದೂಡಲಾಗಿದೆ ಎಂದರು. ಆ ಜವಾಬ್ದಾರಿಯನ್ನು ಎಲ್ಲರ ಅಭಿಪ್ರಾಯದ ಮೇರೆಗೆ ಇತ್ತೀಚಿಗೆ ನಡೆದ ಘಟನೆಗಳನ್ನ ತಮ್ಮ ಗಮನಕ್ಕೆ ತರುತ್ತೇನೆ. ಬಳಿಕ…
ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರೇ ಈ ಸರ್ಕಾರ ಬೀಳಿಸುತ್ತಾರೆ ಎಂದು ಮಾಜಿ ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ಜನಾಕ್ರೋಶ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕಯಮಾರ್ ಮಧ್ಯೆ ಸಿಎಂ ಖುರ್ಚಿಗೋಸ್ಕರ ಗುದ್ದಾಟ ನಡೆತಿದೆ. ಇದರ ತಮ್ಮ ಪುತ್ರನನ್ನು ಸಿಎಂ ಮಾಡಲು ಮಲ್ಲಿಕಾರ್ಜುನ್ ಖರ್ಗೆ ಅವರೇ ಸರ್ಕಾರ ಬೀಳಿಸುತ್ತಾರೆ ಎಂದಿದ್ದು, ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. https://ainkannada.com/hindu-girls-give-birth-to-a-dozen-children-pramod-muthalik/ ಮೊನ್ನೆ ಖರ್ಗೆ ಅವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬಿಳಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬೀಳಿಸೋಕೆ. ಇಬ್ಬರ ಕಾದಾಟದಲ್ಲಿ ತಮ್ಮ ಮಗನನ್ನ ಸಿಎಂ ಮಾಡಲು ಖರ್ಗೆಯವರೇ ಪ್ಲ್ಯಾನ್ ಮಾಡಿದ್ದಾರೆ ಎಂದು ಗುಡುಗಿದರು.
ಹುಬ್ಬಳ್ಳಿ: ಹಿಂದೂ ಸಮಾಜದವರು ಹಿಂದು ದೇಶ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಬೇಕು. ಒಂದಲ್ಲಾ ಎರಡಲ್ಲ ಮೂರಲ್ಲ ಒಂದು ಡಜನ್ ಡಜನ್ ಮಕ್ಕಳನ್ನ ಹೆರಿನಿಮಗೆ ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಶ್ರೀರಾಮಸೇನೆಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯಿಂದ ನೀಡಿದ ತ್ರಿಶೂಲವನ್ನು ಮಹಿಳೆಯರು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ತೊಂದರೆ ಕೊಟ್ಟವರಿಗೆ ಅದರಿಂದ ಚುಚ್ಚಿ. ಪೊಲೀಸರು, ಸರ್ಕಾರವು ಮಹಿಳೆಯರ ರಕ್ಷಣೆ ಮಾಡುತ್ತಿಲ್ಲ. ಹೀಗಾಗಿ, ಇದು ಅನಿವಾರ್ಯ. ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಮನೆಯಲ್ಲಿ ಆಯುಧಗಳನ್ನು ಇಟ್ಟು ಪೂಜಿಸಿ. ಇದರಿಂದ ಸ್ಫೂರ್ತಿ ಬರುತ್ತೆ. ಪೊಲೀಸರು ಕೇಳುತ್ತಾರೆಂಬ ಭಯ ಬೇಡ. ಅವರೂ, ಆಯುಧಪೂಜೆಯಂದು ಬಂದೂಕಿಗೆ ಪೂಜೆ ಮಾಡುತ್ತಾರೆ ಎಂದರು. https://ainkannada.com/murder-of-nurse-swati-in-masur-was-100-love-jihad-k-e-kantesh-alleges/ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಅಥವಾ ಎನ್ಕೌಂಟರ್ ಮಾಡಿರಷ್ಟೇ ಅವಳಿಗೆ ನ್ಯಾಯ ಸಿಗುತ್ತೆ. ಹತ್ಯೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಜಾಮೀನು…
ಕಲಬುರಗಿ : ಜನಿವಾರ ತೆಗೆಸಿ ಎಕ್ಸಾಮ್ ಬರೆಸಿರುವ ವಿಚಾರವಾಗಿ ಪರಿಷತ್ ಸದಸ್ಯ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. https://ainkannada.com/exam-center-staff-refused-to-write-cet-exam-because-it-was-scheduled-for-january/ ಕಲಬುರಗಿಯಲ್ಲಿ ಮಾತನಾಡಿದ ಅವರು, ಬೀದರ್ ವಿದ್ಯಾರ್ಥಿಗೆ ರೀ ಎಕ್ಸಾಮ್ ಕೊಡಬೇಕು. ಈ ಸರ್ಕಾರಕ್ಕೆ ಮನುಷ್ಯತ್ವ ಇದೇಯೋ ಇಲ್ಲವೋ ಗೊತ್ತಿಲ್ಲ. ಜನಿವಾರ ಬಿಚ್ಚಿ ಬಾ ಅಂದಿರೋದು ಯಾವ ಸಂಸ್ಕ್ರತಿ ಇದು. ಹಾಗಾದ್ರೆ ಇವರಿಗೆ ಬುರ್ಖಾ ಬಿಚ್ಚಿ ಬನ್ನಿ ಅಂತಾ ಹೇಳುವ ಧೈರ್ಯ ಇದ್ಯಾ..?, ಎಕ್ಸಾಮ್ ತಪ್ಪಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಎಕ್ಸಾಮ್ ಬರೆಯೋದಕ್ಕೆ ಕೋಡಬೇಕು. ಈ ಹಿಂದೆ ತಾಳಿ ಬಿಚ್ಚಿ ಎಕ್ಸಾಮ್ ಬರೆಸಿದವರು ಇವರು ಎಂದು ಕಿಡಿಕಾರಿದರು.