ಹುಬ್ಬಳ್ಳಿ: ಹಿಂದೂ ಸಮಾಜದವರು ಹಿಂದು ದೇಶ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಬೇಕು. ಒಂದಲ್ಲಾ ಎರಡಲ್ಲ ಮೂರಲ್ಲ ಒಂದು ಡಜನ್ ಡಜನ್ ಮಕ್ಕಳನ್ನ ಹೆರಿನಿಮಗೆ ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಶ್ರೀರಾಮಸೇನೆಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯಿಂದ ನೀಡಿದ ತ್ರಿಶೂಲವನ್ನು ಮಹಿಳೆಯರು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ತೊಂದರೆ ಕೊಟ್ಟವರಿಗೆ ಅದರಿಂದ ಚುಚ್ಚಿ. ಪೊಲೀಸರು, ಸರ್ಕಾರವು ಮಹಿಳೆಯರ ರಕ್ಷಣೆ ಮಾಡುತ್ತಿಲ್ಲ. ಹೀಗಾಗಿ, ಇದು ಅನಿವಾರ್ಯ. ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಮನೆಯಲ್ಲಿ ಆಯುಧಗಳನ್ನು ಇಟ್ಟು ಪೂಜಿಸಿ. ಇದರಿಂದ ಸ್ಫೂರ್ತಿ ಬರುತ್ತೆ. ಪೊಲೀಸರು ಕೇಳುತ್ತಾರೆಂಬ ಭಯ ಬೇಡ. ಅವರೂ, ಆಯುಧಪೂಜೆಯಂದು ಬಂದೂಕಿಗೆ ಪೂಜೆ ಮಾಡುತ್ತಾರೆ ಎಂದರು. https://ainkannada.com/murder-of-nurse-swati-in-masur-was-100-love-jihad-k-e-kantesh-alleges/ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಅಥವಾ ಎನ್ಕೌಂಟರ್ ಮಾಡಿರಷ್ಟೇ ಅವಳಿಗೆ ನ್ಯಾಯ ಸಿಗುತ್ತೆ. ಹತ್ಯೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಜಾಮೀನು…
Author: AIN Author
ಕಲಬುರಗಿ : ಜನಿವಾರ ತೆಗೆಸಿ ಎಕ್ಸಾಮ್ ಬರೆಸಿರುವ ವಿಚಾರವಾಗಿ ಪರಿಷತ್ ಸದಸ್ಯ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. https://ainkannada.com/exam-center-staff-refused-to-write-cet-exam-because-it-was-scheduled-for-january/ ಕಲಬುರಗಿಯಲ್ಲಿ ಮಾತನಾಡಿದ ಅವರು, ಬೀದರ್ ವಿದ್ಯಾರ್ಥಿಗೆ ರೀ ಎಕ್ಸಾಮ್ ಕೊಡಬೇಕು. ಈ ಸರ್ಕಾರಕ್ಕೆ ಮನುಷ್ಯತ್ವ ಇದೇಯೋ ಇಲ್ಲವೋ ಗೊತ್ತಿಲ್ಲ. ಜನಿವಾರ ಬಿಚ್ಚಿ ಬಾ ಅಂದಿರೋದು ಯಾವ ಸಂಸ್ಕ್ರತಿ ಇದು. ಹಾಗಾದ್ರೆ ಇವರಿಗೆ ಬುರ್ಖಾ ಬಿಚ್ಚಿ ಬನ್ನಿ ಅಂತಾ ಹೇಳುವ ಧೈರ್ಯ ಇದ್ಯಾ..?, ಎಕ್ಸಾಮ್ ತಪ್ಪಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಎಕ್ಸಾಮ್ ಬರೆಯೋದಕ್ಕೆ ಕೋಡಬೇಕು. ಈ ಹಿಂದೆ ತಾಳಿ ಬಿಚ್ಚಿ ಎಕ್ಸಾಮ್ ಬರೆಸಿದವರು ಇವರು ಎಂದು ಕಿಡಿಕಾರಿದರು.
ಕಾರವಾರ : ಮಾಂಸಕ್ಕಾಗಿ ಗರ್ಭ ಧರಿಸಿದ್ದ ಗೋವನ್ನು ಹತೈಗೈದಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆಯ ಬಳಿ ನಡೆದಿದೆ. ಗೋವನ್ನು ಕೊಂದು ಹೊಟ್ಟೆಯಲ್ಲಿದ್ದ ಮಾಂಸವನ್ನು ತೆಗೆದುಕೊಂಡು, ಕರುವಿನ ಬ್ರೂಣ ಮತ್ತು ಅಂಗಾಂಗಳನ್ನು ಒಂದು ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಎಳೆದುತಂದಾಗ ಖದೀಮರ ವಿಕೃತಿ ಬೆಳಕಿಗೆ ಬಂದಿದೆ. https://ainkannada.com/twist-to-the-case-of-a-pregnant-cows-head-cut-and-stolen-meat/ ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಹೊನ್ನಾವರದಲ್ಲಿ ಇಂತದ್ದೇ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದರು. ಆ ಘಟನೆ ಮಾಸುವ ಮುನ್ನವೇ ಭಟ್ಕಳದಲ್ಲಿ ಮತ್ತೊಂದು ಘಟನೆ ನಡೆದಿದೆ.
ಚಿಕ್ಕೋಡಿ : ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಲ್ಲ ಹಾಗೂ ಅವೈಜ್ಞಾನಿಕವಾಗಿದೆ ಎಂದ ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಜಾತಿಗಣತಿ ವರದಿಯನ್ನು ಜಾರಿ ಮಾಡಲು ಹೊರಟಿದೆ ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಲ್ಲ ಹಾಗೂ ಅವೈಜ್ಞಾನಿಕವಾಗಿದೆ ಯಾವುದೇ ಆಧಾರವಿಲ್ಲದ,ಗೊತ್ತು -ಗುರಿಯಿಲ್ಲದ ಜಾತಿಗಣತಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಿಲ್ಲ. ಮನೆ ಮನೆಗೆ ತೆರಳಿ ಜಾತಿ ಗಣತಿ ಮಾಡಿಲ್ಲ. ಸರ್ಕಾರ ಜಾತಿಗಣತಿಯನ್ನ ಜಾರಿ ಮಾಡಿದ್ರೆ ಕೈ ಸುಟ್ಟಕೊಳ್ಳುತ್ತದೆ. ವೀರಶೈವ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಶಾಸಕರು ಸಚಿವರು ನೋಡಿಕೊಳ್ಳಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿಗಣತಿ ಜಾರಿಯಾಗದಂತೆ ನೋಡಿಕೊಳ್ಳಿ ಎಂದು ವೀರಶೈವ ಸಮಾಜದ ಶಾಸಕ ಹಾಗೂ ಸಚಿವರಿಗೆ ಶ್ರೀಗಳ ಕರೆ ನೀಡಿದರು. https://ainkannada.com/caste-census-controversy-government-unable-to-reach-any-conclusion-discussion-incomplete-cabinet-meeting-unable-to-reach-consensus/ ಜನಸಂಖ್ಯೆ ಬೆಳವಣಿಗೆ ಆಗುತ್ತದೆಯೇ ಹೊರತು ಕಡಿಮೆ ಆಗಲ್ಲ. ಜಾತಿಗಣತಿಯಲ್ಲಿ ವೀರಶೈವರ ಸಂಖ್ಯೆ ೧ ಕೋಟಿಗಿಂತ ಹೆಚ್ಚಳ ಇರಬೇಕಿತ್ತು. ಕೇವಲ 65…
ಹಾವೇರಿ : ಮಾಸೂರಿನ ನರ್ಸ್ ಸ್ವಾತಿ ಹತ್ಯೆ ಖಂಡಿಸಿ ಕ್ರಾಂತಿವೀರ ಯುವ ಬ್ರಿಗೇಡ್ ನಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಹೇಳಿದರು. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಅವರು, ಏ.23 ರಂದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಹಾವೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರವೆ ಲವ್ ಜಿಹಾದ್ ನಲ್ಲಿ ಇನ್ ವಾಲ್ ಆಗಿದೆ. ಕುಟುಂಬಕ್ಕೆ ಮಾಹಿತಿ ಕೊಡದೆ ಅವಸರದಲ್ಲಿ ದಪನ್ ಮಾಡುವ ಆತುರವೇನಿತ್ತು. ರಾಜ್ಯ ಸರಕಾರ ಕೇವಲ ಐದು ಲಕ್ಷ ರೂಪಾಯಿ ಪರಿಹಾರ ಕೊಟ್ಟಿದೆ. ಯಾರಾದರೂ ಮುಸಲ್ಮಾನರು ಮೃತಪಟ್ಟಿದ್ದರೆ ಕೇವಲ ಐದು ಲಕ್ಷ ಕೊಡುತ್ತಿದ್ದರಾ ಎಂದು ಪ್ರಶ್ನಿಸಿದರು. https://ainkannada.com/hindu-woman-murder-case-rs-5-lakh-compensation-announced-for-swatis-family/ ಇನ್ನೂ ಈ ಹತ್ಯೆಯಲ್ಲಿ ಪೊಲೀಸ್ ಇಲಾಖೆಯೆ ಶಾಮೀಲಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಎಂ ಸಿದ್ದರಾಮಯ್ಯ ಮೃತಳ ಕುಟುಂಬಕ್ಕೆ ತಕ್ಷಣವೇ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ವಾತಿ ಹತ್ಯೆ ನೂರಕ್ಕೆ ನೂರರಷ್ಟು ಲವ್ ಜಿಹಾದ್.…
ಕಾರವಾರ : ದಾಂಡೇಲಿಯ ಗಾಂಧಿನಗರ ಬಡಾವಣೆಯ ಮನೆಯೊಂದರಲ್ಲಿ ನಕಲಿ ನೋಟಗಳ ಕಂತೆ ಪತ್ತೆ ಪ್ರಕರಣ ಸಂಬಂಧ ಇದೀಗ ಆರೋಪಿಯ ಬಂಧನವಾಗಿದೆ. ಉತ್ತರಪ್ರದೇಶದ ಲಖನೌನಲ್ಲಿ ಆರೋಪಿಯನ್ನು ಬಂಧಿಸಿ ಉತ್ತರ ಕನ್ನಡಕ್ಕೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. https://ainkannada.com/bundle-of-fake-notes-found-in-rented-house-search-underway-for-accused/ ಅರ್ಷದ್ ಅಂಜುಂಖಾನ್ನನ್ನು ಬಂಧಿತ ಆರೋಪಿಯಾಗಿದ್ದಾನೆ. ನೂರಜಾನ್ ಜುಂಜುವಾಡ್ಕರ್ ಎಂಬುವರ ಮನೆಯಲ್ಲಿ ಅರ್ಷದ್ ಬಾಡಿಗೆಗೆ ವಾಸವಾಗಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದು, ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ವೇಳೆ ದಾಂಡೇಲಿ ನಗರ ಠಾಣೆಯ ಪರಿಶೀಲನೆ ನಡೆಸಿದ ವೇಳೆ 14 ಕೋಟಿ ಮೌಲ್ಯದ 500 ರೂ. ಮುಖ ಬೆಲೆಯ ಕಂತೆ ಕಂತೆ ನೋಟುಗಳು ಕಾಣಿಸಿದ್ದವು. ಅವುಗಳ ಬಂಡಲ್ ಮೇಲೆ ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿತ್ತು. ಆ ಬಳಿಕ ಸುಮ್ಮನಾಗಿದ್ದ ಪೊಲೀಸರಿಗೆ ಅರ್ಷದ್ ಹೈದರಾಬಾದ್ , ಗೋವಾ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದು ಅರಿವಾದ ಕೂಡಲೇ ಪೊಲೀಸರು ಮೊಬೈಲ್…
ಚಾಮರಾಜನಗರ : ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಕೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಭೀಮ ಎಂಬ ಹುಲಿಯು ಅಧಿಕಾರಿ ಮತ್ತು ಸಫಾರಿ ವಾಹನದ ನಡುವೆಯೇ ಹೆಜ್ಜೆ ಹಾಕಿದ್ದು ಪ್ರವಾಸಿಗರು ರೋಮಾಂಚಿತರಾಗಿದ್ದಾರೆ. ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಕೂಡ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರದಲ್ಲೇ ಸುಳಿದಾಡುತ್ತಾ ಪ್ರವಾಸಿಗರನ್ನ ಮನಸೂರೆಗೊಳಿಸುತ್ತಿತ್ತು. ಪ್ರಿನ್ಸ್ ಕಾಲವಾದ ನಂತರ ಅದೇ ರೀತಿ ಇದೀಗ ಭೀಮ ಎಂಬ ಹೆಸರಿನ ಖ್ಯಾತಿಯ ಹುಲಿಯು ಜೀಪಿನ ಮುಂದೆಯೇ ನಿರಾಂತಕವಾಗಿ ಹೆಜ್ಜೆ ಹಾಕಿ ತೀರಾ ಸನಿಹದಲ್ಲೇ ನೀರಿಗಿಳಿದು ರಿಲಾಕ್ಸ್ ಗೆ ಜಾರಿದ್ದನ್ನು ಕಂಡ ಪ್ರವಾಸಿಗರು ರೋಮಾಂಚಿತರಾಗಿದ್ದಾರೆ. ಭೀಮನ ದರ್ಬಾರ್ ಹಾಗೂ ಭೀಮಾ ಹುಲಿಯ ದುನಿಯಾ ನೋಡಲು ಇದೀಗ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಾ ಇದೆ. ಹುಲಿಯ ಖದರ್ ನಡಿಗೆಯನ್ನು ನೋಡಲು ಬೇಸಿಗೆಯ ರಜಾ ದಿನದಲ್ಲೀಗ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚಾಗ್ತಲೇ ಇದೆ.
ಬೆಂಗಳೂರು ಗ್ರಾಮಾಂತರ : ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾಗಿದ್ದು, ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ಹೊಸಕೋಟೆಯ ಕೊಳತೂರು ಗೇಟ್ ಬಳಿ ನಡೆದಿದೆ. https://ainkannada.com/property-dispute-family-fight-in-mini-vidhan-soudha-premises-video-goes-viral/ ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ನುಜ್ಜುಗುಜ್ಜಾಗಿದ್ದು, ಬೈಕ್ ಸವಾರ ಪ್ರಶಾಂತ್(26) ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪ್ರಶಾಂತ್ ಪ್ರಾಣಪಕ್ಷಿ ಹಾರಿಹೋಗಿದೆ. ಹೊಸಕೋಟೆ ಸಂಚಾರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯನಗರ : ವಿಜಯನಗರ ಜಿಲ್ಲೆಗೆ ಹಾಲಿನ ಮೆಗಾಡೈರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಹಾಲಿನ ಖಾಲಿ ಕ್ಯಾನ್ ತಲೆ ಮೇಲೆ ಹೊತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. . ನಗರದ ಅಂಬೇಡ್ಕರ್ ಮೂರ್ತಿ ಮಾಲಾರ್ಪಣೆ ಬಳಿಕ ಬಸವೇಶ್ವರ ಸರ್ಕಲ್ ನಿಂದ ಸಾಯಿಬಾಬಾ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಸಾವಿರಾರು ರೈತರು ತಲೆಯ ಮೇಲೆ ಹಾಲಿನ ಕ್ಯಾನ್ ಹೊತ್ತು ವಿಜಯನಗರ ಜಿಲ್ಲೆಯಲ್ಲಿ ಹಾಲಿನ ಮೇಗಾಡೈರಿಯನ್ನ ಸ್ಥಾಪನೆ ಮಾಡಲೇಬೇಕು ಅಂತ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದರು. ಎರಡು ತಿಂಗಳೊಳಗೆ ಮೇಗಾಡೈರಿ ಸ್ಥಾಪನೆ ಆಗದೇ ಹೋದ್ರೆ ಬಳ್ಳಾರಿಗೆ ಹಾಲು ಕೊಡೋದನ್ನ ನಿಲ್ಲಿಸುತ್ತೇವೆ ಅಂತ ರೈತರು ಆಕ್ರೋಶ ಹೊರಹಾಕಿದರು. https://ainkannada.com/property-dispute-family-fight-in-mini-vidhan-soudha-premises-video-goes-viral/ ಬಳ್ಳಾರಿಯಲ್ಲಿರುವ ಈಗಿರುವ ಹಾಲು ಒಕ್ಕೂಟಕ್ಕೆ ವಿಜಯನಗರ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಸೇರಿವೆ. ಹಾಲು ಉತ್ಪಾದನೆಯಲ್ಲು ಸಿಂಹಪಾಲು ವಿಜಯನಗರ ಜಿಲ್ಲೆಯದ್ದು ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 69 ಘಟಕಗಳ ಪೈಕಿ 9 ಸಾವಿರ ಲೀಟರ್,…
ಮೈಸೂರು : ಆಸ್ತಿ ವಿವಾದ ವಿಚಾರವಾಗಿ ಒಂದೇ ಕುಟುಂಬದವರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ನಂಜನಗೂಡು ಮಿನಿ ವಿಧಾನಸೌಧದಲ್ಲಿ ಆವರಣದಲ್ಲಿ ನಡೆದಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದ ಕುಟುಂಬವೊಂದು ಕುಟುಂಬದ ಆಸ್ತಿ ನೋಂದಣಿ ಮಾಡಿಕೊಳ್ಳಲು ಉಪನೋಂದಣಾಧಿಕಾರಿ ಕಛೇರಿಗೆ ಬಂದಿದ್ದರು. https://ainkannada.com/exam-center-staff-refused-to-write-cet-exam-because-it-was-scheduled-for-january/ ಹೆಣ್ಣು ಮಗಳ ಆಸ್ತಿಗೆ ತಾಯಿ ಮೊದಲು ಸಹಿ ಹಾಕಿ ಬಂದಿದ್ದಾರೆ. ಹೆಣ್ಣು ಮಗಳಿಗೆ ಆಸ್ತಿ ನೀಡುವುದನ್ನು ಸಹಿಸದ ಗಂಡು ಮಕ್ಕಳಿಂದ ಗಲಾಟೆ ನಡೆದಿದ್ದು, ಇದೇ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.