Author: AIN Author

ಬೀದರ್ : ಜನಿವಾರ ಹಾಕಿದ್ದಕ್ಕೆ K-CET ಪರೀಕ್ಷೆ ಬರೆಯಲು ಬಿಡದ ಪರೀಕ್ಷಾ ಕೇಂದ್ರ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿ  ಮತ್ತು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗಳ ಅಮಾನವೀಯ ವರ್ತನೆಯಿಂದಾಗಿ ಬೀದರ್ ನಗರದ ಚೌಬಾರ ನಿವಾಸಿ ಸುಚಿವ್ರತ್ ಕುಲಕರ್ಣಿ ಪರೀಕ್ಷೆಯಿಂದ ವಂಚಿತನಾಗಿದ್ದಾರೆ. ಗುಂಪಾ ಸಮೀಪದ ಸಾಯಿ ಸ್ಪೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆಸಿದ್ದು, ಜನಿವಾರ ಹಾಕಿದ್ದಕ್ಕೆ ಗಣಿತ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿ ಅನುಮತಿ ನಿರಾಕಿಸಿದ್ದಾರೆ. https://ainkannada.com/cet-examinees-remove-staff-on-january-brahmin-community-outraged/ ವಿದ್ಯಾರ್ಥಿ ಸುಚಿವ್ರತ್‌ ಜನಿವಾರ ಹಾಕಿಕೊಂಡೆ ದಿ.16ರಂದು ಅದೇ ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ಹಾಗೂ ರಾಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದಾನೆ. ಆದರೆ ಗುರುವಾರ ಗಣಿತ ಪರೀಕ್ಷೆ ನಡೆದಿತ್ತು. ಈ ವೇಳೆ ಜನಿವಾರ ತೆಗೆದು ಹೋಗಿ, ಜನಿವಾರ ಧಾರ ದಿಂದ ಏನಾದ್ರೂ ಮಾಡಿಕೊಂಡರೆ ಯಾರು ಹೊಣೆ…?ಎಂದು ವಿದ್ಯಾರ್ಥಿಗೆ ಸಿಬ್ಬಂದಿ ತಡೆದಿದ್ದಾರೆ. ವಿದ್ಯಾರ್ಥಿ.ಜನಿವಾರ ಹಾಕಿಕೊಂಡೆ ನಿನ್ನೆ ಪರೀಕ್ಷೆ ಬರೆದಿದ್ದೆ, ಈಗಲೂ ಅವಕಾಶ ಕೊಡಿ, ಎಂದು ಮನವಿ ಮಾಡಿಕೊಂಡರೂ ಸಹ ಬಿಡದಲಿಲ್ಲ ಎನ್ನಲಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ…

Read More

ಮೈಸೂರು: ನವನಗರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಿಂದ ಮಹಿಳೆಗೆ ವಂಚನೆ ಪ್ರಕರಣ ಸಂಬಂಧ ಬ್ಯಾಂಕ್‌ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. https://ainkannada.com/illegal-money-transfer-from-co-operative-bank-woman-cheated-out-of-rs-1-41-crore/ ಪ್ರಕರಣದ ಹಿನ್ನೆಲೆ ಬ್ಯಾಂಕಿನ ಸಿಸಿಎಲ್ ಖಾತೆ ಹಾಗೂ ಉಳಿತಾಯ ಖಾತೆಯಲ್ಲಿದ್ದ 1 ಕೋಟಿ 41 ಲಕ್ಷ ರೂ. ಹಣ ಬ್ಯಾಂಕಿನ ಎರಡು ಅನ್ಯ ಖಾತೆಗೆ ವರ್ಗಾವಣೆ ಮಾಡಲಾಗಿದೆ. ತಮ್ಮಅನುಮತಿ ಇಲ್ಲದೆ, ಬ್ಯಾಂಕಿಗೆ ಅಡಮಾನ ಸಾಲಕ್ಕಾಗಿ ನೀಡಿದ್ದ ಚೆಕ್ ಗಳನ್ನು ಬಳಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುನಿತಾ ಎಂಬುವರು ದೂರು ನೀಡಿದ್ದರು.  ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್, ಜನರಲ್ ಮ್ಯಾನೇಜರ್ ಸುರೇಶ್,ಮ್ಯಾನೇಜರ್ ಶಿವಕುಮಾರ್ ಸೇರಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು, ಬ್ಯಾಂಕಿನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಅಧ್ಯಕ್ಷ ಕೆ.ಎನ್. ಬಸಂತ್ ಬಳಸಿಕೊಂಡ ಹಣಕ್ಕೆ…

Read More

ಬೀದರ್ : ಸಿಬಿಐ ಆಫೀಸರ್ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಎರಡು ಲಕ್ಷ ಕಣಕ್ಕೆ ಡಿಮ್ಯಾಂಟ್‌ ಇಟ್ಟಿರುವ ಘಟನೆ  ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ. ನಗರದ ಕರೀಮ್ ಕಾಲೋನಿ ನಿವಾಸಿ ಮುನಿರ್ ತುರುಂಚಿ ಎಂಬ ವ್ಯಕ್ತಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೋರ್ವ ಕರೆ ಮಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಗಳು ಸಿಇಟಿ ಎಕ್ಸಾಂ ಬರೆಯಲು ತೆರಳಿದ್ದಾಳೆ. ಈ ವೇಳೆಯೆ ಮುನೀರ್‌ ಅವರಿಗೆ ಬೆದರಿಕೆ ಕರೆ ಬಂದಿದೆ. https://ainkannada.com/cet-examinees-remove-staff-on-january-brahmin-community-outraged/ ಸಿಬಿಐ ಅಧಿಕಾರಿಗಳೆಂದು  ಹೇಳಿಕೊಂಡು ಕರೆ ಮಾಡಿದ್ದ ವಂಚಕರು ನಾಲ್ಕು ಜನ ಯುವತಿಯರೊಂದಿಗೆ ನಿಮ್ಮ ಮಗಳನ್ನು ಬಂಧಿಸಲಾಗಿದೆ. ಅವರನ್ನು ಬಿಡಬೇಕಾದರೆ 2 ಲಕ್ಷಕ್ಕೆ ನೀಡಬೇಕು ಎಂದು ಡಿಮ್ಯಾಂಡ್‌ ಮಾಡಿದ್ದಾರೆ. 2 ಲಕ್ಷ ಇಲ್ಲ ಅಂದಿದ್ದಕ್ಕೆ, ಎಷ್ಟಿದೆ ಅಷ್ಟು ಹಾಕಿ ಎಂದು 14,000 ಹಣ ಹಾಕಿಸಿಕೊಂಡಿದ್ದಾರೆ.  ಇದಾದ ಬಳಿಕ ಮುನೀರ್‌ ಪೊಲೀಸ್ ಠಾಣೆಗೆ ತಂದೆ ಹೋದ ಬಳಿಕ ಇದು ಫ್ರಾಡ್ ಆಗಿದೆ ಎಂದು ಗೊತ್ತಾಗಿದೆ ನಂತರ ಎಕ್ಸಾಮ್ ಸೆಂಟರ್ ಗೆ ದೌಡಾಯಿಸಿ ಮಗಳನ್ನು ನೋಡಿ…

Read More

ಬೆಂಗಳೂರು:- ನಗರದಲ್ಲಿ ದಿನದಿಂದ ದಿನಕ್ಕೆ ಪುಡಿಪುಡಿಗಳ ಹಾವಳಿ ಮಿತಿ ಮೀರಿದೆ. ಲಾಂಗ್ ಹಿಡಿದು ಪುಡಿಪುಡಿ ಓರ್ವ ಸಿಕ್ಕ ಸಿಕ್ಕ ವಾಹನದ ಗ್ಲಾಸ್ ಹೊಡೆದು ಅಟ್ಟಹಾಸ ಮೆರೆದಿದ್ದಾನೆ. https://ainkannada.com/malemahadeshwar-the-miracle-man-who-became-a-millionaire-of-3-26-crores-in-35-days/ ನಗರದ ಕೆ ಆರ್ ಪುರಂ ಮಾರ್ಕೆಟ್ ನಲ್ಲಿ ನಡೆದ ಘಟನೆ ಜರುಗಿದೆ. ಇಂದು ಬೆಳಗ್ಗಿನ ಜಾವ ಕಾರು, ಗೂಡ್ಸ್ ವಾಹನದ ಗ್ಲಾಸ್ ಪುಡಿ ಪುಡಿಯಾಗಿದೆ. ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ವ್ಯಾಪಾರಿಗಳಿಗೆ,ಜನರಿಗೆ ಬೆದರಿಕೆ ಹಾಕುತ್ತಿದ್ದ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪುಡಿರೌಡಿಯನ್ನ ವಶಕ್ಕೆ ಪಡೆದಿರುವ ಕೆ ಆರ್ ಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

ಶಿವಮೊಗ್ಗ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆ ಅವಕಾಶ ಕೊಡದೇ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ನಡೆದಿದೆ. ಶಿವಮೊಗ್ಗ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ವೇಳೆ ಈ ಘಟನೆ ನಡೆದಿದ್ದು, ಸಿಇಟಿ ಪರೀಕ್ಷೆಗಾಗಿ ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ ಸಿಇಟಿ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಕಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸಿ ಹಾಕಿದ್ದಾರೆ ಎನ್ನಲಾಗಿದೆ. https://ainkannada.com/does-this-kingdom-belong-to-his-father-or-to-those-two-castes-basavaraja-sulibhavi-who-was-running-away/ ಈ ಕೇಂದ್ರದಲ್ಲಿ ಈ ರೀತಿ ಗಾಯತ್ರಿ ಮಂತ್ರ ದೀಕ್ಷೆ ಪಡೆದು ಅಕ್ಕ ಸಾಕ್ಷರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದ ಅವಮಾನಕಾರಿ ಘಟನೆ ಅಧಿಕಾರಿಗಳು ಮಾಡಿದ್ದು ಖಂಡನೀಯ ಎಂದು ಬ್ರಾಹ್ಮಣ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ. ಈ ಬಗ್ಗೆ ವರದಿ ಪಡೆಯೋದಾಗಿ ಕೆಇಎ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Read More

ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣೆಕೆ ಕಾರ್ಯ ನಡೆದಿದ್ದು, ದಾಖಲೆಯ ₹3.26 ಕೋಟಿ ಸಂಗ್ರಹವಾಗಿದೆ. https://ainkannada.com/does-this-kingdom-belong-to-his-father-or-to-those-two-castes-basavaraja-sulibhavi-who-was-running-away/ ಸಾಲು ಸಾಲು ರಜೆಗಳು ಇದ್ದ ಕಾರಣ ಮುದ್ದು ಮಾದಪ್ಪನ ಹುಂಡಿ ತುಂಬು ತುಳುಕಿದೆ. ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಹಾಗೂ ಪರ್ಗಾವಣೆ ಕಾರ್ಯವನ್ನು ಮಹದೇಶ್ವರ ಬೆಟ್ಟದ ಬಸ್‌ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಯಿತು. 35 ದಿನಗಳಲ್ಲಿ ಹುಂಡಿಯಲ್ಲಿ ಹಣ ಮತ್ತು ಇ ಹುಂಡಿ ಸೇರಿ 3,26,95,339 2, ಚಿನ್ನ 47 ಗ್ರಾಂ, ಹಾಗೂ 2 ಕೆ.ಜಿ.200 ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ. 11 ವಿದೇಶಿ ನೋಟುಗಳು ಹಾಗೂ 2000 ಮುಖಬೆಲೆಯ 20 ನೋಟುಗಳು ದೊರೆತಿವೆ. ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ. ಜಿ.ಎಲ್, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮಹದೇವಪ್ಪ ಬಿ., ಮರಿಸ್ವಾಮಿ ಹಾಗು ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶ್ರೀಮತಿ ಕಲ್ಯಾಣಮ್ಮ ಹಾಗೂ…

Read More

ಗದಗ: ರಾಜಕೀಯ ಹಿನ್ನಲೆ, ರಾಜ್ಯದಲ್ಲಿ ಬಲಾಢ್ಯ ಹೊಂದಿದ ಮೇಲ್ಜಾತಿಗಳು ಜಾತಿಗಣತಿ ವಿರೋಧ ಮಾಡ್ತಿವೆ. ಬಲಾಢ್ಯ ಜಾತಿಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ರೂ, ರಾಜಕೀಯ ಅಧಿಕಾರ ಮುಂದಿಟ್ಟು ಕೆಳಜಾತಿ ನಿಯಂತ್ರಿಸುವ ಕೆಲಸ ಮಾಡುತ್ತಿವೆ ಅಂತ ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು. https://ainkannada.com/breaking-those-who-went-to-buy-sheep-ended-up-in-the-cemetery-what-happened/ ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ, ಒಕ್ಕಲಿಗರು, ಕುರುಬರು ಹಾಗೂ ಸ್ವಾಮಿಗಳ ವಿರುದ್ಧ ಹರಿಹಾಯ್ದರು. ಓರ್ವ ರಾಜಕಾರಣಿ ಹೇಳ್ತಾರೆ ಎರಡು ಸಮುದಾಯ ವಿರೋಧ ಕಟ್ಟಿಕೊಂಡು ಹೇಗೆ ಗಣತಿ ಜಾರಿಗೊಳಿಸ್ತಿರಿ ಅಂತಾರೆ. ಈ ರಾಜ್ಯ ಅವರಪ್ಪನದ್ದಾ? ಎರಡು ಜಾತಿಗಳದ್ದಾ? ನೂರಾರು ಜಾತಿಗಳು, ದೊಡ್ಡ ಸಮುದಾಯ ಇದೆ. ಬೆದರಿಸುವ ಗೂಂಡಾಗಿರಿ‌ ಮಾಡುವ ಮೂಲಕ ತನ್ನ ಜಾತಿಯ ಹಿರಿಮೆಯನ್ನು ಉಳಿಸಿಕೊಳ್ಳಲು ಕೆಲವು ಹೆಗ್ಗಣಗಳು ಬಂದು ವಿನಾಕಾರಣ ಬಾಯಿ ಮಾಡುತ್ತಿವೆ ಎಂದರು. ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತೊಡೆದು ಹಾಕಲು ಮೇಲ್ಜಾತಿಗಳು ಕೆಲಸ ಮಾಡುತ್ತಿವೆ. ತಮ್ಮ ಜಾತಿಯ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡ್ತಿದ್ದಾರೆ. ರಾಜಕಾರಣಿಗಳು ಅಷ್ಟೇ ಅಲ್ಲಾ ಸ್ವಾಮಿಗಳು ಬೇಕಾಬಿಟ್ಟಿಯಾಗಿ ಮಾತನಾಡ್ತಿದ್ದಾರೆ. ಲಿಂಗಾಯತ ಸ್ವಾಮಿಜಿ…

Read More

ರಾಯಚೂರು:- ಜಿಲ್ಲೆಯ ದೇವದುರ್ಗ ತಾ. ಅಮರಾಪುರ ಗ್ರಾಮದ ಬಳಿ ಕುರಿಗಳ ಖರೀದಿಗೆ ಹೊರಟಿದ್ದ ನಾಲ್ವರು ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ಜರುಗಿದೆ. https://ainkannada.com/showing-private-parts-to-women-and-perverting-them-street-lust-arrested/ ಮೃತರನ್ನು ನಾಗರಾಜ್, ಸೋಮ, ನಾಗಭೂಷಣ, ಮುರಳಿ ಎಂದು ಗುರುತಿಸಲಾಗಿದೆ. ಕುರಿಗಳ ಖರೀದಿಗೆ ಹೊರಟಿದ್ದವರ ಬೊಲೆರೋ ಪಿಕಪ್ ವಾಹನವು ರಾಷ್ಟ್ರೀಯ ಹೆದ್ದಾರಿ ಬಳಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ನಾಲ್ವರು ತೆಲಂಗಾಣದ ಹಿಂದೂಪುರ ಮೂಲದವರು. ಹಿಂದೂಪುರದಿಂದ ಶಹಾಪೂರ ಸಂತೆಗೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ. ಮಾಹಿತಿ ತಿಳಿದ ಕೂಡಲೇ ಗಬ್ಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ರಿಮ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ.

Read More

ಬೆಂಗಳೂರು:- ಮಹಿಳೆಯರಿಗೆ ಖಾಸಗಿ ಅಂಗ ತೋರಿ ವಿಕೃತಿ ಮೆರೆಯುತ್ತಿದ್ದ ಬೀದಿ ಕಾಮಣ್ಣನನ್ನು ಶಿವಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರ್ತಿಕ್ ಬಂಧಿತ ಆರೋಪಿ. https://ainkannada.com/hair-worth-25-lakhs-stolen-police-shocked-by-strange-incident/ ಈತ ಹಿಳೆಯರಿಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ. ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಏಪ್ರಿಲ್ 13 ರಂದು 10.30 ಕ್ಕೆ 4 ಕೃತ್ಯ ನಡೆದಿತ್ತು. ಅಂದು ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ಮಹಿಳೆ ತೆರಳ್ತಿದ್ದರು. ಈ ವೇಳೆ ಎದುರು ಮನೆಯಲ್ಲಿರುವ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಇನ್ನೂ ಇದನ್ನು ಪ್ರಶ್ನೆ ಮಾಡಿದ ಮಹಿಳೆ ಪತಿ ಮೇಲೆ ಆಸಾಮಿ ಹಲ್ಲೆ ಮಾಡಿದ್ದ. ಅಲ್ಲದೇ ಜಗಳ ಬಿಡಿಸಲು ಬಂದವರ ಮೇಲು ಅಟ್ಯಾಕ್ ಮಾಡಿದ್ದ. ಎರಡನೇ ಮಹಡಿಯಿಂದ ಹಾಲೋಬ್ಲಾಕ್, ಹೂವಿನ ಪಾಟ್ ಕೆಳ ಮಹಡಿಯಲ್ಲಿದ್ದವರ ಮೇಲೆ ಎಸೆದಿದ್ದ. ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿತ್ತು. ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕಾರ್ತಿಕ್ ನನ್ನು…

Read More

ಬೆಂಗಳೂರು :- ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಚಿನ್ನ, ಬೆಳ್ಳಿ, ಬೈಕ್, ಕಾರು ಕಳ್ಳತನ ಅಲ್ಲದೇ, ಮನೆ, ಬ್ಯಾಂಕ್ ದರೋಡೆ ಮಾಡಿ ಹಣ ಕಳ್ಳತನ ಮಾಡುವ ಸುದ್ದಿಯನ್ನು ಕೇಳುತ್ತಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಖದೀಮ, ಮಹಿಳೆಯರ ತಲೆ ಕೂದಲು ಕದ್ದಿದ್ದಾನೆ. https://ainkannada.com/rain-news-heavy-rain-likely-in-bengaluru-this-evening/ ಹೌದು, ಇಲ್ಲೊಬ್ಬಳು ಮಹಿಳೆ ಬಾಚಿದ ತಲೆಕೂದಲನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯ ಲಕ್ಷ್ಮೀಪುರ ಕ್ರಾಸ್‌ನಲ್ಲಿ ಬೆಳಕಿಗೆ ಬಂದಿದೆ. ಮಾ.1 ರಂದು ಲಕ್ಷ್ಮೀಪುರ ಕ್ರಾಸ್‌ನ ಗೋದಾಮಿನಿಂದ ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ ಗೋದಾಮಿನ ಬೀಗ ಮುರಿದು ಕೂದಲನ್ನು ಕದ್ದಿದ್ದರು. ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ರೂ. ಬೆಲೆಬಾಳುವ 400 ಕೆ.ಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ಗೋದಾಮಿನ ಮಾಲೀಕ ವೆಂಕಟರಮಣ ಕಳ್ಳತನ ಕುರಿತು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಕದ್ದ ಕೂದಲನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ.…

Read More