Author: AIN Author

ಹಾಸನ:- ಜಿಲ್ಲೆ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. https://ainkannada.com/why-is-the-water-in-a-pot-cold-in-summer-clay-pot-is-bad-for-health/ 40 ವರ್ಷದ ಹರಿಣಾಕ್ಷಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಹರಿಣಾಕ್ಷಿ 16 ವರ್ಷಗಳ ಹಿಂದೆ ಲಿಂಗಾಪುರ ಗ್ರಾಮದ ಶೇಖರ್ ಜೊತೆ ವಿವಾಹವಾಗಿದ್ದರು. ಪತಿ ತನ್ನ ಪತ್ನಿಯನ್ನು ಸದಾ ಅನುಮಾನದಿಂದ ನೋಡುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದರಿಂದ ಮನನೊಂದಿದ್ದ ಹರಿಣಾಕ್ಷಿ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More

ರಾಜ್ಯದಲ್ಲಿ ಬಿಸಿಲಿನ ತಾಪ ಮುಂದುವರೆದಿದೆ. ಸಾಂದರ್ಭಿಕವಾಗಿ ಬೀಳುವ ಸಣ್ಣ ಮಳೆ ಖಂಡಿತವಾಗಿಯೂ ಪರಿಹಾರ ನೀಡುತ್ತದೆ. ಆದರೆ, ಗಮನಾರ್ಹ ಪರಿಣಾಮ ಬೀರಲ್ಲ. ಅಂತಹ ಪರಿಸ್ಥಿತಿಯಲ್ಲಿ ಅನೇಕರು ಫ್ರಿಡ್ಜ್‌ನಲ್ಲಿ ತಣ್ಣೀರು ಇಡಲು ಪ್ರಾರಂಭಿಸಿರಬಹುದು. ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಟ್ಟು ಅಲ್ಲಿಂದ ನೀರು ಕುಡಿಯುತ್ತಾರೆ. ಕೆಲವರಿಗೆ ರೆಫ್ರಿಜರೇಟರ್ ನೀರು ಸರಿಹೋಗುವುದಿಲ್ಲ. https://ainkannada.com/gold-prices-rise-again-do-you-know-what-the-gold-rate-is/ ಇನ್ನೂ ಬೇಸಿಗೆಯಲ್ಲಿ ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಟ್ಟು ಅಲ್ಲಿಂದ ನೀರು ಕುಡಿಯುತ್ತಾರೆ. ಕೆಲವರಿಗೆ ರೆಫ್ರಿಜರೇಟರ್ ನೀರು ಸರಿಹೋಗುವುದಿಲ್ಲ. ಅದರಿಂದ ಗಂಟಲು ನೋವು, ಶೀತದಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದರೆ ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದರಿಂದ ಇದು ಸಂಭವಿಸುವುದಿಲ್ಲ. ಮಣ್ಣಿನ ಮಡಿಕೆಯಲ್ಲಿರುವ ನೀರು ಆರೋಗ್ಯದ ಮೇಲೆ ಸಮಸ್ಯೆ ಬೀರಲ್ಲ. ಅದರ ರುಚಿಯಲ್ಲಿ ಸಿಹಿ ಇರುತ್ತದೆ. ಪ್ರಶ್ನೆ ಏನೆಂದರೆ ಮಣ್ಣಿನ ಮಡಕೆಯಲ್ಲಿರುವ ನೀರು ಹೇಗೆ ತಂಪಾಗಿರುತ್ತದೆ. ವಾಸ್ತವವಾಗಿ.. ಮಡಿಕೆಯ ಗೋಡೆಗಳಲ್ಲಿ ಲೆಕ್ಕವಿಲ್ಲದಷ್ಟು ಸಣ್ಣ, ಸಣ್ಣ ರಂಧ್ರಗಳಿರುತ್ತವೆ. ಅವುಗಳ ಮೂಲಕ ನೀರು ಸೋರುತ್ತಲೇ ಇರುತ್ತದೆ. ಇದರಿಂದ ಮಡಿಕೆಯ ಮೇಲ್ಮೈ ಯಾವಾಗಲೂ ತೇವವಾಗಿರುತ್ತದೆ. ಈ ರಂಧ್ರಗಳಿಂದ…

Read More

ಭಾರತ ದೇಶ ಚಿನ್ನವನ್ನ ಖರೀದಿಸುವಲ್ಲಿ ವಿಶ್ವದ ಅತಿ ದೊಡ್ಡ ಎರಡನೇ ದೇಶವಾಗಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ನಿಜಕ್ಕೆ ಸ್ಥಳೀಯ ಪೂರೈಕೆಗಿಂತ ಹೆಚ್ಚಿನ ಪ್ರಮಾಣದ ಚಿನ್ನ ಭಾರತಕ್ಕೆ ಬೇಕಾಗುತ್ತೆ. ಎಲ್ಲರಿಗೂ ಗೊತ್ತಿರುವಂತೆ, ಭಾರತ ಅಗತ್ಯವಿರುವ ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ, ಮರುಬಳಕೆ ಮಾಡಿಕೊಳ್ಳುವುದರಿಂದ ಪೂರೈಸಿಕೊಳ್ತಿದೆ. ಈ ಚಿನ್ನದ ಧಾರಣೆಯನ್ನ ಅಂತಾರಾಷ್ಟ್ರೀಯ ಬೆಲೆಗಳ ಜೊತೆ, ಆಮದು ಸುಂಕ ಮತ್ತು ಇತರೆ ತೆರಿಗೆಗಳು ಪ್ರಭಾವ ಬೀರುವಂತೆ ಮಾಡುತ್ತವೆ. https://ainkannada.com/rcb-to-face-home-challenge-tomorrow-what-will-patidars-plan-be-to-give-punjab-a-punch/ ಏಪ್ರಿಲ್ 17 ಗುರುವಾರದ ವೇಳೆಗೆ, ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,140 ರೂ. ಏರಿಕೆಯಾಗಿದೆ. ಅಂದ್ರೆ ಈಗ 10 ಗ್ರಾಂಗೆ 97,310 ರೂ ಬೆಲೆ ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,050 ರೂ. ಏರಿಕೆಯಾಗಿದೆ. ಈಗ ಇದರ 10 ಗ್ರಾಂ ಬೆಲೆ 89,200 ರೂ. ಆಗಿದೆ. ಅದೇ ರೀತಿ, 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 860 ರೂ. ಏರಿಕೆಯಾಗಿದ್ದು.. ಇದರ 10 ಗ್ರಾಂ ಬೆಲೆ…

Read More

ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್ ಕಿಂಗ್ಸ್ ಬ್ಯಾಟಲ್​ಗೆ ಕೌಂಟ್​ಡೌನ್​​ ಶುರುವಾಗಿದೆ. ಚಿನ್ನಸ್ವಾಮಿ ಬ್ಯಾಟಲ್​ ಗ್ರೌಂಡ್​ನಲ್ಲಿ ಮುಖಾಮುಖಿಯಾಗ್ತಿರುವ ಉಭಯ ತಂಡಗಳ ಫೈಟ್​​ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ತವರಿನಲ್ಲಿ ಅಡ್ತಿರೋ 3ನೇ ಪಂದ್ಯವನ್ನಾದರೂ ಗೆಲ್ಲೋಕೆ ಪಣ ತೊಟ್ಟಿರುವ ಆರ್​ಸಿಬಿಗೆ ಪಂಜಾಬ್ ಕಿಂಗ್ಸ್ ಎದುರು ಟಫ್​​ ಟಾಸ್ಕ್​ ಎದುರಾಗಲಿದೆ. ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರೋ ಪಂಜಾಬ್​​ಗೆ ಪಂಚ್​​ ಕೊಡಬೇಕಂದ್ರೆ ಮೊದಲು ಪಂಜಾಬ್​ ಪವರ್​ ಕಟ್​​ ಮಾಡಬೇಕಿದೆ. ಹೋಮ್​​ಗ್ರೌಂಡ್​ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್​​ಸಿಬಿ, ಪಂಜಾಬ್​ ಕಿಂಗ್​ ಮಣಿಸುವ ಕನಸಿನಲ್ಲಿದೆ. https://ainkannada.com/prabhas-steps-up-to-build-a-hospital-fans-say-love-you-darling/ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿಯೋ ಯುವ ಎಡಗೈ ಬ್ಯಾಟರ್ ಪ್ರಿಯಾಂಶ್​, ಮೊದಲ ಬಾಲ್​ನಿಂದಲೇ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪಂಜಾಬ್ ಸಕ್ಸಸ್​ ಸಿಕ್ರೇಟ್​ ಆಗಿರುವ ಈ ಡೆಲ್ಲಿ ಬಾಯ್, 6 ಪಂದ್ಯಗಳಿಂದ 216ರ ಬ್ಯಾಟಿಂಗ್ ಸ್ಟ್ರೈಕ್​​ರೇಟ್​ನಲ್ಲಿ 216 ರನ್ ಸಿಡಿಸಿದ್ದಾರೆ. ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಈತನಿಗೆ, ಚಿನ್ನಸ್ವಾಮಿಯ ಚಿಕ್ಕ ಗ್ರೌಂಡ್​ ನಿಜಕ್ಕೂ ಹೇಳಿ ಮಾಡಿಸಿದಂತಿದೆ. ಅಕಸ್ಮಾತ್ ಇಲ್ಲಿ ಪ್ರಿಯಾಂಶ್ ಸಿಡಿದು ನಿಂತ್ರೆ,…

Read More

ಆಂಧ್ರಪ್ರದೇಶ:- ಗುತ್ತಿಗೆದಾರನೊಬ್ಬ ಪಾರ್ಕ್ ಮಾಡಲಾದ ಕಾರನ್ನು ತೆರವುಗೊಳಿಸದೇ ಅದಕ್ಕೂ ಸೇರಿ ಕಾಂಕ್ರಿಟ್ ಹಾಕಿಕೊಂಡು ರಸ್ತೆ ನಿರ್ಮಾಣ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ಜರುಗಿದೆ. https://ainkannada.com/ram-charan-sandeep-reddy-vanga-to-pair-up-for-action-film-devil/ ಬಾಪಟ್ಲಾ ಜಿಲ್ಲೆಯ ವೆಟಪಾಲೇಂ ಮಂಡಲದ ಅಮೋದಗಿರಿಟಪ್ಣಂ ಎಂಬಲ್ಲಿ ಈ ಘಟನೆ ನಡೆದಿದೆ. ಬುದ್ದಿ ವೆಂಕಟರಮಣ ಎಂಬ ವ್ಯಕ್ತಿ ಮನೆಯ ಮುಂದೆ ನಡೆದಿದೆ. ಬುದ್ದಿ ವೆಂಕಟರಮಣ ಅವರ ಮನೆಯಿಂದ ಚೆನ್ನಮ್ ಸೆಟ್ಟಿ ಸುಬ್ಬರಾಮ್ ಎಂಬವರ ಮನೆಯವರೆಗೆ ದೇಶಾಯಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 4.10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ಹೊಸ ರಸ್ತೆ ನಿರ್ಮಾಣ ಮಾಡುವಾಗ ಅಡ್ಡಲಿರುವ ಕಲ್ಲು, ಕಸ, ಕಡ್ಡಿ ವಸ್ತುಗಳನ್ನು ತೆರವುಗೊಳಿಸುವುದು ಗುತ್ತಿಗೆದಾರರ ಮೊದಲ ಜವಾಬ್ದಾರಿಯಾಗಿರುತ್ತದೆ. ಆದರೆ ಇಲ್ಲಿ ಹಾಗಾಗಲಿಲ್ಲ. ಈ ರಸ್ತೆ ನಿರ್ಮಾಣ ಮಾಡುತ್ತಿದ್ದಾಗ ವೆಂಕಟ ರಮಣ ಅವರ ಮನೆ ಮುಂದೆ ಒಂದು ಹಳೆಯ ಕಾರನ್ನು ನಿಲ್ಲಿಸಲಾಗಿತ್ತು. ಇದನ್ನು ರಸ್ತೆ ನಿರ್ಮಾಣ ಮಾಡುವಾಗ ತೆರವುಗೊಳಿಸಲೇ ಇಲ್ಲ. ಗುತ್ತಿಗೆದಾರ ಕಾರನ್ನು ತೆಗೆಯದೇ ಅದಕ್ಕೂ ಸೇರಿ ಕಾಂಕ್ರಿಟ್…

Read More

ದೊಡ್ಡಬಳ್ಳಾಪುರ:  ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ನೂತನವಾಗಿ ರೊಬೋಟಿಕ್‌ ಆರ್ಟಿಫಿಷಿಯಲ್ ಕೋರ್ಸ್ ಜೊತೆಗೆ ಆರ್ &‌ ಡಿ ವಿಭಾಗವನ್ನು ಎಂಜಿನಿಯರಿಂಗ್ ಕಾಲಿನ್ಸ್ ಏರೋಸ್ಪೇಸ್ ನ ಉಪಾಧ್ಯಕ್ಷ ಸವ್ಯಸಾಚಿ ಶ್ರೀನಿವಾಸ್ ಅವರು ಉದ್ಘಾಟನೆ ಮಾಡಿದರು. ಇದೆ ವೇಳೆ ಮಾಧ್ಯಮದವರೊಂದಿಗೆ ಗೀತಂ ಯೂನಿರ್ವಸಿಟಿಯ ಉಪಕುಲಪತಿ ಪ್ರೊ. ಕೆ.ಎನ್ ಎಸ್ ಆರ್ಚಾಯ ಮಾತನಾಡಿ, ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗಲಿದೆ. ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ಕೋರ್ಸ್ ಮುಗಿಯುವದೊಳಗೆ ಒಳ್ಳೆ ಸಂಬಳ ಸಿಗುವ ಕೆಲಸ ಪಡೆಯಬಹುದು ಎಂದರು. https://ainkannada.com/maha-water-politics-the-maharashtra-governments-delay-policy-is-a-slippery-slope/ ಸಿರೆನಾ ಟೆಕ್ನೋಲಾಜೀಸ್ ಕಂಪನಿಗೆ ನಮ್ಮ ಕಾಲೇಜಿನಿಂದ ಈಗಾಗಲೇ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದು ನಮ್ಮ ಯೂನಿರ್ವಸಿಟೆಗೆ ಹೆಮ್ಮೆಯ ಸಂಗತಿ. ಮುಂದೆ ಈ ಕೋರ್ಸ್ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಆಗಲಿ ಎಂದು ಆಶಿಸಿದರು.…

Read More

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತದ ಹಿಟ್ ಆಂಡ್ ರನ್ ಪ್ರಕರಣದ ಆರೋಪಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಸತತ ಮೂರು ತಿಂಗಳ ತನಿಖೆ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದರು. ಇದಾದ ಕೆಲವೇ ಹೊತ್ತಲ್ಲಿ ಕಾರು ಅಪಘಾತಕ್ಕೆ ಕಾರಣವಾಗಿದ್ದ ಚಾಲಕನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.   ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸರು ತನಿಖೆ ನಡೆಸಿದ್ದು, ಅಪಘಾತಪಡಿಸಿದ‌‌ ಮಹಾರಾಷ್ಟ್ರ ಪಾಸ್ಸಿಂಗ್ ಲಾರಿ ಜಪ್ತಿ  ಮಾಡಲಾಗಿದೆ. ಕಳೆದ ಜನವರಿ 14 ಸಂಕ್ರಾಂತಿ ಹಬ್ಬದ ದಿನವೇ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ಬೆಂಗಳೂರಿನಿಂದ ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಗನ್ ಮ್ಯಾನ್, ಚಾಲಕ ಸೇರಿ ನಾಲ್ವರು ಇದ್ದರು. https://ainkannada.com/minister-lakshmi-hebbalkar-car-accident-case/ ಕಾರು‌‌ ಅಪಘಾತ ಬಗ್ಗೆ ಕಿತ್ತೂರು ಪೊಲೀಸ್ ಠಾಣೆ ಸಚಿವೆ ಕಾರು ಚಾಲಕ ಹಿಟ್ ಆಂಡ್ ರನ್ ಕೇಸ್ ದಾಖಲಿಸಿದ್ದರು.  ಸರ್ಕಾರಿ ಕಾರು ಚಾಲಕ ಶಿವಪ್ರಸಾದ ದೂರು ನೀಡಿದ್ದನು.…

Read More

ತುಮಕೂರು : ಜಮೀನು ವಿವಾದದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. https://ainkannada.com/fire-seen-on-a-hill-near-tungabhadra-dam/ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ಭೈರನಾಯಕನಹಳ್ಳಿ ಗ್ರಾಮದ ಮುದ್ದರಾಜ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ ಜಮೀನು ವಿವಾದದ ಹಿನ್ನೆಲೆಯಲ್ಲಿ 2018 ಮಾರ್ಚ್ 16ರಂದು ಕಪನಯ್ಯ ಎಂಬುವರ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಕೊಲೆ ಬಿಡಿಸಿಲು ಮುಂದಾದ ಕಪನಯ್ಯ ಸಹೋದರ ಚನ್ನಯ್ಯ ಎಂಬುವರ ಕೊಲೆಗೂ ಪ್ರಯತ್ನಿಸಿದ್ದ. ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಬಿ.ಜಯಂತ ಕುಮಾರ್ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.

Read More

ಬೆಳಗಾವಿ : ಅನಧಿಕೃತ ಮಳಿಗೆಗಳ ತೆರವಿಗೆ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಸುಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿರುವ ಮಳಿಗೆಗಳನ್ನ ಶ್ರೀರೇಣುಕಾ ಯಲ್ಲಮ್ಮದೇವಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಶೋಕ ದುಡಗುಂಟಿ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ ತೆರವು ಕಾರ್ಯಾಚರಣೆ ವಿರೋಧಿಸಿ ನೂರಾರು ಜನರು ದೇವಸ್ಥಾನದ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಅಂಗಡಿಗಳನ್ನು ತೆರವು ಮಾಡದಂತೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.  ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಯಿತು. https://ainkannada.com/madappa-the-lord-of-the-seven-rains-is-again-the-lord-of-the-fort/ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ ರಾಜ್ಯ, ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ನೀಡಲಾಗಿದ್ದು, ಕೆಲ ತಿಂಗಳು ಹಿಂದೆಯಷ್ಟೇ ಸಿಎಂ ಸಿದ್ದರಾಮಯ್ಯ ಸವದತ್ತಿ ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ಮಾಡಿದರು. ಕಾಮಗಾರಿ ಹಿನ್ನೆಲೆ ಮಳಿಗೆಗಳ ತೆರವಿಗೆ ಮುಂದಾಗಿತ್ತು.

Read More

ಚಾಮರಾಜನಗರ: ಏಳುಮಳೆಯ ಒಡೆಯ ಮಾದಪ್ಪ ಮತ್ತೆ ಕೋಟೆಯ ಒಡೆಯನಾಗಿದ್ದಾನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,   ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿಯ ಹಣ  ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 35 ದಿನಗಳ ಅವಧಿಯಲ್ಲಿ ಬರೋಬ್ಬರಿ 3.26 ಕೋಟಿ ಕೋಟಿ ರೂ. ಸಂಗ್ರಹವಾಗಿದೆ. https://ainkannada.com/upalokayukta-visits-kolars-stone-mining-area/ ಸಾಲೂರು ಶ್ರೀಗಳ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕಳೆದ 35ಗಳ ಅವಧಿಯಲ್ಲೇ 47 ಗ್ರಾಂ ಚಿನ್ನ, 2 ಕೆಜಿ 200 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದರೊಂದಿಗೆ 11 ವಿದೇಶಿ ನೋಟುಗಳು, 2,000 ರೂ. ಮುಖಬೆಲೆಯ 20 ನೋಟುಗಳು ಕಂಡುಬಂದಿವೆ.

Read More