Author: AIN Author

ಚಿತ್ರದುರ್ಗ : ಜಿಲ್ಲೆ ವಿವಿಧೆಡೆ ಭಾರೀ ಮಳೆಯಾಗಿದ್ದು, ಭಾರೀ ಅವಘಡ ಸಂಭವಿಸಿದೆ. ಚಳ್ಳಕೆರೆಯಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತಾ ಮಳೆಯಿಂದಾಗಿ, ಗೌರಸಮುದ್ರ ಗ್ರಾಮದಲ್ಲಿ ಬೃಹತ್ ಬೇವಿನ ಮರವು ಧರೆಗುರುಳಿದೆ. https://ainkannada.com/festive-wheat-festival-celebrated-in-manumainahatti/ ಈ ಬೇವಿನ ಮರವು ಗೌರಸಮುದ್ರದ ಮಾರಮ್ಮ ದೇವಿಯ ಮರವಾಗಿದೆ. ಬರಕ್ಕೆ ನಿತ್ಯವೂ ಮಹಿಳೆಯರು ಪೂಜೆಯನ್ನು ಸಲ್ಲಿಸುತ್ತಿದ್ದರು. ಈ ಮರವು ಧರೆಗುರುಳ್ಳಿದ್ದು, ಯಾವುದೇ ಪ್ರಾಣಾಪಾಯವು ಸಂಭವಿಸಿಲ್ಲ. ಮರ ಉರುಳಿದ್ದರಿಂದ ಮೂರು ಮನೆಗಳಿಗೆ ಹಾನಿಯಾಗಿದೆ. ಮನೆಯ ಗೋಡೆಗಳು ಮರ ಬಿದ್ದ ರಭಸಕ್ಕೆ ಸೀಳಿ ಹೋಗಿವೆ. ಮನೆಯಲ್ಲಿದ್ದವರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.

Read More

ಚಿತ್ರದುರ್ಗ : ಜಿಲ್ಲೆಯ ಎನ್ ಮಹದೇವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದ ಶ್ರೀ ಸದ್ಗುರು ಸೇವಾಲಾಲ್ ಹಾಗೂ ಶ್ರೀ ಮಾರಿಯಮ್ಮ ದೇವಿಯ ತೀಜ್ (ಗೋಧಿ) ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇದೇ ಹಬ್ಬದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಕೆಎಎಸ್‌ ಅಧಿಕಾರಿ ಎನ್‌ .ರಘುಮೂರ್ತಿ ಅವರು ಮಾತನಾಡಿ, ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ  ಶ್ರೀಮಂತವಾದ ಸಮಾಜ ಇದ್ದರೆ ಅದು ಬಂಜಾರ ಸಮುದಾಯ. ಶ್ರೀ ಸದ್ಗುರು ಸೇವಾಲಾಲ್ ಹಾಕಿಕೊಟ್ಟ ದಾರಿಯಲ್ಲಿ ಬಂಜಾರ ಸಮುದಾಯ ಇಡೀ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕವಾಗಿ ನೆಲೆಗಟ್ಟಿನಲ್ಲಿ ಸ್ವಾಭಿಮಾನ ಇಟ್ಟುಕೊಂಡು ಬಂಜಾರ ಸಮುದಾಯ ಬದುಕುತ್ತಿದ್ದಾರೆ. https://ainkannada.com/opposition-to-caste-census-debate-is-natural-minister-satish-jarkiholi/ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಶಿಕ್ಷಣ ಪಡೆದುಕೊಂಡು ಈ ರಾಷ್ಟ್ರದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ಇರುವುದರಿಂದ ದಕ್ಷಿಣ ಭಾರತ ಹಾಗೂ ಈ ಭಾಗದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ. ಇಡೀ ಮನುಕುಲಕ್ಕೆ ಸಮಾಜಕ್ಕೆ ಬಂಜಾರ ಸಮುದಾಯ ನಮಗೆಲ್ಲಾ ಪ್ರೇರಣೆಯಾಗಿದೆ. ಆದ್ದರಿಂದ ಬಂಜಾರ ಸಮುದಾಯ ಈ ಧಾರ್ಮಿಕ ಆಚರಣೆ ಕಾರ್ಯಗಳ ಯಾವತ್ತೂ ಕೈ ಬಿಡಬಾರದು. ಈ ಗ್ರಾಮದಲ್ಲಿ ಪ್ರತಿಯೊಬ್ಬ…

Read More

ಹುಬ್ಬಳ್ಳಿ:  ಜಾತಿಗಣತಿ ಪರ ವಿರೋಧ ಚರ್ಚೆ ವಿಚಾರವಾಗಿ ಅದು ಸ್ವಾಭಾವಿಕ, ಯಾವುದೇ ವರದಿ ಬಂದಾಗ ನೂರಕ್ಕೆ ನೂರು ಒಪ್ಪಲ್ಲ ಎಂದು ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಳೆ ವಿಶೇಷ ಕ್ಯಾಬಿನೇಟ್ ಇದೆ. ತರಾತುರಿಯಲ್ಲಿ ಸರ್ಕಾರ ಮಾಡಲ್ಲ ̤ ಸಾಧಕ ಬಾಧಕ ಚರ್ಚೆ ಮಾಡಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಇದರ ಹಿಂದೆ ಯಾವುದೇ ರಾಜಕೀಯ ಲಾಭ ನಷ್ಟವಾಗಲ್ಲ. ಕೆಲವರು ಬಹಿರಂಗವಾಗಿ, ಕೆಲವರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಸದನ ಕರೆದ್ರೆ ಒಳ್ಳೆಯದ. ಈ ಬಗ್ಗೆ ಬಹಿರಂಗ ಚರ್ಚೆಯಾಗೋದು ಒಳ್ಳೆಯದು ಎಂದರು https://ainkannada.com/caste-census-report-outdated-former-minister-b-c-patil-sarcastically/ ಮೋದಿ ಅವರು ರಾಜ್ಯ ಸರ್ಕಾರ ಕೆಡವಲು ಯತ್ನಿಸುತ್ತಾರೆ ಅನ್ನೋ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೊದಲ ದಿನದಿಂದ ನಾನು ಕೂಡಾ ಇದನ್ನೇ ಹೇಳಿದ್ದೇನೆ. ನಮ್ಮ ಸರ್ಕಾರ ಕೊನೆ ದಿನ ಇದೆ ಅಂದ್ರು ಪ್ರಯತ್ನ ಮಾಡ್ತಾರೆ. ನಾವು 14೦ ಶಾಸಕರಿದ್ದೇವೆ ಯಾವುದೇ ಆತಂಕವಿಲ್ಲ. ವಕ್ಪ್  ಕಾಯ್ದೆ ಬಗ್ಗೆ ಸರ್ಕಾರ…

Read More

ಹಾವೇರಿ : ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವರದಿ ಚರ್ಚೆ ಕುರಿತು ಮಾಜಿ ಸಚಿವ ಬಿ.ಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.  ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿಯ ಸಮೀಕ್ಷೆಯೂ ವೈಜ್ಞಾನಿಕವಾಗಿಲ್ಲ ನಮ್ಮ ಮನೆಗೆ ಬಂದು ಎಷ್ಟು ಜನ ಲಿಂಗಾಯತರು ಇದ್ದೀರಿ ಅಂತೇಳಿ ಯಾರಾದರೂ ಬಂದು ಕೇಳಿದ್ರಾ..?, ನಮ್ಮ ಪಠಣ್ ಅವರ ಮನೆಗೆ ಹೋಗಿ ಕೇಳಿದ್ರಾ, ಹನಮಂತಪ್ಪನ ಮನೆಗೆ ಹೋಗಿ ಕೇಳಿದ್ರಾ..? ಕಟ್ಟೆ ಮೇಲೆ ಕುತ್ಕೊಂಡು ಶಾನಬೋಕಿ ಮಾಡ್ಕೊಂಡು..ಏ ಊರಲ್ಲಿ ಲಿಂಗಾಯತ ಎಷ್ಟು ಇದ್ದೀರಿ. ಕುರುಬರು ಎಷ್ಟು ಇದ್ದೀರಿ ಎಂದು ಬರೆದುಕೊಂಡು ಹಳಸಿದ ವರದಿ ತಂದರೆ ಒಪ್ಪಬೇಕಾ..? https://ainkannada.com/government-will-definitely-fall-if-caste-census-is-implemented-rambhapuri-jagadgurus-explosive-statement/ ನೀವು ಮಾಡಿದ ಜಾತಿಗಣತಿ ವರದಿ ಸಮೀಕ್ಷೆ ಸರಿಯಿಲ್ಲ. ವೈಯಕ್ತಿಕ ಲಾಲಸೆ.ನಿಮ್ಮ ಕುರ್ಚಿಯ ಭದ್ರತೆಗೆ ಮಂಡನೆ ಮಾಡ್ತಿರೋದು. ಇದೊಂದು ಹಳಸಿದ ವರದಿಯಾಗಿದೆ. 2013-14 ರಲ್ಲಿ ಪ್ರೇಶ್ ಇತ್ತು ಆವಾಗಲೇ ಮಂಡನೆ ಮಾಡಬೇಕಿತ್ತು. ನಿಮ್ಮ ಕುರ್ಚಿ ಅಲ್ಲಾಡುತ್ತಿದೆ ಎಂದು ಹೇಳಿ, ಡ್ರೈವರ್ಟ್ ಮಾಡಿದರೆ ನಾವು ಒಪ್ಪಲ್ಲ ಎಂದಿದ್ದಾರೆ.

Read More

ರಾಮನಗರ : ರಾಮನಗರ ಜಿಲ್ಲೆಯಲ್ಲಿ ದಿನೇ ದಿನೇ ಬೈಕ್‌ ವೀಲ್ಹಿಂಗ್‌ ಪುಂಡರ ಹಾವಳಿ ಹೆಚ್ಚಾಗುತ್ತಿದೆ.  ಬೈಕ್‌ ವೀಲ್ಹಿಂಗ್‌ ಮಾಡುತ್ತಿದ್ದ ಪುಂಡರನ್ನ ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಮನಗರದ ಯಾರಬ್ ನಗರದಲ್ಲಿ ನಡೆದಿದೆ. ಚನ್ನಪಟ್ಟಣ ಸಂಚಾರಿ ಠಾಣೆ ಪೊಲೀಸ್ ಪೇದೆಗಳಾದ ಜಯಕುಮಾರ್ ಹಾಗೂ ಬಸವರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಬೀಡಿಕಾಲೋನಿ ನಿವಾಸಿ ಸೈಫ್‌ ಖಾನ್‌  ಮತ್ತವನ ತಂಡ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ವೀಲ್ಹಿಂಗ್‌ ಮಾಡುತ್ತಿತ್ತು. ಈ ಹಿನ್ನೆಲೆ ಚನ್ನಪಟ್ಟಣ ಪೊಲೀಸರ ಪ್ರಕರಣ ದಾಖಲಿಸಿಕೊಂಡು ಸೈಫ್ ಖಾನ್ ಬಂಧಿಸಿ, ಬೈಕ್ ಸೀಜ್ ಮಾಡಲು ತೆರಳಿದ್ದರು.  ಈ ವೇಳೆ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಮಾಡಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. https://ainkannada.com/dalit-community-protest-in-front-of-police-station-in-a-semi-naked-manner/ ಸದ್ಯ ಈ ಸಂಬಂಧ ರಾಮನಗರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೈಫ್ ಖಾನ್, ಅತನ ತಂದೆ ಯುಸೂಫ್ ಖಾನ್ ಸೇರಿ ಆರು ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಬಿಎನ್ ಎಸ್…

Read More

ತುಮಕೂರು : ಪೊಲೀಸ್‌ ಠಾಣೆಯ ಎದುರು ದಲಿತ ಸಮುದಾಯದವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ಮನೆ ಮಗಳು ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದರೂ ಪೊಲೀಸರು ಎಫ್ ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ತಿಪಟೂರು ಪೊಲೀಸ್‌ ಸ್ಟೇಷನ್‌ ಎದುರು ಪ್ರತಿಭಟನೆ ನಡೆಸಿದರು. ರಂಗಸ್ವಾಮಿ ಎಂಬುವರ ಮಗಳನ್ನು ರಕ್ಷಿತ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಏಪ್ರಿಲ್ 12ರಂದು ಆಟೋದಲ್ಲಿ ಬಂದಿದ್ದ ರಕ್ಷಿತ್ ನ ತಾಯಿ ಹಾಗೂ ಆತನ ಸ್ನೇಹಿತರು ರಂಗಸ್ವಾಮಿ ಮಗಳನ್ನ ಕಿಡ್ನಾಪ್ ಮಾಡಿದ್ದಾರೆ. ಈ ಬಗ್ಗೆ ಏಪ್ರಿಲ್ 14ರಂದು ತಿಪಟೂರು ನಗರ ಠಾಣೆಗೆ‌ ದೂರು ನೀಡಿದರೂ ಸಹ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಕೇವಲ ಮೌಖಿಕವಾಗಿ ಹುಡುಕಿಕೊಡುತ್ತೇವೆ ಎಂದು ವಾಪಾಸ್ ಕಳಿಸಿದ್ದಾರೆ ಎಂದು ರಂಗಸ್ವಾಮಿ ಆರೋಪಿಸಿದ್ದಾರೆ. https://ainkannada.com/maha-water-politics-the-maharashtra-governments-delay-policy-is-a-slippery-slope/ ನಮಗೆ ನ್ಯಾಯ ಬೇಕು, ನಾವು ದಲಿತರು ಎಂಬ ಕಾರಣಕ್ಕೆ ನಮಗೆ ನ್ಯಾಯ ಸಿಗುತ್ತಿಲ್ಲ ಎಂಬ ಆರೋಪಿಸಿ ಪೊಲೀಸ್ ಠಾಣೆಯ ಮುಂದೆ ರಂಗಸ್ವಾಮಿ ಕುಟುಂಬ ಸಮೇತ ಅರೆ…

Read More

ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಿಮಗೆ ಒಂಥರಾ ಅನಿಸೋದಿಲ್ಲವೇ? . ಅದರಲ್ಲೂ ನೀವು ನಿಮ್ಮ ಮನೆಯನ್ನು ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಘಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಇವುಗಳನ್ನು ಬಳಸಿ ಮನೆಯಿಂದ ಜಿರಳೆಗಳನ್ನು ಓಡಿಸಬಹುದು. https://ainkannada.com/fatal-assault-case-bbmp-lorry-driver-passes-away-without-treatment/ ಜಿರಳೆಗಳು ಇಂದು ಪ್ರತಿಯೊಬ್ಬರ ಮನೆಯ ಸದಸ್ಯನಂತಾಗಿದೆ. ಕಾರಣ ಯಾವ ಮನೆ ನೋಡಿದ್ರೂ ಒಂದಾದ್ರೂ ಜಿರಳೆ ಇದ್ದೇ ಇರುತ್ತೆ. ಆಕಡೆ ಈಕಡೆ ಓಡಾಡಿಕೊಂಡು ಕಣ್ಣಿಗೆ ಕಾಣುತ್ತಿರುತ್ತದೆ. ಹೆಚ್ಚಾಗಿ ಈ ಜಿರಳೆಗಳು ಅಡುಗೆಮನೆಗಳು, ಒಳಚರಂಡಿ ಪ್ರದೇಶಗಳು ಮತ್ತು ಅಂಗಡಿಗಳಲ್ಲಿ ಕಾಣಸಿಗುತ್ತವೆ. ನೋಡಲು ಚಿಕ್ಕದಾಗಿದ್ದರೂ ಇದರ ಅಪಾಯ ಮಾತ್ರ ದೊಡ್ಡದು. ಏಕೆಂದರೆ ಇದು ಡೇಂಜರಸ್‌ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುತ್ತೆ. ಆದ್ರೆ ಇದೆಲ್ಲಾ ತಿಳಿಯದೇ ಅದೆಷ್ಟೋ ಜನ ಜಿರಳೆಗಳನ್ನ ಕಾಲಲ್ಲೇ ತುಳಿದು ಸಾಯಿಸುತ್ತಾರೆ. ಆದರೆ ಹೀಗೆ ಮಾಡುವುದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಅವುಗಳನ್ನು ಬೆನ್ನಟ್ಟಿ…

Read More

ಬೆಂಗಳೂರು:- ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಗಾಯವಾಗಿದ್ದ ಬಿಬಿಎಂಪಿ ಲಾರಿ ಚಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. https://ainkannada.com/maha-water-politics-the-maharashtra-governments-delay-policy-is-a-slippery-slope/ 55 ವರ್ಷದ ಕೊಂಡಯ್ಯ ಮೃತ ಲಾರಿ ಚಾಲಕ ಎನ್ನಲಾಗಿದೆ. ನಗರದ ಥಣಿಸಂಧ್ರದ ಹೆಗಡೆ ನಗರದ ಬಳಿ ಬಿಬಿಎಂಪಿ ಲಾರಿಯಿಂದ ಅಪಘಾತವಾಗಿತ್ತು. ಲಾರಿ ಗುದ್ದಿದ ಪರಿಣಾಮ ಬೈಕ್‌ನಲ್ಲಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದ. ಬಾಲಕನ ತಂದೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಅಪಘಾತ ಆದ ಪರಿಣಾಮ ಬಿಬಿಎಂಪಿ ಲಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಅಲ್ಲದೇ, ಲಾರಿ ಚಾಲಕನಿಗೆ ಮನಸೋ ಇಚ್ಛೆ ಥಳಿಸಿತ್ತು. ಹಲ್ಲೆ ಆದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಾಲಕ ಗಂಭೀರ ಸ್ಥಿತಿ ತಲುಪಿ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

Read More

ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದ ಬಳಿಕ ಇದೀಗ ವಾಟರ್‌ ಪಾಲಿಟಿಕ್ಸ್‌ ಜೋರಾಗಿದೆ. ಕೋಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ಕರ್ನಾಟಕ ಸಿಎಂ ಪತ್ರ ಬರೆದೂ 15 ದಿನಗಳಾದರೂ ಸಹ  ಈ ಬಗ್ಗೆ ಮಹಾರಾಷ್ಟ್ರ ಸ್ಪಂದಿಸಿಲ್ಲ. ಕಳೆದ ಏಪ್ರಿಲ್‌ 1 ರಂದೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡುಗಡೆಗೆ ಮನವಿ ಮಾಡಿದ್ದಾರೆ. ಆದರೆ  ಮಹಾರಾಷ್ಟ್ರ‌ ಸಿಎಂ ದೇವೇಂದ್ರ ಫಡ್ನವೀಸ್‌ ಸರ್ಕಾರದಿಂದ ನೀರು ಬಿಡಲು ವಿಳಂಬ ಧೋರಣೆ ತೋರುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿದೆ. ಹೀಗಾಗಿ ನೀರು ಬಿಡುಗಡೆ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ರಾಜಕೀಯ ನಡೆಸಲಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಅನ್ನೋ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ. https://ainkannada.com/people-are-hopeful-that-this-government-will-fall-r-ashok/ ಇನ್ನೂ ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರು …

Read More

ಧಾರವಾಡ : ಕಂಟೇನ‌ರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 8 ಲಕ್ಷದ ಮೌಲ್ಯದ 5 ಎತ್ತು, 31 ಹೋರಿಗಳನ್ನು ರಕ್ಷಿಸಿ, ಗೋಶಾಲೆಗೆ ರವಾನಿಸಿದ್ದಾರೆ. ಕಲಘಟಗಿ ಪಟ್ಟಣದ ಮಹ್ಮದ್‌ ಆಸೀಫ್ ನಾಲಬಂಧ ಹಾಗೂ ಶಿಗ್ಗಾಂವಿ ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹಜರತ್ ಆಲಿ ತಹಸೀಲ್ದಾರ್ ಬಂಧಿತ ಆರೋಪಿಗಳು ಕಂಟೇನರ್ ವಾಹನದಲ್ಲಿ ಕಲಘಟಗಿಯಿಂದ ಯಲ್ಲಾಪುರ ಮಾರ್ಗವಾಗಿ ತೆರಳುವಾಗ ಪಟ್ಟಣದ ಪೊಲೀಸ್ ಠಾಣೆ ಚೆಕ್‌ಪೋಸ್ಟ್ ನಲ್ಲಿ ಬುಧವಾರ ರಾತ್ರಿ 3 ಘಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. https://ainkannada.com/road-accident-couples-death/ ವಾಹನದಲ್ಲಿ ಅಂದಾಜು ₹8 ಲಕ್ಷ ಮೌಲ್ಯದ 5 ಎತ್ತುಗಳು, 31 ಹೋರಿಗಳು ಹಾಗೂ ವಾಹನದ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬಂಧಿತರು ಎಲ್ಲೋ ಕಳ್ಳತನ ಮಾಡಿ, ಮಾರಾಟ ಮಾಡುವ ಉದ್ದೇಶದಿಂದ ಒಂದೇ ವಾಹನದಲ್ಲಿ ಜಾನುವಾರುಗಳಿಗೆ ನೀರು, ಆಹಾರ ಇಲ್ಲದೇ ಹಿಂಸೆ ನೀಡುವ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಹಾಕಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ ಶ್ರೀಶೈಲ್ ಕೌಜಲಗಿ ನೇತೃತ್ವದಲ್ಲಿ…

Read More