ಪ್ರತಿಯೊಬ್ಬರ ಸ್ಮಾರ್ಟ್ಫೋನ್ನಲ್ಲಿ ವಾಟ್ಸಪ್ ಸಾಮಾನ್ಯವಾಗಿ ಸಿಗುವಂಥ ಆ್ಯಪ್. ಸಂದೇಶ ಕಳಿಸುವ, ಫೋಟೋ, ಆಡಿಯೋ ಹಾಗೂ ವೀಡಿಯೋ ಕಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಈ ವಾಟ್ಸಪ್ ತುಂಬಾ ಪ್ರಯೋಜನಕಾರಿ. ಆದರೆ, ಕಂಪ್ಯೂಟರ್ ಹಾಗೂ ಲ್ಯಾಪ್ಟಾಪ್ನಲ್ಲಿ ಎಲ್ಲ ಸಾಫ್ಟ್ವೇರ್ ಶಾರ್ಟ್ಕಟ್ ಅನ್ನು ಡೆಸ್ಕ್ಟಾಪ್ನಲ್ಲಿ ಸೇವ್ ಮಾಡಿಟ್ಟಂತೆ, ವಾಟ್ಸಪ್ ಶಾರ್ಟ್ಕಟ್ ಹೇಗೆ ಎನ್ನುವುದು ಕೂಡ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. https://ainkannada.com/destroy-your-household-items-to-win-follow-this-tricks/ ಎಸ್, ಮೆಸೇಜ್ ಮತ್ತು ಕಾಲ್ಗಳನ್ನು ಫ್ರೀಯಾಗಿ ಮಾಡಬಹುದಾದ ಮೇಟಾದ ಮತ್ತೊಂದು ವೇದಿಕೆ ಅಂದ್ರೆ ಅದು ವಾಟ್ಸಾಪ್. ಈ ಒಂದು ಆ್ಯಪ್ ಜಗತ್ತಿನ ಪ್ರತಿಯೊಂದು ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಇದ್ದೇ ಇರುತ್ತೆ. ಇದು ಖಾಯಂ ಆಗಿ ಸರಳವಾಗಿ ನಡೆಯಬೇಕು ಅಂದ್ರೆ ಅದನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಲೇ ಇರಬೇಕು. ಆದ್ರೆ ಮೆಟಾ ಕಂಪನಿ ಸ್ಟೇಟಸ್ ಹೊಸ ಫೀಚರ್ ಅನ್ನು ಬಿಟ್ಟಿದೆ. ಅದುವೇ ಮ್ಯೂಸಿಕ್. ಮೆಟಾ ಕಂಪನಿಯೂ ಜನಕ್ಕೆ ಮತ್ತಷ್ಟೂ ಹತ್ತಿರವಾಗಿದೆ. ಈ ಹಿಂದೆ ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಮಾತ್ರ ಫೋಟೋಗೆ ಹಾಡನ್ನು ಹಾಕಬಹುದಾಗಿತ್ತು. ಆದರೆ ಇದೀಗ ಮೆಟಾ ಕಂಪನಿ ವಾಟ್ಸಾಪ್ನಲ್ಲೂ…
Author: AIN Author
ಮಳೆಗಾಲದಲ್ಲಿ ಎಲ್ಲಾ ಕಡೆ ಶೀತ ವಾತಾವರಣ ಹಾಗೂ ತಂಪಿನ ವಾತಾವರಣ ಇರುತ್ತದೆ. ಆದ್ದರಿಂದ ಮನೆಯ ಬಾಗಿಲು ಅಥವಾ ಬೇರೆ ಬೇರೆ ಕಡೆಗಳಲ್ಲಿ ನಿಮಗೆ ಗೆದ್ದಲು ಹುಳುಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಈ ಗೆದ್ದಲು ಹುಳಗಳನ್ನು ಹೇಗೆ ಓಡಿಸುವುದು ಎಂದು ನೀವು ಚಿಂತೆ ಮಾಡುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. https://ainkannada.com/chewing-gum-increases-the-risk-of-dementia-its-better-to-stop-as-soon-as-possible/ ಬೇಸಿಗೆಯಲ್ಲಿ ಗೆದ್ದಲುಗಳ ಕಾಟ ಮತ್ತಷ್ಟು ಹೆಚ್ಚಾಗುತ್ತದೆ. ಬಿಸಿ, ತಂಪಿನ ವಾತಾವರಣದಲ್ಲಿ ಗೆದ್ದಲುಗಳು ಹೆಚ್ಚು ವೃದ್ಧಿಯಾಗುತ್ತವೆ. ಅವು ಮನೆಯಲ್ಲಿರುವ ಮರದ ವಸ್ತುಗಳನ್ನು ತಿನ್ನುತ್ತವೆ. ಆದರೆ ಗೆದ್ದಲುಗಳನ್ನು ಆರಂಭದಲ್ಲೇ ಪತ್ತೆ ಮಾಡೋದು ಸ್ವಲ್ಪ ಕಷ್ಟ. ಏಕೆಂದರೆ ಮರದ ಮೇಲ್ಭಾಗವನ್ನು ಗೆದ್ದಲು ತಿನ್ನದೇ ಇದ್ರೆ ಗೆದ್ದಲುಗಳು ಸೇರಿಕೊಂಡಿದೆ ಎಂದು ಗೊತ್ತಾಗೋದೆ ಇಲ್ಲ. ಆದರೆ, ಒಳಗೆ, ಅದು ಸಂಪೂರ್ಣವಾಗಿ ಆವೃತವಾಗಿರುತ್ತದೆ. ಅದಕ್ಕಾಗಿಯೇ ಹಾನಿ ಪೂರ್ಣಗೊಳ್ಳುವವರೆಗೆ ಈ ಸಮಸ್ಯೆಯನ್ನು ಪತ್ತೆಹಚ್ಚಲಾಗುವುದಿಲ್ಲ. ಹಾಗಿದ್ರೆ ಮನೆಯಲ್ಲಿ ಗೆದ್ದಲುಗಳು ಹರಡಿಕೊಂಡಿದೆಯೇ? ಇಲ್ಲವೇ? ಎಂದು ತಕ್ಷಣ ಹೀಗೆ ತಿಳುದುಕೊಳ್ಳಿ. ಗೆದ್ದಲುಗಳು ಸಾಮಾನ್ಯವಾಗಿ ತುಂಬಾ ಕತ್ತಲೆಯಾದ, ಒಳಾಂಗಣ ಪರಿಸರದಲ್ಲಿ ವಾಸಿಸುತ್ತವೆ. ಹೊರಗಿನಿಂದ ನೋಡಿದರೆ, ಮರದ ಮೇಲೆ…
ಬೆಳಗಾವಿ: ಗೂಡ್ಸ್ ರೈಲೊಂದು ಹಳಿ ತಪ್ಪಿದ್ದು ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಬೆಳಗಾವಿ ರೈಲ್ವೇ ನಿಲ್ದಾಣದ ಬಳಿ ಜರುಗಿದೆ. https://ainkannada.com/cet-exam-in-karnataka-today-qr-scan-for-the-cutting-of-fake-candidates-whats-special/ ಬೆಳಗಾವಿ ರೇಲ್ವೆ ನಿಲ್ದಾಣದಿಂದ ಅರ್ಧ ಕಿಮೀ ದೂರದಲ್ಲಿ ಘಟನೆ ಜರುಗಿದೆ. ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಗೂಡ್ಸ್ ರೈಲು ಬರುತ್ತಿತ್ತು. ಈ ವೇಳೆ ಹಳಿ ತಪ್ಪಿ ಪಕ್ಕಕ್ಕೆ ಮೂರು ಬೋಗಿಗಳು ಜರುಗಿದೆ. ಸ್ಥಳಕ್ಕೆ ರೇಲ್ವೆ ಪೊಲೀಸರು, ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿದ್ದಾರೆ. ಬೆಳಗಿನ ಜಾವ ಈ ಘಟನೆ ಜರುಗಿದೆ. ಯಾವ ಕಾರಣಕ್ಕೆ ಹಳಿ ತಪ್ಪಿದೆ ಎಂಬುದರ ಕುರಿತು ಮಾಹಿತಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಸಿಇಟಿ ಪರೀಕ್ಷೆ ಶುರುವಾಗಿದೆ. ಮೊದಲ ಬಾರಿಗೆ ಪರೀಕ್ಷಾ ಅಕ್ರಮ ತಡೆಗೆ KEA ಹೊಸ ತಂತ್ರಜ್ಞಾನ ಬಳಕೆ ಮಾಡಿದೆ. https://ainkannada.com/salman-khan-shares-gym-pics-thank-you-for-the-motivation/ ಪರೀಕ್ಷಾ ಕೇಂದ್ರಗಳಲ್ಲಿ ಕ್ಯೂಆರ್ ಸ್ಕ್ಯಾನ್ ಮಾಡಿದ ನಂತರವೇ ವಿದ್ಯಾರ್ಥಿಗಳನ್ನು ಎಕ್ಸಾಂ ಹಾಲ್ಗೆ ಕಳುಹಿಸಲಾಗುವುದು. ಈ ಮೂಲಕ ಡೂಪ್ಲಿಕೇಟ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಏನಿದು ಕ್ಯೂಆರ್ ಸ್ಕ್ಯಾನ್ ? <span;>* ಪ್ರತಿ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಕ್ಯೂಆರ್ ಸ್ಕ್ಯಾನ್ ಮೂಲಕ ತಪಾಸಣೆ. <span;>* ಪ್ರತಿ ಕೇಂದ್ರದ ಮುಖ್ಯಸ್ಥರಿಗೆ ಕ್ಯೂಆರ್ ಸ್ಕ್ಯಾನ್ ಮಾಡಲು ಆಪ್ ವ್ಯವಸ್ಥೆ ಮಾಡಲಾಗಿರುತ್ತದೆ. <span;>* ಕ್ಯೂಆರ್ ಸ್ಕ್ಯಾನ್ನಲ್ಲಿ ಮೊದಲೇ ವಿದ್ಯಾರ್ಥಿ ಮಾಹಿತಿಯನ್ನು ಕೆಇಎ ಅಪ್ಲೋಡ್ ಮಾಡಿರುತ್ತದೆ. <span;>* ವಿದ್ಯಾರ್ಥಿಗಳನ್ನ ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ. <span;>* ಒಂದು ವೇಳೆ ಬೇರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾದರೆ ಇದರಿಂದ ಪತ್ತೆ ಹಚ್ಚಬಹುದು. <span;>* ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಸ್ಕ್ಯಾನ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ…
ತುಮಕೂರು:- ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 18ಮಂದಿ ಅಪ್ರಾಪ್ತರನ್ನು ಬಂಧಿಸಿ ಬಳಿಕ ಅರಣ್ಯಾಧಿಕಾರಿಗಳು ಬಿಟ್ಟು ಕಳಿಸಿರುವ ಘಟನೆ ಜರುಗಿದೆ. 18ಮಂದಿಯೂ ಅಪ್ರಾಪ್ತರಾಗಿದ್ರಿಂದ ಎಫ್ಐಆರ್ ದಾಖಲಿಸಿಕೊಂಡು ಬಿಟ್ಟು ಕಳಿಸಿದ್ದಾರೆ. https://ainkannada.com/sivakarthikeyan-ar-murugadoss-madraasi-locks-release-date/ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಬುಕ್ಕಾಪಟ್ಟಣ ವಲಯದ ಚಿಂಕಾರ ವನ್ಯಜೀವಿಧಾಮದಲ್ಲಿ ಘಟನೆ ಜರುಗಿದೆ. ಮಧುಗಿರಿ ತಾಲ್ಲೂಕಿನ ತಿಪ್ಪನಹಳ್ಳಿ, ಬಡವನಹಳ್ಳಿ, ಶಿರಾ ತಾಲ್ಲೂಕಿನ ಕಳ್ಳಿಪಾಳ್ಯ ಹಾಗೂ ತುಮಕೂರು ತಾಲ್ಲೂಕಿನ ಕೆಂಚಯ್ಯನಪಾಳ್ಯ ಗ್ರಾಮಕ್ಕೆ ಅಪ್ರಾಪ್ತರು ಸೇರಿದ್ದಾರೆ. ಬೇಟೆಯಾಡಲು ತಂದಿದ್ದ ವಾಹನ, ಬಲೆ, ಮರದ ದೊಣ್ಣೆ, ಭರ್ಜಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳಿಂದ ಬೇಟೆಗಾರರ ಚಟುವಟಿಕೆ ಹೆಚ್ಚಾಗಿತ್ತು. ಇದರ ಮಾಹಿತಿ ಪಡೆದು ವಲಯ ಅರಣ್ಯಾಧಿಕಾರಿ ಚಂದನ್ ಕುಮಾರ್, ಉಪ ವಲಯಾಧಿಕಾರಿ ಕಿರಣ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಾಗಿತ್ತು.
ಕಲಘಟಗಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ತಾಲೂಕಿನ ಶಿಗಿಗಟ್ಟಿ ತಾಂಡಾದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. https://ainkannada.com/darling-krishna-milana-nagaraj-daughter-pari-cute-photos/ ಶಾಲಾ ಕಾಲೇಜಿಗಳು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಡಾ|ಅಂಬೇಡ್ಕರ್ ಅವರನ್ನು ಸ್ಮರಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ದಲಿತ ಸಂಘದ ಮುಖಂಡ ಮಾರುತಿ ಲಮಾಣಿ, ಶಿವಾಜಿ ಲಮಾಣಿ ಯುವ ಮುಖಂಡರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು ಶ್ರೀ ಸೇವಾಲಾಲ್ ದೆವಸ್ಥಾನದಿಂದ ಟ್ರ್ಯಾಕ್ಟರ್ ಮೂಲಕ ಅಂಬೇಡ್ಕರ್ ಭಾವ ಚಿತ್ರವಿಟ್ಟು ಪ್ರಮುಖ ಊಣಿಗಳ್ಳಳಿ ಮೆರವಣಿಗೆ ನಡೆಯಿತು ಶ್ರೀ ಸೇವಾಲಾಲ್ ಮರಿಯಮ್ಮ ಕಲಾಭವನದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು ಡಿಜೆಗೆ ಯುವಕರು ಕುಣಿದರು. ಪತ್ರಕರ್ತರು ಮಾರುತಿ ಲಮಾಣಿ , ಶಿವಾಜಿ ಲಮಾಣಿ, ವಿಠಲ ಲಮಾಣಿ, ಗ್ರಾಪಂ ಸದಸ್ಯರಾದ ರವಿ ಲಮಾಣಿ, ಬಂಜಾರ ಸಂಘದ ಅಧ್ಯಕ್ಷ ವಾಸು ಲಮಾಣಿ, ಪ್ರಕಾಶ್ ಲಮಾಣಿ, ಗ್ರಾಮದ ಹಿರಿಯರು ತಾಯಂದಿರು ಇದ್ದರು. ವರದಿ, ಮಾರುತಿ ಲಮಾಣಿ
ಬೆಳಗಾವಿ:- ಅಂಬೇಡ್ಕರ್ ಮೆರವಣಿಗೆಯಲ್ಲಿ ಭಾಗಿಯಾದ ಯುವಕರ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಜರುಗಿದೆ. https://ainkannada.com/fire-disaster-furniture-store-burnt-down/ ಉಮೇಶ್ ಲಮಾಣಿ, ಶಿವರಾಜ್ ಕರಿಗಾರ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಡ್ಯಾನ್ಸ್ ಮಾಡ್ತಿದ್ದವರ ಮೇಲೆ ಏಕಾಏಕಿ ಬಂದ ಯುವಕರ ಗ್ಯಾಂಗ್ ಹಲ್ಲೆ ಮಾಡಿ ಎಸ್ಕೇಪ್ ಆದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕರ ಮೇಲೆ ಕಿಡಗೇಡಿಗಳಿಂದ ಹಲ್ಲೆ ನಡೆದಿದೆ. ಗಾಯಗೊಂಡ ಉಮೇಶ್, ಶಿವರಾಜ್ ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಹ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.
ಕಲಬುರಗಿ:- ಅಗ್ನಿ ಅವಘಡದಲ್ಲಿ ರಸ್ತೆ ಬದಿ ಹಾಕಿದ್ದ ಫರ್ನಿಚರ್ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿ ನಗರದ ವಸಂತ ನಗರದಲ್ಲಿ ಸೋಮವಾರ ರಾತ್ರಿ ಜರುಗಿದೆ. https://ainkannada.com/vaishnavi-gowda-engagement-popular-kannada-tv-actress-vaishnavi-gowda-got-engaged-to-her-beau-akai-in-a-grand-event-in-bengaluru/ ಹಳೆ ಫರ್ನಿಚರ್ , ಜೊತೆಗೆ ಕಾರ್ ಕೂಡ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿ ಶಾಮಕ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ:- ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದೇ ದಿನ ಗ್ರಾಮದ ಎಂಟು ಜನರಿಗೆ ಬೀದಿ ನಾಯಿ ಕಚ್ಚಿರುವ ಘಟನೆ ಬೆಳಗಾವಿ ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಜರುಗಿದೆ. https://ainkannada.com/dr-b-r-ambedkar-babujagjivanram-jayanti-celebration-at-jp-bhavan-ta-sharavana-participating/ ಹುಚ್ಚು ನಾಯಿ ದಾಳಿಯಿಂದ ಎಂಟಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಕೈ, ಕಾಲು, ಹೊಟ್ಟೆ ಭಾಗ ಸೇರಿ ದೇಹದ ವಿವಿಧ ಭಾಗಗಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದು, ಅವರುಗಳನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಠ್ಠಲ್ ದೇವಸ್ಥಾನದಲ್ಲಿ ಸಂಜೆ ಹೊತ್ತು ಗ್ರಾಮಸ್ಥರು ಕುಳಿತಿದ್ದರು. ಈ ವೇಳೆ ದೇವಸ್ಥಾನದ ಒಳಗೆ ನುಗ್ಗಿದ ಹುಚ್ಚು ನಾಯಿ, ಎಲ್ಲರ ಮೇಲೂ ದಾಳಿ ಮಾಡಿದೆ. ಓರ್ವ ಮಹಿಳೆ ಸೇರಿ ಏಳು ಜನ ಪುರುಷರ ಮೇಲೆ ದಾಳಿ ಮಾಡಿದೆ. ದಾಳಿಗೊಳಗಾದವರನ್ನು ಮಲ್ಲಪ್ಪ ಪಾಟೀಲ್, ಮಲಪ್ರಭಾ ಪಾಟೀಲ್, ನೀಲಕಂಠ ಸಾಕರೆ, ವಿಠ್ಠಲ್ ಮಾಂಡೇಕರ್ ಸೇರಿ ಹಲವರು ಎಂದು ಗುರುತಿಸಲಾಗಿದೆ. ಮೊದಲು ನಾಯಿ ದಾಳಿ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ನಾಯಿಯ ಮೇಲೆ ಮರುದಾಳಿ ಮಾಡಿದ್ದಾರೆ. ಹುಚ್ಚು ನಾಯಿಯನ್ನು ಹೊಡೆದು ಗ್ರಾಮಸ್ಥರು ಕೊಂದಿದ್ದಾರೆ.…
ವಿಜಯಪುರ:- ಸಾಲಗಾರರ ಕಿರುಕುಳಕ್ಕೆ ಬೇಸತ್ತ ಯುವಕನೋರ್ವ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. https://ainkannada.com/dr-b-r-ambedkar-babujagjivanram-jayanti-celebration-at-jp-bhavan-ta-sharavana-participating/ ವಿಜಯಪುರ ನಗರದ ಆದರ್ಶ ನಗರ ಬಡಾವಣೆಯ ನಿವಾಸಿ ಶೋಬಿತ ಬಳ್ಳೂಳಗಿಡದ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ, ಬಡ್ಡಿ ರೂಪದಲ್ಲಿ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಯುವಕ ಸಾಲ ಮಾಡಿದ್ದ. ಸಾಲ ಹೆಚ್ಚಾಗಿ ಮಾಡಿಕೊಂಡ ಕಾರಣ ಯುವಕನ ತಂದೆಗೂ ಸಾಲ ಪಾವತಿಸುವಂತೆ ಸಾಲಗಾರರು ನಿತ್ಯ ಕಿರುಕುಳ ಕೊಡುತ್ತಿದ್ದರು. ಈ ಕಿರುಕುಳದ ಬಗ್ಗೆ ಆದರ್ಶ ನಗರ ಪೊಲೀಸರಿಗೆ ಯುವಕ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಾಲಗಾರರ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಬಳಿಕ ಯುವಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯುವಕ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಆದರ್ಶ ನಗರ ಪೊಲೀಸ್ ಠಾಣಾ…