ಪಾಕಪದ್ಧತಿಯಲ್ಲಿ ಸಾಸಿವೆಗೆ ಬಹಳ ಮಹತ್ವದ ಸ್ಥಾನವಿದೆ. ರುಚಿ, ಪೋಷಣೆ ಮತ್ತು ಆರೋಗ್ಯ ಗುಣಗಳಿಗೆ ಅದು ಹೆಸರುವಾಸಿಯಾಗಿದೆ. ಯಾವುದೇ ಪದಾರ್ಥಕ್ಕೆ ಸಾಸಿವೆಯ ಒಗ್ಗರಣೆ ಬಿದ್ದರೆ ಸಾಕು ಅದರ ಟೇಸ್ಟ್ ಬದಲಾಗುತ್ತದೆ. ಸಾಸಿವೆ ಮತ್ತು ಸಾಸಿವೆ ಎಣ್ಣೆಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ಸೊಪ್ಪಿನಲ್ಲಿ ಸಾಸಿವೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಾಸಿವೆ ಆರೋಗ್ಯಕರ ಖನಿಜಗಳಿಂದ ಸಮೃದ್ಧವಾಗಿದೆ. https://ainkannada.com/bhairathi-suresh-unveils-kanakadasa-and-rayanna-statues-at-kallu-kamba/ ಮನೆಯಲ್ಲಿ ಸಾಮಾನ್ಯವಾಗಿ ಒಗ್ಗರಣೆ ಹಾಕಬೇಕು ಅಂದಾಗ ಅದರಲ್ಲಿ ಬಳಸಲಾಗುವ ಮುಖ್ಯವಾದ ಪದಾರ್ಥ ಅಂದರೆ ಸಾಸಿವೆ. ಈ ಸಾಸಿವೆ ಕೇವಲ ರುಚಿ ಮಾತ್ರ ಕೊಡುವುದಲ್ಲದೆ, ಆರೋಗ್ಯಕ್ಕೆ ಈ ಪುಟ್ಟ ಕಾಳಿನಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದ್ದರಿಂದ ಎಣ್ಣೆಯಲ್ಲಿ ಒಗ್ಗರಣೆ ರೂಪದಲ್ಲಿ ತಿನ್ನಬಹುದು. ಅಲ್ಲದೆ ಸಾಸಿವೆ ಎಣ್ಣೆಯನ್ನೂ ಕೂಡಾ ಬಳಸಬಹುದಾಗಿದೆ. ಸಾಸಿವೆಯನ್ನು ಬಳಸಿದ ಅಡುಗೆಯಲ್ಲಿ ರುಚಿ ಹೆಚ್ಚಿರುವುದರ ಜೊತೆಗೆ ಪರಿಮಳ ಕೂಡಾ ಹೆಚ್ಚಾಗಿರುತ್ತದೆ. ಆದ್ದರಿಂದ ಹೆಚ್ಚಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಹಲವಾರು ಪ್ರಯೋಜನಗಳನ್ನು ಹೊಂದಿರುವ ಈ ಪುಟ್ಟ ಕಾಳಿನಲ್ಲಿ ಏನೆಲ್ಲಾ ಪ್ರಯೋಜನಗಳಿವೆ. ಪ್ರತಿನಿತ್ಯ ಇದರ…
Author: AIN Author
ಬಳ್ಳಾರಿ: ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು. ಮೊದಲಿಗೆ ಸಚಿವ ಭೈರತಿ ಸುರೇಶ್ ಅವರನ್ನು ಗ್ರಾಮದ ಮತ್ತು ಸಮುದಾಯದ ಜನತೆ ಸ್ವಾಗತಿಸಿದರು. ಮೊದಲಿಗೆ ಗ್ರಾಮದ ಹೊರ ವಲಯದ ಕಂಪ್ಲಿ ರಸ್ತೆಯಲ್ಲಿ ಮೇಷ್ಟ್ರು ಪಂಪಾಪತಿ ಅವರ ನಿವೇಶನದಲ್ಲಿ ರಚಿಸಿದ್ದ ಏಳು ಅಡಿ ಎತ್ತರದ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು. ಸಂಸದ ಇ.ತುಕಾರಂ, ಮಾಜಿ ಸಚಿವ ಬಿ.ನಾಗೇಂದ್ರ, ಶಾಸಕರಾದ ಜಿ.ಎನ್.ಗಣೇಶ್ ಮೊದಲಾದ ಗಣ್ಯರೊಂದಿಗೆ ಅನಾವರಣ ಮಾಡಿದರು. https://ainkannada.com/caste-census-results-show-low-number-of-lingayats-what-did-minister-m-b-patil-say/ ನಂತರ ಇಲ್ಲಿಂದ ಕುಂಬ ಕಳಸ, ಮಂಗಳ ವಾದ್ಯಗಳೊಂದಿಗೆ ಬೃಹತ್ ಆಕರ್ಷಕ ಮೆರವಣಿಗೆ ಮೂಲಕ ಗ್ರಾಮದ ಅಗಸೆ ಬಳಿ ಶಿಲಾ ಮಂಟಪದಲ್ಲಿ ರಚಿಸಿ ಭಕ್ತ ಕನಕದಾಸರ ಶಿಲಾ ಮೂರ್ತಿಯನ್ನು ಅನಾವರಣ ಮಾಡಲಾಯಿತು. ಬಳಿಕ ವೇದಿಕೆ ಕಾರ್ಯಕ್ರಮವನ್ನು ನಿರಂಜನಾನಂದಪುರಿ ಸ್ವಾಮಿಗಳು ಕನಕಗುರುಪೀಠ, ಕಾಗಿನೆಲೆ ಹಾಗೂ ಸಿದ್ದರಾಮಾನಂದಪುರಿ ಸ್ವಾಮಿಗಳು ತಿಂಥಿಣಿ ಬ್ರಿಡ್ಜ್ ಶಾಖಾಮಠ ಇವರ ಸಾನಿಧ್ಯದಲ್ಲಿ…
ಬೆಳಗಾವಿ : ಸಂಬಳ ನೀಡದ ಕಾರಣ ಆ್ಯಂಬುಲೆನ್ಸ್ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಓಂಕಾರ ಪವಾರ್ (25) ಮೃತ ದುರ್ದೈವಿ. ಮೃತ ಓಂಕಾರ ಪವಾರ್ ಅವರು ನಗರದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಕಳೆದ ನಾಲ್ಕು ತಿಂಗಳ ಸಂಬಳ ನೀಡಿದೇ ಸತಾಯಿಸುತ್ತಿದ್ದರು. ಸಂಬಳಕ್ಕಾಗಿ ಮನವಿ ಮಾಡಿದ್ರೂ ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಓಂಕಾರ ಪವಾರ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಡೆತ್ ನೋಟ್ ಬರೆದಿಟ್ಟು, ಶಹಾಪುರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://ainkannada.com/five-year-old-girl-raped-murdered/ ಇನ್ನೂ ನಾಲ್ಕು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಓಂಕಾರ್ ಅವರಿಗೆ ಒಂದು ಮಗು ಇದೆ. ಓಂಕಾರ್ಸಾವಿಗೆ ಆಸ್ಪತ್ರೆಯವರೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಹತ್ಯೆಗೈದಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಸೈಕೋಪಾತ್ ಓರ್ವ ಬಾಲಕಿಯನ್ನ ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್ನತ್ತ ಬಂದಿದ್ದಾರೆ. ಜನ ಬರುತ್ತಿರುವುದನ್ನು ಕಂಡು, ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. https://ainkannada.com/maidunu-arrested-for-stabbing-sister-in-law-while-drunk/ ಇನ್ನೂ 5 ವರ್ಷದ ಬಾಲಕಿ ಹತ್ಯೆ ಖಂಡಿಸಿ, ಆಕ್ರೋಶಗೊಂಡಿರುವ ಬಾಲಕಿ ಪೋಷಕರು ಹಾಗೂ ಸ್ಥಳೀಯರು ಅಶೋಕನಗರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತರು, ಇಂದು ಬೆಳಗ್ಗೆ ತಾಯಿ ಮನೆಗೆಲಸಕ್ಕೆ ಹೋಗುವಾಗ ಮಗುವನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯೊಳಗೆ ಕೆಲಸ ಮಾಡುವ ಸಮಯದಲ್ಲಿ ಯುವಕನೋರ್ವ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಪಾಳು ಬಿದ್ದ ಕೋಣೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.…
ವಿಜಯಪುರ : ಸಚಿವ ಸಂಪುಟದಲ್ಲಿ ಜಾತಿ ಗಣತಿ ಮಂಡನೆ ವಿಚಾರವಾಗಿ ವಿಜಯಪುರ ನಗರದಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಕಾಪಿ ತರಿಸಿಕೊಂಡಿದ್ದೇನೆ ಅದನ್ನು ನೋಡಿ ಹೇಳುವೆ. ಜಾತಿ ಗಣತಿ ವರದಿಯ ಅಧ್ಯಯನ ಮಾಡಿ ನಾವು ಅರ್ಥ ಮಾಡಿಕೊಳ್ಳಬೇಕು. ಜಾತಿಗಣತಿ ವರದಿಯ ವಿಚಾರವಾಗಿಯೇ ವಿಶೇಷ ಸಭೆ ಎಪ್ರಿಲ್ 17ರಂದು ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಚಾರವೊಂದೇ ಚರ್ಚೆಯಾಗಲಿದೆ. ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ಹೇಳುತ್ತೇವೆ ಎಂದರು. https://ainkannada.com/caste-census-report-presented-in-cabinet-not-discussed-home-minister-g-parameshwar/ ಇನ್ನೂ ಜಾತಿಗಣತಿ ಸರಿಯಾಗಿಲ್ಲ ಮತ್ತೊಮ್ಮೆ ಜಾತಿ ಗಣತಿ ಮಾಡಬೇಕೆಂದು ವಿವಿಧ ಸ್ವಾಮೀಜಿಗಳ ಬೇಡಿಕೆ ವಿಚಾರವಾಗಿ ಅದು ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟದ್ದು ಎಂದರು. ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿರುವ ವಿಚಾರವಾಗಿ ಮಾತನಾಡಿ 2 ಎ ಮೀಸಲಾತಿಗಾಗಿ ಹಿಂದೂ ಸಾದರ, ಹಿಂದೂ ಗಾಣಿಗ ಹಿಂದೂ ಬಣಜಿಗೆ ಎಂದು ನಮೂದು ಮಾಡಲಾಗಿದೆ. ಲಿಂಗಾಯತ ಸಮಾಜದಲ್ಲಿ ಇವೆಲ್ಲ ಸಮುದಾಯ ಬಂದಿಲ್ಲ. ಇವೆಲ್ಲ ಸಮುದಾಯಗಳು ಒಳಗೊಂಡರೆ ಲಿಂಗಾಯತ…
ಬೆಳಗಾವಿ : ಕುಡಿದ ಮತ್ತಿನಲ್ಲಿ ಅತ್ತಿಗೆಗೆ ಚೂರಿ ಚುಚ್ಚಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದಲ್ಲಿ ನಡೆದಿದೆ. ಸುಜಾತ ಮಂಜುನಾಥ ಚತ್ರಕೋಟಿ (24) ಕೊಲೆಯಾದ ದುರ್ದೈವಿ. ಬಂಗಾರಪ್ಪ ಈರಯ್ಯನ್ನವರ ಕೊಲೆ ಆರೋಪಿಯಾಗಿದ್ದಾನೆ. ಅಕ್ಕ, ತಂಗಿ ಇಬ್ಬರನ್ನು ಚಾಲಕರಿಗೆ ಮದುವೆ ಮಾಡಿಕೊಡಲಾಗಿತ್ತು. ಸುಜಾತ ಮತ್ತು ಆಕೆಯ ತಂಗಿ ಖನಗಾಂವ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸವಿದ್ದರು.. ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಬಂಗಾರಪ್ಪ ಅತ್ತಿಗೆ ಸುಜಾತಗೆ ಹೊಟ್ಟೆಗೆ ಚೂರಿ ಚುಚ್ಚಿದ್ದಾನೆ. ತಕ್ಷಣವೇ ಗಂಭೀರ ಗಾಯಗೊಂಡ ಸುಜಾತಳನ್ನ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಸುಜತಾ ಸಾವನ್ನಪ್ಪಿದ್ದಾರೆ. https://ainkannada.com/protest-demanding-fulfillment-of-various-demands-including-transport-bus-stops/ ಬೆಳಗಾವಿ ಬೀಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಚೂರಿ ಹಾಕಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಚಾಮರಾಜನಗರ ; ಸಾರಿಗೆ ಬಸ್ ನಿಲುಗಡೆ ಮಾಡುವಂತೆ ಆಗ್ರಹಿಸಿ ಹಾಗೂ ಸಾರಿಗೆ ಬಸ್ ಅವ್ಯವಸ್ಥೆಯನ್ನು ಖಂಡಿಸಿ ಶಿಂಡನಪುರ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು. https://ainkannada.com/womens-commission-chairperson-confused-by-students-question-at-womens-day-event/ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮವು ತೆರಕಣಾಂಬಿ ಹಾಗೂ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿದೆ ಇಲ್ಲಿ ದಿನನಿತ್ಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಾರ್ವಜನಿಕರು ಕಾರ್ಯನಿಮಿತ್ತ ಸಂಚರಿಸುತ್ತಾರೆ. ಹಾಗಾಗಿ ಕೆ.ಎಸ.ಆರ್.ಟಿ.ಸಿ.ಬಸ್ಸುಗಳನ್ನು ಸರಿಯಾದ ಸಮಯಕ್ಕೆ ನಿಲುಗಡೆ ಮಾಡುವಂತೆ ಶಿಂಡನಪುರ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ತುಮಕೂರು : ಜಾತಿಗಣತಿ ವರದಿ ಸಂಪುಟದಲ್ಲಿ ಮಂಡನೆಯಾಗಿದೆ ಅಷ್ಟೇ, ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ಪ್ರತಿಕ್ರಿಯಿಸಿದರು. ತಿಪಟೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿಯಲ್ಲಿ ಏನಿದೆ ಎಲ್ಲಾ ಓದಿಕೊಂಡು, ಮುಂದಿನ ಸಚಿವ ಸಂಪುಟದಲ್ಲಿ ವಿಶೇಷ ಸಭೆ ಕರೆದಿದ್ದಾರೆ. ಏಪ್ರಿಲ್ 17 ರಂದು ಕರೆದಿದ್ದಾರೆ. ಬರೀ ಅದೊಂದೆ ವಿಚಾರ ಇರಬೇಕು ಬೇರೆ ಏನು ಇರಬಾರದು ಅಂತಾ ಸಿಎಂ ಸೂಚನೆ ನೀಡಿದ್ದಾರೆ. ಮುಂದಿನ 17 ರಂದು ನಡೆಯುವ ಸಚಿವ ಸಂಪುಟದಲ್ಲಿ ಈ ವರದಿ ಬಗ್ಗೆ ಚರ್ಚೆ ಆಗಲಿದೆ ಎಂದರು. ನನಗೂ ಒಂದು ಕಾಪಿ ತಲುಪಿದೆ. ನಾನು ಓದುತ್ತಾ ಇದಿನಿ,ಓದಲು ಶುರು ಮಾಡಿದಿನಿ, ಇನ್ನೂ ಪೂರ್ತಿಯಾಗಿ ಓದಿಲ್ಲ. ಓದಿರೊದು ಅರ್ಧ ಅಷ್ಟೇ, ಹೇಳಿದ್ರೆ ತಪ್ಪಾಗುತ್ತದೆ ಎಂದರು. https://ainkannada.com/confusion-among-congress-leaders-over-caste-census-report-union-minister-prahlad-joshi/ 2015 ರಿಂದ ಸರ್ಕಾರ ಜನಗಣತಿ ಮಾಡಿದೆ. ಒಂದು ವರದಿ ಒಪ್ಪಿಗೆ ಆಗಲಿ ಅಥವಾ ತಿರಸ್ಕಾರ ಮಾಡಲಿ ಅದು ಬೇರೆ ವಿಚಾರ. ಸರ್ಕಾರಕ್ಕೆ ಕೊಡುವ ಪ್ರಕ್ರಿಯೆಯನ್ನಾದರೂ ಆಗಬೇಕಲ್ವಾ. ಸರ್ಕಾರ ಇದಕ್ಕೆ 168 ಕೋಟಿ ಖರ್ಚು ಮಾಡಿದೆ. ಇದಕ್ಕೆ ಸರಿ…
ಚಿತ್ರದುರ್ಗ : ಇತ್ತೀಚಿಗೆ ಫ್ರೀವೆಡ್ಡಿಂಗ್ ಫೋಟೋ ಶೂಟ್ ಟ್ರೆಂಡ್ ಹೆಚ್ಚಾಗಿದೆ. ಕೆಲವರೊಬ್ಬರು ಹಚ್ಚ ಹಸಿರಿನ ಮಧ್ಯೆ, ಪುರಾತನ ಕಟ್ಟಡಗಳು ತಮ್ಮ ಇಷ್ಟದ ತಾಣಗಳಲ್ಲಿ ಫ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ರೈಲ್ವೇ ಟ್ರ್ಯಾಕ್ ಮೇಲೆ ಫ್ರೀವೆಡ್ಡಿಂಗ್ ಫೋಟೋ ಶೂಟ್ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಎಸ್.. ಫ್ರೀ ವೆಡ್ಡಿಂಗ್ ಶೂಟ್ ವೇಳೆ ದಿಢೀರ್ ಪ್ಯಾಸೆಂಜರ್ ರೈಲು ಬಂದಿದ್ದು, ಯುವ ಜೋಡಿ ಸಮೇತ ಐದು ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಚಿತ್ರದುರ್ಗದ ಮದಕರಿಪುರ ರೈಲ್ವೇ ಟ್ರಾಕ್ ಬಳಿ ನಡೆದಿದೆ. https://ainkannada.com/womens-commission-chairperson-confused-by-students-question-at-womens-day-event/ ಯಾವುದೇ ಅನುಮತಿ ಪಡೆಯದೆ ಯುವ ಜೋಡಿ ಮತ್ತು ಫೊಟೋ ಗ್ರಾಫರ್ ಗಳು ರೈಲ್ವೇ ಟ್ರಾಕ್ ಮೇಲೆ ಶೂಟ್ ಮಾಡುತ್ತಿದ್ದರು. ಅದೇ ವೇಳೆ ಪ್ಯಾಸೆಂಜರ್ ರೈಲು ಬಂದಿದ್ದು, ಭಯದಿಂದ ಐವರು ಓಡೋಡಿ ಪಕ್ಕಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಯುವಜೋಡಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ.
ಹುಬ್ಬಳ್ಳಿ : ಜಾತಿ ಗಣತಿ ವರದಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿಯೇ ಗೊಂದಲಿ ಇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು. ಜಾತಿಗಣತಿ ವಿಚಾರವಾಗಿ ಮಾತನಾಡುತ್ತಾ ಡಿಸಿಎಂ ಒಂದು ರೀತಿಯ ಹೇಳಿಕೆ ನೀಡುತ್ತಾರೆ ಉಳಿದ ಸಚಿವರು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ಮೊದಲು ವರದಿಯನ್ನು ವೈಜ್ಞಾನಿಕವಾಗಿ ಅಧ್ಯಾಯನ ಮಾಡಲಿ. ಇವರು ಏನೆ ಸರ್ವೆ ಮಾಡಿದರು ಅಂತಿಮವಾಗಿ ಅದನ್ನು ಕೇಂದ್ರ ಸರ್ಕಾರ ಒಪ್ಪಬೇಕು. ರಾಜ್ಯ ಸರ್ಕಾರಕ್ಕೆ ಸರ್ವೇ ಮಾಡುವ ಅಧಿಕಾರವಿದೆ. ಅದನ್ನು ಅಂತಿಮಗೊಳಿಸುವ ಅಧಿಕಾರ ಕೇಂದ್ರಕ್ಕಿದೆ. ನಕಲಿ ಗಾಂಧಿಗಳ ಹೆಸರು ಹೇಳಿ,ಹೆದರಿಸಿ ಇದನ್ನು ಕ್ಯಾಬಿನೆಟ್ ಚರ್ಚೆ ಆಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಕಾಂಗ್ರೆಸ್ ನಲ್ಲೆ ಬೇಗುದಿ ಇದೆ. ಜಾತಿಗಣತಿಯನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಉಪಯೋಗ ಮಾಡುತ್ತಿದೆ ಎಂದು ಕಿಡಿಕಾರಿದರು. https://ainkannada.com/caste-census-report-no-hasty-decision-work-to-provide-justice-after-knowing-the-truth-dcm-dk/ 1925ರಲ್ಲಿ ಅಂಬೇಡ್ಕರ್ ನಿಪ್ಪಾಣಿಗೆ ಬಂದಿದ್ದರು. ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು…