Author: AIN Author

ಬಳ್ಳಾರಿ : ನಾಗರ ಹಾವು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ  ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ನಡೆದಿದೆ. ಮೋಕ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರಾವಣಿ ಸಾವನ್ನಪ್ಪಿರುವ ಬಾಲಕಿ. ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಬಾಲಕಿಗೆ ಮೂರು ಬಾರಿ ಹಾವು ಹಚ್ಚಿದೆ. ಕೈ ಮತ್ತು ಕಾಲಿಗೆ ಕಚ್ಚಿದ ನಾಗರ ಹಾವ ಕಡಿದರೂ ಎಚ್ಚರವಾಗದೇ ಬಾಲಕಿ ಮಲಗಿದ್ದಾಳೆ. ಬೆಳಗ್ಗೆ  ಬಾಲಕಿ ಮೃತಳಾಗಿದ್ದಾಳೆ. ಇನ್ನೂ ಬೆಳಗ್ಗೆಯಾದರೂ ಸಹ ನಾಗರಹಾವು ಮನೆಯಲ್ಲೇ ಇದೆ. https://ainkannada.com/two-people-drown-in-malaprabha-river/ ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ಎನ್ನುವ ದಂಪತಿಯ ಮಗಳು ಶ್ರಾವಣಿ, ತೀವ್ರ ಬಡತನ ಹಿನ್ನೆಲೆ ಹಳೆ ಮನೆಯಲ್ಲಿ ವಾಸವಾಗಿದ್ದರು. ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Read More

ಬೆಂಗಳೂರು ಗ್ರಾಮಾಂತರ : ಜಾತಿಗಣತಿ ವರದಿಯನ್ನು ನಾನು ನೋಡಿಲ್ಲ, ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ ಅಷ್ಟೇ ಎಂದು ಡಿಸಿಎಂ ಡಿಕೆಶಿವಕುಮಾರ್‌ ಪ್ರತಿಕ್ರಿಯಿಸಿದರು. https://ainkannada.com/caste-census-is-ten-years-old-council-member-ravikumar/ ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿಎಂ ಹೇಳಿದ್ದಾರೆ ಆದರೆ ನಾನು ಇನ್ನೂ ವರದಿ ನೋಡಿಲ್ಲ. ನಾನು ನಿನ್ನೆ ಬೆಳಗಾವಿ, ಮಂಗಳೂರಿಗೆ ಹೋಗಿದ್ದೆ. ಇದರ ಬಗ್ಗೆ ಇನ್ನೂ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಬೇಕು. ಸಿಎಂ ಅವರು ಇವತ್ತು ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೀವಿ ಅಂತ ಹೇಳಿದ್ದಾರೆ. ಆತುರದ ನಿರ್ಧಾರ ಯಾರೂ ತೆಗೆದುಕೊಳ್ಳುವುದಿಲ್ಲ. ಕೆಲವರು ರಾಜಕಾರಣದ ಸ್ಟೇಟ್ ಮೆಂಟ್ ಮಾತನಾಡುತ್ತಾರೆ ಸತ್ಯಾಂಶಗಳನ್ನು ತಿಳಿದುಕೊಂಡು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ ಎಂದರು. ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಟುಂಬ ಸಮೇತ ಘಾಟಿ ಸುಬ್ರಮಣ್ಯಕ್ಕೆ‌ ಭೇಟಿ ನೀಡಿ, ಘಾಟಿ ಸುಬ್ರಮಣ್ಯನ ದರ್ಶನ ಪಡೆದರು.  ನಾಗದೋಷ ಕುಜದೋಷ ಸೇರಿದಂತೆ ಸರ್ಪ ಸಂಸ್ಕಾರಕ್ಕೆ ಪ್ರಸಿದ್ದಿಯಾದ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿವಕುಮಾರ್‌ ವಿಶೇಷ ಪೂಜೆ…

Read More

ಹುಬ್ಬಳ್ಳಿ:  ಜಾತಿ ಗಣತಿ ಹತ್ತು ವರ್ಷಗಳ ಕಾಲ ಹಳೆಯದು ಇದನ್ನು ನಾವು ಒಪ್ಪಲ್ಲ. ಈ ಕುರಿತು ಎಲ ಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ  ರವಿಕುಮಾರ್ ಆಗ್ರಹಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು ಜಾತಿಗಣತಿ ವಿರೋಧಿಸಿದ್ದಾರೆ. ಇದೊಂದು ಹಳೆ ಜಾತಿ ಗಣತಿ ವರದಿ ಆಗಿದ್ದು ಇದು ಈಗ ಜಾರಿ ಮಾಡುವುದು ಸರಿಯಾಗಿ ಕ್ರಮವಲ್ಲ. ಯಾವುದೇ ರೀತಿಯಲ್ಲೂ ಸಹ ಸರಿಯಾಗಿ ಜಾತಿ ಗಣತಿ ಮಾಡಿಲ್ಲ. ಒಂದು ಕಡೆ ಲಿಂಗಾಯತರು, ಇನ್ನೊಂದು ಕಡೆ ಒಕ್ಕಲಿಗರು ಇದಕ್ಕೆ ವಿರೋಧ ಮಾಡಿದ್ದಾರೆ. ಆದ್ದರಿಂದ ಜಾತಿ ಗಣತಿ ಜಾರಿ ಮುನ್ನ ಸರ್ವ ಪಕ್ಷಗಳ ಸಭೆ ಮಾಡಲಿ, ಎಲ್ಲರ‌‌ ಸಲಹೆ ಸೂಚನೆಗಳನ್ನು ಪಡೆಯಬೇಕು. ಇದನ್ನ ಕೂಡಲೇ ಕೈ ಬಿಡಬೇಕು. ಇದಕ್ಕೆ ಬಿಜೆಪಿ ಸಹಮತ ಇಲ್ಲ ಎಂದರು. https://ainkannada.com/caste-census-report-moved-forward-again-decision-for-special-cabinet-meeting-on-april-17/ ಕಚ್ಛಾ ತೈಲ, ಸಿಲಿಂಡರ್, ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಕೇಂದ್ರವರು ಎನ್ನುತ್ತಾರೆ ಕಾಂಗ್ರೆಸ್ ನವರ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಏನು ಮಾಡಿದೆ.…

Read More

ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ ಮಾಡಲು ಹೋಗಿ ಸೈನಿಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣ್ಣೇರಿ ಗ್ರಾಮದಲ್ಲಿ ನಡೆದಿದೆ. ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15), ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ(25) ಮೃತರಾಗಿದ್ದಾರೆ. https://ainkannada.com/fire-accident-due-to-cylinder-gas-leak-at-tea-point/ ಶೇಖಪ್ಪ ಮುತ್ತಪ್ಪ ಮೂಲಿಮನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ. ಈ ವೇಳೆ ಈಜು ಬಾರದ ಶೇಖಪ್ಪ ರಕ್ಷಣೆಗಾಗಿ ಕೂಗಿದ್ದು, ಈ ವೇಳೆ  ಆತನ ರಕ್ಷಣೆಗಾಗಿ ಮಹಾಂತೇಶ ತೆರಳಿದಾಗ ಶೇಖಪ್ಪ ಗಾಬರಿಯಿಂದ ಮಹಾಂತೇಶ ಕುತ್ತಿಗೆಯನ್ನು ಬಿಗಿಯಾಗಿ ಹಿಡಿಕೊಂಡಿದ್ದಾನೆ. ಇದರಿಂದ ಮಹಾಂತೇಶಗೆ ಈಜಲು ಸಾಧ್ಯವಾಗದೇ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ.  ಇನ್ನೂ ಘಟನೆ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನಗರ ಪ್ರದೇಶಗಳಲ್ಲಿ ಎತ್ತರದ ಕಟ್ಟಡಗಳು ಮತ್ತು ಎತ್ತರದ ಅಪಾರ್ಟ್ಮೆಂಟ್ಗಳು ಹೆಚ್ಚು. ಆದ್ದರಿಂದ ಮೇಲಿನ ಹಂತಗಳಿಗೆ ತಲುಪಲು ಎಲಿವೇಟರ್ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೇ ಲಿಫ್ಟ್ ಮೂಲಕ ನೀವು ತಲುಪಬೇಕಾದ ಸ್ಥಳಕ್ಕೆ ಬೇಗನೇ ಹೋಗಲು ಸುಲಭವಾಗುತ್ತದೆ. https://ainkannada.com/power-supply-to-be-disrupted-in-kalaghatagi-for-three-days-from-today/ ಆದರೆ ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ, ಅದು ಹಾನಿಗೊಳಗಾಗಬಹುದು. ಲಿಫ್ಟ್ನಲ್ಲಿನ ಸಮಸ್ಯೆಯಿಂದಾಗಿ ಅದು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಬಹುದು. ಈ ಸಮಯದಲ್ಲಿ ಒಂದು ವೇಳೆ ನೀವು ಲಿಫ್ಟ್ನಲ್ಲಿ ಒಬ್ಬಂಟಿಯಾಗಿದ್ದರೆ ನಿಮಗೆ ಗಾಬರಿ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ಲಿಫ್ಟ್ನಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು ಎಂಬುವುದರ ಬಗ್ಗೆ ಕೆಲ ಟಿಪ್ಸ್ ನಾವಿಂದು ನಿಮಗೆ ನೀಡುತ್ತೇವೆ. ಕೆಲವೊಮ್ಮೆ ಲಿಫ್ಟ್​ಗಳಲ್ಲಿ ಹೋಗುವಾಗ ತನ್ನಷ್ಟಕ್ಕೇ ಆಫ್​ ಆಗುತ್ತವೆ. ಈ ಸಂದರ್ಭದಲ್ಲಿ ಹೆಚ್ಚಿನವರು ಲಿಫ್ಟ್​ನಲ್ಲೇ ಸಿಕಿಕೊಳ್ಳುತ್ತಾರೆ. ಹಾಗಿದ್ರೆ ಲಿಫ್ಟ್​ನಲ್ಲಿ ಸಿಕ್ಕಿಕೊಂಡಾಗ ಏನು ಮಾಡ್ಬೇಕು ಮತ್ತು ಮಾಡಬಾರದಂತಹ ವಿಷಯಗಳು ಇಲ್ಲಿವೆ ನೋಡಿ. ಯಾವತ್ತೂ ಅಷ್ಟೇ ಲಿಫ್ಟ್​ ಬಳಸುವಾಗ ಬಹಳ ಜಾಗರೂಕರತೆಯಿಂದಿರಬೇಕು. ಯಾವುದೇ ಅರ್ಜೆಂಟ್​​ನಲ್ಲಿ ಓವರ್​ಲೋಡ್​ ಮಾಡ್ಬೇಡಿ. ಲಿಫ್ಟ್​ ಬಳಸೋ ಮೊದಲು ಅದರಲ್ಲಿ ಒಂದೇ ಬಾರಿ ಸಾಗಬಹುದಾದ ಜನರ…

Read More

ಧಾರವಾಡ : ದುಮ್ಮವಾಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಏ.13 ರಿಂದ ಏ.15ರವರೆಗೂ ಬೆಳಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 02-00 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಲಘಟಗಿ ಉಪವಿಭಾಗ ವ್ಯಾಪಿಯಲ್ಲಿ ಬರುವ ದುಮ್ಮವಾಡ 33/11 ಕೆ.ವಿ ದುಮ್ಮವಾಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸದ ಸಲುವಾಗಿ ದಿ:13.04.2025 ರಿಂದ 15.04.2025 ರಂದು ಬೆಳಗ್ಗೆ 10.00 ಘಂಟೆಯಿಂದ ಮದ್ಯಾಹ್ನ 02-00 ಘಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಸಿಲಾಗಿದೆ. https://ainkannada.com/fire-accident-due-to-cylinder-gas-leak-at-tea-point/ ಹೀಗಾಗಿ ಈ ವ್ಯಾಪ್ತಿಯಲ್ಲಿ ರುವ ದುಮ್ಮವಾಡ ಕಣವಿಹೊನ್ನಾಪುರ್ ಪಂಪಹೌಸ್ನ, ಜಮ್ಮಿಹಾಳ, ಜಿ ಬಸನಕೊಪ್ಪ, ಜೊಡಳ್ಳಿ, ನಿರಸಾಗರ, ಕಳಸನಕೊಪ್ಪ, ಗಂಬ್ಯಾಪ್ಟರ್, ಲಿಂಗನಕೊಪ್ಪ, ಯಮ್ಮಿಕೇರಿ,ಜಿ ಹುಲಕೊಪ್ಪ, ಮುತ್ತಗಿ, ಆರೇಬಸವನಕೊಪ್ಪ ಮತ್ತು ಹಸರಂಬಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕಲಘಟಗಿ ಉಪವಿಭಾಗದ ಅಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

Read More

ಕಲಬುರಗಿ:- ಅಗ್ನಿ ಅವಘಡ ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಜರುಗಿದೆ. ಟೀ ಪಾಯಿಂಟ್ ದಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆ ಶಂಕೆ ವ್ಯಕ್ತವಾಗಿದೆ. https://ainkannada.com/abhishek-against-punjab-kings-hyderabad-won-the-2nd-highest-chasing-of-ipl-history/ ಎಲೆಕ್ಟ್ರಿಕಲ್ ಶಾಪ್ ಗಾಣದ ಎಣ್ಣೆ ಘಟಕ, ಹಾರ್ಡವೇರ್ ಶಾಪ್& ಟೀ ಸ್ಟಾಲ್ ಗೆ ಬೆಂಕಿಗಾಹುತಿಯಾಗಿದೆ. ಒಂದೆಡೆ ಶುರುವಾದ ಬೆಂಕಿ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಅನಾಹುತ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿ ಆಗಿದೆ. ಅಗ್ನಿ ಶಾಮಕದಳದ ಕಾರ್ಯಾಚರಣೆ ತಹಬದಿಗೆ ಬೆಂಕಿ ಬಂದಿದ್ದು, ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದೆ.

Read More

ಕಲಬುರಗಿ : ಟೀ ಪಾಯಿಂಟ್ ದಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದಾಗಿ ಅಗ್ನಿ ಅವಘಡ ಸಂಭಸಿದ್ದು, ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾಗಿವೆ.  ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಒಂದೆಡೆ ಶುರುವಾದ ಬೆಂಕಿ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಅನಾಹುತವಾಗಿದ್ದು, ಎಲೆಕ್ಟ್ರಿಕಲ್ ಶಾಪ್ ಗಾಣದ ಎಣ್ಣೆ ಘಟಕ, ಹಾರ್ಡವೇರ್ ಶಾಪ್& ಟೀ ಸ್ಟಾಲ್ ಗೆ ಬೆಂಕಿಗಾಹುತಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. https://ainkannada.com/farmer-woman-working-in-field-attacked-gold-earring-snatched-and-fled/ ಇನ್ನೂ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳದ ಕಾರ್ಯಾಚರಣೆ  ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ 2025 ರ 27ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಿತು. https://ainkannada.com/heavy-fire-in-bengaluru-more-than-40-sheds-killed-by-fire/ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 245 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಆರಂಭಿಕ ಅಭಿಷೇಕ್ ಶರ್ಮಾ ಅವರ ದಾಖಲೆಯ ಐಪಿಎಲ್ ಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಈ ಸೀಸನ್​ನ ಎರಡನೇ ಗೆಲುವು ದಾಖಲಿಸಿತು. ಪಂಜಾಬ್ ವಿರುದ್ಧದ ಪಂದ್ಯದದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. 246 ರನ್​ಗಳ ಬೃಹತ್​ ಗುರಿ ಬೆನ್ನಟ್ಟುವ ವೇಳೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಪರ 2ನೇ ವೇಗದ ಶತಕ ಸಿಡಿಸಿದರು. ಬೃಹತ್​ ಗುರಿ ಮುಂದಿದ್ದರಿಂದ ಆರಂಭದಿಂದಲೇ ಸಿಡಿಲಬ್ಬರದ ಆಟಕ್ಕೆ ಮುಂದಾದರು. ತಮಗೆ ಸಿಕ್ಕ ಜೀವದಾನಗಳನ್ನ ಸದುಪಯೋಗ ಪಡಿಸಿಕೊಂಡ ಅಭಿಷೇಕ್…

Read More

ಬೆಂಗಳೂರು:- ಭಾರೀ ಅಗ್ನಿ ಅವಘಡದಿಂದ ಬೆಂಗಳೂರಲ್ಲಿ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ವೀರನಪಾಳ್ಯದಲ್ಲಿ ಜರುಗಿದೆ. ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಗೆ ಆಹುತಿಯಾಗಿದೆ. https://ainkannada.com/heavy-rains-in-bangalore-today-alert-declaration-to-these-districts-of-karnataka/ ಇಲ್ಲಿನ ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ ಕೂಲಿ ಕಾರ್ಮಿಕರು ಸುಮಾರು 50 ಶೆಡ್ ನಿರ್ಮಿಸಿಕೊಂಡಿದ್ದರು. ಮೊದಲಿಗೆ ಒಂದು ಶೆಡ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೇರೆ ಶೆಡ್‍ಗಳಿಗೂ ಬೆಂಕಿ ತಗುಲಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನ ಹೊರಗೆ ಓಡಿ ಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More