Author: AIN Author

ಹಾವೇರಿ ; ಇತ್ತೀಚಿಗಷ್ಟೇ ವಂದೇ ಭಾರತ್‌ ಟ್ರೈನ್‌ ಹಾವೇರಿಯಲ್ಲಿ ನಿಲುಗಡೆಯಾಗುವ ಬಗ್ಗೆ ಘೋಷಿಸಲಾಗಿತ್ತು. ಇಂದು  ಹಾವೇರಿಯಲ್ಲಿ ವಂದೇ ಭಾರತ್ ಟ್ರೈನ್ ನಿಲುಗಡೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಲಾಗಿದೆ.   ಪ್ರತಿದಿನ ಧಾರವಾಡದಿಂದ ಬೆಂಗಳೂರು,ಮತ್ತು ಬೆಂಗಳೂರಿನಿಂದ-ಧಾರವಾಡ ಸಂಚರಿಸುವ ವಂದೇ ಭಾರತ ಟ್ರೈನ್ ಇಂದಿನಿಂದ ಹಾವೇರಿಯಲ್ಲಿ ಸಹ ನಿಲ್ಲಿಸಲಾಗುವುದು. ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ಗೆ  ಕೇಂದ್ರ ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಸಚಿವ ವಿ ಸೋಮಣ್ಣರಿಂದ ಹಸಿರು ನಿಶಾನೆ‌ ತೋರಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು, ಅಧಿಕಾರಿಗಳು ಭಾಗಿಯಾಗಿದ್ದರು. ವಂದೇ ಭಾರತ ಟ್ರೈನ್ ಗೆ ಹಸಿರು‌‌ ನಿಶಾನೆ ತೋರಿಸಿದ ಕೇಂದ್ರ ರೈಲ್ವೇ ಸಚಿವ ವಿ.ಸೋಮಣ್ಣ ಮತ್ತು ಬಸವರಾಜ್ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದಾರೆ. ಇನ್ನೂ ಇಂದಿನಿಂದ ಹಾವೇರಿಯಲ್ಲೂ ವಂದೇ ಭಾರತ್‌ ಟ್ರೈನ್‌ ನಿಲುಗಡೆಯಾಗುವುದು.

Read More

ಬೆಳಗಾವಿ : ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಕಚೇರಿ ಬಾಗಿಲು ಬಂದ್ ಮಾಡಿ ಧರಣಿ ನಡೆಸಿದರು. https://ainkannada.com/the-real-workers-are-muslims-mp-e-tukaram/ ಎ ಖಾತಾ ಬಿ ಖಾತಾ ಮಾಡಿಕೊಡಲು ಕಂದಾಯ ಇಲಾಖೆ ಅಧಿಕಾರಿಗಳ ಹಣಕ್ಕೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ನ ಸದಸ್ಯರು ಅಧಿಕಾರಿಗಳ  ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟ ನಡೆಸಿದರು.  

Read More

  ವಿಜಯನಗರ : ನಿಜವಾದ ಕಾಯಕಯೋಗಿಗಳೆಂದರೆ ಮುಸ್ಲಿಮರು ಎಂದು ಸಂಸದ ಈ ತುಕಾರಾಂ ಹೇಳಿದರು. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಹಜ್ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಹಜ್ ಯಾತ್ರಿಗಳ ತರಬೇತಿ ಶಿಬಿರದಲ್ಲಿ ಸಂಸದ ತುಕಾರಾಂ ಭಾಗಿಯಾಗಿದ್ದರು. https://ainkannada.com/conspiracy-to-murder-yatnal-audio-of-anonymous-youth-goes-viral/ ಈ ವೇಳೆ ಮಾತನಾಡಿದ ಅವರು, ಮುಸ್ಲಿಂರು ತಮ್ಮ ಕಾಯಕದಿಂದಲೇ ಇತಿಹಾಸ ಸೃಷ್ಟಿ ಮಾಡಿದ್ದಾರೆ.  ಮನುಷ್ಯ ಧರ್ಮ ಪಾಲಿಸಬೇಕು ಎಂದು ಎಲ್ಲಾ ಶರಣರು, ಸಂತರು, ಪ್ರವಾದಿಗಳು ಹೇಳಿದ್ದಾರೆ. ಮನುಷ್ಯ ಧರ್ಮ ಪಾಲಿಸಬೇಕೆಂಬ ಸರ್ವಕಾಲಿಕ ಸತ್ಯವನ್ನ ನಾವೆಲ್ಲಾ ಪಾಲಿಸಬೇಕು. ನನಗೆ ಜನ್ಮ ನೀಡಿದ್ದು ತಂದೆ ತಾಯಿ. ಆದರೆ ನನ್ನ ರಾಜಕೀಯ ಜೀವನಕ್ಕೆ ನೀವೆಲ್ಲಾ ತಂದೆ ತಾಯಿ. ನಿಮ್ಮ ಒಲುಮೆ ಬೆಂಬಲದಿಂದಲೇ ನಾನು ಸಂಸದನಾಗಿದ್ದೇನೆ . ನನ್ನ ಪತ್ನಿ ಅನ್ನಪೂರ್ಣ ಸಂಸದೆಯಾಗಿದ್ದಾಳೆ. ನಿಮ್ಮ ಪರವಾಗಿ ನಾನು ಸದಾ ಧ್ವನಿ ಎತ್ತುತ್ತೇನೆ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಾನು ಮತ ಚಲಾಯಿಸಿದ್ದೇನೆ ಎಂದಿದ್ದಾರೆ.

Read More

ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೊಲೆಗೆ ಸಂಚು ನಡೆಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಯತ್ನಾಳ್‌ ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್‌ ಮಾತನಾಡಿದ್ದು, ಈ ವೇಳೆ ಮಹಮ್ಮದ್‌ ಪೈಗಂಬರ್‌ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ವಿಡಿಯೋ ವೈರಲ್‌ ಆಗಿತ್ತು. https://ainkannada.com/yatnal-retorts-by-comparing-vijayananda-kashpanavar-to-a-pig/ ಇದೀಗ   ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಗ್ಗಟ್ಟಾಗಿ ಎನ್ನುವ ಆಡಿಯೋ ವೈರಲ್‌ ಆಗುತ್ತಿದೆ. ಪ್ರವಾದಿ ವಿರುದ್ಧ ಮಾತನಾಡಿದ ಯತ್ನಾಳ್ ವಿರುದ್ಧ 15 ರಂದು ಮೋರ್ಚಾ ನಡೆಸಲು ವಿಜಯಪುರದಲ್ಲಿ ಸಭೆ ಮಾಡಿದ್ದೇವೆ. ಎನ್‌ಎಂಸಿಯಿಂದ ಮೀಟಿಂಗ್, ಸಭೆಯಲ್ಲೆ ಮುಖಂಡರು, ಉಲ್ಮಾಗಳ ಸೇರಿ ಸಭೆಯಾಗಿದೆ. ಪೈಗಂಬರ್ ವಿರುದ್ಧ ಮಾತನಾಡಿದ ಯತ್ನಾಳ ಮನೆಗೆ ರ್ಯಾಲಿ ಹೊರಡಲು ಯುವಕನ ಪ್ರಚೋದನೆ ನೀಡಿದ್ದಾನೆ. ನೀವು.. ನಿಮ್ಮ ಗೆಳೆಯರು, ಹತ್ತಿರದ ಊರಿನ ಗೆಳೆಯರನ್ನು ಸಹ ರ್ಯಾಲಿಗೆ ಕರೆ ತನ್ನಿ.. ಈ ಬಾರಿ…

Read More

ಕೊಪ್ಪಳ: ಕೊಪ್ಪಳದ ಹಲವೆಡೆ ಭಾರೀ ಮಳೆಯಾಗಿದ್ದು, ಚುಕ್ಕನಕಲ್‌ ಬಳಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಮಂಜುನಾಥ ಗಾಳಿ (48), ಗೋವಿಂದಪ್ಪ ಮ್ಯಾಗಲಮನಿ (62) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಗ್ರಾಮದ ತೋಟದ ಮನೆಯಲ್ಲಿದ್ದರು. ಈ ವೇಳೆ ಮಳೆ ಬಂದಿದ್ದು, ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. https://ainkannada.com/two-boys-drown-in-agricultural-pond/ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಬಳ್ಳಾರಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಶಿಡಿಗಿನಮೊಳ ಗ್ರಾಮದಲ್ಲಿ ಹೊಲದಲ್ಲಿ ಘಟನೆ ನಡೆದಿದೆ. ರಾಜೇಶ್ (11) ಮತ್ತು ಶಿವಶಂಕರ್ (12) ಮೃತ ಯುವಕರಾಗಿದ್ದು, ಮಕ್ಕಳು  ಕ್ರಿಕೆಟ್ ಆಡಿದ ನಂತರ ಮಕ್ಕಳು ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ನಾಲ್ವರು ಬಾಲಕರು ಈಜಲೆಂದು ಕೃಷಿ ಹೊಂಡಕ್ಕೆ ತೆರಳಿದ್ದಾರೆ. ಈ ವೇಳೆ ಒಬ್ಬ ನೀರಿಗಿಳಿದ ಕೂಡಲೇ ಮುಳುಗಿದರೆ, ಆತನ ರಕ್ಷಣೆಗೆಂದು ನೀರಿಗಿಳಿದ ಮತ್ತೊಬ್ಬ ಬಾಲಕ ಕೂಡ ಮುಳುಗಿದ್ದಾನೆ. https://ainkannada.com/depression-over-wifes-death-husband-kills-children-and-hangs-himself/ ಘಟನೆಗೆ ಸಂಬಂಧಿಸಿದಂತೆ ಪರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರಾಜೇಶ್ ಮತ್ತು ಶಿವಶಂಕರ್ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Read More

ಬೆಳಗಾವಿ : ಎಲೆಕೋಸು ಬೆಲೆ ದಿಢೀರ್‌ ಕುಸಿತ ಹಿನ್ನೆಲೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ರೈತರೇ ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕ್ಯಾಬೇಜ್‌ ಬೆಲೆ ಏಕಾಏಕಿ ಕುಸಿದಿದ್ದು, ಒಂದು ಕೆಜಿಗೆ 70 ರಿಂದ 80 ಪೈಸೆಗೆ ಮಾತ್ರ ಮಾರಾಟವಾಗುತ್ತಿದೆ. 10 ಕೆಜಿ ಬ್ಯಾಬೇಜ್ ಗೆ ಕೇವಲ 7ರೂ ಮಾತ್ರ ಸಿಗುತ್ತಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿ ಆಕ್ರೋಶ ಹೊರ ಹಾಕಿದ್ದಾರೆ. https://ainkannada.com/protest-in-front-of-dcs-office-demanding-fair-price-for-cabbage-crop/ ಕ್ಯಾಬೇಜ್‌ ದರ ಕುಸಿತ ಕಂಡ ಹಿನ್ನೆಲೆ ಮೊನ್ನೆಯಷ್ಟೇ ಡಿಸಿ ಕಚೇರಿ ಎದುರು ಕ್ಯಾಬೇಜ್ ಸುರಿದು ಪ್ರತಿಭಟನೆ ನಡೆಸಿದ್ದರು.

Read More

ಬಾಗಲಕೋಟೆ : ದೇವರ ಮೇಲೆ ಅನನ್ಯ ಭಕ್ತಿ ಇದ್ದರೆ ಮಾತ್ರ ಕಷ್ಟ ಕಾರ್ಪಣ್ಯದಿಂದ ಮುಕ್ತಿ ದೊರೆಯುತ್ತದೆ ಎಂದು ಬಾಲಚಂದ್ರ ಉಮದಿ ಅಣ್ಣನವರು ಹೇಳಿದರು.  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಲ್ಲಿಕಾರ್ಜುನ್ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಐದೇಶಿ ಕಾರ್ಯಕ್ರಮ ನಡೆಯಿತು.   ಬಂದು ಬಾಂಧವರು ಕೈ ಬಿಟ್ಟರು ದೇವರು ಮತ್ತು ಗುರು ಎಂದಿಗೂ ಕೈ ಬಿಡಲಾರರು ಕಳೆದ ೫ ದಿನಗಳಿಂದ ನಿರಂತರವಾಗಿ ಶ್ರೀ ಮಲ್ಲಿಕಾರ್ಜುನ ದೇವರಿಗೆ ಪೂಜೆ ಪುನಸ್ಕಾರ  ಮಾಡಿ ಲಕ್ಷಾಂತರ ಭಕ್ತರಿಗೆ ಶ್ರೀ ಮಲ್ಲಿಕಾರ್ಜುನ ದೇವರು ಆಶೀರ್ವಾದ ಮಾಡಿದರು. ಧರ್ಮ ಮತ್ತು ಭಕ್ತಿ ಮಾರ್ಗದಲ್ಲಿ ನಡೆದರೆ ಜಯ ನಿಶ್ಚಿತ ದೇವರಲ್ಲಿ ಶ್ರದ್ದಾಪೂರ್ವ ಭಕ್ತಿ ಇರಬೇಕು. ಸ್ವಚ್ಛತೆ, ಶಿಸ್ತು, ಆರೋಗ್ಯ ಪೂರ್ಣ ಜೀವನ ಶ್ರೇಷ್ಟವಾದದ್ದು ಎಂದರು. ಆಧ್ಯಾತ್ಮಕ್ಕೆ ಅಪಾರ ಶಕ್ತಿ ಇದೆ ಸದಾ ನಾವೂ ದೇವರ ನಾಮ ಸ್ಮರಣೆ ಮಾಡುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದರು. https://ainkannada.com/kundaghola-bhagavan-mahaveer-jayanti-celebration/ ಇದೇ ಸಂದರ್ಭದಲ್ಲಿ ಮಾಹಾದೇವ ಮಠಪತಿ, ನೀಲಕಂಠ ಮುತ್ತೂರು ಸಂಜಯ…

Read More

ಬಾಗಲಕೋಟೆ : ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕು ದಿನದ ಹಸುಗೂಸು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಹೆಬ್ಬಳ್ಳೆವ್ವ ಮತ್ತು ಬಸಪ್ಪ ಹರಿಜನ ಎಂಬುವರ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಹೆಬ್ಬಳ್ಳವ್ವ ಹೆರಿಗೆಗಾಗಿ ಏ.7 ರಂದು  ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಏ.೮ ರಂದು ನಾರ್ಮಲ್  ಹೆರಿಗೆಯಾಗಿತ್ತು. ಮಗು ಆರೋಗ್ಯವಾಗಿತ್ತು. ತಾಯಿಗೆ ರಕ್ತ ಕಡಿಮೆಯಾದ ಕಾರಣ, ರಕ್ತ ಹಾಕುವ ಪ್ರಕ್ರಿಯೆ ಮಾಡಲಾಗಿತ್ತು. ಈ ವೇಳೆ ಮಗು ಆರೋಗ್ಯವಾಗಿಯೇ ಇತ್ತು. ಸಂಜೆ 7.15ಕ್ಕೆ ಸರಿ ಸುಮಾರಿಗೆ  ಹಾಲು ಕುಡಿಸಿ ಮಲಗಿಸಲಾಗಿದೆ. ನಂತರ  ೭.೪೦ ರ ವೇಳೆ ಗಮನಿಸಿದಾಗ ಉಸಿರಾಟ ನಿಂತು ಹೋಗಿದೆ. ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿದ್ದಾರೆ. https://ainkannada.com/terrible-accident-on-bengaluru-tumkur-national-highway-four-killed/ ಮಗು ಮಲಗಿಸಿದ ವಾರ್ಡ್ ನಲ್ಲಿ ಪ್ಯಾನ್ ಜೋರಾಗಿ ಇಟ್ಟಿದ್ದಾರೆ. ಜೊತೆಗೆ ಮಗುವಿಗೆ ತೇಗು ಬರುವಂತೆ ಮಾಡಲಿಲ್ಲ. ಹಾಲು ನೆತ್ತಿಗೆ ಹತ್ತಿ ಹೈಪೊಥೆರ್ಮಿ ಸಮಸ್ಯೆಯಿಂದ ಮೃತಪಟ್ಟಿರುವ ಶಂಕೆ ಇದೆ. ವೈದ್ಯರು ಯಾರೂ ನಿರ್ಲಕ್ಷ್ಯ ಮಾಡಿಲ್ಲ. ಮಗು…

Read More

ಬೆಂಗಳೂರು ಗ್ರಾಮಾಂತರ : ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರ ದುರ್ಮರಣಕ್ಕೀಡಾಗಿದ್ದಾರೆ. ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿ ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ತುಮಕೂರಿನ ಸಂಬಂಧಿಗಳ ಮನೆಯಲ್ಲಿನ ನಾಮಕರಣ ಕಾರ್ಯಕ್ರಮಕ್ಕೆ ತೆರಳುತಿದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಕಾರು ಚಾಲಕ ಗೋಪಾಲ್(45), ಗೋಪಾಲ್ (60), ಶಶಿಕಲಾ (55) ಮತ್ತು ದೀಪಿಕಾ (35) ಎಂದು ಗುರುತಿಸಲಾಗಿದೆ. https://ainkannada.com/ksrtc-bus-bolero-head-on-collision-four-dead/ ಬೆಂಗಳೂರು ಗ್ರಾಮಾಂತರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಅಪಘಾತದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Read More