ಹಾವೇರಿ: ಡಿಸೆಂಬರ್ 23 & 24 ರಂದು 24 ನೇ ಅಖಿತ ಭಾರತ ವೀರಶೈವ ಲಿಂಗಾತ ಮಹಾಸಭಾ ಅಧಿವೇಶನ ದಾವಣಗೆರೆಯಲ್ಲಿ ನೆಡೆಸಲಾಗುತ್ತಿದೆ ಅಂತಾ ಹಾವೇರಿ ಜಿಲ್ಲೆ ವೀರಶೈವ ಲಿಂಗಾತ ಸಮುದಾಯದ ಜಿಲ್ಲಾಧ್ಯಕ್ಷರು MS ಕೋರಿಶೆಟ್ಟರ್ ಹೇಳಿದರು. ಹಾವೇರಿ ನಗರದ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಾವಣಗೆರೆ ನಗರದ MBA ಕಾಲೇಜ್ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಸಮುದಾಯದ ಅಧಿವೇಶನ ಅದ್ದೂರಿಯಾಗಿ ನಡೆಸಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತ ಸಂಖ್ಯೆಯಲ್ಲಿ ಭಾಗಿಯಾಗು ನಿರೀಕ್ಷೆ ಇದೆ. ಇನ್ನು ರಾಜ್ಯದ ನಾಯಕರು ಸಹ ಅಧಿವೇಶನದಲ್ಲಿ ಭಾಗಿಯಾಲಿದ್ದಾರೆ ಅಂತಾ ಜಿಲ್ಲಾಧ್ಯಕ್ಷರು MS ಕೋರಿಶೆಟ್ಟರ ಹೇಳಿದರು…
Author: AIN Author
ಬೆಂಗಳೂರು: ತುಷ್ಟೀಕರಣದ ಉತ್ತುಂಗಕ್ಕೆ ತಲುಪಿರುವ ಸಿದ್ದರಾಮಯ್ಯ (Siddaramaiah) ಸಾಹೇಬರು ನಾಳೆ ಯತೀಂದ್ರ (Yatindra) ಅವರಿಗೆ ಟಿಪ್ಪು(Tippu) ಎಂದು ನಾಮಕರಣ ಮಾಡಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ (Congres) ಕೆಲ ಶಾಸಕರು ಟಿಪ್ಪು ಜಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ ಸರ್ಕಾರಕ್ಕೆ ಬಿಜೆಪಿ ಟಾಂಗ್ ನೀಡಿದೆ. ಪೋಸ್ಟ್ನಲ್ಲಿ ಏನಿದೆ? ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ರೂ. ಕೊಡುತ್ತಿರುವ ಸಿದ್ದರಾಮಯ್ಯನವರು ಇನ್ನೂ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು – ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ, ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರು ನಾಮಕರಣ, ಮೈಸೂರು ವಿವಿಗೆ ಟಿಪ್ಪು ಹೆಸರು, ಟಿಪ್ಪುವಿನ 108 ಅಡಿ ಪ್ರತಿಮೆ, ಟಿಪ್ಪು ಮದ್ಯದ ಬಾಟಲಿ, ಬಿಎಂಟಿಸಿ/ಕೆಎಸ್ಆರ್ಟಿಸಿಗೆ ಟಿಪ್ಪು ಸಾರಿಗೆ ಎಂಬ ಹೆಸರು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿಯವರು ತಮ್ಮ 64 ನೇ ಜನ್ಮದಿನ ಹಿನ್ನೆಲೆ ಅನೇಕ ಗಣೈರು ನಾಯಕರು ಶುಭ ಕೋರಿದ್ದಾರೆ. ಜೆಡಿಎಸ್ ನಾಯಕರು ಸೇರಿದಂತೆ ಕರ್ನಾಟಕದ ಅನೇಕ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಇದರ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಹೆಚ್ಡಿ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ! ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು. ದೇವರು ಉತ್ತಮ ಆಯುಷ್ಯ, ಒಳ್ಳೆಯ ಆರೋಗ್ಯವನ್ನು ನೀಡಿ ನಿಮ್ಮನ್ನು ಕಾಪಾಡಲಿ ಎಂದು ಪ್ರಧಾನಿ ಮೋದಿ ಶುಭಾಶಯಗಳನ್ನು ಕೋರಿದ್ದಾರೆ.
ಬೆಂಗಳೂರು: ಹೊಸ ವರ್ಷ ಹೊಸ್ತಿಲಿನಲ್ಲಿ ಮದ್ಯಪ್ರಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಅಬಕಾರಿ ಇಲಾಖೆಗೆ ಡಿಸೆಂಬರ್ ತಿಂಗಳಿನಲ್ಲಿ ಮೂರು ಸಾವಿರ ಕೋಟಿ ಆದಾಯದ ಟಾರ್ಗೆಟ್ ನೀಡಲಾಗಿದೆ. ವರ್ಷಾಂತ್ಯದಲ್ಲಿ ಬರುವ ಕ್ರಿಸ್ಮಸ್, ನ್ಯೂ ಇಯರ್ಗೆ ಅಬಕಾರಿ ಇಲಾಖೆ ಆದಾಯ ಹೆಚ್ಚಿಸಲು ಭರ್ಜರಿ ತಯಾರಿ ನಡೆಸಿದೆ. ಕಳೆದ 14 ದಿನದಲ್ಲಿ ಮದ್ಯ ಮಾರಾಟದಲ್ಲಿ ಇಳಿಕೆ ಯಾಗಿದ್ದು, ಕಳೆದ ವರ್ಷ 14 ದಿನಗಳಲ್ಲಿ 24.50 ಲಕ್ಷ ಬಾಕ್ಸ್ IML ಮಾರಾಟವಾಗಿತ್ತು. ಆದರೆ ಈ ವರ್ಷ 14 ದಿನದಲ್ಲಿ 21.82 ಲಕ್ಷ IML ಬಾಕ್ಸ್ ಮದ್ಯ ಮಾರಾಟ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಶೇಕಡ 10ರಷ್ಟು ಮಾರಾಟ ಕುಸಿತವಾಗಿದೆ. ಪ್ರತಿ ವರ್ಷ, ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಿನ್ನೆಲೆ ಅಡ್ವಾನ್ಸ್ ಆಗಿ ಮದ್ಯದ ಅಂಗಡಿಗಳು ಬಿಯರ್ ಹಾಗೂ IML ಬುಕ್ ಮಾಡುತ್ತಿದ್ದರು. ಆದರೇ ಈ ವರ್ಷ IML ಮದ್ಯ ಮಾರಾಟವಾಗದೇ ಸ್ಟಾಕ್ ಹಾಗೆಯೇ ಉಳಿದಿದೆ. ಹೀಗಾಗಿ ಇನ್ನೂ 14 ದಿನದಲ್ಲಿ 1818 ಕೋಟಿ ಸಂಗ್ರಹವಾದರೇ, ಅಬಕಾರಿ ಇಲಾಖೆ…
ನಾಳೆ ನಟ ಶ್ರೀಮುರಳಿ ಅವರ ಹುಟ್ಟು ಹಬ್ಬ (Birthday). ಈ ವರ್ಷದಲ್ಲಿ ಅತ್ತಿಗೆಯ ಸಾವಿನಿಂದಾಗಿ ಬಹುಶಃ ಶ್ರೀಮುರಳಿ (Srimurali) ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತು ಅಭಿಮಾನಿಗಳನ್ನು ಅಂದು ಭೇಟಿ ಕೂಡ ಮಾಡಲಿದ್ದಾರೆ. ಈ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಶ್ರೀಮುರಳಿ, ತಮ್ಮ ಮನದಾಳದ ಮಾತುಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಅತ್ತಿಗೆಯ ಕಳೆದುಕೊಂಡ ನೋವಿನ ಮಧ್ಯೆಯೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್ 17ನೇ ತಾರೀಖು, ವಸಂತ ನಗರದ ದೇವರಾಜ್ ಅರಸ್…
ಬೆಂಗಳೂರು: ಆ ಜೋಡಿ.ದುಡ್ಡಿರೊ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ರು.ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡ್ತೀವಿ ಕಲರ್ ಕಲರ್ ಟೋಪಿ ಹಾಕ್ತಿದ್ರು ಕಲರ್ ಜೆರಾಕ್ಸ್ ತೋರಿಸಿ ವರ್ಜಿನಲ್ ಅಂತ ಕಾಗೆ ಹಾರಿಸ್ತಿದ್ರು. ಒಂದು ಸಣ್ಣ ಸುಳಿವು ಸಿಕ್ಕಿದ್ದೇ ತಡ ಸಿಸಿಬಿ ಪೊಲೀಸರು ಒಂದು ವಾರ ಹಿಂದೆ ಬಿದ್ದಿದ್ದಾರೆ..ನಂತರ ಏನಾಯ್ತು ಈ ಸ್ಟೋರಿ ನೋಡಿ ಈ ಪೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಇಮ್ರಾನ್ ಶೇಕ್.ದೇಹಲಿ ಮೂಲದವ್ನು.ಪತ್ನಿ ರುಕ್ಸಾನ ಜೊತೆಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ ನನ್ನ ಹತ್ರ ದುಬೈ ಧಿರಾಮ್ ಕರೆನ್ಸಿ ಇದೆ ಕಡಿಮೆ ಬೆಲೆಗೆ ಅಂದ್ರೆ 50-50 ರೇಟ್ ಕೊಡ್ತೀನಿ ಅಂತಾ ವಂಚಿಸಲು ಹೊಂಚು ಹಾಕ್ತಿದ್ದ. ಹೌದು..ಬೆಂಗಳೂರಲ್ಲಿ ವಾಸವಿದ್ದ ಇಮ್ರಾನ್ ಶೇಕ್ ಮತ್ತು ರುಕ್ಸಾನ ದಂಪತಿ ಮೂರನೇ ವ್ಯಕ್ತಿ ಮೂಲಕ ದುಡ್ಡಿರೊ ಉದ್ಯಮಿಗಳ ಪರಿಚಯ ಮಾಡಿಕೊಳ್ತಿದ್ರು.ಸ್ವಲ್ಪ ದಿನ ನಯವಾಗಿ ವರ್ತಿಸಿ ಬಳಿಕ ಅಸಲಿ ಬುದ್ಧಿ ತೋರಿಸ್ತಿದ್ರು..ನಮ್ಹತ್ರ ಕಂತೆ ಕಂತೆ ದುಬೈ ಮೂಲದ ಕರೆನ್ಸಿ ಧಿರಾಮ್ ಇದೆ.ಅದರ ಬೆಲೆ ಭಾರತೀಯ ರೂಪಾಯಿಗೆ ಹೋಲಿಸಿಕೊಂಡ್ರೆ 22…
ಬೆಂಗಳೂರು: ಏರ್ಪೋರ್ಟ್ ರಸ್ತೆಯಲ್ಲಿ ಪುಂಡಾಟ ಮೆರೆದಿದ್ದವರನ್ನ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸರಿಂದ ಐವರ ಬಂಧನವಾಗಿದೆ.ಆರೋಪಿಗಳನ್ನ ಬಂಧಿಸಿ ಕಾರ್ ಸೀಜ್ ಮಾಡಿದ ಪೊಲೀಸರು ಏರ್ಪೋರ್ಟ್ ರಸ್ತೆಯಲ್ಲಿ ಮಧ್ಯರಾತ್ರಿ ಪುಂಡಾಟ ಮೆರೆದಿದ್ದ ಆರೋಪಿಗಳು ಅಜಾಗರೂಕತೆ ಚಾಲನೆ, ಕಾರಿನ ಕಿಟಕಿಯಿಂದ ಹೊರ ಬಂದು ಪುಂಡಾಟ ನಡೆಸಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಭಾರೀ ಸುದ್ದಿ ಮಾಡಿತ್ತು. ಹಾಗೆ ಸಾರ್ವಜನಿಕರೊಬ್ಬರು ಅದನ್ನ ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನ ಮಾಡಿದ್ದಾರೆ. ಸದ್ಯ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ ಪೊಲೀಸರು ಸಖತ್ ಡ್ರಿಲ್ ಮಾಡಲಿದ್ದಾರೆ.
ಹುಬ್ಬಳ್ಳಿ: ಸಂಸತ್ ನಲ್ಲಿ ದಾಳಿ ಕೇವಲ ತಿಳಿಗೇಡಿ ಕೃತ್ಯವಲ್ಲ ಬದಲಾಗಿ, ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಷಡ್ಯಂತ್ರವಾಗಿದೆ. ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಈ ಹಿಂದೆ ಪಿಸ್ತೂಲ್ ಮತ್ತು ಡ್ರ್ಯಾಗರ್ ತೆಗೆದುಕೊಂಡು ಸಹ ಪ್ರವೇಶಿಸಿದ್ದರು. ಒಂದೇ ವ್ಯಕ್ತಿ ಎರಡು ದಿನ ಒಂದೇ ಪಾಸ್ ನಲ್ಲಿ ಸಂಸತ್ತಿಗೆ ಪ್ರವೇಶ ಮಾಡಿದ್ದ. ಇದಕ್ಕೆ ಯಾವ ಸಂಸದ ಪಾಸ್ ನೀಡಿದ್ದರು ಎಂಬುದು ಸಹ ಗೊತ್ತಿದೆ. ಆದರೆ ಇದನ್ನು ನಾವು ಮಾತನಾಡಲ್ಲ. ಇದು ಮೋದಿ ಸರ್ಕಾರದಲ್ಲಿ ನಡೆಯುದಿಲ್ಲ. ಇದನ್ನು ರಾಜಕೀಯ ಮಾಡಬಹುದು, ಕಟುವಾಗಿ ಕಾಂಗ್ರೆಸ್ ಟೀಕಿಸಬಹುದು. ಆದರೆ ನಾವು ಅದನ್ನು ಮಾಡಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಕಠಿಣ ಕೈಗೊಳ್ಳಲಾಗುವುದು ಎಂದರು. ಶೂನ್ಯ ಭಯೋತ್ಪಾದಕತೆ ಮೋದಿ ಸರ್ಕಾರದ ನಿರ್ಧಾರವಾಗಿದೆ. ಈ ಹಿಂದಿನ ಸ್ಪೀಕರ್ ತೆಗೆದುಕೊಂಡ ಕ್ರಮಕ್ಕಿಂತ ಈಗಿನ ಸ್ಪೀಕರ್ ಕಠಿಣ ಕ್ರಮ…
ಹಾವೇರಿ: ಬೈಕ್ ಕಳ್ಳತನ ಆರೋಪಿಗಳನ್ನ ಬಂಧಿಸುವಲ್ಲಿ ಹಾವೇರಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 3 ತಿಂಗಳಿಂದ ಸುಮಾರು 13 ಬೈಕ್ ಗಳನ್ನ ಹಾವೇರಿ ನಗರದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರನ್ನ ಬಂಧಿಸಿ ಬೈಕ್ ಗಳನ್ನ ವಶಪಡಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಸಚಿನ್ ಸಂಕ್ಲಿಪುರ & ಉಡಚಪ್ಪ ದೀಪಾಳಿ ಎಂದು ಗುರುತಿಸಲಾಗಿದೆ. ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದವರೆಂದು ತಿಳಿದಿದೆ…
ಕೋಲಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ 64ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವ್ರು ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕುರ್ಕಿ ರಾಜೇಶ್ವರಿ ಸುಮಾರು 19 ವರ್ಷಗಳಿಂದ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಸಾಯಿಬಾಬಾ ದೇವಸ್ಥಾನದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆಯಲ್ಲಿ ಆಚರಿಸಿತ್ತಿದ್ದೆವೆ. ದೇವರು ಅವರಿಗೆ ಹೆಚ್ಚಿನ ಆರೋಗ್ಯ ಆಯಸ್ಸು ನೀಡುವದರ ಜೊತೆಗೆ ನಾಡಿನ ಜನರ ಕಷ್ಟ ದುಃಖಗಳಿಗೆ ಸ್ವಂದಿಸುವ ಅಧಿಕಾರವನ್ನು ಮತ್ತೊಮ್ಮೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ. ಕಳೆದ ಬಾರಿಯೂ ಪಂಚರತ್ನ ಯೋಜನೆಗಳ ಮೂಲಕ ರೈತರ ಬಡವರ ಅಭಿವೃದ್ಧಿಯ ಪರವಾದ ಯೋಜನೆಗಳನ್ನು ರೂಪಿಸಲು ಅವಕಾಶ ಸಿಗಲಿಲ್ಲ ಮುಂದೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡುವಂತಾಗಲಿ ಎಂದು ತಿಳಿಸಿದ್ರು. ಈ ಸಂದರ್ಭದಲ್ಲಿ ಜೆಡಿಎಸ್…