Author: AIN Author

ಬೆಂಗಳೂರು:- ಬಿಜೆಪಿ ನಾಯಕರು ಯತ್ನಾಳ್ ಮಾಡಿರುವ ಆರೋಪಗಳಿಗೆ ಉತ್ತರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್​ಗೆ ಎರಡು ಸಾವಿರ ಕೋಟಿ ರೂಪಾಯಿ ಕಾಣಿಕೆ ನೀಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹಿಂದೆ ಆರೋಪಿಸಿದ್ದ ಬಸವನಗೌಡ ಪಾಟೀಲ್ ಯತ್ನಾಳ್, ನಿನ್ನೆ ಹೊಸ ಬಾಂಬು ಸಿಡಿಸಿದ್ದಾರೆ. ಕೇಂದ್ರದ ಬಿಜೆಪಿ ನಾಯಕರನ್ನು ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡಿ ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಏನಿದು ಬ್ಲಾಕ್ ಮೇಲ್?. ಈ ಬಗ್ಗೆ ಯಡಿಯೂರಪ್ಪ ಇಂದಿನ ಸಾರ್ವಜನಿಕ ಸಭೆಯಲ್ಲಿ ವಿವರ ನೀಡಲಿ” ಎಂದು ಒತ್ತಾಯಿಸಿದ್ದಾರೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿಜೆಪಿ ನಾಯಕ ವಿ.ಸೋಮಣ್ಣ ಅವರನ್ನು ಮೈಸೂರಿನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮಾಡಿ ಸೋಲಿಸಿದ್ದಾರೆ ಎಂದು ಇಲ್ಲಿಯ ವರೆಗೆ ಆರೋಪಿಸುತ್ತಾ ಬಂದಿರುವ ಯತ್ನಾಳ್ ಅವರು, ಈಗ ಬಸವರಾಜ ಬೊಮ್ಮಾಯಿ ಅವರನ್ನೂ ಸೋಲಿಸಲು ಬಿ ವೈ ವಿಜಯೇಂದ್ರ ಹಣ ಕೊಟ್ಟು ಕಳಿಸಿದ್ದರು ಎಂದು ಗುರುತರವಾದ ಇನ್ನೊಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿರುವ ಯತ್ನಾಳ್,…

Read More

ಬೆಂಗಳೂರು :- ರಾಜ್ಯದ ಹಲವೆಡೆ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಹಾಸನ, ಚಿಕ್ಕ ಮಗಳೂರು, ಮೈಸೂರು, ರಾಮನಗರ ಈ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ಸಾಧಾರಣಕ್ಕಿಂತ ಅತ್ಯಧಿಕ ಪ್ರಮಾಣದ ಮಳೆ ಆಗಲಿದೆ ಎಂದು ತಿಳಿಸಿದೆ. ಸದ್ಯ ಕರ್ನಾಟಕದಲ್ಲಿ ಅಲ್ಲಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ. ಉತ್ತರ ಒಳನಾಡಿನಲ್ಲಿ ಈ ವಾರಪೂರ್ತಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಹೀಗಿದ್ದರೂ ಈ ಭಾಗದಲ್ಲಿ ಚಳಿಯ ಪ್ರಮಾಣ ಹೆಚ್ಚಿರಲಿದೆ ಎಂದಿದೆ. ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಹೀಗಾಗಿ ಚಳಿಗಾಲ ಆರಂಭವಾದ ಅನುಭವವಾಗುತ್ತಿದೆ. ಈ ಮೂಲಕ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಚಳಿ ಆವರಿಸುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

Read More

ಬೆಂಗಳೂರು:- ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರವೇ ನಾಗರೀಕರ ಮೊದಲ ಶತ್ರು ಎಂಬುದಾಗಿ ಭಾಸವಾಗುತ್ತದೆ ಎಂದು ತಿಳಿಸಿದೆ. ಗುತ್ತಿದಾರರಿಗೆ ಹಣ ಪಾವತಿಸಲು ಫೆಬ್ರವರಿಯವರೆಗೆ ಕಾವಲಾವಕಾಶ ನೀಡಬೇಕು ಎಂಬ ಸರ್ಕಾರಿ ವಕೀಲರ ಮನವಿಯನ್ನು ಆಕ್ಷೇಪಿಸಿದ ವಿಭಾಗೀಯ ಪೀಠ, ನಿಮ್ಮ ನಡೆಯಿಂದ ಕೆಲಸ ಮಾಡಲು ಗುತ್ತಿಗೆದಾರರು ಹಿಂಜರಿಯುವ ಸ್ಥಿತಿ ಸೃಷ್ಟಿಸುತ್ತಿದ್ದೀರಿ. ನಿಮ್ಮ ನೀತಿಯಿಂದ ಟೆಂಡರ್ ಮೊತ್ತ ಹಲವು ಪಟ್ಟು ಹೆಚ್ಚಾಗಬಹುದು. ಸರ್ಕಾರಕ್ಕೆ ಇಂತಹ ಸಲಹೆ ನೀಡುತ್ತಿರುವರಾರು ? ನಾವು ಕಾನೂನು ಪದವಿ ಓದುತ್ತಿದ್ದಾಗ ಸರ್ಕಾರವೇ ನಾಗರಿಕರ ಮೊದಲ ಶತ್ರು ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಈ ಮಾತು ಸತ್ಯ ಎಂಬ ಭಾವನೆ ಮೂಡುತ್ತಿದೆ ಎಂದು ಪೀಠ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಕಂತಿನಲ್ಲಿ ಬಿಲ್ ಪಾವತಿಸಲಾಗುತ್ತಿದೆ. ಫೆಬ್ರವರಿ…

Read More

ಜಗತ್ತನ್ನು ಅಂಗೈಯಲ್ಲಿ ತೋರಿಸುವ ಮೊಬೈಲ್‌ ಈಗ ಊಟ-ನಿದ್ದೆಯಷ್ಟೇ ಮುಖ್ಯ ಎಂಬಂತಾಗಿದೆ. ಅದಕ್ಕಿಂತಲೂ ಒಂದು ಪಟ್ಟು ಹೆಚ್ಚೇ ಮಹತ್ವ ಪಡೆದಿದೆ ಎಂದರೂ ತಪ್ಪಿಲ್ಲ. ಬಿಡುವಿನ ಸಮಯದಲ್ಲಿ ಮೊಬೈಲ್‌ ನೋಡುವ ಕಾಲ ಇದಲ್ಲ. ಬಿಡುವು ಇಲ್ಲದಿದ್ದರೂ ಮಧ್ಯೆಮಧ್ಯೆ ಮೊಬೈಲ್‌ ಮೇಲೆ ಕಣ್ಣು-ಕೈ ಆಡಿಸಬೇಕು. ಮೊಬೈಲ್‌ ನೋಡಲೆಂದೇ ಸಮಯ ಎತ್ತಿಡುವವರು, ಮೊಬೈಲ್‌ ನೋಡುತ್ತ ಸಮಯ ಹಾಳು ಮಾಡುವವರು, ಮೊಬೈಲ್‌ನಲ್ಲೇ ದಿನ ಕಳೆಯುವವರು-ಹೀಗೆ ವಿವಿಧ ವರ್ಗಗಳ ಜನರು ಇದ್ದಾರೆ. ನಾವು ಹಲವು ಕಂಪನಿಗಳ ಹಾಗೂ ವಿವಿಧ ವಿನ್ಯಾಸದ ಮೊಬೈಲ್ ಫೋನ್ ಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಮೊಬೈಲ್ ಬೇಗ ತಮ್ಮ ಕೆಲಸ ನಿಲ್ಲಿಸುತ್ತವೆ. ಆಗ ನಾವು ಮೊಬೈಲ್ ಕಂಪನಿಯವರನ್ನು ಹೊಣೆಗಾರರನ್ನಾಗಿಸುತ್ತೇವೆ. ಇದು ಸಾಮಾನ್ಯ. ಅದಕ್ಕೂ ಮುಂಚೆ ನಾವು ಮೊಬೈಲ್ ಫೋನ್ ಗಳನ್ನು ಯಾವ ರೀತಿ ಬಳಸಬೇಕು? ಅದು ಹೆಚ್ಚು ದಿನ ಹೇಗೆ ಕೆಲಸ ಮಾಡುವಂತೆ ಗಮನಹರಿಸಬೇಕು? ಎಂಬುದನ್ನು ತಿಳಿದುಕೊಳ್ಳಬೇಕಿದೆ. ಚಾರ್ಜ್ ಮಾಡುವಾಗ ಇರಲಿ ಎಚ್ಚರ ನಾವು ಹಲವು ಬಾರಿ ಮೋಬೈಲ್ ಚಾರ್ಜ್ ಮಾಡುವುದರಿಂದ ನಮ್ಮ ಫೋನ್ ಹಾಳಾಗುತ್ತದೆ.…

Read More

ಭಾರತದಲ್ಲಿ ಉಗುರು ಕತ್ತರಿಸುವ ಬಗ್ಗೆ ಕೆಲ ರೂಢಿಯಿದೆ.  ಭಾರತದಲ್ಲಿ ಸ್ನಾನದ ನಂತ್ರ ಉಗುರು ಕತ್ತರಿಸಬಾರದು ಎನ್ನುತ್ತಾರೆ. ಅದ್ರಲ್ಲೂ ರಾತ್ರಿ ಉಗುರನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳ್ತಾರೆ. ನಾವು ಯಾಕೆ ರಾತ್ರಿ ಉಗುರು ಕತ್ತರಿಸಬಾರದು ಎಂದು ಮರುಪ್ರಶ್ನೆ ಮಾಡಿದ್ರೆ ಅನೇಕರಿಗೆ ಅದ್ರ ಬಗ್ಗೆ ತಿಳಿದಿಲ್ಲ. ಹಿರಿಯರು ಹೇಳ್ತಾರೆ,ಅದಕ್ಕೆ ಕತ್ತರಿಸಬಾರದು, ಕಾರಣ ಕೇಳ್ಬೇಡಿ ಎನ್ನುತ್ತಾರೆ. ಯಾಕೆ ರಾತ್ರಿ ಉಗುರು ಕತ್ತರಿಸಬಾರದು? ಅದಕ್ಕೆ ಕಾರಣವೇನು ಎಂಬುದನ್ನು ನಾವು ಹೇಳ್ತೇವೆ. ಇದು ಮೂಢನಂಬಿಕೆಯೇ?: ಅನೇಕರು ಇದನ್ನು ಮೂಢನಂಬಿಕೆ ಎಂದುಕೊಂಡಿದ್ದಾರೆ. ಆದ್ರೆ ಇದಕ್ಕೆ ಯಾವುದೇ ದೃಢವಾದ ಆಧಾರ ಅಥವಾ ತರ್ಕಬದ್ಧ ವಿವರಣೆಯಿಲ್ಲ. ಆದಾಗ್ಯೂ, ಮೂಢನಂಬಿಕೆಗಳನ್ನು ತಳ್ಳಿಹಾಕುವ ಹೆಸರಿನಲ್ಲಿ ನಾವು ತಲೆಮಾರುಗಳಿಂದ ನಮಗೆ ಹಸ್ತಾಂತರಿಸಲ್ಪಟ್ಟ ಬಹಳಷ್ಟು ಉಪಯುಕ್ತ ಸಲಹೆಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಇದು ಮೂಢನಂಬಿಕೆ ಎನ್ನುವ ಮೊದಲು ಅದರ ಹಿಂದಿನ ಕಾರಣವನ್ನು ತಿಳಿಯಬೇಕಾಗುತ್ತದೆ. ಕಾರಣ ಒಂದು : ಆ ದಿನಗಳಲ್ಲಿ ವಿದ್ಯುತ್ ಇರಲಿಲ್ಲ. ಆದುದರಿಂದ ಜನರು ರಾತ್ರಿ ಹೆಚ್ಚು ಗಾಢವಾದ ಬೆಳಕನ್ನು ಹೊಂದಿರಲಿಲ್ಲ. ಅನೇಕರು ರಾತ್ರಿಯಾಗ್ತಿದ್ದಂತೆ ಮಲಗ್ತಿದ್ದರು. ಮತ್ತೆ ಕೆಲವರು ಮಂದ ಬೆಳಕಿನ…

Read More

ಸೂರ್ಯೋದಯ: 06.33 AM, ಸೂರ್ಯಾಸ್ತ : 05.55 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಪಾಡ್ಯ 03:09 AM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ಮೂಲ 09:47 AM ತನಕ ನಂತರ ಆಷಾಢ ಯೋಗ: ಇವತ್ತು ಗಂಡ01:25 PM ತನಕ ನಂತರ ವೃದ್ಧಿ ಕರಣ: ಇವತ್ತು ಬವ 02:04 PM ತನಕ ನಂತರ ಬಾಲವ 03:09 AM ತನಕ ನಂತರ ಕೌಲವ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 03.44 AM to 05.14 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:32 ವರೆಗೂ ಮೇಷ ರಾಶಿ :ಎಲ್ಲ ಸಾಮರ್ಥ್ಯ ಇದ್ದರು ವಿದೇಶ ಪ್ರವಾಸ ಏಕೆ ಅಡತಡೆ? ಕೆಲವರಿಗೆ ಮದುವೆ ವಿಳಂಬ ಏಕೆ?ಕೆಲವರಿಗೆ ಹಣಕಾಸಿನಲ್ಲಿ ಸಮಸ್ಯೆ…

Read More

ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಯಲಹಡಗಿ ಗ್ರಾಮದಿಂದ ಅಥಣಿ ಮತ್ತು ಯಕಂಚ್ಚಿಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ವೇಳೆ ಸಿದ್ರು ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆ ಆಗ್ತಿದೆ ಬೆಳಗ್ಗೆ 7 ಘಂಟೆಗೆ ಬಸ್ ಗೋಸ್ಕರ ನಿಲ್ದಾಣದಲ್ಲಿ ಕಾದು ಕಾದು ಸುಸ್ತ ಆಗ್ತಾ ಇದ್ದಾರೆ ವಿದ್ಯಾರ್ಥಿಗಳು ಯಾವುದೇ ಬಸ್ಸು ನಿಲ್ಲಿಸೋದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಸಿಗದೆ ವಿದ್ಯಾರ್ಥಿಗಳು ವಾಪಸ್ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆದಷ್ಟು ಬೇಗನೆ ಎಲ್ಲಾ ಬಸ್ ಗಳು ನಿಲ್ಲಿಸಿ ವಿದ್ಯಾರ್ಥಿಗಳನ್ನು ತೊಗೋಂದ ಹೋಗಬೇಕು ಎಂದರು. ಈ ಹಿಂದೆ ಎರಡು ಬಾರಿ ಅಥಣಿ ಬಸ್ ಡಿಪೋ ಮ್ಯಾನೇಜರ್ ಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು ಕ್ಯಾರೇ ಎನ್ನದ ಡಿಪೋ ಮ್ಯಾನೇಜರ್ ನ ವಿದ್ಯಾರ್ಥಿಗಳು ಮತ್ತು ಪಾಲಕರು ತರಾಟೆಗೆ ತೆಗೆದುಕೊಂಡರು. ಅದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಊರಿನ ಯುವಕರು ಗ್ರಾಮಕ್ಕೆ ಕರೆಸಿ ಮಾತನಾಡಿ ದಿನಾಲೂ ಬೆಳಿಗ್ಗೆ ಬಸ್ ಬಿಡುವುದಾಗಿ…

Read More

ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ, ಗುಂಡೇವಾಡಿ, ಬಳ್ಳಿಗೇರಿ ಗ್ರಾಮಗಳಲ್ಲಿ ಮನಬಂದಂತೆ ದಾಳಿ ನಡಿಸಿರುವ ಹುಚ್ಚು ನಾಯಿ, ಗುಂಡೇವಾಡಿ ಗ್ರಾಮದಲ್ಲಿ ಬೃಹತ್ತ ಪ್ರಮಾಣದಲ್ಲಿ ಜರುಗಿದ್ದ ಜಾತ್ರಾ ಮಹೋತ್ಸವದ ಲ್ಲಿ ನಾಯಿ ನುಗ್ಗಿ ಹನ್ನೆರಡು ಜನರಿಗೆ ಗಾಯಗೊಳಿಸಿದ್ದು, ಪಾರ್ಥನಹಳ್ಳಿ ಗ್ರಾಮದಲ್ಲಿ ಮೂರು ಚಿಕ್ಕಮಕ್ಕಳು ಮಹಿಳೆಯರು ಸೇರಿದಂತೆ ಆರು ಜನ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಒಂಬತ್ತು ವರ್ಷದ ಬಾಲಕ ಮುಖಕ್ಕೆ ಮೈ ಭಾಗಗಳಿಗೆ ತೀವ್ರಗಾಯವಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ವಿಫರಿತ ಗಾಯಕ್ಕೆ ಒಳಗಾದ ಒಂಬತ್ತು ವರ್ಷದ ಬಾಲಕನ್ನು ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಸಾಂಗಲಿ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಇನ್ನುಳಿದವರನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ “ಆಂಟಿರಾಬಿಜ್” ಚುಚ್ಚುಮದ್ದು ನೀಡಿಲಾಗಿ, ಒಟ್ಟು ಸಂಜೆ ವರೆಗೆ 18 ಕೇಸೆಸ್ ದಾಖಲಾದ ಬಗ್ಗೆ ತಾಲೂಕಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Read More

ಅಜೇಯವಾಗಿ ಫೈನಲ್​ ಪ್ರವೇಶಿಸಿ, ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಹೀನಾಯವಾಗಿ ಸೋಲುಂಡುವ ಮೂಲಕ ಟೀಮ್​ ಇಂಡಿಯಾ ಅಸಂಖ್ಯಾತ ಕ್ರೀಡಾಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು. ಇಂದಿಗೂ ಈ ಪಂದ್ಯವನ್ನು ನೆನೆದರೆ ಭಾರತೀಯರಲ್ಲಿ ಬೇಸರ ತುಂಬಿಕೊಳ್ಳುತ್ತದೆ. ಫೈನಲ್​ ಸೋಲಿನಿಂದ ತೀವ್ರವಾಗಿ ಕುಗ್ಗಿ ಹೋಗಿದ್ದ ನಾಯಕ ರೋಹಿತ್​ ಶರ್ಮ ಅಂದಿನಿಂದ ಇಂದಿನವರೆಗೂ ಈ ಬಗ್ಗೆ ಮುಕ್ತವಾಗಿ ಮಾತನಾಡಿರಲಿಲ್ಲ. ಕೊನೆಗೂ ಮೌನ ಮುರಿದಿರುವ ರೋಹಿತ್​, ಮುಕ್ತ ಮನಸ್ಸಿನಿಂದ ಎಲ್ಲವನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಚಾಟಿಂಗ್​ನಲ್ಲಿ ಎಲ್ಲವನ್ನು ತಿಳಿಸಿದ್ದಾರೆ. ರೋಹಿತ್​ ಖಿನ್ನತೆಗೆ ಜಾರಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇನ್​ಸ್ಟಾಗ್ರಾಂ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತಿದೆ. ಫೈನಲ್​ ಪಂದ್ಯ ಸೋಲಿನಿಂದ ರೋಹಿತ್​ ತುಂಬಾ ಕುಗ್ಗಿರುವಂತೆ ಮತ್ತು ಇನ್ನೂ ಪೂರ್ತಿಯಾಗಿ ಅದರಿಂದ ಹೊರ ಬರದಿರುವುದು ಗೋಚರವಾಗುತ್ತದೆ. ಮೊದಲ ಕೆಲವು ದಿನಗಳಲ್ಲಿ ಸೋಲನ್ನು ಮರೆತು ಹೇಗೆ ಹಿಂತಿರುಗಬೇಕು ಎಂದು ನನಗೆ ತಿಳಿದಿರಲಿಲ್ಲ. ಏನು ಮಾಡಬೇಕೆಂಬುದು ಸಹ ನನಗೆ ತಿಳಿದಿರಲಿಲ್ಲ. ನಿಮಗೆ ಗೊತ್ತಾ, ನನ್ನ…

Read More

ಬೆಳಗಾವಿ:- ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್​ ದುರಾಡಳಿತಕ್ಕೆ ಎಷ್ಟು ಹಣ ಬಂದರೂ ಸಾಕಾಗಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ದುರಾಡಳಿತಕ್ಕೆಎಷ್ಟು ಹಣ ಬಂದರೂ ಸಾಕಾಗಲ್ಲ, ಈ ಮೂಲಕ ಜನರಿಗೆ ಕಿರುಕುಳ ನೀಡಿದರೆ, ಅಧಿವೇಶನ ಮುಗಿದ ಮೇಲೆ ಅಧಿಕಾರ ಬಿಟ್ಟು ತೊಲಗಿ ಎಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಕ್ಷಣ ವಾಪಸ್ ಪಡೆಯಬೇಕು ಎಂದರು.

Read More