ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಗೂಳಹಟ್ಟಿ ಶೇಖರ್ ಕೇಸರಿ ಸಂಘಟನಾ ಚತುರನಿಗೆ ಕಳಿಸಿರೋ ಆಡಿಯೋ ರಾಜ್ಯದಲ್ಲಿ ಭಾರೀ ಸುದ್ದು ಮಾಡ್ತಿದೆ. ನಾಗಪುರದ RSS ಕಛೇರಿಯ ವಸ್ತು ಸಂಗ್ರಹಾಲಯಕ್ಕೆ ದಲಿತ ಎಂಬ ಕಾರಣಕ್ಕೆ ನನ್ನನ್ನು ತಡೆದ್ರು ಎಂದು ಬಾಂಬ್ ಸಿಡಿಸಿದ್ದಾರೆ. ಈ ವಿಚಾರ ಕಾಂಗ್ರೆಸ್ ಗೆ ಹಿಂದುತ್ವದ ವಿರುದ್ಧದ ಪ್ರಬಲ ಅಸ್ತ್ರವಾಗಿದ್ದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.. RSS ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಪಂಚದಲ್ಲೇ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಅಂತ ಬಿಜೆಪಿಯವರು ಹೇಳಿಕೊಳ್ತಾರೆ. ಹಿಂದುತ್ವದ ಅಜೆಂಡಾದಡಿಯಲ್ಲಿ ಕೆಲಸ ಮಾಡ್ತಿರುವ ಸಂಘಟನೆ, ಆಗಾಗ ಈ RSS ಮೇಲೆ ಸಾಕಷ್ಟು ವಿವಾದಗಳು ಹುಟ್ಕೊಳ್ತಾನೆ ಇರ್ತಾವೆ. ಜಾತಿ, ಧರ್ಮ, ಅಸಮಾನತೆ ಅನ್ನೋ ಹೇಳಿಕೆಗಳು ಕೇಳಿ ಬರ್ತಿರ್ತಾವೆ ಇದಕ್ಕೆ ಮತ್ತೊಂದು ನಿದರ್ಶನ ಬೆಳಕಿಗೆ ಬಂದಿದೆ ಈಆರೋಪ ಮಾಡಿರೋದು ಬೇರ್ಯಾರು ಅಲ್ಲ ಬಿಜೆಪಿಯ ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್.. ಸಂಘ ಪರಿವಾರದಲ್ಲಿ ಅಸ್ಪೃಶ್ಯತೆ ಆಚರಣೆ ಇದೆಯೇ ಇಲ್ಲವೇ ಎಂದು ಪ್ರಶ್ನಿಸಿ, https://ainlivenews.com/the-most-wanted-terrorist-is-poisoned-in-pakistan-jail/ ಈ ಬಗ್ಗೆ…
Author: AIN Author
ಕಾರವಾರ: ಅರಬ್ಬಿ ಸಮುದ್ರದಲ್ಲಿ (Arabian Sea) ಹವಾಮಾನ ವೈಪರಿತ್ಯದಿಂದ 27 ಜನರಿದ್ದ ಗೋವಾ (Goa) ಮೂಲದ ಮೀನುಗಾರಿಕಾ ಬೋಟ್ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಲೇಕೇರಿಯಲ್ಲಿ (Bilikere) ನಡೆದಿದೆ. ಗೋವಾ ಮೂಲದ Ind- ga -01MM2233 ನೋಂದಣಿಯ ಕ್ರಿಸ್ಟೋರಿ ಹೆಸರಿನ ಬೋಟ್ ಇದಾಗಿದ್ದು , https://ainlivenews.com/the-most-wanted-terrorist-is-poisoned-in-pakistan-jail/ ಹವಾಮಾನ ವೈಪರೀತ್ಯದಿಂದ ಎಂಜಿನ್ನಲ್ಲಿ ಸಮಸ್ಯೆಯಾಗಿ ಗಾಳಿ ರಭಸಕ್ಕೆ ಬೇರೆಡೆ ತೇಲಿ ಹೋಗಿದೆ. ಕೋಸ್ಟ್ ಗಾರ್ಡ್ (Coast Guard) ಸಿಬ್ಬಂದಿ ಬೋಟ್ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದಾರೆ. ನೆಟ್ವರ್ಕ್ ಸಂಪರ್ಕ ಕಳೆದುಕೊಂಡಿರುವುದರಿಂದ 27 ಜನ ಮೀನುಗಾರರ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.
ಥಿಯೇಟರ್ ನಲ್ಲಿ ಧೂಳ್ ಎಬ್ಬಿಸಿದ್ದ ಘೋಸ್ಟ್ ಸಿನಿಮಾ ಜೀ5 ಒಟಿಟಿಯಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನವೆಂಬರ್ 17ರಂದು ಬಿಡುಗಡೆಯಾಗಿದ್ದ ಶಿವಣ್ಣ ಚಿತ್ರ ಕೆಲವೇ ದಿನಗಳಲ್ಲಿ 200 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡಿದೆ. ಘೋಸ್ಟ್ ಸಿನಿಮಾದ ಈ ಸಕ್ಸಸ್ನ್ ಸೆಲಬ್ರೇಟ್ ಮಾಡೋದಕ್ಕೆ ಶ್ರೀ ಮುತ್ತು ನಿವಾಸದಲ್ಲೇ ಮಾಧ್ಯಮಮಿತ್ರರನ್ನ ಆಹ್ವಾನಿಸಿದ್ದ ಶಿವಣ್ಣ, ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಘೋಸ್ಟ್ ಪಾರ್ಟ್-2, ಭೈರತಿ ರಣಗಲ್ ಸಿನಿಮಾಗಳ ಬಗ್ಗೆ ಅಪ್ಡೇುಟ್ ನೀಡಿದ ಹ್ಯಾಟ್ರಿಕ್ ಹೀರೋ, ತನ್ನ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಇರುವುದನ್ನ ಖಚಿತಪಡಿಸಿದರು. ಶಿವಣ್ಣನ ‘ಭಜರಂಗಿ 2’, ‘ವೇದ’ ಹಾಗೂ ‘ಘೋಸ್ಟ್’ ಈ ಮೂರು ಸಿನಿಮಾಗಳು 100 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಈ ಬಗ್ಗೆ ಸ್ವತ: ಶಿವಣ್ಣ ಖುಷಿ ವ್ಯಕ್ತಪಡಿಸಿದ್ದಾರೆ. “ಜೀ 5ನಲ್ಲಿ ಇದು ಮೂರನೇ ಕನೆಕ್ಷನ್. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರೋದ್ರಿಂದ ನಮಗೆ ಜೀ ಕನೆಕ್ಷನ್ ಜಾಸ್ತಿ ಇದೆ…
ವಿಜಯಪುರ : ಜಿಲ್ಲೆಯ ತಾಳಿಕೋಟೆ ಪಟ್ಟಣದ ಮದರಕಲ್ ಮೆಗಾಮಾರ್ಟ್ ಎದುರು ವ್ಯಕ್ತಿ ಶವ ಪತ್ತೆಯಾಗಿದ ಘಟನೆ ಬೆಳಕಿಗೆ ಬಂದಿದೆ. ಕೊಡಗಾನೂರು ಗ್ರಾಮದ ಚಿದಾನಂದ ಶಂಕ್ರಪ್ಪ ಬಡಿಗೇರ (31) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿ ವ್ಯಕ್ತಿ ಸಾವನ್ನಪ್ಪಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮೀರ್ಪುರ್: ಕಿವೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ (Mushfiqur Rahim) ಎಡವಟ್ಟಿನಿಂದ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿರುವುದು ಸುದ್ದಿಯಾಗಿದೆ. ಬಾಂಗ್ಲಾದೇಶ (Bangladesh) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (Test Series) ಬಾಂಗ್ಲಾದೇಶ ತಂಡವು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದ್ರೆ 2ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡ ಮೊದಲ ದಿನವೇ 66.2 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ 83 ಎಸೆತಗಳಲ್ಲಿ 35 ರನ್ ಗಳಿಸಿದ್ದ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಅಪರೂಪದ ಔಟ್ಗೆ ತುತ್ತಾಗಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಸದ್ದು ಮಾಡುತ್ತಿದೆ. https://ainlivenews.com/the-most-wanted-terrorist-is-poisoned-in-pakistan-jail/ ಕಿವೀಸ್ ಬೌಲರ್ ಕೈಲ್ ಜೇಮಿಸನ್ (Kyle Jamieson) 41ನೇ ಓವರ್ನ 4ನೇ ಎಸೆತ ಬೌಲಿಂಗ್ ಮಾಡಿದಾಗ ಮುಶ್ಫಿಕರ್ ಅದನ್ನು ಬ್ಯಾಟ್ನಿಂದ ರಕ್ಷಣೆ ಮಾಡಿದರು. ತಕ್ಷಣವೇ ಸ್ಟಂಪ್ಸ್ನತ್ತ ಹೋಗುತ್ತಿದ್ದ ವೇಳೆ…
ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ಸಾರಿಗೆ ಸಂಪರ್ಕ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಪಿಂಕ್ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ನಮ್ಮ ಮೆಟ್ರೋ ಪಿಂಕ್ ಮಾರ್ಗದ ರೀಚ್ 6ರ ಅಂದರೆ ಕಾಳೇನ ಅಗ್ರಹಾರ – ನಾಗವಾರ ನಡುವಿನ ಮಾರ್ಗದಲ್ಲಿ ವೆಂಕಟೇಶಪುರ- ಕೆ.ಜಿ ಹಳ್ಳಿ ಸುರಂಗ ಕಾಮಗಾರಿ ಪೂರ್ಣಗೊಂಡಿದೆ. ಈ ಸುರಂಗ ಕೊರೆಯುತ್ತಿದ್ದ ತುಂಗಾ ಸುರಂಗ ಕೊರೆಯುವ ಯಂತ್ರವು ಕಾಡುಗೊಂಡನ ಹಳ್ಳಿ (ಕೆಜಿ ಹಳ್ಳಿ)ಯಲ್ಲಿ ಹೊರಗೆ ಬಂದಿದೆ. ಬೆಂಗಳೂರು ಮೆಟ್ರೋದ ಅತಿ ಉದ್ದದ ಸುರಂಗ ಮಾರ್ಗ ಇದಾಗಿದ್ದು, ನಮ್ಮ ಮೆಟ್ರೋದ ಪಿಂಕ್ ಮಾರ್ಗದಲ್ಲಿದೆ. ಗುಲಾಬಿ ಮಾರ್ಗದ ಸುರಂಗ ಕೊರೆಯುವ ಕಾಮಗಾರಿ ಶೇಕಡ 90 ಪೂರ್ಣಗೊಂಡಂತಾಗಿದೆ. https://ainlivenews.com/the-most-wanted-terrorist-is-poisoned-in-pakistan-jail/ ವೆಂಕಟೇಶಪುರ- ಕೆ.ಜಿ ಹಳ್ಳಿ ಸುರಂಗ ಕಾಮಗಾರಿಯನ್ನು 2022ರ ಅಕ್ಟೋಬರ್ನಲ್ಲಿ ಶುರುಮಾಡಲಾಗಿತ್ತು. ಈ ಸುರಂಗ ಮಾರ್ಗ 1.184.4 ಮೀಟರ್ ಉದ್ದ ಇದೆ. ಪಿಂಕ್ ಮಾರ್ಗದಲ್ಲಿ 24 ಸುರಂಗ ಮಾರ್ಗ ಇದ್ದು, ಈ ಪೈಕಿ 21 ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.
ತಮಿಳಿನ ಖ್ಯಾತ ನಟ ಇವಿ ಗಣೇಶ್ ಬಾಬು ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ “ಮಂಚ” ಚಿತ್ರದ ಟ್ರೇಲರ್ ಇಂದು ಬಿಡುಗಡೆ ಆಗಿದೆ.. ಟ್ರೇಲರ್ ಕುತೂಹಲ ಮೂಡಿಸಿದ್ದು, ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ. ತಮ್ಮ ಸಂಗೀತದಿಂದ ನಮ್ಮ ಕನ್ನಡಿಗರ ಮನ ತಣಿಸಿದ “ಅಮೃತವರ್ಷಿಣಿ” ಖ್ಯಾತಿಯ ಸಂಗೀತ ನಿರ್ದೇಶಕ ದೇವಾ ರವರ ಮಗ ಶ್ರೀಕಾಂತ್ ದೇವಾ ರವರು ಹೃದಯಸ್ಪರ್ಶಿ ಸಂಗೀತ ನೀಡಿರುವ ಈ “ಮಂಚ” ಚಿತ್ರ ಕೇವಲ ವ್ಯಕ್ತಿಗಳ ಜೊತೆಗೆ ಮಾತ್ರವಲ್ಲದೆ ನಿರ್ಜೀವ ವಸ್ತುಗಳ ಜೊತೆಗೂ ಕೂಡ ನಮಗಿರುವ ಭಾವನಾತ್ಮಕ ಸಂಬಂಧಗಳ ವೈಶಿಷ್ಟ್ಯತೆಯನ್ನು ಎತ್ತಿ ಹಿಡಿಯುವ ಈ ವಿಶೇಷವಾದ ಚಿತ್ರ ಎಲ್ಲರ ಮನಸ್ಸನ್ನು ಗೆಲ್ಲಲಿದೆ. https://ainlivenews.com/the-most-wanted-terrorist-is-poisoned-in-pakistan-jail/ ತಮಿಳಿನ ಕನ್ನಡ ಅವತರಣಿಕೆಯ ಈ ಚಿತ್ರಕ್ಕೆ RRR ಹಾಗೂ ಪುಷ್ಪ ಖ್ಯಾತಿಯ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಹಾಗೂ ಸಂಭಾಷಣೆ ಬರೆದು ಡಬ್ಬಿಂಗ್ ಮಾಡಿದ್ದಾರೆ.”ಮಂಚ” ಎಂದರೆ ಅದು ಕೇವಲ ಮಲಗಲು ಬಳಸುವ ಸಾಧನವಲ್ಲ.. ಅದು ಹಲವು ಜನನ ಮರಣಗಳಿಗೆ ಸಾಕ್ಷಿಯಾಗುವ ಒಂದು ಅಚಲಿತ ಜೀವವಾಗಿರುತ್ತದೆ. ಕೇವಲ ಕಣ್ಣುಗಳಿಂದ ನೋಡಿದರೆ ಅದೊಂದು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಇರುವ ಮುಸ್ಲೀಂ ಮೌಲ್ವಿ ಕುಳಿತಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ ಐ ಎಗೆ ಒಪ್ಪಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಯ ವಿರುದ್ದ ವಿಜಯಪುರದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಅವರಿಗೆ ಐಎಸ್ ಐ ಸಂಪರ್ಕ ಇರುವ ಬಗ್ಗೆ ನಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐಎ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ಕಾಂಗ್ರೆಸ್ ನವರು ಲಘುವಾಗಿ ಪರಿಗಣಿಸಿದ್ದರು. ಆದರೆ, ಅವರಲ್ಲಿ ಐದಾರು ಜನರು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಗಳು ಮುಸ್ಲೀಂ ಸಮುದಾಯಕ್ಕೆ 10…
ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಪಾಪರ್ ಆಗಿದೆ. ಜನರ ಮೇಲೆ ವಿಪರೀತ ತೆರಿಗೆ ಹಾಕಿ ಹಣ ವಸೂಲಿ ಮಾಡಲು ಹೊರಟಿರುವ ಇದೊಂದು ಕೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರ ಹಣ ದುರ್ಬಳಕೆ ಆಗಬಾರದು. ದಲಿತರಿಗೆ ಮೀಸಲಿಟ್ಟ ಹಣ ಅವರ ಕೇರಿಗಳ ಅಭಿವೃದ್ಧಿಗೆ ಬಳಸುವುದು ಬಿಟ್ಟು ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದೀರಿ. ರಾಜ್ಯದಲ್ಲಿ ಬರಗಾಲ ಉಂಟಾಗಿರುವ ಸಂದರ್ಭದಲ್ಲಿ ಸರ್ಕಾರ ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹೇರುತ್ತಿದೆ ಎಂದು ಕಿಡಿಕಾರಿದರು. ಚುನಾವಣೆಗೂ ಮುಂಚೆ ವೋಟ್ಗಾಗಿ ಗ್ಯಾರೆಂಟಿ ಘೋಷಿಸಿದರು. ಈಗ ಅವುಗಳಿಗೆ ಹಣ ಬಳಸಿ ರಸ್ತೆ ಅಭಿವೃದ್ಧಿ, ಆಸ್ಪತ್ರೆ, ಶಾಲೆಗಳು ಮತ್ತು ರೈತರಿಗೆ ಕೊಡೋಕೆ ಇವರ ಬಳಿ ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡ್ತೀನಿ ಅಂತ ಹೇಳ್ತಾರೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಣಮೇವು, ಹಸಿ…
ತುಮಕೂರು:- ಜಿಲ್ಲೆಯಲ್ಲಿ ಗೊಲ್ಲರಹಟ್ಟಿಗಳ ಮೈಲಿಗೆ ಮೌಢ್ಯಾಚರಣೆ ಮುಂದುವರಿದಿದೆ. ಬಾಣಂತಿ- ಮಗು ಮತ್ತು ಋತುಮತಿಯಾದ ಮಹಿಳೆಯರನ್ನು ಊರ ಹೊರಗಿನ ಗುಡಿಸಲಿನಲ್ಲಿಟ್ಟು ಮೌಢ್ಯಾಚರಣೆ ನಡೆಯುತ್ತಿದೆ. ತುರುವೇಕೆರೆ ತಾಲೂಕಿನ ಮಾಯಸಂದ್ರದ ವರಹಸಂದ್ರ ಗೊಲ್ಲರಹಟ್ಟಿಯಲ್ಲಿ ಘಟನೆ ಜರುಗಿದೆ. ಬಾಣಂತಿ ಚೈತ್ರಾ ಮತ್ತು ಮಗುವನ್ನು ಈ ರೀತಿ ಊರ ಹೊರ ಇಡಲಾಗಿದೆ. ಹಾಗೂ ಋತುಮತಿಯರಾದ ಶಾರದಮ್ಮ, ಪಾರ್ವತಮ್ಮರನ್ನು ಊರ ಹೊರಗಿಟ್ಟು ಅಮಾನುಷ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಮಹಿಳೆಯರನ್ನು ತಹಶಿಲ್ದಾರ್ ರೇಣುಕುಮಾರ್ ರಕ್ಷಣೆ ಮಾಡಿದ್ದಾರೆ.