ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ತಿಳಿಸಲು ನಾಲ್ಕು ಬಾರಿ ಹೋದರೂ ಅವರು ನಮ್ಮ ಮಂತ್ರಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ನಮ್ಮ ದೇಶದ ಪ್ರಧಾನಿಗಳಿಗೂ ಕೂಡಾ ಕರ್ನಾಟಕವೂ ಭಾರತದಲ್ಲಿ ಇದೆ ಎಂಬ ಭಾವನೆ ಬರಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಕಾರ್ಯವನ್ನು ತಾನು ಮಾಡಬೇಕಾಗಿದೆ. ನಮ್ಮ ರಾಜ್ಯದ ಅಳಲನ್ನು ತೋಡಿಕೊಳ್ಳಲು ಹೋದ ಮಂತ್ರಿಗಳಿಗೆ ಪ್ರಧಾನಿಯವರು ಭೇಟಿಗೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ನಾಯಕರು ಅಂಕಿ ಸಂಖ್ಯೆಗಳು ಸರಿಯಿಲ್ಲ ಎಂಬ ಸಣ್ಣತನದ ಮಾತುಗಳನ್ನು ಆಡುತ್ತಿದ್ಧಾರೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿ ಹಾಯ್ದರು.ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಬರ ಪರಿಸ್ಥಿತಿ ಅಧ್ಯಯನದ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿ ಸಂಸದರು ಕೇಂದ್ರದ ಹಣವನ್ನು ತಂದರೆ ಇಲ್ಲಿಯ ಜನರು ಶಬ್ಬಾಶನ್ನು ನೀಡುತ್ತಾರೆ. ಇಷ್ಟೊಂದು ಜನರನ್ನುಆಯ್ಕೆ ಮಾಡಿ ಕಳುಹಿಸಿದರೂ ನಮ್ಮ ಸಂಸದರು ಬರ…
Author: AIN Author
ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗಾಗಿ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳೆಯ ಬೆಲೆ ದುಬಾರಿಯೇ ಇದೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಚಿನ್ನ ಸದ್ಯ ಗಗನ ಕುಸುಮವಾಗಿದೆ. ಆದರೆ ಬೆಳ್ಳಿಯ ಬೆಲೆ ಇಂದು ತುಸು ಕಡಿಮೆಯಾಗಿದೆ. ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 56,850 ರುಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 62,020 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,600 ರುಪಾಯಿ ಇದೆ. ಹಾಗಾದರೆ ಇಂದು (ನವೆಂಬರ್ 23) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ. ಒಂದು ಗ್ರಾಂ ಚಿನ್ನದ ದರ * 22 ಕ್ಯಾರೆಟ್ ಚಿನ್ನದ ದರ – 5,685 ರೂಪಾಯಿ * 24 ಕ್ಯಾರೆಟ್ ಚಿನ್ನದ ದರ – 6,202 ರೂಪಾಯಿ 10 ಗ್ರಾಂ ಚಿನ್ನದ ದರ * 22 ಕ್ಯಾರೆಟ್ ಆಭರಣ ಚಿನ್ನದ…
ಕಲಬುರಗಿ: ಕಾಂತರಾಜು ಜಾತಿ ಸಮೀಕ್ಷೆಯ ವರದಿಯನ್ನ ಬಹಿರಂಗಪಡಿಸಲು ಆಗ್ರಹಿಸಿ ಬೆಂಗಳೂರಲ್ಲಿ ಡಿಸೆಂಬರ್ 1 ರಂದು ಒಂದು ದಿನದ ಹೋರಾಟ ಹಮ್ಮಿಕೊಂಡಿದ್ದೇವೆ ಅತ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಿರ್ಧರಿಸಿದೆ.. ಕಲಬುರಗಿಯಲ್ಲಿಂದು ಮಾತನಾಡಿದ ಮಹಾಸಭಾ ಮುಖಂಡರು ವಿಶ್ವಕರ್ಮ ಸಮುದಾಯದ ಜನರಿಗೆ ಅವರವರ ಜನಸಂಖ್ಯೆಗೆ ತಕ್ಕಂತೆ ಸೂಕ್ತ ಸ್ಥಾನಮಾನಗಳನ್ನ ನೀಡಬೇಕು ಅಂತ ಆಗ್ರಹಿಸಿದರು.ಹೀಗಾಗಿ ಸಮಾಜದ ಮುಖಂಡ ಕೆಪಿ ನಂಜುಂಡಿ ನೇತ್ರತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು ನಮ್ಮ ಸಮಾಜದ ಶಕ್ತಿ ಏನೂಂತ ತೋರಿಸ್ತೇವೆ ಅಂತ ಹೇಳಿದ್ರು..
ದಾವಣಗೆರೆ: ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಜನರ ನೆಮ್ಮದಿಗೆ ಭಂಗ ತಂದಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾವಣಗೆರೆಯ ಆಜಾದ್ ನಗರ ಮತ್ತು ಕೆಟಿಜೆ ನಗರ ಪೊಲೀಸರು ಮೂವರನ್ನು ಪತ್ತೆ ಹಚ್ಚಿ ಬಂಧಿಸಿ, ನ್ಕಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಎಸ್ ಎಂ ನಗರದ ಖಬರಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಹಮ್ಮದ್ ಶಾಹೀದ್ (24) ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ. ಮತ್ತೊಂದು ಪ್ರಕರಣದಲ್ಲಿ ಎಸ್ ಎಸ್ ಎಂ ನಗರದ ಆಲ್-ಇಖ್ರಾ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಬು ಸಾಲೇಹಾ ಅಲಿಯಾಸ್ ಅಬ್ಬು (25) ಈತನೂ ಸಹ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ. ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.…
ಬಳ್ಳಾರಿ: ಸಾಲ ಭಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಬಳ್ಳಾರಿಯ ಕುರುಗೋಡು ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾದನಹಟ್ಟಿ ಗ್ರಾಮದ ಪೋತಪ್ಪನ ಕಟ್ಟೆ 4ನೇ ವಾರ್ಡಿನ ನಿವಾಸಿ ಬಸಾಪುರ ಪೆನ್ನಯ್ಯ ವಾಲ್ಮೀಕಿ ಸಮುದಾಯ (35) ವರ್ಷ ಮೃತ ದುರ್ದೈವಿ. ಈತನಿಗೆ ಪತ್ನಿ ಸೇರಿ ಐದು ಜನ ಪುತ್ರಿಯರು ಹಾಗೂ ಒಬ್ಬ ಪುತ್ರನು ಇದ್ದಾನೆ. ಬಸಾಪುರ ಪೆನ್ನಯ್ಯ ತನ್ನ 3 ಎಕರೆ ಜಮೀನು ನಲ್ಲಿ ಮೆಣಿಸಿನಕಾಯಿ ಬೆಳೆ ಬಿತ್ತನೆ ಮಾಡಿ ವ್ಯವಸಾಯ ಮಾಡಿಕೊಂಡು ಹೋಗುತಿದ್ದ, ಮಳೆ ಇಲ್ಲದೆ, ಬೆಳೆಗೆ ನೀರು ಸಿಗದೆ ಮೆಣಿಸಿನ ಕಾಯಿ ಸಸಿ ಒಣಗಿ ಹೋಗಿ ಬೆಳೆ ನಷ್ಟವಾಗಿದೆ. ಬೆಳೆಗೆ ಕ್ರಿಮಿನಾಶಕ ಔಷಧಿ, ರಸಗೊಬ್ಬರ, ಬೀಜ ಬಿತ್ತನೆಗೆ ಅಂತ ತನ್ನ ಪತ್ನಿ ನೀಲಮ್ಮ ಹೆಸರಲ್ಲಿ ಎಸ್. ಬಿ. ಐ ಬ್ಯಾಂಕ್ ನಲ್ಲಿ 1 ಲಕ್ಷದ 20 ಸಾವಿರ ಸಾಲವನ್ನು ತೆಗೆದುಕೊಂಡಿದ್ದಾನೆ. ಅಲ್ಲದೆ ಗ್ರಾಮದಲ್ಲಿ 5 ಲಕ್ಷ…
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ಉತ್ತರ ಭಾಗದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಸಹಕಾರನಗರ ಎ, ಬಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯನಗರ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ 2ನೇ ಹಂತ, ವೆಂಕಟೇಶ್ವರನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋಧಾ ನಗರ, ಗೋಪಾಲಪ್ಪ ಲೇಔಟ್, ಆರ್ಎಂಝಡ್ ಅಜೂರ್ ಬಡಾವಣೆ, ಬ್ರಿಗೇಡ್ ಕ್ಯಾಲಾಡಿಯಂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಡುಗೊಂಡನಹಳ್ಳಿ, ಮಲ್ಲಪಾಡಿಗಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾಳವನಹಳ್ಳಿ , LM ವಿಂಡ್, ಸೋಂಪುರ ಕೈಗಾರಿಕಾ ಪ್ರದೇಶ,…
ಕಲಬುರಗಿ: ಬರೋಬ್ಬರಿ 8 ವರ್ಷಗಳ ನಂತ್ರ ಬಿಸಿಲೂರು ಕಲಬುರಗಿಯಲ್ಲಿ ನಡೆಯುತ್ತಿದೆ ITF ಟೆನ್ನಿಸ್ ಪಂದ್ಯಾವಳಿ..ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿ ಶುರುವಾಯಿತು.ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ತಿಪ್ಪಣ್ಣಪ್ಪ ಕಮಕನೂರ್ DC ಫೌಜಿಯಾ ತರುನಮ್ ಆಕಾಶಕ್ಕೆ ಬಲೂನ್ ಹಾರಿ ಬಿಡೋದರ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ್ರು. ಈಗಾಗಲೇ ರಾಂಕಿಂಗ್ ಮುಖಾಂತರ 20 ಆಟಗಾರರು ಕರ್ನಾಟಕದ ಇಬ್ಬರು ಸೇರಿ ನಾಲ್ವರು ವೈಲ್ಡ್ ಕಾರ್ಡ್ ಎಂಟ್ರಿ ಹಾಗು 8 ಜನ ಅರ್ಹತಾ ಪಂದ್ಯಗಳಲ್ಲಿ ಜಯಗಳಿಸುವ ಆಟಗಾರರು ಆಡಲಿದ್ದಾರೆ. ಉಳಿದಂತೆ ಜಪಾನ್ ವಿಯೆಟ್ನಾಂ ಕೊರಿಯಾ ಆಸ್ಟ್ರೇಲಿಯ ಅಮೆರಿಕಾ ಆಟಗಾರರು ಸಿಂಗಲ್ಸ್ ದಲ್ಲಿ ಆಡಲಿದ್ದಾರೆ. ಟೂರ್ನಿ ಗೆಲ್ಲುವ ಆಟಗಾರ 3600 ಅಮೇರಿಕನ್ ಡಾಲರ್ ಪಡೆಯಲಿದ್ದಾರೆ..
ಹುಬ್ಬಳ್ಳಿ: ಪರಿಸರ ರಕ್ಷಣೆಗಾಗಿ ಎಲೆಕ್ಟ್ರಿಕಲ್ ವಾಹನಗಳನ್ನು ತಯಾರಿಸಿದ್ದಾರೆ. ಆದ್ರೆ ಅವುಗಳು ಪದೇ ಪದೇ ತೊಂದ್ರೆಗೆ ಬರುತ್ತಿದ್ದು, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿಸಿದ ಮಾಲೀಕರು ಪರದಾಡುತ್ತಿದ್ದಾರೆ. ಹೌದು,,, ಓಲಾ ಎಲೆಕ್ಟ್ರಿಕಲ್ ಬೈಕ್ ನಿಂದಾಗಿ ದಿನನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಸವಾರರು, ಯಾಕಪ್ಪ ಈ ಬೈಕ್ ತಗೊಂಡೆ ಎನ್ನುವಂತಾಗಿದೆ ಖರೀದಿ ಮಾಡಿದವರ ಸ್ಥಿತಿ. ದಿನೆ ದಿನೆ ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿ ಮಾಡಿದ ಗ್ರಾಹಕರು, ಶೂರೂಮ್ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಓಲಾ ಕಂಪನಿಯ ಎಲೆಕ್ಟ್ರಿಕಲ್ ಬೈಕ್ಗಳು ಏಕಾಏಕಿ ರಸ್ತೆ ಮಧ್ಯದಲ್ಲೇ ಬಂದ್ ಬೀಳುತ್ತಿವಂತೆ. ಬೈಕ್ ಖರೀದಿ ಮಾಡಿದಾಗಿಂದ ಪ್ರತಿದಿನ ಶೋರೋಂ ಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಬಂದಿದೆ. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿರುವ ಓಲಾ ಕಂಪನಿ ಶೋರೂಂಗೆ ಬಂದ ಗ್ರಾಹಕರು. ಎಷ್ಟೇ ಬಾರಿ ರಿಪೇರಿ ಮಾಡಿದರೂ ಮತ್ತೆ ಮತ್ತೆ ಬೈಕ್ ನಲ್ಲಿ ದೋಷ ಕಂಡು ಬರುತ್ತಿದೆ. ಎಲ್ಲಾ ಕೆಲಸ…
ಜಗತ್ತಿನಲ್ಲಿ ಇಂದು ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಅಗ್ರಸ್ಥಾನದಲ್ಲಿದೆ. ಹೃದಯದ ಆರೋಗ್ಯದ ಬಗೆಗಿನ ಸಿಮೀತ ಜ್ಞಾನವು ಹೃದಯ ಸಂಬಂಧಿ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಜಗತ್ತಿನಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಪ್ರತಿ ವರ್ಷ ಹೃದಯ ಸಂಬಂಧೀ ಸಮಸ್ಯೆಗಳಿಂದ ಮೃತಪಡುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಮತ್ತು ಮಧ್ಯವಯಸ್ಸಿನವರು ಹೆಚ್ಚಾಗಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಹಿರಿಯ ವೈದ್ಯರು ವಿವರಣೆ ನೀಡಿದ್ದು ಹೀಗೆ: ಯುವಜನರು ಏಕೆ ಹೃದಯಾಘಾತದಿಂದ ಬಳಲುತ್ತಿದ್ದಾರೆ ಆಧುನಿಕ ಜೀವನಶೈಲಿಯ ಅಂಶಗಳು ಯುವಜನರಲ್ಲಿ ಹೃದಯಾಘಾತದ ಹೆಚ್ಚಳದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಅನಾರೋಗ್ಯಕರ ಆಹಾರಗಳು, ಸಕ್ಕರೆ ಮತ್ತು ಕೊಬ್ಬಿನ ಆಹಾರಗಳ ಅತಿಯಾದ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಜಡ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಮತ್ತು ಮದ್ಯಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣವಾಗುತ್ತದೆ. ಈ ಅಪಾಯಗಳನ್ನು ತಗ್ಗಿಸಲು ಆರಂಭಿಕ ಪತ್ತೆ, ಆರೋಗ್ಯಕರ ಅಭ್ಯಾಸಗಳ ಶಿಕ್ಷಣ…
ಚಾಮರಾಜನಗರ: ಅಂತೂ ಇಂತೂ ಕಾಡಂಚಿನ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯಾಗಿದೆ. ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟದ ಕಾಡಂಚಿನ ಜನರಿಗೆ ಮಲೆಮಹದೇಶ್ವರಬೆಟ್ಟ ಅಭಿವೃದ್ದಿ ಪ್ರಾಧಿಕಾರದಿಂದ ಜನವನ ವಾಹನ ಸೇವೆ ಮತ್ತೆ ಆರಂಭವಾಗಿದೆ. ಜನವನ ಈ ಹಿಂದೆ ಪ್ರಾರಂಭವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿತ್ತು. ಆದ್ದರಿಂದ ಹಲವು ದಿನಗಳಿಂದ ವಾಹನದ ವ್ಯವಸ್ಥೆ ಇಲ್ಲದೆ ಕಾಡಂಚಿನ ಮಕ್ಕಳು ಶಾಲೆಗೆ ತೆರಳಲು ಪರದಾಡ್ತಾ ಇದ್ರು. ಮಕ್ಕಳು ಸೇರಿದಂತೆ ವೃದ್ದರಿಗೆ ಸಂಚರಿಸಲು ವಾಹನದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ರು. ಅದರಲ್ಲೂ ಅನಾರೋಗ್ಯಕ್ಕೆ ಒಳಗಾದ್ರೆ ಜನರ ಪಾಡು ಹೇಳತೀರದಾಗಿತ್ತು. ಹಾಗಾಗಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿರವರ ವಿಶೇಷ ಕಾಳಜಿಯಿಂದ ಜನವನ ಸಾರಿಗೆ ಮತ್ತೆ ಪ್ರಾರಂಭವಾಗಿದೆ. ಖುದ್ದು ಸರಸ್ವತಿರವರು ಶಾಲಾ ಮಕ್ಕಳಿಗೆ ಸಿಹಿ ಹಂಚಿ ಇಂಡಿಗನತ್ತ ಕಡೆಗೆ ಶಾಲಾ ಮಕ್ಕಳನ್ನು ಕರೆದೊಯ್ದು ಸುರಕ್ಷತೆಯಿಂದ ಪ್ರಯಾಣಿಸಲು ಮಕ್ಕಳಿಗೆ ತಿಳಿಹೇಳಿ ಶುಭ ಕೋರಿದರು.