Author: AIN Author

ಚಳಿಗಾಲದ ಸೀಸನ್​​​ನಲ್ಲಿ ಜನರು ಸಾಮಾನ್ಯವಾಗಿ ಶೀತ, ಕೆಮ್ಮಿನಂತಹ ಸಮಸ್ಯೆಯಿಂದ ಬಳಲುವುದು ಸಹಜ. ಇದಲ್ಲದೇ ಚಳಿಗಾಲದಲ್ಲಿ ಜೀರ್ಣಕ್ರಿಯೆಯ ಸಮಸ್ಯೆಯೂ ಇರುತ್ತದೆ. ಆದ್ದರಿಂದ ನೀವಿದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಕಷಾಯ ಒಂದು ರೀತಿಯಲ್ಲಿ ಆಯುರ್ವೇದ ಪರಿಹಾರವಾಗಿದ್ದು, ಇದು ಆಯಾ ಋತುಮಾನದ ಸೋಂಕುಗಳ ವಿರುದ್ಧ ಹೋರಾಡಲು ಸಹ ನಿಮಗೆ ಸಹಾಯ ಮಾಡುತ್ತದೆ. ಭಾರತೀಯ ಮನೆಗಳಲ್ಲಿ ಸುಲಭವಾಗಿ ಕಂಡುಬರುವ ಮತ್ತು ಅಡುಗೆಮನೆಯಲ್ಲಿ ಬಳಸುವ ವಿವಿಧ ಪದಾರ್ಥಗಳಿಂದ ಕಷಾಯವನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ, ಆದ್ದರಿಂದ ಯಾವ ಕಷಾಯವು ನಿಮಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತುಳಸಿ ಕಷಾಯ ಬಾಣಲೆಯಲ್ಲಿ ನೀರನ್ನು ಕುದಿಸಿ. ಈಗ ತುಳಸಿ ಎಲೆಗಳು, 1 ಚಮಚ ಕರಿಮೆಣಸು, 1 ಚಮಚ ದಾಲ್ಚಿನ್ನಿ ಪುಡಿ ಮತ್ತು 1 ಚಮಚ ತುರಿದ ಶುಂಠಿ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. 10-15 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಸೋಸಿ. ತಣ್ಣಗಾದ ನಂತರ ಕುಡಿಯಿರಿ. ಇದು ಇಮ್ಯುನಿಟಿ ಬೂಸ್ಟರ್ ಆಗಿ ಕೆಲಸ…

Read More

ಭಾರತದಲ್ಲಿ ಕಾಶಿ ತೀರ್ಥ ಅನ್ನೋದು ಪುಣ್ಯಕ್ಷೇತ್ರ ಮನುಷ್ಯ ತನ್ನ ಬದುಕಿನ ಕಾಲ ಘಟ್ಟದಲ್ಲಿ ಒಮ್ಮೆಯಾದ್ರು ಈ ಪುಣ್ಯ ಕ್ಷೇತ್ರದ ದರ್ಶನ ಮಾಡಬೇಕು ಅಂತಾರೆ ಆ ಎಲ್ಲ ದೇವತೆಗಳ ಸಂಗಮ ಕ್ಷೇತ್ರವೇ ಈ ದಕ್ಷಿಣ ಭಾರತದ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇವಸ್ಥಾನ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಬರುವ ಸುಕ್ಷೇತ್ರ ಮದಭಾವಿಯ ಶನಿಮಹಾತ್ಮನ ದೆವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿದೆ ದಕ್ಷಿಣ ಭಾರತದಲ್ಲಿ ಪಿರಮಿಡ್ ಅಕೃತಿಯ ಶೀಲಾ ವಿನ್ಯಾಸ ಹೊಂದಿರುವ ಏಕೈಕ ಶನಿ ದೆವಸ್ಥಾನವೆಂಬ  ಹೆಗ್ಗಳಿಕೆ ಈ ದೇವಸ್ಥಾನಕ್ಕಿದೆ. ಈ ದೇವಸ್ಥಾನವು 2008 ರಲ್ಲಿ ನಿರ್ಮಾಣವಾಗಿದ್ದು ಪಿರಮಿಡ್ ಅಕೃತಿ ಹೊಂದಿದೆ ದೇವಸ್ಥಾನ ದ್ವಾರ ಬಾಗಿಲು ಪ್ರವೇಶದಲ್ಲಿ ಶನಿದೇವನ ವಾಹನ ಕಾಗೆಗೆ ಎಣ್ಣೆ ಹಾಕಿ ಎಡಭಾಗದಿಂದ ಪ್ರವೇಶ ಮಾಡಬೇಕು ನಂತರ ಕಲ್ಯಾಣ ಗೃಹದಲ್ಲಿ ಕೈ ಕಾಲು ತೊಳೆದುಕೊಂಡು ದೋಷಮುಕ್ತಾರಾಗಿ ಮಹಾಕಾಲೆಶ್ವರ ಹಾಗೂ 12 ಜೊತಿರ್ಲಿಂಗಗಳ ದರ್ಶನ ಭಾಗ್ಯ ನಿಮಗೆ ಒದಗುತ್ತದೆ . ಈ ದಿವಸ್ಥಾನದ ನಿರ್ಮಾಣ ಬಹಳ ವಿಧಿವಿಧಾನಗಳಿಂದ ಕೂಡಿದ್ದು ದೇವಸ್ಥಾನ…

Read More

ಬೆಂಗಳೂರು:- ಬೆಂಗಳೂರಿನಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದ್ದು, ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಜರುಗಿದೆ. ಸಿದ್ಧರಾಜು (43 ) ಮೃತ ದುರ್ದೈವಿ. ಬೆಂಗಳೂರಿನ ಮಹದೇವಪುರ ಕ್ಷೇತ್ರದ ಚೀಮಸಂದ್ರದಲ್ಲಿ ಘಟನೆ ಜರುಗಿದೆ. ಚಪ್ಪಲಿ ಬಿಟ್ಟು ಟ್ರಾನ್ಸ್ ಫಾರ್ಮರ್ ಏರಿ ರಿಪೇರಿ ಮಾಡುವಾಗ ಅವಘಡ ಸಂಭವಿಸಿದೆ. ಆವಲಹಳ್ಳಿ ಕೆಇವಿ ವಿಭಾಗದ ಚೀಮಸಂದ್ರ ಸಮೀಪದ ಅಪ್ಪಾಜಪ್ಪ ಲೇಔಟ್ ನಲ್ಲಿ ಘಟನೆ ಜರುಗಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಲೈನ್ ಮ್ಯಾನ್ ಸಿದ್ಧರಾಜು ಟ್ರಾನ್ಸ್ ಫಾರ್ಮರ್ ಏರಿದ್ದಾನೆ. ಕಳೆದ ಏಂಟು ತಿಂಗಳ ಹಿಂದೆ ಆವಲಹಳ್ಳಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಕನಕಪುರ ಮೂಲದ ಸಿದ್ದರಾಜು ಹೊಸಕೋಟೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಿದ್ದರಾಜು ಮೃತ ದೇಹ ರವಾನೆ ಮಾಡಲಾಗಿದೆ.

Read More

ಕೋಲಾರ: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಶಾಶ್ವತ ನೀರಾವರಿ ವೇದಿಕೆಯಲ್ಲಿ ಪದವಿ ಕಾಲೇಜುಗಳ ತರಗತಿಗಳನ್ನು ಬಹಿಷ್ಕಾರಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟವಧಿ ಧರಣಿ 2 ನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಭೇಟಿ ನೀಡಿದರು ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಿಮ್ಕ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಮುಖೇನ ಗಮನ ಸೆಳೆಯುವುದಲ್ಲದೆ ಖುದ್ದಾಗಿ ಭೇಟಿ ಮಾಡಿ ನಿಮ್ಮಗಳ ಬೇಡಿಕೆಗಳ ಈಡೇರಿಕೆಗಾಗಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು. ತಮ್ಮನ್ನು ಪ್ರತಿನಿಧಿಸುವ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಲು ಒತ್ತಡ ಹಾಕುವಂತೆ ಹಾಗೂ ಸ್ಥಳೀಯ ಶಾಸಕರುಗಳ ಗಮನ ಸೆಳೆದು ಅವರುಗಳೂ ನಿಮ್ಮ ಪರ ಮಾತಾಡಲು ಒತ್ತಡ ಹಾಕುವಂತೆ…

Read More

ರುಚಿಕರವಾದ ಗ್ರೇವಿ ಮಾಡುವ ಯೋಚನೆಯಲ್ಲಿ ಇದ್ದರೆ ಇಲ್ಲೊಂದು ಟೇಸ್ಟಿಯಾಗಿರುವ ರೆಸಿಪಿ ಇದೆ ಅದುವೇ “ಕಾಜು ಮಸಾಲ. ಗೋಡಂಬಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ,ಈ ಕಾಜುಯಿಂದ ಮಾಡುವ ಯಾವುದೇ ಆಹಾರ ಪದಾರ್ಥವನ್ನು ತಯಾರಿಸಿದರೂ ಅದರ ರುಚಿಯೇ ಬೇರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಅಷ್ಟೇ ಅಲ್ಲ ಆರೋಗ್ಯಕ್ಕೂ ಇದು ಒಳ್ಳೆಯ ರೆಸಿಪಿ. ಹಾಗಾದ್ರೆ ಇಂದು ನಾವು ನಿಮಗೆ ಕಾಜು ಮಸಾಲವನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು. ಕಾಜು ಮಸಾಲ ಬೇಕಾಗುವ ಸಾಮಗ್ರಿಗಳು ಗೋಡಂಬಿ -1ಕಪ್‌, ಸಣ್ಣಗೆ ಹೆಚ್ಚಿದ ಈರುಳ್ಳಿ-3,ಟೊಮೆಟೋ-2,ಎಣ್ಣೆ, ತುಪ್ಪ/ಬೆಣ್ಣೆ-3ಚಮಚ, ಗರಂ ಮಸಾಲ -1ಚಮಚ, ಕಸೂರಿ ಮೇಥಿ-1ಟೀಸ್ಪೂನ್‌, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-2 ಚಮಚ, ಚಕ್ಕೆ, ಲವಂಗ-ಎರಡೆರಡು, ಜೀರಿಗೆ-ಅರ್ಧ ಚಮಚ, ಧನಿಯಾ ಪುಡಿ (ಕೊತ್ತಂಬರಿ ಪುಡಿ)-1ಚಮಚ, ಅರಿಶಿನ ಪುಡಿ-ಅರ್ಧ ಟೀಸ್ಪೂನ್‌, ಮೆಣಸಿನ ಪುಡಿ-3ಚಮಚ, ಉಪ್ಪು-ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ -ಮೊದಲಿಗೆ ಒಂದು ಬಾಣಲೆಗೆ ತುಪ್ಪ…

Read More

ಕಲಬುರಗಿ:- ಕಲ್ಲರಳಿ ಹಣ್ಣಾಗಿ.. ರೈತನೊಬ್ಬ ಮನಸ್ಸು ಮಾಡಿದ್ರೆ ಎಂಥಹ ಕಲ್ಲು ಬಂಡೆಗಳಿರುವ ನೆಲವನ್ನ ಹಸಿರಾಗಿ ಮಾಡಬಹುದು ಅನ್ನೋದರ ಕುರಿತ ಪುಸ್ತಕವೊಂದು ಇವತ್ತು ಕಲಬುರಗಿಯಲ್ಲಿ ಬಿಡುಗಡೆಯಾಯಿತು. ಕಡಗಂಚಿ ಗ್ರಾಮದ ರೈತ ಹಣಮಂತ ಭೂಸನೂರ್ ಶ್ರಮವೇ ಈ ಪುಸ್ತಕದ ಮೂಲಕ ಹೊರಬಂದಿದೆ.. ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹಾಗು ಕಲ್ಯಾಣ ಕರ್ನಾಟಕ ಮಂಡಳಿಯ ಅಧ್ಯಕ್ಷ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಪುಸ್ತಕ ಬಿಡುಗಡೆ ಮಾಡಿದ್ರು.. ಬರೋಬ್ಬರಿ 50 ಎಕರೆ ಕಲ್ಲು ಬಂಡೆಗಳಿಂದ ತುಂಬಿದ್ದ ನೆಲ ಇವತ್ತು ಹಸಿರಾಗಿ ಮಿಂಚುವಂತೆ ಮಾಡಿ ಸಾಧನೆ ಮಾಡಿದೆ ರೈತ ಭೂಸನೂರು ಹಣಮಂತ ಕುಟುಂಬ ಅನ್ನೋದು ವಿಶೇಷ…

Read More

ಬೆಂಗಳೂರು:- ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ಶಾಕ್ ನೀಡಿದ್ದು, ಬ್ಯಾನರ್, ಫ್ಲೆಕ್ಸ್ ಹಾಕಿದ್ದಕ್ಕೆ ದಂಡ ವಿಧಿಸಿದೆ. ಅರಮನೆ ಮೈದಾನದ ಸುತ್ತಮುತ್ತ ಹಾಕಿದ್ದ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. ಈ ಸಂಬಂಧಸದಾಶಿವನಗರ ಠಾಣೆಗೆ ದೂರು ಹಿನ್ನಲೆ ತೆರವುಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯಲ್ಲಿ ಕಾರವಳಿ ಭಾಗದ ಪ್ರಮುಖ ಕ್ರೀಡೆಯಾದ ಕಂಬಳವನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಹಿನ್ನಲೆ ಕಂಬಳಕ್ಕೆ ಶುಭಾಶಯ ಕೋರಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದರು. ಆದರೆ, ಇದು ಕಾನೂನುಬಾಹಿರ ಆದ್ದರಿಂದ ಬಿಬಿಎಂಪಿ ತೆರವುಗೊಳಿಸಿ, ದಂಡ ವಿಧಿಸಿದೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ದುಪ್ಪಟ್ಟಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ದುಪ್ಪಟ್ಟಾಗಿದೆ. ಹಿಂದೊಮ್ಮೆ ಉಪನಗರಗಳೆಂದು ಕರೆಯಲ್ಪಡುತ್ತಿದ್ದ ಪ್ರದೇಶಗಳಲ್ಲೂ ಕೂಡ ಮನೆ ಬಾಡಿಗೆ ದರಗಳು ಗಗನಮುಖಿಯಾಗಿವೆ ಎಂದು ವರದಿ ತಿಳಿಸಿದೆ. ಒಂದು ಕಾಲದಲ್ಲಿ ಬೆಂಗಳೂರಿನ ಉತ್ತರದ ಸ್ಲೀಪಿ ಹಳ್ಳಿಯಾಗಿದ್ದು, ನಂತರ ಅದನ್ನು ಮಹಾನಗರಕ್ಕೆ ಸೇರಿಸಲಾಯಿತು. ಬಳಿಕ ತಿಂಗಳಿಗೆ 11,000 ರೂ ಬಾಡಿಗೆ ನೀಡುವಂತಾಯಿತು ಎಂದು ವರದಿ ತಿಳಿಸಿದೆ. ಬಾಡಿಗೆಯನ್ನು ಮಾರ್ಚ್‌ನಲ್ಲಿ ರೂ 13,000 ಕ್ಕೆ ಮತ್ತು ನಂತರ ಅಕ್ಟೋಬರ್ 2022 ರಲ್ಲಿ ರೂ 16,000 ಕ್ಕೆ ಬಾಡಿಗೆಯನ್ನು ಹೆಚ್ಚಿಸಲಾಯಿತು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಶೇಕಡಾ 45ರಷ್ಟು ಹೆಚ್ಚಳವಾಗಿದೆ. ನಾನು ಬಾಡಿಗೆ ಹೆಚ್ಚಳದ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದಾಗ, ನಾನು ಅಪಾರ್ಟ್ಮೆಂಟ್ ಬಾಡಿಗೆಗೆ ನಿಮಗೆ ಹೆಚ್ಚು ಎನಿಸಿದರೆ ಖಾಲಿ ಮಾಡಬಹುದು ಎಂದು ಅವರು ನನಗೆ ಹೇಳಿದರು. ನನಗೆ ಯಾವುದೇ ಆಯ್ಕೆ ಇರಲಿಲ್ಲ, ಹಿಂತಿರುಗಲು ಮತ್ತು ಹೆಚ್ಚಿನ ಬಾಡಿಗೆಯನ್ನು ಪಾವತಿಸಲು ನಿರ್ಧರಿಸಿದೆ ಎಂದು ಅನ್ವೇಶಾ ರೇ ತಿಳಿಸಿದರು. ಆರು…

Read More

ಆರನೇ ವಾರದ ಕೊನೆಯಲ್ಲಿ ನಡೆದ ಡಬಲ್​ ಎಲಿಮಿನೇಷನ್​​ನಡಿ ಭಾಗ್ಯಶ್ರೀ ಮತ್ತು ಇಶಾನಿ ಮನೆಯಿಂದ ಹೊರಬಂದರು. ಬಿಗ್​ ಮನೆಯಿಂದ ಔಟ್​ ಆಗಿ ಬಂದ ಇಶಾನಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಮೊದಲಿಗೆ ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ನನಗೊಂದು ಚಾನ್ಸ್​ ಕೊಡಬೇಕಿತ್ತು ಎಂದ ಇಶಾನಿ, ‘ಹೊರಬಂದ ಮೇಲೆ ಜನರು ಖುದ್ದಾಗಿ ನನಗೆ ಹೇಳುತ್ತಿದ್ದಾರೆ, ನಾನು ಇನ್ನೂ ಹೆಚ್ಚಿನ ಸಮಯ ಅಲ್ಲಿ ಇರಬೇಕಿತ್ತು, ಹಠ ತೋರಿಸಬೇಕಿತ್ತು. ಟಾಸ್ಕ್​ ಮೇಲೆ ಹೆಚ್ಚು ಫೋಕಸ್​ ಮಾಡಬೇಕಿತ್ತು, ರ್ಯಾಪ್​ ಹಾಡುಗಳನ್ನು ಹಾಡಬೇಕಿತ್ತು ಎಂದು ಅಭಿಪ್ರಾಯಿಸಿದ್ದಾರೆ’ ಎಂದು ಹೇಳಿದರು. ಇನ್ನು ಬಿಗ್​ ಬಾಸ್​ ಮನೆಯಲ್ಲಿ ನಿಮಗೆ ಕೊಟ್ಟ ಸಂಭಾವನೆ ಎಷ್ಟು ಎಂದು ಕೇಳಿದ್ದಕ್ಕೆ ಉತ್ತರಿಸಿದ ಇಶಾನಿ, ‘ಅದರ ಬಗ್ಗೆ ನಾನು ಏನೂ ಹೇಳಲ್ಲಪ್ಪ! ಅದಕ್ಕೆ ಎಲ್ಲೋ ಗೋಚಪ್ಪ ನಿನ್ನ ಅರಮನೆ ಅಷ್ಟೇ’ ಎಂದು ಹೇಳಿದರು. ಒಟ್ಟಾರೆ ಉತ್ತಮ ಪೇಮೆಂಟ್​ ಬಂದಿರುವುದು ನಿಜ ಎಂಬುದನ್ನು ಖಚಿತಪಡಿಸಿದರು.

Read More

ಕಲಬುರ್ಗಿ:- ಬಿಜೆಪಿಯಲ್ಲಿ ಮಾಜಿ ಸಚಿವ ಬಿ ಸೋಮಣ್ಣ ಅಸಮಾಧಾನ ವಿಚಾರವಾಗಿ ಮಾಜಿ DCM ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಿ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಅವರಿಗೆ ಸಂಪೂರ್ಣ ಗೌರವ ಇದೆ, ಅವರನ್ನು ವಿಶ್ವಾಸದಿಂದ ಕರೆದುಕೊಂಡು ಹೋಗುವ ಕೆಲಸ ಬಿಜೆಪಿ ಮಾಡ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಸೋಮಣ್ಣನವರೇ ಪದೇ ಪದೇ ಈ ಮಾತು ಹೇಳ್ತಿದ್ದಾರೆ. ಸೋಮಣ್ಣ ಇಂದು, ಮುಂದು ಎಂದೆಂದೂ ನಮ್ಮ ಜೊತೆಯೇ ಇರ್ತಾರೆ. ಅವರ ನೋವು ಅಳಲು ದೂರ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ ಎಂದು ಕಲಬುರಗಿಯಲ್ಲಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.

Read More