ದೊಡ್ಡಬಳ್ಳಾಪುರ: ಸಾರ್ವಜನಿಕರ ದೂರು ಆಧರಿಸಿ ದೊಡ್ಡಬಳ್ಳಾಪುರ ಸೇರಿದ ರಾಜ್ಯದ 11 ಕಡೆ ಎಡಿಎಲ್ ಆರ್ ಹಾಗೂ ಡಿಡಿಎಲ್ ಆರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಯಲಹಂಕ, ಕೆ.ಆರ್.ಪುರಂ, ದೊಡ್ಡಬಳ್ಳಾಪುರ ಸೇರಿ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ ಎಡಿಎಲ್ ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಮಂದಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಡಿ ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು.
Author: AIN Author
ಚಿಣಮಗೇರಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು ಹಿನ್ನಲೆ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಸರ್ಕಾರವನ್ನ ಆಗ್ರಹಿಸಿದ್ದಾರೆ.. ಚಿಣಮಗೇರಿಯಲ್ಲಿಂದು ಮೃತ ಬಾಲಕಿ ಮಹಂತಮ್ಮ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವನ ಹೇಳಿ ಚರ್ಚಿಸಿದ್ರು.. ಇದು ಶಾಲೆಯಲ್ಲಿ ನಡೆದಿರೋ ಘಟನೆ.ಮಾತ್ರವಲ್ಲ ಸರ್ಕಾರದ ನಿರ್ಲಕ್ಷಕ್ಕೆ ಆಗಿರೋ ದುರಂತ.. ಹೀಗಾಗಿ ಸರ್ಕಾರ ಬಾಲಕಿ ಪೋಷಕರಿಗೆ 1 ಕೋಟಿ ಪರಿಹಾರ ನೀಡಬೇಕು ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ.ಈಡೇರಿಸದಿದ್ರೆ ಹೋರಾಟ ಮಾಡ್ತೇವೆ ಅಂತ ಹೇಳಿದ್ರು..
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬುವಾರಪಲ್ಲಿ ಗ್ರಾಮದಲ್ಲಿನ ಸುಮಾರು 48 ಎಕರೆಯ ಊರ ಮಾದಿಗ ಇನಾಂತಿ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ದಲಿತರಿಗೆ ಮೋಸ ಮಾಡಿರುವ ಅಧಿಕಾರಿಗಳು ಹಾಗೂ ಪ್ರಭಾವಿ ಮುಖಂಡ ಜಿ.ಆರ್ ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಆದಿಜಾಂಭವ ಚಾರಿಟಬಲ್ ಟ್ರಸ್ಟ್ ಹಾಗೂ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಸರಕಾರವು ಸುಮಾರು 75 ವರ್ಷಗಳ ಹಿಂದೆಯೇ ದಲಿತ ಕುಟುಂಬಗಳ ಅಭಿವೃದ್ಧಿಗಾಗಿ ಜಿಲ್ಲೆಯ ನೆಲವಂಕಿ ಹೋಬಳಿಯ ನಂಬುವಾರಪಲ್ಲಿ ಗ್ರಾಮದ ಸರ್ವೆ ನಂ 23, 26, 27, 28 ಹಾಗೂ 39 ರಲ್ಲಿ 48 ಎಕರೆ ಜಮೀನನ್ನು ತಾಲೂಕಿನ ಗ್ರಾಮದಲ್ಲಿ ಇನಾಂತಿ ನೌಕರರಿ ಮಾಡುವ ನಾಲ್ಕು ಕುಟುಂಬಗಳಿಗೆ ಸರಕಾರವೇ ನೀಡಿದ್ದಾರೆ ಈ ಜಾಗದಲ್ಲಿ ಅಂದಿನಿಂದ ವ್ಯವಸಾಯವನ್ನು ಮಾಡಿಕೊಂಡು ಜೀವನ ನಡೆಸುತ್ತಾ ಇದ್ದು ಈ ಜಮೀನಿಗೆ ಪ್ರಭಾವಗಳು ಕಣ್ಣು ಬಿದ್ದಿದ್ದು ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೊರವಿಮಾಕಲಹಳ್ಳಿಯ ಬಲಾಢ್ಯ…
ಕಂಪ್ಲಿ ತಾಲೂಕು ಆಡಳಿತ ಹಾಗೂ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ ಕಂಪ್ಲಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಇವರ ವತಿಯಿಂದ ಕಂಪ್ಲಿ ತಾಲೂಕಿನಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಸೋಮವಾರ. ಅದ್ದೂರಿಯಾಗಿ ಸ್ವಾಗತ ದೊರೆಯಿತು. ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು, ವಿವಿಧ ವಾದ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಭರ್ಜರಿ ಮೆರವಣಿಗೆಯೊಂದಿಗೆ ತಾಲ್ಲೂಕು ಆಡಳಿತವು ಅದ್ದೂರಿಯಾಗಿ ಬರಮಾಡಿಕೊಂಡರು. ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯ ಮೆರವಣಿಗೆಯಲ್ಲಿ ಅಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು, ಹಿರಿಯರು-ಕಿರಿಯರು ಸೇರಿದಂತೆ ಸೇರಿದಂತೆ ಎಲ್ಲರೂ ಕುಣಿದು, ಕುಪ್ಪಳಿಸಿ, ನೃತ್ಯ ಮಾಡುವುದರ ಮೂಲಕ ಸಂಭ್ರಮದಿಂದ ಪಾಲ್ಗೊಂಡಿದ್ದರು. ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯು ಕಂಪ್ಲಿ ತಾಲೂಕಿನ ಸೋಮಲಾಪುರ ಕ್ರಾಸ್ ಗ್ರಾಮದ ಮೂಲಕ ಎಮ್ಮಿಗನೂರು ಹೊಸ ನಲ್ಲೂಡಿ ರಸ್ತೆ ಮಾರ್ಗವಾಗಿ ವಿವಿಧ ಹೋಬಳಿ, ಗ್ರಾಮ ಪಂಚಾಯತಿ ವತಿಯಿಂದ ಸಂಭ್ರಮದಿಂದ ಹೊರಟು, ಕಂಪ್ಲಿ ಆಗಮಿಸಿತು. ಕಂಪ್ಲಿ ತಹಸಿಲ್ದಾರ್ ಶಿವರಾಜ್ ಅವರು , ಅದ್ದೂರಿಯಾಗಿ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು,…
ವಿಜಯಪುರ: ಎಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆಯೋ ಆ ರಾಜ್ಯ, ದೇಶ ಬೆಳದಿದೆ ಎಂದರ್ಥ ಎಂದು ವಿಜಯಪುರದಲ್ಲಿ ನಡೆದ 70ನೇ ಸಹಕಾರ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಎಲ್ಲಾ ಮಹಿಳೆಯರು ಸಹ ಸಹಕಾರ ಸಂಘಗಳ ಸದಸ್ಯರಾಗಬೇಕು. https://ainlivenews.com/geo-scientist-statue-murder-case-explosive-issue-comes-to-light-during-investigation/ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಸಹಕಾರಿ ಬ್ಯಾಂಕ್ನಲ್ಲಿ ಬಡ್ಡಿ ರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. ಸಹಕಾರ ಬ್ಯಾಂಕ್ಗಳಿಗೆ ನಮ್ಮ ಸರ್ಕಾರ ಸಹಕಾರ ನೀಡಲಿದೆ. ಸಹಕಾರ ಕ್ಷೇತ್ರ ಬೆಳೆಯಲು ನೆಹರು, ಗಾಂಧೀಜಿ ಸಹಾಯ ಮಾಡಿದ್ದಾರೆ ಎಂದರು.
ಸುಶ್ಮಿತಾ (Sushmitha) ಮತ್ತು ಜಗಪ್ಪ (Jagappa) ಜೋಡಿ ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಕನ್ನಡ ಕಿರುತೆರೆಯ ಸೆಲೆಬ್ರಿಟಿಗಳ ದಂಡೇ ಸುಶ್ಮಿತಾ, ಜಗಪ್ಪ ಮದುವೆಗೆ ಆಗಮಿಸಿ ಹಾರೈಸಿದ್ದಾರೆ. ಸಿಂಧೂರ ಕನ್ವೆಷನ್ ಹಾಲ್ ಜೆ.ಪಿ ನಗರ ಬೆಂಗಳೂರಿನಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತ ಮದುವೆದಲ್ಲಿ (Wedding) ನೆರವೇರಿದೆ. ಮದುವೆಗೆ ರವಿಚಂದ್ರನ್, ಪ್ರಜ್ವಲ್ ದೇವರಾಜ್, ಸಿತಾರಾ, ನಿರಂಜನ್ ದೇಶಪಾಂಡೆ ದಂಪತಿ, ಮಂಜು ಪಾವಗಡ, ಮಜಭಾರತ ರಿಯಾಲಿಟಿ ಶೋ ತಂಡ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಂದಹಾಗೆ ಇತ್ತೀಚೆಗೆ ಜಗಪ್ಪ ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸುಶ್ಮಿತಾ ಭಿನ್ನವಾಗಿ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಸದ್ಯ ನವ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
ಬೆಂಗಳೂರು: ರಾಜಧಾನಿ ಅಭಿವೃದಿಗೆ ಬಿಡಿಎ ಜವಾಬ್ದಾರಿ ದೊಡ್ಡದ್ದೇ ಇದೆ. ಆದ್ರೆ ಇದೇ ಪ್ರಾಧಿಕಾರ ಇದೀಗ ದುಡ್ಡಿಲ್ಲ ಅಂತಾ ಬಾಯಿ ಬಾಯಿ ಪಡೆದುಕೊಳ್ಳುತ್ತಿದೆ.ಹೀಗಾಗಿ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರೋ ಕಾಮಗಾರಿಗಳು ಅರ್ಧಂಬರ್ಧಕ್ಕೆ ನಿಲ್ಲಿಸಿಬಿಟ್ಟುದೆ. ದಮ್ಮಯ್ಯಾ ದುಡ್ಡು ಕೊಡಿ ಅಂದರು ಸರ್ಕಾರ ನೀಡ್ತಿಲ್ಲ.ಹೀಗಾಗಿ ನಗರದ ಅಭಿವೃದ್ದಿ ಹೊಣೆ ಹೊತ್ತಿರೋ ಪ್ರಾಧಿಕಾರ ಸ್ಥಿತಿ ಡೋಲಾಯಮಾನವಾಗಿದೆ. ರಾಜಧಾನಿ ಬೆಂಗಳೂರನ್ನ ಇಡೀ ವಿಶ್ವವೇ ನೋಡ್ತಿದೆ. ನಗರದ ಅಭಿವೃದ್ದಿ ಹೊಣೆ ಬಿಬಿಎಂಪಿ ಹಾಗೂ ಬಿಡಿಎ ಹೆಗಲಿಗೆ ಸರ್ಕಾರ ವಹಿಸಿದೆ. ಆದ್ರೆ ಇಡೀ ನಗರದ ಅಭಿವೃದ್ದಿಗೆ ದೊಡ್ಡ ಕೊಡುಗೆ ಕೊಡಬೇಕಾದ ಬಿಡಿಎಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೌದು ನಗರದ ಅಭಿವೃದ್ದಿ ಜವಾಬ್ದಾರಿ ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಆರ್ಥಿಕ ಗಂಡಾಂತರಕ್ಕೆ ಸಿಲಿಕಿ ಒದ್ದಾಡ್ತಿದೆ.. ಬಿಡಿಎ ಈಗಾಗಲೇ ನಗರದ ಹಲವೆಡೆ ಹಲವು ಲೇಔಟ್ ಗಳನ್ನ ಮಾಡಿದೆ. ಆದರ ಜತೆಗೆ ಹಲವೆಡೆ ಪ್ಲೈಓವರ್ ಕೂಡ ನಿರ್ಮಾಣ ಮಾಡುತ್ತೆ. ಆದರೆ ಇತ್ತೀಚಿಗೆ ಬಿಡಿಎ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರೋ ಕಾರಣ ಯಾವದೇ ಕಾಮಗಾರಿ ಕೈಗೆತ್ತಿಗೊಳ್ಳಲು ಸಾಧ್ಯವಾಗ್ತಿಲ್ಲ.…
ಬೆಂಗಳೂರು: ವಿದ್ಯುತ್ ಹರಿದು ತಾಯಿ ಮಗು ಸಾವು ಪ್ರಕರಣ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಶಾಸಕ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಅಡಿ ದೂರು ದಾಖಲು ಮಾಡಲು ಟ್ವೀಟ್ ಮಾಡುವ ಮೂಲಕ ಆಗ್ರಹ ವ್ಯಕ್ತಪಡಿಸಿದ್ದಾರೆ. https://twitter.com/nimmasuresh/status/1726411633428500485?t=3FVlGP0a1sqGQa-FKvbm4g&s=19 ಪಾದ ಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ತಾಯಿ ಮತ್ತು ಒಂಬತ್ತು ತಿಂಗಳ ಮಗು ಬೆಂಕಿ ಹೊತ್ತಿಕೊಂಡು ಮೃತ ಪಟ್ಟಿರುವ ಘಟನೆ ಅತ್ಯಂತ ದಾರುಣ. ಇದನ್ನು “ಕೊಲೆ ಪ್ರಕರಣ” ಎಂದೇ ಬಗೆದು ಬೆಸ್ಕಾಂ ನ ಸಂಬಂಧಪಟ್ಟ ಆ ಬೇಜವಬ್ದಾರಿ ಅಧಿಕಾರಿಗಳ ವಿರುದ್ಧ ಕೊಲೆಯ ಆರೋಪದ ಅಡಿ ಕ್ರಮ ಕೈಗೊಳ್ಳಬೇಕು.
ಬೆಂಗಳೂರು: ಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಂಡರು ಸಹ ಅಪರಾಧ ಕೃತ್ಯಗಳು ಮಾತ್ರ ನಿಂತಿಲ್ಲ..ಇಂದು ಬೆಳಂ ಬೆಳಗ್ಗೆ ವೃದ್ಧ ದಂಪತಿಗಳ ಮನೆಗೆ ಮಂತ್ರ ಹಾಕಿಸಿಕೊಳ್ಳಲು ಅಪರಿಚಿತ ವ್ಯಕ್ತಿ ಒಬ್ಬ ಬಂದಿದ್ದ..ಮಂತ್ರಂ ಕೂಡ ಹಾಕಿಸ್ಕೊಂಡಿದ್ದ ..ಒಂಟಿ ಯಾಗಿದ್ದ ದಂಪತಿಗಳನ್ನು ವಾಚ್ ಮಾಡಿದ್ದ ವೃದ್ದೆಯ ಕತ್ನಲ್ಲಿದ್ದ ಅರವತ್ತು ಗ್ರಾಮ್ ಚೈನನ್ನು ಕದ್ದು ಎಸ್ಕೇಪ್ ಆಗಿದ್ದಾನೆ ಇದರಿಂದ ಇಡೀ ಏರಿಯನೇ ಬೆಚ್ಚಿಬಿದ್ದಿದೆ… ಮನೆಯಲ್ಲ ರಕ್ತ ಗೋಡೆಯಲ್ಲ ರಕ್ತದ ಕಲೆ ಏನಾಯ್ತು ಅಂತ ಕಣ್ಣು ಕಣ್ಣು ಬಿಡುತ್ತಿರುವ ಜನ … ಮನಸಲ್ಲಿ ಆತಂಕ.. ವೃದ್ಧಗೆ ಚಿಕಿತ್ಸೆ ಕೊಡುತ್ತಿರುವ ಹಾಸ್ಪಿಟಲ್ ಸಿಬ್ಬಂದಿ.. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಲಕ್ಷ್ಮಿ ಚಿತ್ರಮಂದಿರದ ರಸ್ತೆಯಲ್ಲಿ… ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಯಸ್ಸಾದ ತಾಯಿ ಹೆಸರು ಅಕ್ಕಯಮ್ಮ ಅಂತ .. ಗಂಡ ನಾರಾಯಣ ಆಚಾರಿ ಅಂತ ಇಬ್ರು ಕೂಡ ಒಂದೇ ಮನೆಯಲ್ಲಿ ವಾಸವಾಗಿದ್ದರು .. ಇನ್ನು ನಾರಾಯಣ ಆಚಾರಿ ನಾಟಿ ವೈದ್ಯನಾಗಿದ್ದ ,…
ಬೆಳಗಾವಿ: ಡಿ.4ರಿಂದ 15ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿರುವ ಹಿನ್ನೆಲೆ ಪೊಲೀಸರು ಹೇಗೆ ತಯಾರಿ ಮಾಡಿಕೊಂಡಿದ್ದಾರೆಂದು ಮಾಹಿತಿ ಪಡೆದಿದ್ದೇನೆ ಎಂದು ಬೆಳಗಾವಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 3,500 ಪೊಲೀಸ್ ಸಿಬ್ಬಂದಿ ಸುವರ್ಣಸೌಧ ಭದ್ರತೆಗೆ ನಿಯೋಜನೆ ಮಾಡಲಾಗಿದೆ. https://ainlivenews.com/geo-scientist-statue-murder-case-explosive-issue-comes-to-light-during-investigation/ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸಿಬ್ಬಂದಿಗೆ ಎಲ್ಲ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ಊಟ, ವಸತಿ ವ್ಯವಸ್ಥಿತವಾಗಿ ಕಲ್ಪಿಸುವಂತೆ ಸೂಚನೆ ನೀಡಿದ್ದೇನೆ. ಭದ್ರತೆ, ಆಂತರಿಕ ವಿಚಾರ ಸೇರಿದಂತೆ ಬಿಗಿ ಭದ್ರತೆ ಮಾಡಿಕೊಳ್ಳುತ್ತೇವೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.