Author: AIN Author

ಬೆಂಗಳೂರು : ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ‌ ಸಾಕಿದ್ದ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ ಮುಂಜಾನೆ ಹೈಡ್ರಾಮ ನಡೆದಿತ್ತು. ಆರ್.ಆರ್ ನಗರ ಪೊಲೀಸ್ ರು ವಿಚಾರಣೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದರ ನಡುವೆ ಮಹಿಳೆ ತನಿಖೆ ಸಹಕಾರ ನೀಡಿದ್ದಾರೆ. ಅಮಿತಾ ಜಿಂದಾಲ್ ಎಂಬುವವರಿಗೆ ದರ್ಶನ್ ಮನೆಯಲ್ಲಿ‌ ಸಾಕಿದ್ದ ನಾಯಿ ಕಚ್ಚಿತ್ತು. ಈಕೆಯನ್ನು ಪೊಲೀಸರು ಮಹಜರ್ ಮತ್ತು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದರು. ಇವರು ಬೆಳ್ಳಂ ಬೆಳಗ್ಗೆ ಸರಿಸುಮಾರು 7.30ಗೆ ಠಾಣೆ ಹಾಜರಾಗಿದ್ದರು. ಅಷ್ಟೇ ತಾನೂ ವಿಚಾರಣೆಗೆ ಬಂದಿದ್ದೇನೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಠಾಣೆಯ ಬಾಗಿಲಲ್ಲೇ ನಿಂತು‌ ಮೇಲಿಂದ ಮೇಲೆ ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡುತ್ತಿದ್ದರು. https://ainlivenews.com/knee-pain-treatment-joint-pain-treatment/ ಅಮಿತಾ ಜಿಂದಾಲರ ಈ ಪರಿ ಕ್ವಾಟ್ಲೇಗೆ ಬೇಸತ್ತ ಪೊಲೀಸರು ದೌಡಾಯಿಸಿ ಬಂದು ಈಕೆಯನ್ನು ದರ್ಶನ್ ಮನೆಯ ಬಳಿಗೆ ಕರೆದುಕೊಂಡು ಹೋದರು. ಅಮಿತಾಗೆ ನಾಯಿ‌ಕಚ್ಚಿದ್ದೆಲ್ಲಿ ಎಂದು ತೋರಿಸುವಂತೆ ಹೇಳಿದರು. ಆ ಸ್ಥಳದ ಮಹಜರ್ ಮಾಡಿ ಇಬ್ಬರು ಸಾಕ್ಷಿಗಳ ಸಹಿಯನ್ನು ಪಡೆದ ಪೊಲೀಸರು ಹೇಳಿಕೆ ದಾಖಲಿಸಲು ಠಾಣೆಗೆ…

Read More

ಕನ್ನಡ ಚಿತ್ರರಂಗದ (Sandalwood) ಯುವ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಕೆಲವೇ ದಿನಗಳಲ್ಲೇ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾಹಿತಿಯಿದೆ. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ  (Marriage) ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಇದೇ ನವೆಂಬರ್ 16ರಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ತಾಜಾ ಸಮಾಚಾರ ಹಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಾಸುಕಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಬಹುಕಾಲದ ಗೆಳತಿಯೊಂದಿಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಇನ್ನೂ ಈ ಬಗ್ಗೆ ವಾಸುಕಿ ವೈಭವ್ ಅವರಿಂದ…

Read More

ನವದೆಹಲಿ: ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮಾರ್ಕೆಟ್​ನಲ್ಲಿ ಇರುವುದಕ್ಕೆ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ನವೆಂಬರ್ 15ರಂದು ಮತ್ತಷ್ಟು ನಾಯಕರು ನಮ್ಮ ಪಕ್ಷಕ್ಕೆ ಸೇರುತ್ತಾರೆ ಎಂದು ನವದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿಕೆ ನೀಡಿದ್ದಾರೆ.  ​ಬಿಜೆಪಿಯವರು ನಮ್ಮ ಶಾಸಕರನ್ನೂ ಕರೆದುಕೊಳ್ಳಲು ಆಗಲ್ಲ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆಯೇ ತೀರ್ಮಾನ‌ ಮಾಡಲು ಆಗಿಲ್ಲ. ಬಿಜೆಪಿಯವರು ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯಲ್ಲೇ ಸಾಕಷ್ಟು ಸಮಸ್ಯೆ ಇದೆ ಎಂದ ಕಿಡಿಕಾರಿದರು. https://ainlivenews.com/knee-pain-treatment-joint-pain-treatment/ ಮೇಕೆದಾಟು ವಿಚಾರವನ್ನು CWMA ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ‘ಸುಪ್ರೀಂ’ ಆದೇಶದಂತೆ ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲು ಎಂದು ತಿಳಿಸಿದರು. ನೀರು ಮೀಸಲಿಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ‘ಸುಪ್ರೀಂ’ ಅನುಮತಿ ಪಡೆದು ಪ್ರತಿವರ್ಷ 24 ಟಿಎಂಸಿ ನೀರು ಮೀಸಲಿಟ್ಟು ಆದೇಶ ಹೊರಡಿಸಿದ್ದೇವೆ. ಮುಂದಿನ ವಾರ ಮೇಕೆದಾಟು ಯೋಜನೆ ವಿಚಾರ ಚರ್ಚೆಗೆ ಬರಲಿದೆ ಎಂದರು.

Read More

ಬೆಂಗಳೂರು : ಬಹುತೇಕ ಪ್ರಕರಣಗಳಲ್ಲಿ ಕಳ್ಳತನವಾದ ವಸ್ತುಗಳು ಸಿಗೋದೇ ಇಲ್ಲ. ಆದ್ರೆ, ಒಮ್ಮೆ ಕಳ್ಳರು ತಗಲಾಕಿಕೊಂಡ್ರೆ ಅವರಿಂದ ಹತ್ತಾರು ಪ್ರಕರಣಗಳು ಬೆಳಕಿಗೆ ಬರುತ್ತವೆ. ಇಂದು ಬೆಂಗಳೂರು ಪೊಲೀಸರು ಅಂತಹ ಹಲವು ಕಳ್ಳಕಾಕರನ್ನು ಅರೆಸ್ಟ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. https://ainlivenews.com/knee-pain-treatment-joint-pain-treatment/ ಶ್ರೀನಾಥ್ ಬಂಧಿತ ಆರೋಪಿ. ಈ ಆಸಾಮಿ ಪಿಜಿ ಹಾಗೂ ಬ್ಯಾಚಲರ್ಸ್ ರೂಂಗಳಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನ ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ಮೂವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 75 ಲಕ್ಷ ಮೌಲ್ಯದ 133 ಲ್ಯಾಪ್ ಟಾಪ್ ಹಾಗೂ ಮೊಬೈಲ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.​​ ಇನ್ನು ಕ್ಯಾಸಿನೋದಲ್ಲಿ ಜೂಜಾಡಲು ಚಿನ್ನದಂಗಡಿಯ ಮಾಲೀಕನೊಬ್ಬ ತನ್ನ ಸ್ನೇಹಿತನ ಮನೆಯ ದೇವರ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ. ಈತನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರ್ತ ಪೇಟೆಯಲ್ಲಿ ಸಗಟು ಚಿನ್ನದ ವ್ಯಾಪಾರಿಯಾಗಿದ್ದ ರಾಮ್ ಲಾಲ್ ಎಂಬುವರು ನೀಡಿದ ದೂರಿದ ಮೇರೆಗೆ ಆರೋಪಿ ಮೋಹನ್ ಲಾಲ್ ಎಂಬಾತನನ್ನ ಬಂಧಿಸಿ 84 ಲಕ್ಷ ಮೌಲ್ಯದ…

Read More

ಬೆಂಗಳೂರು: ಪ್ಯಾಂಟ್‌ ಜಿಪ್‌ ಲೈನ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು  ಏರ್‌ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. https://ainlivenews.com/knee-pain-treatment-joint-pain-treatment/ ಪ್ರಯಾಣಿಕ ಶಾರ್ಜಾದಿಂದ ಬಂದಿದ್ದ. ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ. ಈತನನ್ನು ಏರ್‌ಪೋರ್ಟ್‌ನಲ್ಲಿ ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಸುಮಾರು 18.57 ಲಕ್ಷ ರೂ. ಮೌಲ್ಯದ 284 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Read More

ಕೊಪ್ಪಳ: ಸಿದ್ದರಾಮಯ್ಯ ಲೂಟಿಕೋರ, ಅವರನ್ನು ನನಗೆ ಹೋಲಿಸಬೇಡಿ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಕೆ.ಎಸ್​.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಸಿದ್ದರಾಮಯ್ಯ ಮಂಗ ಹಾರಿದಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಮತ್ತೊಂದು ಪಾರ್ಟಿಗೆ ಹಾರಿ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಈಶ್ವರಪ್ಪ ಮಂಗನಿಗೆ ಹೋಲಿಸಿದ್ದಾರೆ. https://ainlivenews.com/knee-pain-treatment-joint-pain-treatment/

Read More

ಹುಬ್ಬಳ್ಳಿ; ತಾಲೂಕಿನ ಛಬ್ಬಿ ಜಿನ ಮಂದಿರದಲ್ಲಿ ಪೂಜಾ ಪಾಠ ಸಂಗ್ರಹ ಶಾಸ್ತ್ರ ಬಿಡುಗಡೆ ಕಾರ್ಯಕ್ರಮ ಸೋಮದೇವ ಬಯ್ಯಾಜಿಯವರು ಧರ್ಮ ಬಂಧುಗಳು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬೈಯಾಜಿ ಯವರು ಮಾತನಾಡಿ ದೇವ ಗುರು ಶಾಸ್ತ್ರ ಇವುಗಳಲ್ಲಿ ಶಾಸ್ತ್ರದಾನ ಬಹಳ ಮಹತ್ವವಾಗಿರುತ್ತದೆ ಒಂದು ಶಾಸ್ತ್ರದಲ್ಲಿ ಒಂದೇ ತರ ಇರುತ್ತದೆ ಈಗ ಈ ಶಾಸ್ತ್ರದಲ್ಲಿ ಎಲ್ಲ ಶಾಸ್ತ್ರಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಪೂಜ್ಯವಿಧಿ ವಿಧಾನಗಳು ಇದರಲ್ಲಿ ಇರುತ್ತವೆ ಕಾರಣ ತಾವುಗಳು ಈ ಶಾಸ್ತ್ರವನ್ನು ಪಡೆದು ಸ್ವದ್ಯಾಯ ಮಾಡಿ ವಿಧಿ ಪೂರ್ವಕ ಪೂಜಾ ಕಾರ್ಯಕ್ರಮ ಮಾಡಿರಿ ಎಂದು ತಿಳಿಸಿದರು.  ಈ ಶಾಸ್ತ್ರವನ್ನು1000 ಪ್ರತಿಯನ್ನು ಶ್ರೀ ಮತಿ ಸರೋಜವ್ವ ಧರ್ಮಣ್ಣ ಕಾಗೆನವರ ಮುದ್ರಣ ಮಾಡಿ ಶಾಸ್ತ್ರದಾನ  ಮಾಡಿರುತ್ತಾರೆ.  ಮತ್ತು  ಅವರು ಅತ್ತಿಮಬ್ಬೆ ಮಹಿಳಾ ಮಂಡಳಕ್ಕೆ ಮೂರು ಗುಂಟೆ ಭೂಮಿಯನ್ನು ದಾನವಾಗಿ ನೀಡಿರುತ್ತಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈನ ಸಮಾಜ ಅಧ್ಯಕ್ಷರಾದ ದೇವೇಂದ್ರಪ್ಪ ಕಾಗೆನವರ ವಹಿಸಿದ್ದರು ದಾನಿಗಳು ಮತ್ತು, ಅತ್ತಿಮಬ್ಬೆ ಮಹಿಳಾಮಂಡಳದ ಅಧ್ಯಕ್ಷರಾದ ಶ್ರೀಮತಿ ಸರೋಜವ್ವ ಕಾಗೆನವರ ಮಹಾವೀರ ಕಿತ್ತೂರ ಚಂದ್ರಪ್ಪ…

Read More

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ ದೀಪಗಳ ಹಬ್ಬಕ್ಕೆ ಮಾರ್ಕೆಟ್ ಗೆ ವೇರಾಯಿಟಿ ದೀಪಗಳು ಎಂಟ್ರಿ ಕಲರ್ ಕಲರ್ ವಿಭಿನ್ನ ದೀಪಗಳು ಮಹಿಳೆಯರ ಕಣ್ಮನ ಸೆಳೆತಿವೆ. ಸಿಲಿಕಾನ್‌ ಸಿಟಿ ಮಂದಿ ಭರ್ಜರಿ ತಯಾರಿಗೆ ಮುಂದಾಗಿದ್ದಾರೆ ದೀಪಾವಳಿಯ ಪ್ರಮುಖ ಆಕರ್ಷಣೆಗಳಾಗಿರುವ ಹಣತೆ ಫ್ಯಾನ್ಸಿ ಹಾಗೂ ಅಲಂಕಾರಿಕ ವಸ್ತುಗಳು ಮಲ್ಲೆಶ್ವರಂನಲ್ಲಿ ಕಾಣಸಿಗ್ತಿವೆ ಪಂಚಮುಖೀ ದೀಪ, ಲಕ್ಷ್ಮೀ ದೇವಿ, ಗಣೇಶ ದೀಪ, ನವಿಲು ದೀಪ, ಮೀನಿನ ದೀಪ https://ainlivenews.com/knee-pain-treatment-joint-pain-treatment/ ಹಲವು ವಿನ್ಯಾಸಗಳಿಂದ ಕೂಡಿರುವ ಮಣ್ಣಿನಿಂದ ಮಾಡಿದ ಹಣತೆ ಬಂದಿದೆ 4, 5 ಹಾಗೂ 7 ಮುಖದ ‌ದೀಪಗಳೂ ಅಟ್ರ್ಯಾಕ್ಟ್ ಆಗಿವೆಇನ್ನು ಎರಡು ದಿನಗಳಿಂದ ವ್ಯಾಪಾರ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಈಗ ದೀಪಾವಳಿ ಹಬ್ಬದ ಕಳೆ ಹೆಚ್ಚುತ್ತಿದೆ.

Read More

ರಬಕವಿ ಬನಹಟ್ಟಿ ತಾಲೂಕು ಎಂದು ನಾಮಕರಣ ಮಾಡಿ ಸುಮಾರು ವರ್ಷಗಳ ಕಳೆದು ಹೋಗಿದೆ. ಆದರೆ ಇಲ್ಲಿಯವರೆಗೂ ರಬಕವಿ ನಗರ ಅಭಿವೃದ್ಧಿ ಕಾಣದೆ ಇರುವುದು ಬೇಸರ ಸಂಗತಿ. ರಬಕವಿ ಮಹೇಶವಾಡಗಿ ಬ್ರಿಜ್ ಪ್ರಾರಂಭವಾಗಿದ್ದು 2014ರಲ್ಲಿ 2023 ಕಳೆಯಲು ಬಂದರು ರಬಕವಿ ಮಹಿಷವಾಡಗಿ ಬ್ರಿಜ್ ಕಾಮಗಾರಿ ಮಾತ್ರ ನಡೆದಿಲ್ಲ. ಇದಕ್ಕೆ ರಾಜ್ಯಕಾರಣಿಗಳ ಇಚ್ಛಾ ಶಕ್ತಿ ಕೊರತೆ ಇದೆ. ಸಂತಿ ಮಾಡುವ ರಾಜಕಾರಣಿಗಳಿಂದಲೇ ನಮ್ಮ ರಬಕವಿ ನಗರವು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಹಿಂದೆ ಬಿದ್ದಿದೆ. ರಬಕವಿ ನಗರವು ಅಭಿವೃದ್ಧಿ ಆಗಬೇಕಾದರೆ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ಚುನಾವಣಾ ಬಹಿಷ್ಕಾರ ಹಾಕಿ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರಬಕವಿ ಮಹೇಶವಾಡಗಿ ಬ್ರಿಜ್ ಕಾಮಗಾರಿ ಕುರಿತು ಮಹತ್ವದ ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ಡಾ. ರವಿ ಜಮಖಂಡಿ. ಸಂಗಪ್ಪ ಕುಂದಗೋಳ. ದರೆಪ್ಪ ಉಳ್ಳಾಗಡ್ಡಿ. ಎಮ್ ಬಿ ನಾಶಿ ಎಮ್ ಸಿ ಸಾಬೋಜಿ.…

Read More

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿರುವ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಆಶ್ರಮ ( ಶ್ರೀ ಮೋರ್ತೇಪ್ಪ ಕಲ್ಲಪ್ಫ ಹೂಗಾರ ತೋಟದ ಆವರಣ ) ದಲ್ಲಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ 108 ನೇ ಜನ್ಮೋತ್ಸವ ಹಾಗೂ ಶ್ರೀ ಸಮರ್ಥ ಸದ್ಗುರು ಶಿವಪ್ರಭು ಮಹಾರಾಜರ ಪರಮ ಶಿಷ್ಯರಾದ ಶ್ರೀ ಕಲ್ಲಪ್ಫ. ಮೋ. ಹೂಗಾರ ಮಹಾರಾಜರ ಇವರ ಪುಣ್ಯ ಸ್ಮರಣೋತ್ಸವ ಆಧ್ಯಾತ್ಮ ಸಪ್ತಾಹ ಬುಧವಾರ ದಿನಾಂಕ 08 ನವೆಂಬರ 2023 ರಂದು ಬೆಳಿಗ್ಗೆ 10=00 ಗಂಟೆಗೆ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಜರಗುವದು. ಈ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಜನೆ. ದಾಸಬೋದ ಪಠಣ .ಪುರಾಣ. ಪ್ರವಚನ. ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ತೊಟ್ಟಿಲೋತ್ಸವ. ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಳ್ಳುವದು ಅತ್ಯಂತ ವಿಜೃಂಭಣೆಯಿಂದ ಜರಗುವ ಈ ಆಧ್ಯಾತ್ಮ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ…

Read More