Author: AIN Author

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ. https://ainkannada.com/heavy-rainfall-in-the-state-tomorrow-yellow-orange-alert-announces-for-these-districts/ ಮಹಿಳೆಯರು, ಪುರುಷರು ಎಷ್ಟೇ ದಪ್ಪ ಅದ್ರೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ, ಅದೇ ಹೊಟ್ಟೆಯ ಬೊಜ್ಜು ಬರಲು ಶುರುವಾದರೆ, ಅಯ್ಯೋ ಹೊಟ್ಟೆ ಬಂದ್ಬಿಟ್ಟಿದೆ ಇದನ್ನು ಕರಗಿಸಲೇ ಬೇಕು ಅಂತಾ ಶತಪ್ರಯತ್ನ ಮಾಡುತ್ತಾರೆ. ದೇಹದ ಯಾವುದೇ ಭಾಗದ ಬೊಜ್ಜನ್ನು ಸ್ವಲ್ಪ ಪ್ರಯತ್ನ ಮಾಡುವ ಮೂಲಕ ಕರಗಿಸಬಹುದು, ಆದರೆ ಈ ಹೊಟ್ಟೆ ಬೊಜ್ಜು ಇದೆಯಲ್ಲಾ ಅದು ಸುಲಭವಾಗಿ ನಮ್ಮ ಮಾತು ಕೇಳೋಲ್ಲ. ಅದಕ್ಕೆ ಸರಿಯಾದ ಆಹಾರ, ಕ್ರಮಬದ್ಧ ವ್ಯಾಯಾಮ ಎಲ್ಲವೂ ಬೇಕಾಗುತ್ತದೆ. ಪ್ರತಿದಿನ ವ್ಯಾಯಾಮ ಮಾಡಿದರೂ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಆಹಾರ ಕ್ರಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ತೂಕ ಇಳಿಸುವ ಪ್ರಯಾಣ ಹೆಚ್ಚಿಸಲು, ನಿಮ್ಮ ಆಹಾರ ಯೋಜನೆಯಲ್ಲಿ ಕೆಲವು ಗಿಡಮೂಲಿಕೆ ಚಹಾಗಳನ್ನು ಸೇರಿಸಲು ಪ್ರಯತ್ನಿಸಬಹುದು.…

Read More

ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainkannada.com/drinking-cane-milk-should-not-be-eaten-by-these-foods-why/ ಮೇ 17ರಿಂದ ಎರಡು ದಿನಗಳವರೆಗೆ ಬೆಳಗಾವಿ, ಧಾರವಾಡ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

Read More

ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಮತ್ತು ಆರೋಗ್ಯಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಹಾಗೂ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುವ ಪಾನೀಯವೂ ಆಗಿದೆ. ಅಚ್ಚರಿ ಎಂದರೆ, ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹ ತಂಪಾದರೆ ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹ ಬೆಚ್ಚಗಾಗುತ್ತದೆ! ಆಲ್ಲದೇ ಕಬ್ಬಿನ ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಈ ಶಕ್ತಿ ಅತಿ ಹೆಚ್ಚಾಗಿ ಅಗತ್ಯವಾಗಿದೆ. ಸಿಹಿಯಾಗಿದ್ದರೂ, ಕಬ್ಬಿನ ಹಾಲಿನಲ್ಲಿ ಕ್ಯಾಲೋರಿಗಳು ಕಡಿಮೆಯೇ ಇವೆ. https://ainkannada.com/new-court-complex-at-a-cost-of-rs-29-crore-mla-k-m-uday/ ಕಬ್ಬಿನ ಹಾಲು ದೇಹಕ್ಕೆ ತಕ್ಷಣ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ದೇಹವನ್ನು ತಂಪಾಗಿ ಮತ್ತು ನೀರಿನ ಅಂಶ ಇರುವಂತೆ ಮಾಡುತ್ತದೆ. ಆದರೆ, ಕಬ್ಬಿನ ಹಾಲು ಸೇವಿಸಿದ ಬಳಿಕ ನೀವು ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗೆ ತಿನ್ನುವುದರಿಂದ ಸಮಸ್ಯೆಗಳು ಉಂಟಾಗಬಹುದು. ಕಬ್ಬಿನ ರಸವು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ. ನೀವು ಗುಲಾಬ್ ಜಾಮೂನ್, ಲಡ್ಡು, ಹಲ್ವಾ ಮುಂತಾದ ಹೆಚ್ಚು ಸಿಹಿ ಆಹಾರಗಳನ್ನು ಕಬ್ಬಿನ ಹಾಲು ಕುಡಿದ…

Read More

ವಿಜಯನಗರ:- ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ಬಂಡ್ರಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಾಗೂ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. https://ainkannada.com/kirik-for-cigarette-issue-murder-of-a-young-man-punched-by-a-car/ ಆರೋಗ್ಯ ಶಿಬಿರ ಹಾಗೂ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದ ಬಳಿಕ ಮೇ ಮಾಸದಲ್ಲಿ‌ ನೀಡಿದ ಶೇ.30 ಕೆಲಸದ ರಿಯಾಯಿತಿಯಿಂದ ಬೇಗ ಕೆಲಸ ಮುಗಿಸಿ ತಮ್ಮದೇ ಹಾಡುಗಳಿಗೆ ನ್ಯತ್ಯ ಮಾಡಿದ ಲಂಬಾಣಿ ಮಹಿಳೆಯರ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ.

Read More

ಬೆಂಗಳೂರು:- ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದು ಕಾರಿನಿಂದ ಗುದ್ದಿ ಯುವಕನನ್ನು ‘ಮರ್ಡರ್’ ಮಾಡಿರುವ ಘಟನೆ ಕೋಣನಕುಂಟೆ ಕ್ರಾಸ್,ಕನಕಪುರ ರಸ್ತೆ ತಿರುವಿನ ಬಳಿ ಜರುಗಿದೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಆರೋಪಿಯ ಅಟ್ಟಹಾಸ ಬೆಚ್ಚಿ ಬೀಳುವಂತಿದೆ. ಮೇ.10 ರಂದು ಬೆಳಗಿನ ಜಾವ ನಾಲ್ಕು ಗಂಟೆಗೆ ನಡೆದ ಘಟನೆ ಇದಾಗಿದೆ. https://ainkannada.com/hubli-sameera-khan-cycle-trip-to-women-empowerment/ ಟೆಕ್ಕಿ ಸಂಜಯ್ ಕೊಲೆಯಾದ ದುರ್ದೈವಿ. ಪ್ರತೀಕ್ ಎಂಬಾತನಿಂದ ಕಾರು ಗುದ್ದಿಸಿ ಕೊಲೆಯಾಗಿದೆ. ಕನಕಪುರ ರಸ್ತೆಯ ವಸಂತಪುರ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದ ಸಂಜಯ್, ಕಾರ್ತಿಕ್ ಸಿಗರೇಟ್ ಸೇದಲು ಕಚೇರಿಯಿಂದ ಹೊರಬಂದಿದ್ದರು. ಇಲ್ಲಿನ ರಸ್ತೆ ಬದಿಯ ಸೈಕಲ್‌ನಲ್ಲಿ ಸಿಗರೇಟ್ ತೆಗೆದುಕೊಂಡಿದ್ದರು. ಅಲ್ಲೇ ನಿಂತು ಇಬ್ಬರು ಟೆಕ್ಕಿಗಳು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಕಾರಿನಿಂದ ಇಳಿಯದೇ, ಸಂಜಯ್‌ಗೆ ಸಿಗರೇಟ್ ತಂದುಕೊಡುವಂತೆ ಹೇಳಿದ್ದ. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್ ಕಾರಿನಲ್ಲಿದ್ದ ಪ್ರತೀಕ್ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಜೋರಾಗಿ ಅಂಗಡಿಯವರು ಬಿಡಿಸಿ ಕಳುಹಿಸಿದ್ದರು. ಕೋಪಗೊಂಡ…

Read More

ಹುಬ್ಬಳ್ಳಿ: ಮಹಿಳೆಯರ‌ ಮೇಲೆ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲೆ ದಬ್ಬಾಳಿಕೆಯ ತಡೆಯುವ ಹಾಗೂ ಈ ಕುರಿತು ಜಾಗೃತಿಗಾಗಿ ಮಹಿಳಾ ಸಬಲೀಕರಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿರುವ ಪರ್ವತಾರೋಹಿಣಿ ಪಿ. ಸಮೀರಾ ಖಾನ್ ಅವರ ಸೈಕಲ್ ಯಾತ್ರೆ ಹುಬ್ಬಳ್ಳಿಗೆ ಆಗಮಿಸಿದ್ದು ಕಳೆದ ಎರಡು ದಿನಗಳಿಂದ ಇಲ್ಲಿ ಜಾಗೃತಿ ಮೂಡಿಸುತಿದ್ದಾರೆ. https://ainkannada.com/crime-news-man-attacked-with-a-sword-in-bantwal/ ಆಂಧ್ರ ಪ್ರದೇಶದಿಂದ ಆರಂಭ ಗೊಂಡಿರುವ ಈ ಸೈಕಲ್ ಯಾತ್ರೆ ವಿವಿಧ ಸಂಘ ಸಂಸ್ಥೆ, ಗಣ್ಯರಿಂದ ಸಹಾಯಕ್ಕಾಗಿ ಮನವಿ ಮಾಡತಾ ಇದ್ದುಮಹಿಳೆಯರ ಆರೋಗ್ಯ, ಶಿಕ್ಷಣ, ಸ್ವಾವಲಂಬಿ ಬದುಕಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಮಾಲಯ ಪರ್ವತಾರೋಹಣಕ್ಕೆ ಬೆಂಬಲ ಪಡೆಯಲು ಸಹ ಇದೇ ವೇಳೆ ಸೈಕಲ್ ಯಾತ್ರೆ ನಡೆಸತಾ ಇದ್ದಾರೆ. ಆಂದ್ರ ಪ್ರದೇಶದಅನಂತಪುರದ ಪರ್ವತಾರೋಹಿ ಪಿ. ಸಮೀರಾ ಖಾನ್ ಯಾತ್ರೆ ಹುಬ್ಬಳ್ಳಿ ತೊಳನಕೆರೆಯಿಂದ ಚಾಲನೆ ನೀಡಲಾಗಿದೆ. ಒಬ್ಬ ಉತ್ಸಾಹಿ ಪ್ರಯಾಣಿಕ ಮತ್ತು ಸೈಕ್ಲಿಸ್ಟ್ ಆಗಿರುವ ಸಮೀರಾಖಾನ್ಇದು ನನ್ನ ಇಲ್ಲಿಯವರೆಗಿನ ಅತ್ಯುತ್ತಮ ಯಾತ್ರೆ ಆಗಿದೆ ಎಂದು ಅವರು ಹೇಳುತ್ತಾರೆ. “ಪರ್ವತಾರೋಹಣ ಮತ್ತು ಬಂಡೆ ಹತ್ತುವುದರಲ್ಲಿ…

Read More

ಮಂಗಳೂರು:- ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌ ನಡೆದಿರುವ ಘಟನೆ ಜರುಗಿದೆ. https://ainkannada.com/horrific-road-accident-four-dead-one-seriously-injured/ ಸ್ಥಳೀಯ ನಿವಾಸಿ ಹಮೀದ್ ಹಲ್ಲೆಗೊಳಗಾದ ವ್ಯಕ್ತಿ. ಶುಕ್ರವಾರ ಸಂಜೆ ವೇಳೆಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾಗಿರುವ ಹಮೀದ್‌ನನ್ನ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಹ್ಯಾರಿಸ್ ಎಂಬಾತನ ಗ್ಯಾಂಗ್‌ನಿಂದ ವೈಯಕ್ತಿಕ ದ್ವೇಷಕ್ಕೆ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Read More

ಚಿತ್ರದುರ್ಗ:- ಕಾರೊಂದು ಟ್ರಾಕ್ಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನರು ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಹೊಳಲ್ಕೆರೆ ಚಿತ್ರಹಳ್ಳಿ ಬಳಿ ತಡ ರಾತ್ರಿ ನಡೆದಿದೆ. https://ainkannada.com/west-indies-cricket-board-gives-good-news-to-rcb-fans-what-is-it/ ಕಾರು ಶಿವಮೊಗ್ಗಾ ಕಡೆಗೆ ಹೋಗುತ್ತಿದ್ದು, ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಕಾವ್ಯ,ಗಂಗಮ್ಮ,ಹಂಸಿಕ,ಮತ್ತು ಮನಸ್ವಿನಿ ಎಂದು ಗುರುತಿಸಿದ್ದು, ಗಾಯಾಳು ಯಶವಂತ್ ಎನ್ನಲಾಗಿದೆ. ಇವರೆಲ್ಲರೂ ಕೂಡ ಅರೇನಹಳ್ಳಿ ಗ್ರಾಮದವರಾಗಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರಹಳ್ಳಿ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಇಂದಿನಿಂದ IPL ದ್ವಿತೀಯಾರ್ಧ ಆರಂಭವಾಗಲಿದ್ದು, ಈ ಹೊತ್ತಲ್ಲೇ RCB ಅಭಿಮಾನಿಗಳಿಗೆ ವೆಸ್ಟ್ ಇಂಡೀಸ್​ ಕ್ರಿಕೆಟ್ ಮಂಡಳಿ ಗುಡ್ ನ್ಯೂಸ್ ಕೊಟ್ಟಿದೆ. https://ainkannada.com/attention-motorists-traffic-restrictions-on-hebbal-flyover-for-five-days/ ವೆಸ್ಟ್ ಇಂಡೀಸ್​ ತಂಡದ ಸ್ಟಾರ್ ಆಲ್​ರೌಂಡರ್ ರೊಮಾರಿಯೊ ಶೆಫರ್ಡ್ ಆರ್​ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಮೇ 29 ರಿಂದ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಸರಣಿ ಶುರುವಾಗಲಿದ್ದು, ಇದಕ್ಕಾಗಿ ಅವರು ಅರ್ಧದಲ್ಲೇ ಐಪಿಎಲ್ ಟೂರ್ನಿ ತೊರೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ರೊಮಾರಿಯೊ ಶೆಫರ್ಡ್​ಗೆ ಸಂಪೂರ್ಣ ಟೂರ್ನಿ ಮುಗಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್ ಅನುಮತಿ ನೀಡಿದೆ. ಅಲ್ಲದೆ ಅವರ ಬದಲಿಗೆ ಇಂಗ್ಲೆಂಡ್ ಸರಣಿಗೆ ಜೆಡಿಯಾ ಬ್ಲೇಡ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಆರ್​ಸಿಬಿ ತಂಡದ ಪ್ಲೇಆಫ್ ಪಂದ್ಯಗಳಲ್ಲೂ ರೊಮಾರಿಯೊ ಶೆಫರ್ಡ್ ಕಾಣಿಸಿಕೊಳ್ಳುವುದು ಖಚಿತ. ಇತ್ತ ರೊಮಾರಿಯೊ ಶೆಫರ್ಡ್ ಲಭ್ಯತೆಯು ಆರ್​ಸಿಬಿ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು. ಏಕೆಂದರೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ್ದ ಶೆಫರ್ಡ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.…

Read More

ಬೆಂಗಳೂರು:- ವಾಹನ ಸವಾರರು ಅಪ್ಪಿತಪ್ಪಿಯೂ ಇಲ್ಲಿ ಸಂಚಾರ ಮಾಡೋ ಮುನ್ನ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ. ಇಂದಿನಿಂದ ಮೇ 21ರವರೆಗೆ ಪ್ರತಿದಿನ ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ ಹೆಬ್ಬಾಳ ಫ್ಲೈಓವರ್ ಬಂದ್​ ಇರಲಿದೆ. ಬಿಡಿಎ ಕಾಮಗಾರಿ ಹಿನ್ನೆಲೆ ಬಂದ್ ಇರಲಿದೆ. https://ainkannada.com/fraud-case-fir-against-former-ed-officer-son-seri-nalvar/ ಎಸ್ಟೀಮ್​ ಮಾಲ್​ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗ ಬಂದ್​ ಇರಲಿದ್ದು ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸ್​ ಪ್ರಕಟಣೆ ಹೊರಡಿಸಿದ್ದಾರೆ. ಪ್ರತಿದಿನ 3 ಗಂಟೆಗಳ ಕಾಲ ಅಂದರೆ ರಾತ್ರಿ 12 ರಿಂದ ಬೆಳಗಿನ ಜಾವ 03 ಗಂಟೆ ವರೆಗೆ ಕಾಮಗಾರಿನ್ನು ಕೈಗೊಳ್ಳಲಾಗಿದೆ. ಹಾಗಾಗಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದೆ. ಹೆಬ್ಬಾಳ ಮೇಲೇತುವೆಯಲ್ಲಿ ಎಸ್ಟೀಮ್ ಮಾಲ್​ನಿಂದ ಮೇಖ್ರಿ ವೃತ್ತದ ಕಡೆಗೆ ರಾತ್ರಿ 12 ರಿಂದ ಬೆಳಿಗ್ಗೆ 3 ಗಂಟೆ ವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ ಅಂತಾರಾಷ್ಟ್ರೀಯ…

Read More