ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಭರ್ಜರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಕರ್ನಾಟಕದಾದ್ಯಂತ ಮೇ 17ರಿಂದ ಮಳೆ ಚುರುಕುಗೊಳ್ಳಲಿದ್ದು 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ,ಮೈಸೂರು, ತುಮಕೂರು, ವಿಜಯಪುರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. https://ainkannada.com/is-the-rat-infestation-increasing-in-your-house-if-so-do-this-and-get-rid-of-it/ ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದರೂ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಎಚ್ಎಎಲ್ನಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.7ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್…
Author: AIN Author
ಅನೇಕರ ಮನೆಯಲ್ಲಿ ಇಲಿಗಳ ಕಾಟವಿರುತ್ತದೆ ಆದರೆ ಅದನ್ನು ಕಡೆಗಣಿಸುತ್ತಾರೆ. ಕೆಲವೊಮ್ಮೆ ಇಲಿಗಳು ಅಡುಗೆ ಮನೆಯ ಸಾಮಗ್ರಿಗಳು, ಬಟ್ಟೆ ಬರೆಗಳನ್ನೆಲ್ಲಾ ತಿಂದು ಹಾಕುತ್ತದೆ. ಇದು ಬರೀ ಅಷ್ಟಕ್ಕೆ ಸೀಮಿತವಾಗಿಲ್ಲ. ಇಲಿಗಳಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. https://ainkannada.com/good-news-government-increases-honorarium-for-guest-teachers-and-lecturers/ ಇಲಿಗಳು ಮನೆಗೆ ಬರೋದು ಯಾರಿಗೂ ಇಷ್ಟವಿರೋದಿಲ್ಲ. ಯಾಕಂದ್ರೆ ಅವುಗಳಿಂದ ಆಗೋ ಉಪದ್ರ ಒಂದಾ, ಎರಡಾ? ಬಟ್ಟೆ ಕಟ್ ಮಾಡುತ್ತೆ, ದಿನಸಿ, ತರಕಾರಿಗಳನ್ನು ತಿನ್ನುತ್ತೆ ಹೀಗೆ ನಾನಾ ರೀತಿಯ ತೊಂದರೆಗಳೇ ಹೊರತು, ಒಂದೂ ಉಪಯೋಗವಂತು ಇಲ್ಲ. ಹಾಗಾದ್ರೆ ಹೀಗೆ ಉಪದ್ರ ಕೊಡೋ ಇಲಿ ಮನೆಗೆ ಯಾಕೆ ಬರುತ್ತೆ? ಹಾಗೂ ಅದನ್ನು ಈಸಿಯಾಗಿ ಓಡಿಸೋದು ಹೇಗೆ? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ. ಮೊದಲಿಗೆ, ನೀವು ಮನೆಯಲ್ಲಿ ತಂಡಿಟ್ಟ ತಿಂಡಿಗಳ ಪರಿಮಳವನ್ನು ಮೂಸಿ ಅಥವಾ ಜಿಡ್ಡಿನಾಂಶ ಇರೋದ್ರಿಂದ ಇಲಿಗಳು ಅಟೋಮ್ಯಾಟಿಕ್ ಆಗಿ ನಿಮ್ಮ ಮನೆಗೆ ಎಂಟ್ರಿ ಕೊಡುತ್ತದೆ. ಹಾಗೆ ಅಲ್ಲಿಯೇ ಜಾಂಡ ಊರುತ್ತವೆ. ಇದನ್ನು ಓಡಿಸಲು ಇಷ್ಟು ಮಾಡಿ ಸಾಕು. ರಾತ್ರಿ ಮಲಗುವ ಮುನ್ನ ಮನೆಯ ಎಲ್ಲಾ…
ಬೆಂಗಳೂರು:- ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಗೌರವ ಧನ ಹೆಚ್ಚಿಸಿ ಆದೇಶ ಹೊರಡಿಸಿದೆ. https://ainkannada.com/two-young-women-who-went-to-a-well-to-wash-clothes/ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆಯನ್ನು ತಲಾ 2,000 ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. ಮುಂದಿನ ಆದೇಶದವರೆಗೆ ಈ ಪರಿಷ್ಕೃತ ಗೌರವ ಸಂಭಾವನೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10,000 ರೂಪಾಯಿ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10,500 ಗೌರವ ಸಂಭಾವನೆ ನಿಗದಿಪಡಿಸಿತ್ತು. ಇದೀಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ 2,000 ರೂಪಾಯಿಗಳು ಸೇರ್ಪಡೆ ಆಗಿದೆ. ಪರಿಷ್ಕೃತ ಗೌರವ ಸಂಭಾವನೆಯು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 12,000 ರೂಪಾಯಿ ಸಿಗಲಿದೆ. ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 12,500 ರೂಪಾಯಿ ಸಿಗಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ 2,000 ಗಳಷ್ಟು ಗೌರವಧನ ಹೆಚ್ಚಳವಾಗಿದೆ
ಯಾದಗಿರಿ:- ಬಟ್ಟೆ ತೊಳೆಯಲು ಬಾವಿಗೆ ಹೋದ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಯಾದಗಿರಿಯ ಮೊಟ್ನಳ್ಳಿ ಗ್ರಾಮದ ಹೊರ ಭಾಗದಲ್ಲಿ ಜರುಗಿದೆ. https://ainkannada.com/dikeshi-bartade-african-lion-adopted-state-youth-congress/ ವೈಶಾಲಿ (17), ನವೀತಾ (16) ಮೃತರು. ಇಬ್ಬರು ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳೀಯರು ಶವವನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು:- ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಆಗಿರುವ DCM ಡಿಕೆಶಿ . ಅವರ ಹುಟ್ಟುಹಬ್ಬ ಗುರುವಾರ ಬಹಳ ಅರ್ಥಪೂರ್ಣವಾಗಿ ಅಭಿಮಾನಿಗಳು ಹಾಗೂಕಾರ್ಯಕರ್ತರು ಆಚರಿಸಿದರು. https://ainkannada.com/pakistan-is-not-the-case-for-our-country-bhairati-suresh/ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಾಲಯದಲ್ಲಿ ಆಫ್ರಿಕನ್ ಸಿಂಹವನ್ನು ದತ್ತು ಪಡೆಯಲಾಗಿದೆ. ಮಂಜುನಾಥ್ ಗೌಡ ಅವರ ನೇತೃತ್ವದ ಪ್ರದೇಶ ಯುವ ಕಾಂಗ್ರೆಸ್ ಒಂದು ವರ್ಷಕ್ಕೆ ದತ್ತು ಪಡೆದಿದ್ದು, ಪ್ರತಿ ವರ್ಷ ದತ್ತು ನವೀಕರಣಕ್ಕೆ ನಿರ್ಧರಿಸಿದೆ. ವರ್ಷಕ್ಕೆ ದತ್ತು ಪಡೆಯಲು ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಾಲಯಕ್ಕೆ 2 ಲಕ್ಷ ರೂ. ನೀಡಲಾಗಿದೆ. ಡಿಕೆ ಶಿವಕುಮಾರ್ ಈ ಬಾರಿ ತಮ್ಮ 63ನೇ ವರ್ಷದ ಹುಟ್ಟುಹಬ್ಬವನ್ನು ಡಿಕೆ ಶಿವಕುಮಾರ್ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳದೇ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ವಿಜಯಪುರ:- ಪಾಕಿಸ್ತಾನ ಎಂಬುದು ನಮ್ಮ ದೇಶಕ್ಕೆ ಲೆಕ್ಕನೇ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಭೈರತಿ ಸುರೇಶ್ ಹೇಳಿದ್ದಾರೆ. https://ainkannada.com/this-pile-is-likely-to-come-to-the-doorstep-for-a-marriage-relationship-fridays-fate-16-may-2025/ ಪಾಕ್ ಕದನ ವಿರಾಮ ಉಲ್ಲಂಘಟನೆ ವಿಚಾರವಾಗಿ ಮಾತನಾಡಿದ ಅವರು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವವರ ಬಿಡುವರ ಪ್ರಶ್ನೆಯೇ ಇಲ್ಲ. ಪಾಕಿಸ್ತಾನ ಎಂಬುದು ನಮ್ಮ ದೇಶಕ್ಕೆ ಲೆಕ್ಕನೇ ಅಲ್ಲ. ಪಾಕ್ ನಲ್ಲಿ ತಿನ್ನಕ್ಕೆ ಊಟ ಇಲ್ಲ ಓಡಾಡಲು ರಸ್ತೆ ಇಲ್ಲ. ನಮ್ಮ ದೇಶದ ಮುಸ್ಲಿಂಮರಿಗೆ ಸಹಿತ ದೇಶಭಕ್ತಿ ಇದೆ, ಆಮೇಲೆ ಜಾತಿ ಜನಾಂಗ. ಯುದ್ದವಾಗಲಿ ಏನೇ ಆಗಲಿ ದೇಶದೊಟ್ಟಿಗೆ ನಾವಿದ್ದೇವೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆ, ಇಡೀ ಪ್ರಪಂಚದಲ್ಲಿ ಅತ್ಯಂತ ಬಲಯುತವಾಗಿದೆ. ಯಾವುದೇ ದೇಶದ ಮುಂದೆ ಕೈ ಒಡ್ಡಿ ನಿಲ್ಲುವ ಪರಿಸ್ಥಿತಿ ನಮ್ಮ ದೇಶಕ್ಕಿಲ್ಲ. ನಮ್ಮ ದೇಶ ಸದೃಡವಾಗಿದೆ, ಮಿಲಿಟರಿ ಸಿಸ್ಟಮ್ ಸದೃಡವಾಗಿದೆ. ಪಾಕಿಸ್ತಾನ ಒಳಗೊಂಡಂತೆ ಇಡೀ ಪ್ರಪಂಚದ ಯಾವುದೇ ಬಲಯುತವಾದ ಕ್ಷೇತ್ರದ ಮೇಲೆ ಹೋಗಿ ಹೊಡೆದಾಕುವ ಶಕ್ತಿ ನಮಗಿದೆ ಎಂದು ಸಚಿವ ಭೈರತಿ ಸುರೇಶ ಹೇಳಿದ್ದಾರೆ.
ಸೂರ್ಯೋದಯ – 5:47 ಬೆ ಸೂರ್ಯಾಸ್ತ – 6:37 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವೈಶಾಖ ಮಾಸ, ವಸಂತ ಋತು, ತಿಥಿ – ಚೌತಿ ನಕ್ಷತ್ರ – ಮೂಲ ಯೋಗ – ಸಿದ್ಧ ಕರಣ – ಬವ ಮಳೆ ನಕ್ಷತ್ರ :ಕೃತಿಕಾ ರಾಹು ಕಾಲ – 10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 07:30 ದಿಂದ 09:00 ವರೆಗೆ ಬ್ರಹ್ಮ ಮುಹೂರ್ತ – 4:11 ಬೆ. ದಿಂದ 4:59 ಬೆ. ವರೆಗೆ ಅಮೃತ ಕಾಲ – 9:16 ಬೆ. ದಿಂದ 11:00 ಬೆ. ವರೆಗೆ ಅಭಿಜಿತ್ ಮುಹುರ್ತ – 11:46 ಬೆ ದಿಂದ 12:38 ಮ. ವರೆಗೆ ಮೇಷ ರಾಶಿ: ಬೆಳೆ ಕಾಳು ವ್ಯಾಪಾರಸ್ಥರಿಗೆ ಅಧಿಕ ಲಾಭ, ಕುಟುಂಬದ ಸಮಸ್ಯೆಗಳು ಒಮ್ಮತ ಮನಸ್ಸಿನಿಂದ ಬಗೆಹರಿಯಲಿವೆ, ಜವಾಬ್ದಾರಿಯ ಹುದ್ದೆ…
ತಿರುವನಂತಪುರಂ:- ತಾತ್ಕಾಲಿಕ ಟೆಂಟ್ ಕುಸಿದು 24 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಜನಪ್ರಿಯ ರೆಸಾರ್ಟ್ವೊಂದರಲ್ಲಿ ಜರುಗಿದೆ. https://ainkannada.com/such-an-insult-to-ambedkar-in-the-cms-home-district-miscreants-smeared-the-architect-of-the-constitution/ ನಿಶ್ಮಾ ಮೃತ ಮಹಿಳೆ. ಮರದ ಕಂಬಗಳು ಮತ್ತು ಒಣ ಹುಲ್ಲನ್ನು ಬಳಸಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್ ನಾಲ್ವರು ಪ್ರವಾಸಿಗರ ಮೇಲೆ ಬಿದ್ದಿದೆ. ಘಟನೆಯಲ್ಲಿ ಯುವತಿ ನಿಶ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಂಜನಗೂಡು:- ಕಳೆದ ಕೆಲವು ದಿನಗಳ ಹಿಂದಷ್ಟೆ ಸಿಎಂ ಸ್ವಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಿದ್ದ ಕಿಡಿಕೇಡಿಗಳು.ಇದೀಗ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಅಳವಡಿಸಿರುವ ಅಂಬೇಡ್ಕರ್ ರವರ ನಾಮಪಲಕಕ್ಕೆ ಅಪಮಾನ ಮಾಡಿ ಕೃತ್ಯ ಎಸಗಿದ್ದಾರೆ https://ainkannada.com/are-you-worried-that-youre-too-fat-dont-eat-too-many-of-these-types-of-fruits/ ಅಂಬೇಡ್ಕರ್ ಭಾವಚಿತ್ರ ಹರಿದು ಸಗಣಿ ಎರಚಿ ಮಣ್ಣು ಬಳಿದು ಅಪಮಾನ ಮಾಡಿರುವ ಕಿಡಿಗೇಡಿಗಳಿಂದ ಹಲ್ಲರೆ ಗ್ರಾಮದಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣ ನರ್ಮಾಣ ಉಂಟಾಗಿದೆ. ಕಳೆದ ವರ್ಷ ಅಂಬೇಡ್ಕರ್ ನಾಮಪಲಕ ಅಳವಡಿಸುವ ವಿಚಾರದಲ್ಲಿ ಉಂಟಾಗಿದ್ದ ಭಾರಿ ಗಲಾಟೆ.ಎರಡು ಕೋಮಿನ ನಡುವೆ ಗಲಾಟೆ ಘರ್ಷಣೆ ಹಾಗಿ ಮನೆ ಮನೆಗೆ ಕಲ್ಲು ಹೊಡೆದು ಮನೆಗಳ ಮೇಲ್ಚಾವಣಿ ಹಾಗೂ ನಲ್ಲಿಗಳನ್ನು ಧ್ವಂಸಗೊಳಿಸಲಾಗಿತ್ತು ಸುಮಾರು 30ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಶಾಸಕರುಗಳಾದ ದರ್ಶನ್ ದೃವನಾರಾಯಣ್ ಹಾಗೂ ಅನಿಲ್ ಚಿಕ್ಕಮಾಧು ನೇತೃತ್ವದಲ್ಲಿ ಸಂದಾನ ಸಭೆ ನೆಡೆಸಿ ಪೊಲೀಸ್ ಬಿಗಿ ಬ ಪೊಲೀಸ್ ಬಂದೋಬಸ್ತ್ ನಡುವೆ ಅಂಬೇಡ್ಕರ್ ರವರ ನಾಮಪಲಕ ಅಳವಡಿಸಿ ಎರಡು ಸಿ ಸಿ ಕ್ಯಾಮೆರಾ…
ಇಂದಿನ ದಿನಗಳಲ್ಲಿ ದೇಹದ ತೂಕ ಹೆಚ್ಚಾಗಿದ್ದರೂ ಕಷ್ಟ, ಕಡಿಮೆ ಇದ್ದರೂ ಕಷ್ಟ ಎನ್ನುವ ಪರಿಸ್ಥಿತಿ ಬಂದೊದಗಿದೆ! ಮನುಷ್ಯನಿಗೆ ದೇಹದ ತೂಕ, ಹೆಚ್ಚಾಗಿ ಬೊಜ್ಜು ಆವರಿಸಿಕೊಂಡರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟಾಗುತ್ತದೆ, ಅದೇ ರೀತಿ ಕಡಿಮೆ ತೂಕ ಇರುವ ಜನರಿಗೂ ಕೂಡ ಇದೇ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸಮಸ್ಯೆಯಿಂದ ಹೊರಬರಲು, ಹೆಚ್ಚಿನವರು ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಏನಾದರೂ ಸಲಹೆ ಕೊಡಿ ಎಂದು ಪೌಷ್ಠಿಕಾಂಶ ತಜ್ಞರ ಬಳಿ ಅಥವಾ ಫಿಟ್ನೆಸ್ ಸೆಂಟರ್ಗಳಿಗೆ ಹೋಗುವವರ ಸಂಖ್ಯೆಯೂ ಈಗ ಹೆಚ್ಚಾಗಿದೆ. https://ainkannada.com/big-shock-for-alcohol-lovers-oil-prices-hiked-for-the-3rd-time-which-brand-costs-more/ ದಪ್ಪ ಇರುವವರಿಗೆ ಸಣ್ಣ ಆಗಬೇಕೆಂಬ ಆಸೆ. ಸಣ್ಣ ಇರುವವರಿಗೆ ದಪ್ಪ ಆಗಬೇಕೆಂಬ ಆಸೆ. ಹೀಗಾಗಿ ಇವೆರಡೂ ಕೆಟಗರಿಯ ಜನರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ತಾವು ದಿನನಿತ್ಯ ಸೇವಿಸುವ ಆಹಾರಪದ್ಧತಿಗಳ ಬಗ್ಗೆ ಕೂಡ ಹೆಚ್ಚಿನ ಜಾಗರೂಕತೆ ವಹಿಸ ಬೇಕು. ಇಂದಿನ ಲೇಖನದಲ್ಲಿ ದೇಹದ ತೂಕವನ್ನು ಕಡಿಮೆ ಮಾಡಲು ಬಯಸುವವರು, ಯಾವೆಲ್ಲಾ ಬಗೆಯ ಹಣ್ಣುಗಳಿಂದ ದೂರ ವಿರಬೇಕು ಎಂಬುದನ್ನು ನೋಡೋಣ…. ಅವಕಾಡೊ…