Author: AIN Author

ಬೆಂಗಳೂರು:- ನಗರದಲ್ಲಿ ಮೆಟ್ರೋಗೆ ಲಕ್ಷ- ಲಕ್ಷ ಮಂದಿ ಅವಲಂಬಿತರಾಗಿದ್ದಾರೆ. ಇಂತಹ ಪ್ರಯಾಣಿಕರು ಇಂದು ಗಮನವಿಟ್ಟು ಸುದ್ದಿ ನೋಡಲೇಬೇಕು. ಏಕೆಂದರೆ ಈ ವಾರದಲ್ಲಿ ಒಂದು ದಿನ ಮೆಟ್ರೋ ಸಮಯದಲ್ಲಿ ಬದಲಾವಣೆ ಆಗಲಿದೆ. https://ainkannada.com/big-shock-for-alcohol-lovers-oil-prices-hiked-for-the-3rd-time-which-brand-costs-more/ ಮೇ 17ರಿಂದ ಐಪಿಎಲ್‌ನ ಕೊನೆಯ ಹಂತದ ಪಂದ್ಯಗಳು ಮತ್ತೆ ಆರಂಭಗೊಳ್ಳಲಿದೆ. ಈ ಹಿನ್ನೆಲೆ ಬೆಂಗಳೂರಿನ ಪಂದ್ಯಗಳ ಸಂದರ್ಭದಲ್ಲಿ ಸಾರ್ವಜನಿಕರ ಅನೂಕೂಲಕ್ಕಾಗಿ ನಮ್ಮ ಮೆಟ್ರೋ ಪಂದ್ಯಗಳ ದಿನ ಸಮಯಾವಧಿ ವಿಸ್ತರಣೆ ಮಾಡಿದೆ. ಮೇ 17 ಮತ್ತು ಮೇ 23ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ. ಈ ದಿನಗಳಲ್ಲಿ ನಮ್ಮ ಮೆಟ್ರೋ ಎಲ್ಲಾ ಟರ್ಮಿನಲ್ ಅಂದರೆ ವೈಟ್ ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ಮಧ್ಯರಾತ್ರಿ 1ರ ವರೆಗೆ ವಿಸ್ತರಿಸಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1:35ಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ನಮ್ಮ ಮೆಟ್ರೋ ಕೋರಿದೆ.

Read More

ಬೆಂಗಳೂರು:- ಜನಾದೇಶದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನತೆಗೆ ಒಂದಿಲ್ಲೊಂದು ಬರೆ ಎಳೆದಿದ್ದು, ಗ್ಯಾರಂಟಿ ಸಹವಾಸ ಸಾಕಪ್ಪ ಸಾಕು ಎನ್ನುತ್ತಿದ್ದಾರೆ. ಅದರಂತೆ ಇದೀಗ ಮತ್ತೊಮ್ಮೆ ಮದ್ಯಪ್ರಿಯರಿಗೆ ಬಿಗ್ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಕರ್ನಾಟಕದಲ್ಲಿ ಮತ್ತೆ ಐಎಂಎಲ್ ಮೇಲಿನ ದರ ಏರಿಕೆ ಆಗಿದೆ. https://ainkannada.com/countdown-to-the-restart-of-ipl-rcb-gets-the-upper-hand/ ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಕಾರಣ 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಬರೋಬ್ಬರಿ 38600 ಕೋಟಿ ರುಪಾಯಿ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ಟಾರ್ಗೆಟ್ ನೀಡಲಾಗಿದೆ ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಈ ಹೊಸ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಮುಂದಾಗಿದೆ. ಇನ್ನೂ ಈಗಾಗಲೇ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು,16 ಸ್ಲ್ಯಾಬ್ ಗಳಲ್ಲಿ 1 ರಿಂದ 4 ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಏರಿಕೆ…

Read More

ಐಪಿಎಲ್ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದ್ದು, ತವರಲ್ಲಿ RCB ಪಂದ್ಯ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. https://ainkannada.com/is-your-head-bald-use-onion-oil-like-this-to-grow-hair/ ರಜತ್ ಪಾಟೀದಾರ್​ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಕೋಲ್ಕತ್ತ ನೈಟ್​ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆರ್​ಸಿಬಿ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಹಂಚಿಕೊಂಡಿದ್ದು, ಕ್ಯಾಪ್ಟನ್ ಫುಲ್ ಫಿಟ್ ಆಗಿದ್ದಾರೆ. ವಿಡಿಯೋದಲ್ಲಿ ರಜತ್ ಪಾಟೀದಾದರ್, ನೆಟ್ಸ್​​ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದಾರೆ. ಆ ಮೂಲಕ ರಜತ್ ಪಾಟೀದಾರ್​ ಫಿಟ್ ಆಗಿದ್ದಾರೆ ಎಂಬ ಸಂದೇಶವನ್ನು ಆರ್​ಸಿಬಿ ನೀಡಿದೆ ಆರ್​ಸಿಬಿ ಕ್ಯಾಂಪ್​ಗೆ ಬಂದ ಬೆನ್ನಲ್ಲೇ ರಜತ್ ಪಾಟೀದಾರ್ ಸಮಯ ವ್ಯರ್ಥ ಮಾಡದೇ ಬ್ಯಾಟ್ ಹಿಡಿದು ಪ್ರ್ಯಾಕ್ಟೀಸ್​ಗೆ ಧುಮುಕಿದ್ದಾರೆ. ನಾಡಿದ್ದು ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಆರ್​ಸಿಬಿ ಪಂದ್ಯವನ್ನ ಆಡಲಿದೆ. ಅಧಿಕೃತವಾಗಿ ಪ್ಲೇ-ಆಫ್​ ಪ್ರವೇಶಿಸಲು ಆರ್​ಸಿಬಿಗೆ ಕೆಕೆಆರ್​ ವಿರುದ್ಧ ಗೆಲುವು ಅಗತ್ಯವಾಗಿದೆ.

Read More

ತಲೆಯ ಮೇಲಿನ ಕೂದಲು ವ್ಯಕ್ತಿಯ ದೇಹದ ಪ್ರಮುಖ ಭಾಗವಾಗಿದೆ ಏಕೆಂದರೆ ಕೂದಲು ಕೂಡ ವ್ಯಕ್ತಿಯ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಕೂದಲು ಇಲ್ಲದೆ, ವ್ಯಕ್ತಿಯ ಸೌಂದರ್ಯವು ಅಪೂರ್ಣವಾಗಿ ಉಳಿಯುತ್ತದೆ, ಕೂದಲು ಇಲ್ಲದೆ ಯಾವುದೇ ವ್ಯಕ್ತಿಯ ಸೌಂದರ್ಯವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಆದ್ದರಿಂದ, ತಲೆಯ ಕೂದಲು ಪ್ರತಿಯೊಬ್ಬ ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ಆದರೆ ತಪ್ಪು ಆಹಾರ ಪದ್ಧತಿ ಮತ್ತು ಒತ್ತಡದ ಹೊರತಾಗಿಯೂ, ಕೂದಲು ಉದುರುವಿಕೆಯ ಹಿಂದೆ ಕುಂಡಲಿಯ ಗ್ರಹಗಳ ಪ್ರಭಾವವಿರುತ್ತದೆ. ಗ್ರಹಗಳ ಪ್ರಭಾವದಿಂದಲೂ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲು ಆರಂಭವಾಗುತ್ತದೆ. ಈ ಸಮಸ್ಯೆಗೆ ಕಾರಣವಾಗುವ ಗ್ರಹಗಳು ಯಾವುವು, ಇದಕ್ಕೆ ಪರಿಹಾರವೇನು ಎನ್ನುವ ಮಾಹಿತಿ ಇಲ್ಲಿದೆ. https://ainkannada.com/congress-is-trying-to-divide-bengaluru-r-ashok-outraged/ ಕೂದಲು ಉದುರುವುದು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ, ಇದು ಹೆಚ್ಚಾಗಿ ಜೀನ್ಸ್‌, ಹಾರ್ಮೋನುಗಳ ಅಸಮತೋಲನ, ಒತ್ತಡ ಮತ್ತು ಪರಿಸರ ಅಂಶಗಳಿಂದಾಗಿ ಆಗುತ್ತದೆ. ಹಲವಾರು ಚಿಕಿತ್ಸೆಗಳು ಲಭ್ಯವಿದ್ದರೂ, ಗಮನ ಸೆಳೆದಿರುವ ಒಂದು ನೈಸರ್ಗಿಕ ಪರಿಹಾರವೆಂದರೆ ಈರುಳ್ಳಿ ಎಣ್ಣೆ. ಸಲ್ಫರ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಈರುಳ್ಳಿ ಎಣ್ಣೆ, ಕೂದಲಿನ…

Read More

ಬೆಂಗಳೂರು:- ಬೆಂಗಳೂರು ಒಡೆಯಲು ಕಾಂಗ್ರೆಸ್ ಮುಂದಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. https://ainkannada.com/are-you-planning-to-build-a-house-in-bengaluru-if-so-follow-the-bbmp-rules/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಒಬ್ಬರು ಯುದ್ಧ ಬೇಕು ಎಂದರೆ ಮತ್ತೊಬ್ಬರು ಶಾಂತಿ ಬೇಕು ಎನ್ನುತ್ತಾರೆ. ಎಐಸಿಸಿಯಲ್ಲಿ ಈ ಬಗ್ಗೆ ಸರಿಯಾದ ನಿಲುವು ಪ್ರಕಟಿಸಲಿ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಅಮೆರಿಕದ ಬಳಿ ಹೋಗಿ ಭಿಕ್ಷೆ ಬೇಡಿದ್ದನ್ನು ನೋಡಿದ್ದೇವೆ. ಮುಂಬೈಯಲ್ಲಿನ ಉಗ್ರ ದಾಳಿಯಲ್ಲಿ 175 ಜನರು ಸತ್ತಿದ್ದರು. ಆಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಪ್ರತಿಕ್ರಿಯೆ ನೀಡಲೇ ಇಲ್ಲ. ಆದರೆ ಈಗ ಪ್ರಧಾನಿ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸಿಂಧೂ ನದಿ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ. ಅದನ್ನು ಪ್ರಧಾನಿ ಮೋದಿ ರದ್ದು ಮಾಡಿದ್ದಾರೆ. ಭಯೋತ್ಪಾದಕ ದಾಳಿಗಳಾದಾಗಲೇ ಕಾಂಗ್ರೆಸ್ ಅದನ್ನು ಮಾಡಬೇಕಿತ್ತು. ಇದನ್ನು ಸಚಿವ ಸಂತೋಷ್ ಲಾಡ್ ಅರಿಯಬೇಕು ಎಂದು ಹೇಳಿದರು. ಇಡೀ ಜಮ್ಮು ಕಾಶ್ಮೀರ ಪ್ರಧಾನಿ ಮೋದಿಯವರ ಪರವಾಗಿ ನಿಂತಿದೆ. ಅಲ್ಲಿನ ಮುಖ್ಯಮಂತ್ರಿ ಕೂಡ ಕೇಂದ್ರ ಸರ್ಕಾರಕ್ಕೆ ಬೆಂಬಲ…

Read More

ಬೆಂಗಳೂರು:- ಬೆಂಗಳೂರಿನಂತ ಮಹಾನಗರಗಳಲ್ಲಿ ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಆದಾಗ್ಯೂ, ಲಕ್ಷಾಂತರ ಜನರು ಬೆಂಗಳೂರಿನಲ್ಲಿ ಮನೆ ಕಟ್ಟುವ ಅಥವಾ ಇತರ ಮಾದರಿಯ ಕಟ್ಟಡದ ಮಾಲೀಕರಾಗುವ ಕನಸು ಕಾಣುತ್ತಾರೆ. ಈ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಅವರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಟ್ಟಡ ನಿರ್ಮಾಣ ಅನುಮತಿ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅನುಮೋದನೆ ಪಡೆಯಲು ನೀವು ಏನೆಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿಸ್ತೃತವಾಗಿ ಮಾಹಿತಿ ಕೊಡಲಾಗಿದೆ. https://ainkannada.com/do-you-eat-mangoes-and-peel-so-see-this-story/ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಮನೆ ಕಟ್ಟುವ ಮುಂಚೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಓಸಿ ಸರ್ಟಿಫಿಕೆಟ್​ ಪಡೆಯುವುದು ಕಡ್ಡಾಯವಾಗಿದೆ. ಆ ಬಳಿಕ ಮಾತ್ರ ವಿದ್ಯುತ್ ಮತ್ತು ನೀರಿನ ಸಂಪರ್ಕ ಸಿಗುತ್ತದೆ. ಸುಪ್ರಿಂಕೋರ್ಟ್ ಆದೇಶದಂತೆ OC ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್​ರಿಂದ ಆದೇಶ ಹೊರಡಿಸಲಾಗಿದೆ. ಸುಪ್ರಿಂಕೋರ್ಟ್ ಆದೇಶದಂತೆ ಓಸಿ ಸರ್ಟಿಫಿಕೆಟ್ ಕಡ್ಡಾಯವಾಗಿದೆ. ಬೆಂಗಳೂರಿನ ‘ಎ’ ಖಾತಾ ಹಾಗೂ ‘ಬಿ’ ಖಾತಾ ನಿವೇಶನವಾಗಿರಲಿ…

Read More

ಬೇಸಿಗೆ ಕಾಲ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಭರಾಟೆ ಜೋರಾಗುತ್ತದೆ, ಸಿಹಿಯಾದ ರಸಭರಿತ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಬೇಸಿಗೆಗಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ. ಮಾವಿನ ಹಣ್ಣನ್ನು ತಿಂದಾಗ ಅದರ ಸಿಪ್ಪೆ ಸುಲಿದು ಕಸಕ್ಕೆ ಎಸೆಯುತ್ತಾರೆ. ಆದರೆ ಮಾವಿನ ಹಣ್ಣಿನ ಹೊರತಾಗಿ ಅದರ ಸಿಪ್ಪೆಯನ್ನೂ ತಿನ್ನಬಹುದು ಎಂಬುದು ನಿಮಗೆ ತಿಳಿದಿದೆಯೇ. ಮಾವಿನ ಹಣ್ಣಿನ ಸಿಪ್ಪೆಯನ್ನು ತಿನ್ನುವುದು ರುಚಿ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. https://ainkannada.com/drinking-water-crisis-women-protest-in-hubballi-holding-empty-pots/ ನಾವು ಸಾಮಾನ್ಯವಾಗಿ ಮಾವಿನಹಣ್ಣನ್ನು ತಿನ್ನುವುದು ಅದರ ಹಣ್ಣಿನ ಭಾಗವನ್ನಷ್ಟೇ, ಆದರೆ ಸಿಪ್ಪೆಯನ್ನು ಎಸೆಯುವುದು ರೂಢಿಯಾಗಿದೆ. ಆದರೆ ಈಗಾಗಲೇ ಹಲವರು ಮಾವಿನ ಸಿಪ್ಪೆಯನ್ನು ತಿನ್ನಬಹುದೇ? ಎಂದು ಆಶ್ಚರ್ಯಕರವಾಗಿ ಕೇಳುತ್ತಾರೆ. ಇದಕ್ಕೆ ಉತ್ತರ, ಹೌದು ಎನ್ನುತ್ತಾರೆ ತಜ್ಞರು. ಮಾವಿನ ಸಿಪ್ಪೆಯು ನಿಜಕ್ಕೂ ಉತ್ತಮವಾಗಿದ್ದು, ಪೋಷಕಾಂಶಗಳಿಂದ ಕೂಡಿದೆ. ಆದರೆ ಇದು ಎಲ್ಲರಿಗೂ ಅಲ್ಲ, ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಇದನ್ನು ಸೇವಿಸಲಾಗದು. ಮಾವಿನ ಸಿಪ್ಪೆಯು ಬಹುಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಆಮ್ಲಜನಕದಿಂದ ರಕ್ಷಿಸುವ ಆಂಟಿಆಕ್ಸಿಡೆಂಟ್‌ಗಳು, ದೇಹದಲ್ಲಿ ಉರಿಯೂತವನ್ನು ಕಡಿಮೆ…

Read More

ಅದು ಮದುವೆ ಕಾರ್ಯಕ್ರಮ ಇರಬಹುದು ಅಥವಾ ಬೇರೆ ಯಾವುದೋ ಫಂಕ್ಷನ್‌ ಇರಬಹುದು, ಊಟದ ಕೊನೆಯಲ್ಲಿ ಮೊಸರು ಇದ್ದೇ ಇರುತ್ತದೆ!ಇಲ್ಲಾಂದ್ರೆ ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗೆ ಹೋಗಿ ಸೌತ್ ಇಂಡಿಯಾ ಮೀಲ್ಸ್ ಥಾಲಿ ಆರ್ಡರ್ ಮಾಡಿದರೆ, ಊಟದ ತಟ್ಟೆಯ ಪಕ್ಕ ಒಂದು ಸಣ್ಣ ಕಪ್ ಮೊಸರು ಇದ್ದೇ ಇರುವುದು! ಇದಕ್ಕೆ ಕಾರಣ ಇಷ್ಟೇ ಹೊಟ್ಟೆ ತುಂಬಾ ಊಟ ಮಾಡಿದ ನಂತರ, ಒಂದು ಸಣ್ಣ ಕಪ್ ಮೊಸರು ಸೇವನೆ ಮಾಡುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯು ಸರಾಗವಾಗಿ ನಡೆಯುವುರ ಜೊತೆಗೆ ಹಲವಾರು ರೀತಿಯಲ್ಲಿ ಪ್ರಯೋಜನಗಳು ಸಿಗುತ್ತವೆ, ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ನಿಂತಿಲ್ಲ. https://ainkannada.com/lucky-baskhar-bank-robbery-in-cinema-style-bank-employee-andar-was-having-fun-in-goa-after/ ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ದೇಹ ಹೈಡ್ರೇಟೆಡ್ ಆಗಿರುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಮೊಸರನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಬಿ12 ನಂತಹ ಅನೇಕ ಪೋಷಕಾಂಶಗಳಿವೆ. ಈ ವಿಚಾರ ನಿಮಗೆ ಗೊತ್ತಿರಲಿ. ಮೊಸರು ತಿಂದ ಬೆನ್ನಲ್ಲೇ ನೀರು ಕುಡಿಯಬಾರದು. ಮೊಸರು ತಿಂದ ತಕ್ಷಣ ನೀರು ಕುಡಿಯುವುದು ಹಾನಿಕಾರಕ…

Read More

ವಿಜಯಪುರ:- ಮಹಾತ್ಮ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಯತ್ನಾಳ ವಿರುದ್ಧ FIR ದಾಖಲಾಗಿದೆ. ಯತ್ನಾಳ ವಿರುದ್ಧ ಆದರ್ಶನಗರ ಪೊಲೀಸ್​ ಠಾಣೆಯಲ್ಲಿ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಎನ್ನುವರು ಪ್ರಕರಣ ದಾಖಲು ಮಾಡಿದ್ದಾರೆ. https://ainkannada.com/daughter-of-a-jackfruit-farmer-who-scored-625-out-of-625-in-sslc-bjp-leader-provides-financial-assistance/ ಆದರ್ಶ ನಗರದಲ್ಲಿ ಮೇ 12 ರಂದು ನಡೆದ ಬಸವೇಶ್ವರ ದೇವಾಸ್ಥಾನದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿರುವ ಆರೋಪ ಮಾಡಲಾಗಿದೆ. ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ಪಿತಾಮಹ‌. ನಮ್ಮ ದೇಶವನ್ನು ಹೊಡೆದು ಬೇರೆಯವರಿಗೆ ಪಾಕಿಸ್ತಾನ ಮಾಡಿಕೊಟ್ಟರು. ಆದರೂ ನಾವು ರಾಷ್ಟ್ರಪಿತ ಎಂದು ಬೀದಿ ಬೀದಿಗಳಲ್ಲೂ ಅವರ ಮೂರ್ತಿಗಳುನ್ನು ಸ್ಥಾಪನೆ ಮಾಡಿದ್ದೇವೆ ಎಂದು ಯತ್ನಾಳ ಹೇಳಿದ್ದರು. ಸದ್ಯ ಈ ಸಂಬಂಧ ಯತ್ನಾಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ದೂರು ನೀಡಿರುವ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಅವರಿಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

Read More

ದೊಡ್ಡಬಳ್ಳಾಪುರ : ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ತಾಲೂಕಿನ ಮೆಳೆಕೋಟೆ ಕ್ರಾಸ್ ಬಳಿ ಇರುವ ಎಸ್ ಜೆ ಸಿ ಆರ್ ಶಾಲೆಯ ವಿದ್ಯಾರ್ಥಿ ರಂಜಿತಾ ಗೆ ಬಿಜೆಪಿ ಮುಖಂಡ, ವಕೀಲರು ಆದ ಪ್ರತಾಪ್ ಆರ್ ಸಹಾಯ ಧನ ನೀಡಿ ಗೌರವಿಸಿದರು. https://ainkannada.com/the-five-guarantee-schemes-are-being-implemented-by-the-gram-panchayat-a-guarantee-in-favor-of-the-exploited/ ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು  ಭಾ.ಕೃ.ಅ.ಪ – ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರುಗಳ ಸಹಯೋಗದೊಂದಿಗೆ “ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ ಮತ್ತು ಕೃಷಿ – ವಿಜ್ಞಾನಿಗಳೊಂದಿಗೆ” ಸಂವಾದ ಕಾರ್ಯಕ್ರಮದಲ್ಲಿ ಹಲಸು ಬೆಳೆಗಾರನ ಮಗಳಿಗೆ ಸಹಾಯ ಧನ ನೀಡಿದರು. ಇದೆ ವೇಳೆ AIN ಕನ್ನಡ ಜೊತೆ ಬಿಜೆಪಿ ಮುಖಂಡ, ವಕೀಲ ಪ್ರತಾಪ್,ಆರ್ ಮಾತನಾಡಿ ರೈತನ ಮಗಳು ರಂಜಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರವುದು ಸೊಂತೋಷದ ವಿಷಯ. ನಾವು ಕೂಡ ಬಡ…

Read More