Author: AIN Author

ಬೆಂಗಳೂರು:-ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್ ನಲ್ಲಿ ಇತ್ತೀಚೆಗೆ ನಡೆದಿದ್ದ ʻಆಪರೇಷನ್‌ ಸಿಂಧೂರʼ ವಿಜಯೋತ್ಸವದ ವೇಳೆ ಟೆಕ್ಕಿಯೋರ್ವ ಪಾಕ್ ಪರ ಘೋಷಣೆ ಕೂಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟೆಕ್ಕಿಯನ್ನು ಅರೆಸ್ಟ್ ಮಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. https://ainkannada.com/the-act-of-the-sinful-son-who-murdered-his-father-and-faked-an-electric-shock-is-revealed-on-cctv/ ಛತ್ತಿಸ್‌ಗಢ ಮೂಲದ ಶುಭಾಂಶು ಶುಕ್ಲಾ(26) ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ಟೆಕ್ಕಿ ಆಗಿ ಕೆಲಸ ಮಾಡಿಕೊಂಡಿದ್ದ, ವೈಟ್‌ಫೀಲ್ಡ್‌ನ ಪ್ರಶಾಂತ್‌ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಶುಭಾಂಶು ಶುಕ್ಲಾ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ. ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಈ ವೇಳೆ ಆತಂಕಗೊಂಡ ಕೆಲ ಪಿಜಿ ಯುವಕರು ಹೊರಬಂದು ನೋಡಿದಾಗ ಶುಭಾಂಶು ಬಾಲ್ಕನಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ…

Read More

ತುಮಕೂರು:- ಹೆತ್ತಪ್ಪನನ್ನ ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪಾಪಿ ಮಗನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ತುಮಕೂರು‌ ಜಿಲ್ಲೆ ಕುಣಿಗಲ್ ನಲ್ಲಿ ಜರುಗಿದೆ. https://ainkannada.com/couple-threatens-delivery-boy-with-money-only-if-he-speaks-marathi/ ಎಸ್, ಈ ಖತರ್ನಾಕ್ ಮಗನ ಕೊಲೆಯ ಅಸಲಿಯತ್ತು ಬಟಾ ಬಯಲಾಗಿದ್ದು, ತಂದೆಯನ್ನೇ ಪರಲೋಕಕ್ಕೆ‌ ಕಳಿಸಿ ಏನು ಗೊತ್ತಿಲ್ಲದಂತಿದ್ದವ ಇದೀಗ ಜೈಲು ಪಾಲಾಗಿದ್ದಾನೆ. ಈ ಪಾಪಿ ಮಗನ ನೀಚ ಕೃತ್ಯವನ್ನು ಸಿಸಿ ಕ್ಯಾಮೆರಾ ಬಯಲು ಮಾಡಿದೆ. ಹೌದು, ಮೇ.11 ರಂದು ಕುಣಿಗಲ್ ನ ಅಪೋಲೋ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ನಾಗೇಶ್(55) ಮೃತದೇಹ ಪತ್ತೆಯಾಗಿತ್ತು. ಬೆರಳಿಗೆ ಕರೆಂಟ್ ಶಾಕ್ ಹೊಡೆದು ಸತ್ತ ರೀತಿಯಲ್ಲಿ ನಾಗೇಶ್ ಶವ ಪತ್ತೆಯಾಗಿತ್ತು. ಅಲ್ಲದೇ ಅಸಹಜ ಸಾವು ಎಂದು ಎಲ್ಲಾ ಅಂತ್ಯ ಕ್ರಿಯೆ ಮುಗಿಸಲಾಗಿತ್ತು. ಆದರೆ ಸಹೋದರಿ ಸವಿತ ಈ ಬಗ್ಗೆ ಕೊಂಚ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟಿದ್ದರು. ಅಲ್ಲದೇ ಸಿಸಿಟಿವಿ ಪರಿಶೀಲನೆ ಮಾಡುವಂತೆ ಹೇಳಿದರು. ಈ ವೇಳೆ ತನಿಖೆ ಕೈಗೊಂಡ ಪೊಲೀಸರು, ಐಸ್ ಕ್ರೀಂ ಫ್ಯಾಕ್ಟರಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ವಶಪಡಿಸಿಕೊಂಡಿದ್ದರು.…

Read More

ಮುಂಬೈ:- ಮರಾಠಿ ಗೊತ್ತಿರದ ಡೆಲಿವರಿ ಬಾಯ್ ಗೆ ದಂಪತಿ ಧಮ್ಕಿ ಹಾಕಿರುವ ಘಟನೆ ಮುಂಬೈನ ಭಾಂಡಪ್‌ನಲ್ಲಿರುವ ಸಾಯಿ ರಾಧೆ ಕಟ್ಟಡದಲ್ಲಿ ಜರುಗಿದೆ. https://ainkannada.com/torrential-rain-man-goes-missing-after-slipping-into-drain-during-oil-spill/ ಪಿಜ್ಜಾ ಡೆಲಿವರಿ ಬಾಯ್‌ ಆರ್ಡರ್‌ ಕೊಡಲು, ರೋಹಿತ್ ಲಾವಾರೆ ಅವರ ಮನೆ ಬಾಗಿಲಿಗೆ ಬಂದಾಗ ‘ಮರಾಠಿಯಲ್ಲಿ ಮಾತನಾಡು ಇಲ್ಲ ಅಂದ್ರ ಹಣ ಕೊಡಲ್ಲ ಎಂದು ಬೆದರಿಸಿದ್ದಾರೆ. ಮರಾಠಿಯಲ್ಲಿ ಮಾತನಾಡಲೇಬೇಕು ಅಂತ ಕಡ್ಡಾಯ ಇದೆಯೇ? ಏಕೆ? ಎಂದು ಪಿಜ್ಜಾ ಡೆಲಿವರಿ ಬಾಯ್‌ ಕೇಳಿದ್ದಾನೆ. ಅದಕ್ಕೆ ಮರಾಠಿ ದಂಪತಿ, ಹೌದು ಇಲ್ಲಿ ಹಾಗೆಯೇ ಇದೆ ಎಂದು ಹೇಳುತ್ತಾರೆ. ಹೀಗೆ ಮರಾಠಿ ಭಾಷಾ ವಿಷಯವಾಗಿ ಡೆಲಿವರಿ ಬಾಯ್‌ ಜೊತೆ ದಂಪತಿ ಜಗಳ ತೆಗೆದಿದ್ದಾರೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

Read More

ಬೆಳಗಾವಿ:- ಎಣ್ಣೆ ಏಟಲ್ಲಿ ಚರಂಡಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ನಾಪತ್ತೆ‌ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಜರುಗಿದೆ https://ainkannada.com/tragedy-in-vehicle-inspection-police-constable-death/ ಕಾಶಪ್ಪ ಗೋಕಾಕದ ಗೊಲ್ಲರ ಒಣಿಯ ನಿವಾಸಿಯಾಗಿರುವ ಕಾಶಪ್ಪ ಶಿರಟ್ಟಿ,(52) ಚರಂಡಿ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ. ನಿರಂತರ ಮಳೆ ಹಿನ್ನೆಲೆ ಚರಂಡಿಯಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಧಾರಾಕಾರ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿಯುತ್ತಿದೆ. ಈ ವೇಳೆ ಕಾಲು ಜಾರಿ ಚರಂಡಿಯಲ್ಲಿ ಬಿದ್ದ ಕಾಶಪ್ಪ ಶಿರಟ್ಟಿ ಕೊಚ್ಚಿ ಹೋಗಿದ್ದಾನೆ. ಪೊಲಿಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿಗಳಿಂದ ಹುಡುಕಾಟ ನಡೆಸಿದ್ದಾರೆ.ಚರಂಡಿಯೊಳಗೆ ತೆರಳಿ ನಾಪತ್ತೆಯಾದ ವ್ಯಕ್ತಿಯ ಹುಡುಕಾಟ ಕೈಗೊಂಡಿದ್ದಾರೆ. ಜೆಸಿಬಿಯಿಂದ ನಗರಸಭೆ ಅಧಿಕಾರಿಗಳು, ಪುಟ್ ಪಾತ ತೆರವುಗೊಳಿಸುತ್ತಿದ್ದಾರೆ. AIN NEWS ಬಾಳಪ್ಪ ತೇರದಾಳ ಬೆಳಗಾವಿ.

Read More

ದಾವಣಗೆರೆ:- ವಾಹನ ತಪಾಸಣೆ ವೇಳೆ ದುರಂತ ಸಂಭವಿಸಿದ್ದು, ಲಾರಿ ಹರಿದು ಪೊಲೀಸ್ ಕಾನ್ಸ್‌ಟೇಬಲ್‌ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಹೆಬ್ಬಾಳು ಟೋಲ್ ಗೇಟ್ ಬಳಿ ಜರುಗಿದೆ. https://ainkannada.com/rainfall-in-various-parts-of-karnataka-joined-bangalore/ 27 ವರ್ಷದ ರಾಮಪ್ಪ ಪೂಜಾರ್ ಮೃತ ಕಾನ್ಸ್‌ಟೇಬಲ್. ಹೆಬ್ಬಾಳು ಟೋಲ್ ಗೇಟ್ ಬಳಿ ಲಾರಿಯನ್ನು ತಪಾಸಣೆ ಮಾಡಲು ಹೋದ ರಾಮಪ್ಪ ಪೂಜಾರ್ ಮೇಲೆ ಚಾಲಕ ಲಾರಿ ಹರಿಸಿ ಎಸ್ಕೇಪ್ ಆಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಕಾನ್ಸ್‌ಟೇಬಲ್‌ ರಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ರಾಮಪ್ಪ ಅವರ ಮೃತದೇಹವನ್ನು ಎಸ್‌ಎಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಲಾಯಿತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಧಾರಾಕಾರ ಮಳೆಗೆ ಹುಬ್ಬಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಗಣೇಶ್ ನಗರ, ಆನಂದನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಮನೆಯೊಳಗೆ ನೀರು ನುಗ್ಗಿದ್ದರಿಂದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್​ ಎಲ್ಲವೂ ನೀರು ಪಾಲಾದವು. https://ainkannada.com/shock-to-rcb-before-the-start-of-the-ipl-main-player-unavailable/ ಇನ್ನೂ ಮತ್ತೊಂದೆಡೆ ಬೆಂಗಳೂರಿನಲ್ಲಿ ಹೆಚ್ಚು ಮಳೆ ಬಾರದಿದ್ದರೂ, ಸಣ್ಣ ಮಳೆಗೇ ಹೆಚ್ಚು ಅವಾಂತರಗಳಾಗುತ್ತಿವೆ. ಮಂಗಳವಾರ ಸಂಜೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ 36ಕ್ಕೂ ಹೆಚ್ಚು ಬೃಹತ್​ ಮರಗಳು ನೆಲಕ್ಕುರುಳಿವೆ. ಬಿಬಿಎಂಪಿ 8 ವಲಯದಲ್ಲಿ 36ಕ್ಕೂ ಹೆಚ್ಚು ಮರಗಳು, 121 ಕೊಂಬೆಗಳು ಧರೆಗುರುಳಿರುವ ಮಾಹಿತಿ ಸಿಕ್ಕಿದೆ. ಇನ್ನು ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲೇ ಹೆಚ್ಚು ಮರಗಳು ಉರುಳಿವೆ. ಮೆಜೆಸ್ಟಿಕ್, ಶಾಂತಿನಗರ, ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಇಡೀ ನಗರವನ್ನೇ ಮಳೆರಾಯ ಆವರಿಸಿದ್ದ. ರಸ್ತೆಗಳೆಲ್ಲಾ ಜಲಾವೃತ ಆಗಿದ್ದವು. ಮಳೆ ಶುರುವಾಗುತ್ತಿದ್ದಂತೆಯೇ ಮೈಸೂರು ಬ್ಯಾಂಕ್ ಸರ್ಕಲ್‌ ಬಳಿ ಟ್ರಾಫಿಕ್‌ ಜಾಮ್ ಆಗಿತ್ತು. ಆ ಬಳಿಕ ನಿಧಾನವಾಗಿ ವಾಹನಗಳ ಓಡಾಟ ಸಾಗಿತ್ತು. ಬೆಂಗಳೂರು ಸೇರಿದಂತೆ ಕರ್ನಾಟಕದ…

Read More

IPL ಆರಂಭಕ್ಕೂ ಮುನ್ನ RCBಗೆ ಆಘಾತ ಎದುರಾಗಿದೆ. ಪ್ರಮುಖ ಆಟಗಾರು ಅಲಭ್ಯ ಆಗಲಿದ್ದು, ಇದು ತಂಡಕ್ಕೆ ಹೊಡೆತ ಬೀಳಲಿದೆ. ಆರ್​ಸಿಬಿ ತಂಡದ ಪ್ರಮುಖ ಆಟಗಾರ ಜೋಶ್ ಹೇಝಲ್​ವುಡ್ ಟೂರ್ನಿಯ ಉಳಿದ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. https://ainkannada.com/yellow-alert-enforcement-to-these-districts-of-karnataka/ ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್​ವೆಲ್, ಜೋಶ್ ಹೇಝಲ್​ವುಡ್ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಅನ್ನು ಗಮನದಲ್ಲಿರಿಸಿ ಅವರು ಮನೆಯಲ್ಲೇ ಉಳಿಯುವ ಸಾಧ್ಯತೆಯಿದೆ. ಅಲ್ಲದೆ ಕಮಿನ್ಸ್ ಸನ್​ರೈಸರ್ಸ್ ಹೈದರಾಬಾದ್​ ತಂಡದ ಉಳಿದ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ ಎಂದಿದ್ದಾರೆ. ಇದರೊಂದಿಗೆ ಜೋಶ್ ಹೇಝಲ್​ವುಡ್ ಆರ್​ಸಿಬಿ ತಂಡದ ಉಳಿದ ಮ್ಯಾಚ್​ಗಳಿಗೆ ಅಲಭ್ಯರಾಗುವುದು ಕನ್ಫರ್ಮ್​ ಆದಂತಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ0ದ್ಯದಲ್ಲಿ ಭುಜದ ನೋವಿನ ಕಾರಣ ಅವರು ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ಲುಂಗಿ ಎನ್​ಗಿಡಿ ಆಡಿದ್ದರು. ಇದೀಗ ಹೇಝಲ್​ವುಡ್ ಅಲಭ್ಯರಾದರೆ, ಉಳಿದ ಪಂದ್ಯಗಳಲ್ಲಿ ಲುಂಗಿ ಎನ್​ಗಿಡಿ…

Read More

https://ainkannada.com/to-the-attention-of-the-girls-according-to-these-rules-the-daughter-has-no-right-to-the-fathers-propert/ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ,ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ತುಮಕೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

Read More

ಈ ಕಾಯಿದೆಯು ವಿವಾಹಿತ ಅಥವಾ ಅವಿವಾಹಿತ ಹೆಣ್ಣುಮಕ್ಕಳಿಗೆ ಅನ್ವಯಿಸುತ್ತದೆ. ಇದರರ್ಥ ಹೆಣ್ಣುಮಕ್ಕಳು ಈಗ ತಮ್ಮ ತಂದೆಯ ಆಸ್ತಿಯಲ್ಲಿ ಪುತ್ರರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಮದುವೆಯಾದ ಮಗಳಿಗೂ ತನ್ನ ತಂದೆಯ ಆಸ್ತಿಯ ಮೇಲೆ ಅದೇ ಹಕ್ಕಿದೆ. ಮದುವೆಯು ಅವಳ ಕಾನೂನು ಅರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ. https://ainkannada.com/is-your-stomach-thick-do-this-work-then-see-the-trick/ ಭಾರತದಲ್ಲಿ ಆಸ್ತಿ ಹಕ್ಕುಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹೆಣ್ಣು ಮಕ್ಕಳು ಯಾವಾಗಲೂ ಬೇರೆ ಮನೆಗೆ ಹೋಗುತ್ತಾರೆ. ವರದಕ್ಷಿಣೆ ಮತ್ತು ಉಡುಗೊರೆಗಳನ್ನು ಮಾತ್ರ ಪಡೆಯಬಹುದು ಎಂದು ಭಾವಿಸಲಾಗಿದೆ. ಪುತ್ರರನ್ನು ಕುಟುಂಬದ ವಾರಸುದಾರರೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಆಸ್ತಿಗೆ ಅರ್ಹರು. ಇಂದಿನ ಕಾಲದಲ್ಲಿ, ಆಸ್ತಿಯ ಮೌಲ್ಯ ಜೀವಕ್ಕಿಂತಲೂ ಹೆಚ್ಚಾಗಿದೆ. ಕುಟುಂಬದಲ್ಲಿ ಸಹೋದರರ ನಡುವೆ, ತಂದೆ-ಮಕ್ಕಳ ನಡುವೆ, ಮತ್ತು ಈಗ ಹೆಣ್ಣುಮಕ್ಕಳಿಗೂ ಆಸ್ತಿ ಹಕ್ಕು ಸಿಕ್ಕಿರುವುದರಿಂದ ಅವರ ನಡುವೆಯೂ ಆಸ್ತಿ ವಿವಾದಗಳು ಸಾಮಾನ್ಯವಾಗಿವೆ. ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005, ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ನೀಡಿದೆ. 1. ಸ್ವಂತವಾಗಿ ಸಂಪಾದಿಸಿದ ಆಸ್ತಿ: ತಂದೆ ತನ್ನ ಗಳಿಕೆಯಿಂದ ಆಸ್ತಿಯನ್ನು…

Read More

ಹೊಟ್ಟೆಯ ಭಾಗದ ಕೊಬ್ಬು ಒಂದು ರೀತಿ ಹಠಮಾರಿ ಕೊಬ್ಬಾಗಿದ್ದು ಇದನ್ನು ಕರಗಿಸುವುದು ಅಸಾಧ್ಯ ಎಂದೇ ಜನರು ಅಂದುಕೊಳ್ಳುತ್ತಾರೆ. ಹೊಟ್ಟೆಯ ಕೊಬ್ಬು ಕರಗಿಸಿ ಸ್ನಾಯುಗಳಿಂದ ನಿರ್ಮಿತ ಆರೋಗ್ಯಕರ ದೇಹ ಭಂಗಿ ನಿಮ್ಮದಾಗಬೇಕು ಎಂದಾದರೆ ಈ ಟಿಪ್ಸ್ ಗಳನ್ನು ತಪ್ಪದೇ ಫಾಲೋ ಮಾಡಿ. https://ainkannada.com/this-pile-has-got-a-jupiter-right-wednesdays-fate-of-wednesday-14-may-2025/ ವಿಶ್ವ ಆರೋಗ್ಯ ಸಂಸ್ಥೆಯು ಮದ್ಯಪಾನ ಎಂದೆಂದಿಗೂ ಅನಾರೋಗ್ಯಕರ ಎಂದೇ ಹೇಳುತ್ತದೆ. ಮದ್ಯಪಾನದಿಂದ ಅನೇಕ ಅನಾರೋಗ್ಯಗಳು ಉಂಟಾಗುತ್ತದೆ. ಇದರೊಂದಿಗೆ ದೇಹದ ಕೊಬ್ಬು, ತೂಕ ಹೆಚ್ಚಳಕ್ಕೂ ಇದು ಕಾರಣವಾಗಿದೆ. ಮದ್ಯಪಾನಕ್ಕೆ ನೀವು ದಾಸರಾಗಿದ್ದರೆ ಮೊದಲು ಅದನ್ನು ನಿಲ್ಲಿಸಿ. ಇದು ಹಸಿವು ಹಾಗೂ ಒತ್ತಡ ನಿಯಂತ್ರಿಸುವ ಹಾರ್ಮೋನ್‌ಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದರಲ್ಲಿ ಕ್ಯಾಲೊರಿಗಳು ಹೆಚ್ಚಿದ್ದು ಇದರಿಂದ ಹೊಟ್ಟೆಯ ಕೊಬ್ಬು ಅಧಿಕವಾಗುತ್ತದೆ. ನಿಮಗೆ ಸಪಾಟಾದ ಅಂದವಾದ ಹೊಟ್ಟೆ ಬೇಕು ಎಂದಾದರೆ ಮದ್ಯಪಾನವನ್ನು ನಿಲ್ಲಿಸಿ ಎಂದು ಗೋ ಸಲಹೆ ನೀಡುತ್ತಾರೆ. ಜನರು ಹೆಚ್ಚಾಗಿ ವೇಟ್ ಲಾಸ್‌ ಪ್ರಕ್ರಿಯೆಯಲ್ಲಿ ಕಾರ್ಬ್ಸ್ ಕಡಿಮೆ ಮಾಡುತ್ತಾರೆ ಆದರೆ ಇದು ವೇಟ್ ಲಾಸ್‌ಗೆ ಒಳ್ಳೆಯದಲ್ಲ ಎಂಬುದು ಗೇ ಮಾತಾಗಿದೆ ನಿಮ್ಮ…

Read More