ಚಾಮರಾಜನಗರ:- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಸಮೀಪ ಜರುಗಿದೆ. https://ainkannada.com/chitradurga-couple-dies-after-going-to-wash-their-sheep/ ಸಕಲೇಶಪುರ ಮೂಲದ ಜಗದೀಶ್ ಸಾವಿಗೀಡಾದ ದುರ್ದೈವಿ. ಕೇರಳ ಮೂಲದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆ ಪಟ್ಟಣದತ್ತ ತೆರಳುವಾಗ ದುರ್ಘಟನೆ ಸಂಭವಿಸಿದೆ. ತೆರಕಣಾಂಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: AIN Author
ಚಿತ್ರದುರ್ಗ: ಕುರಿಗಳ ಮೈ ತೊಳೆಯಲು ಹಳ್ಳಕ್ಕೆ ಹೋಗಿದ್ದ ದಂಪತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೊಸದುರ್ಗ ತಾಲೂಕಿನ ಅತ್ತಿಮಗೆ ಗ್ರಾಮದಲ್ಲಿ ನಡೆದಿದೆ. https://ainkannada.com/congress-workers-angry-against-central-price-hike/ ಅತ್ತಿಮಗೆ ಗ್ರಾಮದ ಕುತರಿಗಾಯಿ ತಿಮ್ಮೇಶ, ಪತ್ನಿ ಪುಟ್ಟಮ್ಮ ಮೃತ ದಂಪತಿಗಳಾಗಿದ್ದಾರೆ. ಕುರಿಗಳ ಮೈ ತೊಳೆಯಲು ಗ್ರಾಮದ ಹೊರವಲಯದ ಕಾನಿ ಹಳ್ಳಕ್ಕೆ ದಂಪತಿ ಕುರಿಗಳನ್ನು ಹೊಡೆದುಕೊಂಡು ಹೋಗಿದ್ರು. ಈ ವೇಳೆ ಆಕಸ್ಮಿಕವಾಗಿ ಕಳ್ಳದ ಆಳವಾದ ನೀರಿಗೆ ಜಾರಿ ದಂಪತಿ ಸಾವನ್ನಪ್ಪಿದ್ದಾರೆ. ಮೃತತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಬೈಂದೂರು :ಮೋದಿ ಅವರು ಪ್ರಧಾನಿಯಾದ ಮೇಲೆ ಚುನಾವಣೆಗೂ ಮುಂಚೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇ? ಬಡಜನರಿಗೆ, ಸಾಮಾನ್ಯ ಜನರಿಗೆ ಅಚ್ಛೇ ದಿನಗಳು ಬಂದಿವೆಯೇ’ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ ಪ್ರಶ್ನಿಸಿದರು. ಇಲ್ಲಿನ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜೆ.ಎನ್.ಆರ್ ಕಲಾಮಂದಿರದ ಆವರಣದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರವಿಂದ ಪೂಜಾರಿ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಬೆಲೆ ಏರಿಕೆ ನಿಯಂತ್ರಿಸದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಮೋದಿ ಪ್ರಧಾನಿ ಆದಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ಮೇಲೆಯೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್ಪಿಜಿ ದರ ಇಳಿಸಿಲ್ಲ. ಇದರಿಂದಾಗಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಗೆ…
ಕೊಡಗು:- ಕಾಫಿ ತೋಟದಲ್ಲಿ ಅಣ್ಣನೇ ಸ್ವಂತ ತಮ್ಮನಿಗೆ ಗುಂಡಿಕ್ಕಿ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಅಭ್ಯತ್ ಮಂಗಲ ಗ್ರಾಮದ ಬಳಿ ಜರುಗಿದೆ. 47 ವರ್ಷದ ಕೊಳಂಬೆ ವಿನು ಬೆಳ್ಯಪ್ಪ. https://ainkannada.com/you-have-no-moral-right-to-speak-on-the-mahadayi-issue-minister-hk-patil-taunts-joshi-2/ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳಂಬೆ ವಿನು ಬೆಳ್ಯಪ್ಪ ತಮ್ಮ ತೋಟದಲ್ಲಿ ಕೆಲಸಮಾಡುತ್ತಿದ್ದ ವೇಳೆ ಗುಂಡಿನ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗದಗ:- ಮಹದಾಯಿ ವಿಚಾರದಲ್ಲಿ ಕೆಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/congresss-appeasement-for-suhas-shettys-murder-is-a-political-reason-ct-ravi/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕು ಜೋಶಿಯವರಿಗೆ ಇಲ್ಲ. ಫಾರೆಸ್ಟ್, ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಗೆ ಸಭೆ ಮಾಡಿ ಈ ವಿಷಯ ತೆಗೆದುಕೊಳ್ಳೋದಿಲ್ಲ. ಸಭೆ ಮುಂದೆ ಹಾಕ್ತಾ ಇದ್ದೀರಿ, ಆರು ತಿಂಗಳಾದ್ರೂ ಸಭೆ ಮಾಡಿಲ್ಲ ನೀವು. ನಿಮ್ಮ ಮಂತ್ರಿಮಂಡಲದ ಮಂತ್ರಿಯೊಬ್ಬರೂ ಸಭೆ ಮಾಡೋದು ಅಗತ್ಯ ಇರೋದಿಲ್ಲಾ?, ಅವರಿಗೆ ಒತ್ತಾಯ ಮಾಡೋದಿಲ್ಲ ನೀವು.. ಅಷ್ಟೇ ಯಾಕೆ ಪ್ರಧಾನ ಮಂತ್ರಿಗೆ ಹೇಳೊದಿಲ್ಲ. ಕೃಷ್ಣಾ ವಿಚಾರದಲ್ಲಿ 15 ವರ್ಷ ಆಯ್ತು ನೋಟಿಫಿಕೇಶನ್ ಯಾಕೆ ಮಾಡಿಲ್ಲ. ಕೆಯುಡಬ್ಲೂಡಿಟಿ ಟೂ ಬ್ರಿಜೇಶ್ ಕುಮಾರ್ ವರದಿ ಯಾಕೆ ನೀವು ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಮೊನ್ನೆ ಪಾರ್ಲಿಮೆಂಟ್ ನಲ್ಲಿ ಬೊಮ್ಮಾಯಿ ಹೇಳಿದ್ರಲ್ಲ ಏನು ಉತ್ತರ ನಿಮ್ಮದು. ಉತ್ತರ ಕರ್ನಾಟಕದ ಜನ 15 ವರ್ಷದಿಂದ ನೋವನ್ನ ಸಹಿಸುತ್ತಾ ಕೂತಿದ್ದಾರೆ. ಪ್ರತೀ ಸಂದರ್ಭದಲ್ಲೂ…
ಬೆಂಗಳೂರು:- ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್ನ ಓಲೈಕೆ ರಾಜಕೀಯ ಕಾರಣ ಎಂದು CT ರವಿ ಹೇಳಿದ್ದಾರೆ. https://ainkannada.com/power-will-not-be-available-in-all-parts-of-kodagu-tomorrow-where-here-are-the-complete-details/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ನವ್ರು ದನಗಳ್ಳರು ಸತ್ತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಕೊಟ್ಟಿದ್ರು ಎಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಭೇಟಿ ಕೊಡದ ಕಾಂಗ್ರೆಸ್ ನಾಯಕರ ನಡೆಗೆ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ದನಗಳ್ಳರಾಗಿದ್ದ ಇದ್ರಿಸ್ ಪಾಷ ಹಾಗೂ ಕಬೀರ್ ಸತ್ತಾಗ ಕಾಂಗ್ರೆಸ್ ನಾಯಕರು ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ, ಒಬ್ರಿಗೆ 10 ಲಕ್ಷ ರೂ. ಇನ್ನೊಬ್ಬರಿಗೆ 25 ಲಕ್ಷ ರೂ. ಪರಿಹಾರವನ್ನೂ ಕೊಟ್ಟು ಬಂದ್ರು. ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಕೇಸ್ಗಳನ್ನು ವಾಪಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾಗಿದ್ರಾ? ಅವರ ಮೇಲೆ ದೊಂಬಿ ಗಲಭೆ, ಠಾಣೆಗೆ ಬೆಂಕಿ ಹಾಕಿದ ಕೇಸ್ಗಳಿವೆ. ಯಾರ್ಯಾರು ಯಾವ್ಯಾವ ಕಾರಣಕ್ಕೆ ರೌಡಿಶೀಟ್ ಓಪನ್ ಮಾಡಿದ್ದಾರೆ ಅಂತ ಬಿಚ್ಚಿ ಹೇಳಬೇಕಾ ಎಂದು ತಿರುಗೇಟು ನೀಡಿದರು. ಸುಹಾಸ್ ಶೆಟ್ಟಿ ಹತ್ಯೆ ನಂತರ…
ಕೊಡಗು:- ಕೊಡಗಿನ ವಿವಿಧ ಭಾಗಗಳಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ https://ainkannada.com/drink-tomato-juice-on-an-empty-stomach/ ಅವರದಾಳು, ಕಣ್ಣಾರಳ್ಳಿ, ಕೊಡ್ಲಿಪೇಟೆ, ಬ್ಯಾಡಗೊಟ್ಟ, ನೀರುಗುಂದ, ಹೆಮ್ಮನೆ, ಬೆಸ್ಸೂರು, ಕಟ್ಟೆಪುರ, ನಿಲುವಾಗಿಲು, ಕೂಡ್ಲೂರು, ದೊಡ್ಡಬಂಡಾರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. ಆದ್ದರಿಂದ ಕನ್ನಂಡಬಾಣೆ, ಗೌಡಸಮಾಜ, ಜೂನಿಯರ್ ಕಾಲೇಜು ರಸ್ತೆ, ದಾಸವಾಳ ರಸ್ತೆ, ಗಣಪತಿ ಬೀದಿ, ಓಂಕಾರೇಶ್ವರ ದೇವಸ್ಥಾನ, ಓಂಕಾರೇಶ್ವರ ರಸ್ತೆ, ಬ್ರಾಹ್ಮಿನ್ಸ್ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. ಬೆಳ್ಳಾರಳ್ಳಿ, ಸಂಪಿಗೆದಾಳು, ಕಿತ್ತೂರು, ಮಣಗಲಿ, ಮೂದ್ರವಳ್ಳಿ, ದುಂಡಳ್ಳಿ, ಬಿಳಹ(ಬೆಂಬಳೂರು) ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಈರುಳ್ಳಿ ಬೆಲೆ ಹೆಚ್ಚಾದರೆ ಇನ್ನೊಮ್ಮೆ ಟೊಮೆಟೊ ಬೆಲೆ ಗಗನಕ್ಕೇರುತ್ತದೆ. ಒಟ್ಟಿನಲ್ಲಿ ಅಡುಗೆ ಪ್ರಪಂಚದಲ್ಲಿ ಈ ಎರಡು ತರಕಾರಿಗಳು ಮಾತ್ರ ಒಳ್ಳೆ ಹೆಸರನ್ನು ಮಾಡಿವೆ. ಈಗ ಟೊಮೇಟೊದ ವಿಚಾರಕ್ಕೆ ಬರುವುದಾದರೆ ವರ್ಷದ ಸಾಕಷ್ಟು ಸಮಯ ಇದು ಜನರಿಗೆ ಕಡಿಮೆ ಬೆಲೆಗೆ ಸಿಗುತ್ತದೆ. https://ainkannada.com/ipl-2025-rohit-sharma-presents-a-diamond-ring-to-mohammed-siraj/ ಸಿಕ್ಕಂತಹ ಸಮಯದಲ್ಲಿ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಜಾಣ್ಮೆ ನಮಗೆ ಬರಬೇಕು. ಟೊಮೆಟೊ ಹಣ್ಣುಗಳು ಇಂದು ಬಹುತೇಕ ನಮ್ಮ ಅಡುಗೆಗಳಲ್ಲಿ ಒಗ್ಗರಣೆಗಾಗಿ ಮತ್ತು ಇನ್ನಿತರ ಉಪಯೋಗಗಳಿಗಾಗಿ ಬಳಕೆಯಾಗುತ್ತಿವೆ. ಖಾಲಿ ಹೊಟ್ಟೆಯಲ್ಲಿ ಟೊಮೆಟೊ ರಸವನ್ನು ಸೇವಿಸುವುದರಿಂದ ಅಗತ್ಯವಾದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇತರ ಆಹಾರಗಳ ಅನುಪಸ್ಥಿತಿಯು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ಟೊಮೆಟೊಗಳಲ್ಲಿ ಸಮೃದ್ಧವಾಗಿರುವ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಶ್ರೇಣಿಯನ್ನು ಸಮರ್ಥವಾಗಿ ಸಮೀಕರಿಸಲು ದೇಹಕ್ಕೆ ಅನುವುಮಾಡಿಕೊಡುತ್ತದೆ ಟೊಮ್ಯಾಟೋ ಜೀರ್ಣಕಾರಿ ಕಿಣ್ವಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಟೊಮೆಟೊ ರಸವು ಜೀರ್ಣಾಂಗ ವ್ಯವಸ್ಥೆಗೆ ಅತ್ಯುತ್ತಮವಾದ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು…
ಚಿತ್ರದುರ್ಗ:- ಚಾಲಕನ ನಿಯಂತ್ರಣ ತಪ್ಪಿ ಹೈವೇ ಬೋರ್ಡ್ ಗೆ ಬಸ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಮೃತಪಟ್ಟು 30 ಕ್ಕು ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆಯಿಂದ ಚಳ್ಳಕೆರೆ ಗೊಲ್ಲರ ಹಟ್ಟಿ ಗೇಟ್ ಬಳಿ ನಡೆದಿದೆ. https://ainkannada.com/have-you-ever-eaten-mangoes-because-they-taste-so-good-if-so-watch-the-news-first/ ಮೃತನನ್ನು ಶಹಾಪುರದ ಶಿವಪ್ಪ ಎಂದು ಗುರುತಿಸಿದೆ. ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿದೆ. ಬಸ್ ಯಾದಗಿರಿಯಿಂದ ಬೆಂಗಳೂರಿಗೆ ಹೊರಟಿತ್ತು. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದಾರೆ
ಬೇಸಿಗೆಯಲ್ಲಿ ಅತಿ ಹೆಚ್ಚು ಸಿಗುವ ಹಣ್ಣುಗಳಲ್ಲಿ ಮಾವು ಕೂಡಾ ಒಂದು. ಹಣ್ಣಿನ ರಾಜ ಎಂದು ಕರೆಸಿಕೊಳ್ಳೋ ಮಾವು ತಿನ್ನಲು ಬಲುರುಚಿ. ಹಣ್ಣಿನ ರಾಜನಾದ ಮಾವಿನಹಣ್ಣನ್ನು ಇಷ್ಟಪಡದೇ ಇರುವವರು ವಿರಳ. ಬೇಸಿಗೆಯಲ್ಲಿ ಆರಂಭವಾಗುವ ಇದರ ಅಬ್ಬರ ಮಳೆ ಶುರುವಾದ ಮೇಲೂ ಇರುತ್ತೆ. ಮಾವಿನ ಹಣ್ಣಿನ ಸೀಸನ್ ಆರಂಭವಾಯಿತೆಂದರೆ ಉಳಿದ ಹಣ್ಣನ್ನು ಯಾರೂ ಇಷ್ಟಪಡುವುದಿಲ್ಲ. ಮಾರುಕಟ್ಟೆ, ಹಣ್ಣಿನ ಅಂಗಡಿ ಸೇರಿದಂತೆ ಎಲ್ಲೆಡೆ ಮಾವಿನ ಹಣ್ಣಿನದ್ದೇ ಘಮ ತುಂಬಿಹೋಗುತ್ತದೆ. https://ainkannada.com/kannada-is-being-ignored-in-karnataka-english-hindi-and-marathi-are-mandatory-for-a-job-at-vega-helmet-company/ ಮಾವಿನ ಹಣ್ಣಿನಲ್ಲಿ ಹೇರಳವಾದ ಫೈಬರ್ ಅಂಶವಿದೆ. ಅದೇ ರೀತಿ ವಿಟಮಿನ್ ಎ, ಬಿ, ಸಿ, ಕೆ, ಇ ಗಳಿದೆ. ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಾದ ಇದು ಪರಿಪೂರ್ಣ ಹಣ್ಣು ಎಂದೇ ಹೇಳಬಹುದು. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಈ ಮಾತು ಮಾವಿನ ಹಣ್ಣಿಗೂ ಅನ್ವಯವಾಗುತ್ತದೆ. ಮಾವಿನಹಣ್ಣು ಎಷ್ಟು ರುಚಿಯೋ ಅಷ್ಟೇ ಅಧಿಕ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಇಷ್ಟ ಎಂದು ಹೆಚ್ಚು ಮಾವಿನ ಹಣ್ಣನ್ನು ಸೇವಿಸಿದರೆ ಅನಾರೋಗ್ಯ ಕಾಡುವುದು ಪಕ್ಕಾ. ಹಾಗಾದರೆ ಮಾವಿನ ಹಣ್ಣಿನ…