Author: AIN Author

ಹುಬ್ಬಳ್ಳಿ: ಕುಂದಗೋಳ ಗದಗ ಬಸ್ ಪುನರ್ ಆರಂಭ ಆರಂಭವಾಗಿದ್ದು ಆ ಬಸ್ಸನ್ನು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಬಸ್ ಅನ್ನು ಬರಮಾಡಿಕೊಂಡು ಬಸ್ಸನ್ನು ಮದುವೆನಗಿತ್ತಿ ಹಾಗೆ ಅಲಂಕರಿಸಿ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸ್ ಅನ್ನು ಬಿಳ್ಕೊಡಲಾಯಿತು. ಈ ಬಸ್ಸು ಗದಗದಿಂದ ಮಧ್ಯಾಹ್ನ 1 ಗಂಟೆ ಹೊರಟು ಹುಲಕೋಟಿ ಅಣ್ಣಿಗೇರಿ ಬದ್ರಾಪುರ ನಲವಡಿ ಸಿರುಗುಪ್ಪಿ ಬಂಡವಾಡ್ ಕ್ರಾಸ್ ಬಂಡಿವಾಡ ಮಂಟೂರ ನಾಗರಹಳ್ಳಿ ಗುಡೇನಕಟ್ಟಿ ಮಾರ್ಗವಾಗಿ ಕುಂದಗೋಳ ಪಟ್ಟಣಕ್ಕೆ ತಲುಪುತ್ತದೆ ಅದೇ ಮಾರ್ಗವಾಗಿ 3 ಗಂಟೆಗೆ ಗದಗ ಕಡೆಗೆ ಹೋಗುತ್ತದೆ. https://ainkannada.com/bbmp-officials-negligence-a-young-man-in-a-life-and-death-struggle-what-happened/ ಪೂಜೆ ಸಲ್ಲಿಸಿ ನಂತರ ರತ್ನ ಭಾರತ ರೈತ ಸಮಾಜದ ಕುಂದಗೋಳ ತಾಲೂಕ ಅಧ್ಯಕ್ಷರು ಬಸವರಾಜ ಯೋಗಪ್ಪನವರ ಮಾತನಾಡಿ, ಗದಗ ಕೆಎಸ್ಆರ್ಟಿಸಿ ಡಿಸಿ ಅವರು ಹಾಗೂ ಸಿಬ್ಬಂದಿ ಗಳಿಗೆ ತಾಳಿಕವಾಗಿ ಬಂದಾದ ಬಸ್ಸನ್ನು ಪುನರ್ ಆರಂಭಿಸುವಂತೆ ಮನವಿ ಸಲ್ಲಿಸಿದ್ದೇವೆ ಮನವಿಗೆ ಸ್ಪಂದಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ಈ ಎಲ್ಲ ಗ್ರಾಮದ ಗ್ರಾಮಸ್ಥರಿಗೆ ಹಾಗೂ ಶಾಲಾ ವಿದ್ಯಾರ್ಥಿ ಗಳಿಗೆ ತುಂಬಾ ಅನುಕೂಲ ಮಾಡಿಕೊಟ್ಟ ಎಲ್ಲ…

Read More

ಬೆಂಗಳೂರು:- BBMP ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. https://ainkannada.com/kirk-to-the-issue-of-car-parking-abuse-of-obscene-noises-to-the-doctor/ ಬಿಬಿಎಂಪಿ ಅಗೆದ ರಸ್ತೆಯಿಂದ ಸಂಭವಿಸಿದ ಅಪಘಾತದಿಂದ ಯುವಕನ ಸ್ಥಿತಿ ಗಂಭೀರವಾಗಿದೆ. ಘಟನೆ ಬೆನ್ನಲ್ಲೇ ಯುವಕನ ತಂದೆ ಕೊಟ್ಟ ದೂರಿನ ಅನ್ವಯ ಬಿಬಿಎಂಪಿ , ಜಲಮಂಡಳಿ ಜಾಗೂ ಗುತ್ತಿಗೆದಾರನ ವಿರುದ್ಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಜೂನ್ 8ರ ಮಧ್ಯರಾತ್ರಿ 1.30ರ ಸುಮಾರಿಗೆ ರಾಜ್ ಕುಮಾರ್ ರಸ್ತೆಯ ಕಾಫಿ ಡೇ ಮುಂಭಾಗ ಬಿಬಿಎಂಪಿ ಕಾಮಗಾರಿಯಿಂದ ಈ ಅನಾಹುತ ಸಂಭವಿಸಿತ್ತು. ರಸ್ತೆ ಪಕ್ಕದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಪಾಲಿಕೆ ಕಾಮಗಾರಿ ಮಾಡಿದ್ದರಿಂದ ಅನಾಹುತ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮಂಜುನಾಥ್ ಬಿ.ಜಿ (28) ಎಂಬ ಯುವಕ ಬೈಕ್ ನಲ್ಲಿ ಬರುವಾಗ ಅಪಘಾತ ಸಂಭವಿಸಿತ್ತು. ಅಪಘಾತ ಹಿನ್ನೆಲೆ ಖಾಸಗಿ ಆಸ್ಪತ್ರೆಯ ತೀರ್ವ ನಿಘ ಘಟಕದಲ್ಲಿ ಮಂಜುನಾಥ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಮಂಜುನಾಥ್ ಬಿ.ಜಿ ಅವರ…

Read More

ಬೆಂಗಳೂರು:- ಮನೆ ಮುಂದೆ ಕಾರು ನಿಲ್ಲಿಸುವ ವಿಚಾರಕ್ಕೆ ಗಲಾಟೆ ನಡೆದು ಪ್ರಶ್ನೆ ಮಾಡಿದ ವೈದ್ಯೆಯನ್ನ ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. https://ainkannada.com/rainfall-in-karnataka-from-june-13-red-alert-for-these-9-districts/ ಜೂನ್ 5ರಂದು ನಡೆದ ಘಟನೆ ಇದಾಗಿದ್ದು, ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯೆ ಆಶಾ ಮನೆ ಮುಂದೆ ಆರೋಪಿ ರಘು ಕಾರು ನಿಲ್ಲಿಸಿದ್ದ. ಕಾರು ನಿಲ್ಲಿಸಿದ್ದರಿಂದ ಆಶಾ ಮನೆಯವರಿಗೆ ಓಡಾಡಲು ತೊಂದರೆ ಆಗಿದೆ. ಹೀಗಾಗಿ ರಘು ಬಳಿ ಪ್ರಶ್ನಿಸಿದಾಗ ವೈದ್ಯೆ ತಳ್ಳಿ ಗಲಾಟೆ ಮಾಡಿದ್ದಾನೆ. ತಳ್ಳಿದಾಗ ಸೂರ್ಯ ಎಂಬಾತ ವೈದ್ಯಯ ಹಿಡಿದು ಬೀಳುವುದನ್ನ ತಪ್ಪಿಸುತ್ತಾರೆ. ಆಗ ರಘು ಸಹಾಯ ಮಾಡಿದ್ದ ಸೂರ್ಯನನ್ನು ತಳ್ಳಿ ನಿಂದಿಸಿದ್ದಾನೆ. ರಘು ಹಾಗೂ ಆತನ ಕುಟುಂಬಸ್ಥರು ವೈದ್ಯೆ ಆಶಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ವೈದ್ಯ ಆಶಾ ನೀಡಿದ ದೂರಿನ ಅನ್ವಯ ಚಂದ್ರಲೇಔಟ್ ಠಾಣೆಯಲ್ಲಿ ರಘು ಹಾಗೂ ಆತನ ಸಹೋದರ ಮತ್ತು ಅಪ್ಪ…

Read More

ಬೆಂಗಳೂರು:- ಕರ್ನಾಟಕದಲ್ಲಿ ನಾಳೆಯಿಂದ ಭಾರೀ ಮಳೆ ಆಗಲಿದ್ದು, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. https://ainkannada.com/cons-table-is-accused-of-kicking-a-boot-leg-for-a-woman/ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಎಚ್​ಎಎಲ್​ನಲ್ಲಿ31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಬೆಂಗಳೂರು:- ಕಾನ್ಸ್ ಟೇಬಲ್ ಮಹಿಳೆಗೆ ಬೂಟ್ ಕಾಲಿನಿಂದ ಒದ್ದ ಆರೋಪದಡಿ ಹೆಡ್ ಕಾನ್‌ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. https://ainkannada.com/rainfall-160-years-of-building-collapse-with-101-doors/ ಕಾನ್ಸ್ ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್‌ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. ಇದೇ ತಿಂಗಳ‌ 10ರಂದು ರಾತ್ರಿ ಕಂಪ್ಯೂೂಟರ್ ವಿಭಾಗದಲ್ಲಿ ಕಾನ್ಸ್ ಟೇಬಲ್ ರೇಣುಕ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಠಾಣೆಯ ಎಎಸ್‌ಐ ತಿಮ್ಮೇಗೌಡ ಹೇಳಿದ್ರಂತೆ. ಅದರಂತೆ ರೇಣುಕಾ, ತಡರಾತ್ರಿ 2.30ಕ್ಕೆ ಮಕ್ಕಳನ್ನ ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ಊಟ ಮಾಡಿಸ್ತಿದ್ದರು. ಈ ವೇಳೆ ಹೆಡ್‌ ಕಾನ್‌ಸ್ಟೇಬಲ್ ಗೋವಿಂದರಾಜು ನಿಂದ ಹೆಣ್ಣು ಮಕ್ಕಳ ಕುರಿತು ನಿಂದನೆ ಆರೋಪ ಕೇಳಿ ಬಂದಿದೆ. ಇದನ್ನ ಪ್ರಶ್ನಿಸಿದ್ದ ರೇಣುಕಾಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಶೂ ಕಾಲಿನಿಂದ ಮೂರ್ನಾಲ್ಕು ಬಾರಿ ಒದ್ದಿರೋ ಆರೋಪ ಕೇಳಿ ಬಂದಿದೆ. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ತಿಮ್ಮೇಗೌಡ, ಕಾನ್‌ಸ್ಟೇಬಲ್‌ಗಳಾದ ಬಸಪ್ಪ, ಮಹೇಶ್ ಬಿಡಿಸಿದ್ರೂ ನಿಂದಿಸಿ ಹಲ್ಲೆ…

Read More

ರಾಯಚೂರು:- ಧಾರಾಕಾರ ಮಳೆ ಹಿನ್ನೆಲೆ ಪಟ್ಟಣದ 101 ಬಾಗಿಲುಗಳುಳ್ಳ 160 ವರ್ಷದ ಐತಿಹಾಸಿಕ ಕಟ್ಟಡ ಭಾಗಶಃ ಕುಸಿದಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದ ಅಪರೂಪದ ವಿಶಿಷ್ಟ ಬಂಗಲೆ `ನೂರೊಂದು ಬಾಗಿಲಿನ ಬಂಗಲೆ’ ಎಂದೇ ಪ್ರಸಿದ್ಧಿ ಪಡೆದಿದೆ. ಈಗಲೂ ಸರ್ಕಾರಿ ವಿವಿಧ ಇಲಾಖೆ ಕಚೇರಿಗಳು ಇದೇ ಕಟ್ಟಡದಲ್ಲಿ ನಡೆಯುತ್ತಿವೆ. ಸಹಾಯಕ ಆಯುಕ್ತರ ಕಚೇರಿ ಬಲಭಾಗದ ಕೊಠಡಿ ಮೇಲ್ಛಾವಣಿ ಶಿಥಿಲಾವಸ್ಥೆಗೆ ತಲುಪಿ ಕುಸಿದು ಬಿದ್ದಿದೆ. https://ainkannada.com/rainfall-leave-for-school-colleges-in-these-districts-today/ ಈ ಹಿಂದೆ ತಹಶೀಲ್ದಾರ್ ಕಚೇರಿಯಾಗಿ ಈ ಕಟ್ಟಡ ಬಳಕೆಯಾಗಿತ್ತು. ತಹಶೀಲ್ದಾರ್ ಕಚೇರಿ ಸ್ಥಳಾಂತರ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಾರಣ ಕುಸಿದು ಬಿದ್ದಿದೆ. ಹೈದ್ರಾಬಾದ್ ನಿಜಾಮರ ಕಾಲದಲ್ಲಿ ಲಿಂಗಸುಗೂರು ಜಿಲ್ಲಾ ಕೆಂದ್ರವಾಗಿತ್ತು. ಆಗ ಇದೇ ಕಟ್ಟಡ ಆಡಳಿತ ಕಚೇರಿಯಾಗಿ ಬಳಕೆಯಲ್ಲಿತ್ತು. ಸತತ ಮಳೆಗೆ ಮೇಲ್ಛಾವಣಿ ಮೇಲೆ ನೀರು ನಿಂತು ಕಟ್ಟಡ ಕುಸಿದಿದೆ.

Read More

ಚಿಕ್ಕಮಗಳೂರು/ಉಡುಪಿ:- ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಉಡುಪಿ ಮತ್ತು ಕೊಡಗು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. https://ainkannada.com/heavy-rains-in-hubli-water-that-rushes-to-houses/ ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿನ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಗೆ ಇಂದು ರೆಡ್ ಅಲರ್ಟ್​ ಘೋಷಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಗೂ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಇಂದು ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಲಿದ್ದು, ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಂಭವ ಇದೆ. ಕಡಲತೀರ, ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Read More

ಹುಬ್ಬಳ್ಳಿ: ಜಿಲ್ಲೆಯಲ್ಲಿ ಧಾರಾಕಾರ‌ ಮಳೆ ಸುರಿದ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಭಾರೀ ಮಳೆ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಿಂದ ನೀರು ಹೊರ ಹಾಕಲು ಜನ ಹರಸಾಹಸ ಪಟ್ಟಿದ್ದಾರೆ. https://ainkannada.com/family-strife-for-these-pile-thursdays-future-is-12-june-2025/ ಅಷ್ಟೇ ಅಲ್ಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿನ ದವಸಧಾನ್ಯಗಳು ನೀರುಪಾಲಾಗಿದೆ. ಏಕಾಎಕಿ ಮಳೆಯಿಂದ ಜನತೆ ನಲುಗಿದ್ದಾರೆ. ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಇಡೀ ಗ್ರಾಮಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. ಹುಬ್ಬಳ್ಳಿಯಲ್ಲಿನ ರಸ್ತೆಗಳು ಜಲಾವೃತ: ಭಾರಿ ಮಳೆ ಹಿನ್ನೆಲೆ ಹುಬ್ಬಳ್ಳಿ ಹುಬ್ಬಳ್ಳಿಯಲ್ಲಿನ ರಸ್ತೆಗಳು ಜಲಾವೃತಗೊಂಡಿವೆ. ಹುಬ್ಬಳ್ಳಿಯ ಗಬ್ಬೂರ್ ಬೈಪಾಸ್ ಸೇರಿ ಹಲವಡೆ ಧಾರಾಕಾರ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿಯಲ್ಲಿ ಸಹ ಭಾರೀ ಮಳೆ ಆಗಿದ್ದು ಅಪಾರ ಪ್ರಮಾಣದಲ್ಲಿ ಬಿತ್ತನೆ ಜಮೀನು ಹಾಳಾಗಿದೆ. ಹಳ್ಳದ ನೀರಿನ ನಡುವೆ ಕೂಲಿಕಾರ್ಮಿಕರು: ನವಲಗುಂದ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ…

Read More

ಸೂರ್ಯೋದಯ – 5:45 ಬೆ ಸೂರ್ಯಾಸ್ತ – 6:46 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಜೇಷ್ಠ ಮಾಸ, ಗ್ರೀಷ್ಮ ಋತು, ತಿಥಿ – ಪಾಡ್ಯ ನಕ್ಷತ್ರ – ಮೂಲ ಯೋಗ – ಶುಭ ಕರಣ – ಕೌಲವ ಮಳೆ ನಕ್ಷತ್ರ:ಮೃಗಶಿರ ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:09 ಬೆ. ದಿಂದ 4:57 ಬೆ.ವರೆಗೆ ಅಮೃತ ಕಾಲ – 3:08 ಮ.ದಿಂದ 4:51 ಸಂಜೆ. ವರೆಗೆ ಅಭಿಜಿತ್ ಮುಹುರ್ತ – 11:50ಬೆ. ದಿಂದ 12:42 ಮ.ವರೆಗೆ ಮೇಷ: ದೃಢ ನಿರ್ಧಾರದಿಂದ ಪ್ರೇಮಿಗಳ ಮದುವೆ ಸಾಧ್ಯ, ನಿಮ್ಮ ಶುಭ ಮಂಗಳ ಕಾರ್ಯಕ್ಕೆ ಬಂಧುಗಳಿಂದ ತಡೆ, ಸ್ವಲ್ಪ ಮಾಡುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ, ಸಿದ್ಧ ಉಡುಪು…

Read More

ಚಿಕ್ಕಮಗಳೂರು:- ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಹೀಗಾಗಿ ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿನ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. https://ainkannada.com/heavy-rain-in-hubballi-laborers-amidst-the-water-of-the-ditch/ ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್​ ಘೋಷಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಗೂ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ನಾಳೆ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಲಿದ್ದು, ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಂಭವ ಇದೆ. ಕಡಲತೀರ, ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Read More