ಹುಬ್ಬಳ್ಳಿ: ನಗರದ ಜಗದ್ಗುರು ಮಠ ಮೂರುಸಾವಿರ ವಿದ್ಯಾವರ್ಧಕ ಸಂಘದ (ಎಸ್ಜೆಎಂವಿಎಸ್) ವತಿಯಿಂದ ಕಾಲೇಜು ಕಾನೂನು ಆರಂಭಿಸಲಾ ಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಕಾಂ, ಎಲ್ಎಲ್ಬಿ ಐದು ವರ್ಷದ ಶುರುವಾಗಲಿದೆ ಎಂದು ಶ್ರೀಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಯಾವುದೇ ಕಾರಣಕ್ಕೂ ಡೊನೇಷನ್ ಪಡೆಯುವುದಿಲ್ಲ. ಇದೊಂದು ಸೇವಾ ಮನೋಭಾವದ ಸಂಸ್ಥೆಯಾಗಿದೆ ಎಂದರು.
ನಿಮ್ಮ ಡೊಳ್ಳು ಹೊಟ್ಟೆ ಚಪ್ಪಟೆ ಆಗಲು ಕಾಫಿ ಟೀ ಬದಲು ಬೆಳಗೆದ್ದು ಈ ನೀರು ಕುಡಿಯಿರಿ!
ನೂತನವಾಗಿ ಎರಡು ಕೊಠಡಿಗಳು, ಪ್ರಾಚಾರ್ಯರ ಚೇಂಬರ್. ಮೂವರು ಡಿಜಿಟಲ್ ಲೈಬ್ರರಿ ಇದ್ದು, ಶಿಕ್ಷಕರು ಬೋಧನೆ ಮಾಡುವರು. ಹಿರಿಯ ವಕೀಲರನ್ನು ಸಹ ಅತಿಥಿ ಪ್ರಾಧ್ಯಾಪಕರ ನ್ನಾಗಿ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಲಾಗುವುದು. ಸದ್ಯ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಜುಲೈ 1ರಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆಗಸ್ಟ್ 1ರಿಂದ ತರಗತಿ ಆರಂಭಗೊಳ್ಳಲಿವೆ ಎಂದು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ‘ಯಲ್ಲಿ ಮಾತನಾಡಿದ ಅವರು, ಈ ಕೋರ್ಸ್ಗೆ ದ್ವಿತೀಯ ಪರೀಕ್ಷೆಯಲ್ಲಿ ಶೇ.45 ಅಂಕ ಪಡೆದವರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದರು. ಪ್ರತಿ ವಾರ ವಿದ್ಯಾರ್ಥಿಗಳನ್ನು ಕೋರ್ಟಿಗೆ ಕರೆದೊಯ್ದು ಪ್ರಾ ಕ್ಟಿಕಲ್ ಅನುಭವ ನೀಡಲಾಗುವುದು. ಅಣಕು ಕಾರ್ಯಾ ಚರಣೆಯನ್ನೂ ನಡೆಸಲಾಗು ವುದು. ಕಾನೂನು ಕಾಲೇಜಿಗೆ ಕರ್ನಾಟಕ ರಾಜ್ಯ ಕಾನೂನು ವಿವಿ ಹಾಗೂ ಕೇಂದ್ರ ವಕೀಲರ ಪರಿಷತ್ತಿನಿಂದ ಮಾನ್ಯತೆ ದೊರೆತಿದೆ. ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಬಿಎ, ಎಲ್ಎಲ್ಬಿ ಆರಂಭಿ ಸುವ ಯೋಜನೆಯೂ ಇದೆ ಎಂದರು.
ಮೂರುಸಾವಿರ ಮಠ ಆವರಣದ ಶಿಕ್ಷಣ ಸಮುಚ್ಚಯದ ಜ್ಞಾನ ಮಂದಿರದ ನೆಲ ಮಹಡಿಯ ಭಾಗವನ್ನು ಕಾನೂನು ಮಹಾವಿದ್ಯಾಲಯಕ್ಕೆ ತಾತ್ಕಾಲಿಕವಾಗಿ ಮೀಸಲಿಡಲಾಗಿದೆ. ಅಲ್ಲಿರುವ ಐಟಿಐ ತರಗತಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದರು. ಹುಬ್ಬಳ್ಳಿ -ಕುಸುಗಲ್ ರಸ್ತೆಯಲ್ಲಿರುವ ಶ್ರೀಮಠದ 3.20 ಎಕರೆ ಜಾಗದಲ್ಲಿ 2 ವರ್ಷದಲ್ಲಿ ಕಾನೂನು ಕಾಲೇಜ್ ಕಟ್ಟಡ ನಿರ್ಮಿಸಲಾಗುವುದು. ಕಾನೂನು ವಿವಿ ನಿಯಮದ ಪ್ರಕಾರ ವಿದ್ಯಾರ್ಥಿಗಳಿಂದ ಶುಲ್ಕ ಆಕರಿಸಲಾಗುವುದು ಎಂದರು. ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ನಿರ್ದೇಶಕ ಶಶಿ ಸಾಲಿ, ವೀರಣ್ಣ ಕಲ್ಲೂರ, ಲಿಂಗರಾಜ ಇಂಗಳಹಳ್ಳಿ, ಪ್ರಾಚಾರ್ಯೆ ಸವಿತಾ ದೇಶಪಾಂಡೆ, ಸದಾನಂದ ಡಂಗನವರ, ಚನ್ನಬಸಪ್ಪ ಧಾರವಾಡಶೆಟ್ರ ಇದ್ದರು.