ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಚೆನ್ನಮ್ಮ(ಈದ್ಗಾ) ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಮೌಲಾನಾ ಜಹೀರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಿತ್ಯ ನೀವು ಟಾಯ್ಲೆಟ್ ಗೆ ಹೋದ ಬಳಿಕ ಈ ಲಕ್ಷಣಗಳು ಕಾಣುತ್ತಾ!? ಹಾಗಿದ್ರೆ ಇದು ಹೊಟ್ಟೆ ಕ್ಯಾನ್ಸರ್!
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮೊಹಮ್ಮದ ಯುಸೂಫ ಸವಣೂರ, ಅಲ್ತಾಫ ಹಳ್ಳೂರ, ಬಸೀರ ಗೂಡಮಾಲೆ, ಮೆಹಮೂದ ಬಾಬಾಜಾನ್ ಮುಧೋಳ, ಅನ್ವರ್ ಮುಧೋಳ,ಸಲೀಂ ಸುಂಡಕೆ, ಶಾರೂಖಖಾನ ಮುಲ್ಲಾ, ಮಲ್ಲಿಕ ಸಿಕಂದರ, ಕೆ.ಡಿ. ಕಮ್ಮಾರ ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಮೂರು ಸಾವಿರ ಮಠಕ್ಕೆ ಭೇಟಿ
ಮುಸ್ಲಿಂ ಸಮುದಾಯವರು ಬಕ್ರೀದ್ ಹಬ್ಬ ಆಚರಣೆ ನಂತರ ಮುಸ್ಲಿಂ ಸಮುದಾಯದವರು ಎ.ಎಂ. ಹಿಂಡಸಗೇರಿ ಮುಂದಾಳತ್ವದಲ್ಲಿ ಮೂರುಸಾವಿರ ಮಠಕ್ಕೆ ತೆರಳಿ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಭೇಟಿಮಾಡಿ ಹೂವಿನ ಹಾರ ಹಾಕಿ ಗೌರವಿಸಿದರು. ಶ್ರೀಗಳು ಫಲ-ಪುಷ್ಪ ನೀಡಿ ಆಶೀರ್ವದಿಸಿದರು. ಈ ವೇಳೆ ಪರಸ್ಪರರು ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಶ್ರೀಮಠದ ಆಡಳಿತ ಮಂಡಳಿಯ ವಿಜಯ ಶೆಟ್ಟರ, ಮಲ್ಲಿಕಾರ್ಜುನ ಕಳಸರಾಯ, ವೀರೇಶ ಸಂಗಳದ, ಸದಾನಂದ ಡಂಗನವರ, ಸತೀಶ ಮೆಹರವಾಡೆ, ಅಪ್ಪಣ್ಣ ಬೆಂಡಿಗೇರಿ, ನವೀನ ಕುದರಿ ಇತರರು ಈ ಸಂದರ್ಭದಲ್ಲಿದ್ದರು. ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿರುವ ಮೂರುಸಾವಿರ ಮಠಕ್ಕೆ ಪ್ರತಿ ವರ್ಷ ಮುಸ್ಲಿಂ ಸಮುದಾಯದವರು ಭೇಟಿ ನೀಡುವುದು ನೂರಾರು ವರ್ಷಗಳಿಂದ ನಡೆದು ಬಂದ ಆಚರಣೆ ಆಗಿದೆ