ಬೆಂಗಳೂರು: ಹೆಚ್ಚಿನವರು ದೂರದ ಊರುಗಳಿಗೆ ಪ್ರಯಾಣಿಸಲು ರೈಲ್ವೆ ಸಾರಿಗೆಯನ್ನೇ ಅವಲಂಬಿಸಿಕೊಂಡಿರುತ್ತಾರೆ. ಆದರೆ ಈ ರೈಲ್ವೆ ಪ್ರಯಾಣ ಮಾಡುವ ಜಾಗರೂಕರಾಗಿರುವುದು ಮುಖ್ಯ. ಕೆಲವು ಯುವಕರು ರೈಲ್ವೆ ಪ್ರಯಾಣದ ವೇಳೆ ಹುಚ್ಚು ಸಾಹಸ ಗಳನ್ನು ಮಾಡಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವುದಿದೆ.
ಇನ್ನು ಕೆಲವೊಮ್ಮೆ ರೈಲು ಹತ್ತಲು ಹೋಗಿ ಅನಾಹುತಗಳು ಸಂಭವಿಸಿದ್ದು ಇದೆ. ಇದೀಗ ಚಲಿಸುತ್ತಿದ್ದ ರೈಲು ಹತ್ತುವ ಯತ್ನದಲ್ಲಿ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ಮಾಜಿ ಸೈನಿಕ ಹಾಗೂ ರೈಲ್ವೆ ಇಲಾಖೆಯ ಸಿಬ್ಬಂದಿ ರಕ್ಷಿಸಿದ ಘಟನೆ ಕೆ. ಆರ್. ಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!
ಸಿನಿಮೀಯ ಮಾದರಿಯಲ್ಲಿ ಪ್ರಯಾಣಿಕನನ್ನು ರಕ್ಷಿಸಿರುವ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮಂಗಳೂರು ಮಾರ್ಗದೆಡೆಗೆ ಹೊರಟಿದ್ದ ರೈಲು, ವೇಗ ಪಡೆದುಕೊಂಡಾಗ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದಿದ್ದು, ರೈಲು ಆತನನ್ನು ಎಳೆದುಕೊಂಡೇ ಮುಂದೆ ಸಾಗಿದೆ.
ರೈಲಿನಡಿ ಸಿಲುಕುವಷ್ಟರಲ್ಲಿ ಸ್ಥಳದಲ್ಲಿದ್ದ ಮಾಜಿ ಸೈನಿಕ ಸತೀಶ್ ಮತ್ತು ರೈಲ್ವೆ ಇಲಾಖೆಯ ಸಿಬ್ಬಂದಿ ಪ್ರದೀಪ್ ಕುಮಾರ್ ಪ್ರಯಾಣಿಕನನ್ನು ಪ್ಲಾಟ್ಫಾರ್ಮ್ನತ್ತ ಎಳೆದು ರಕ್ಷಣೆ ಮಾಡಿದ್ದಾರೆ. ಕೂದಲೆಳೆ ಅಂತರದಲ್ಲಿ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.