ಬಾಗಲಕೋಟ :- ದೆವ್ವ ಬಿಡಿಸೋದಾಗಿ ಜ್ಯೋತಿಷಿಯಿಂದ ಮಹಿಳೆಗೆ ವಂಚನೆ ಎಸಗಿರುವ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ. ತೇರದಾಳ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿ ಲಕ್ಷ್ಮಿ ಲಾಗಲೋಟಿ ಎಂಬುವಳಿಗೆ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೀಮಾಶಾಂಭವಿ ಶೆಟ್ಟಿ ಎಂಬುವಳಿಂದ ೨೮ ಲಕ್ಷ ಪಂಗನಾಮ ಹಾಕಲಾಗಿದೆ.
ಚಿನ್ನಸ್ವಾಮಿ ದುರಂತ: ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್!
ಮಗುವಿಗೆ ದೆವ್ವ ಬಿಡಿಸೋದಾಗಿ ಮೋಸ ಮಾಡಲಾಗಿದೆ. ಲಕ್ಷ್ಮಿಯ ೨ ವರ್ಷದ ಮಗುವಿಗೆ ಮೇಲಿಂದ ಮೇಲೆ ಜ್ವರ ಬರ್ತಿತ್ತು. ಸುಮಾರು ದಿನಗಳಿಂದ ಕಡಿಮೆಯಾಗಿರಲಿಲ್ಲ. ಲಕ್ಷ್ಮಿ ಸ್ನೇಹಿತೆಯಿಂದ ಸೀಮಾಶಾಂಭವಿ ಜ್ಯೋತಿಷಿ ಪರಿಚಯ ಆಗಿದ್ದ. ಆಗ ಮಗುವಿಗೆ ನಿಮ್ಮ ತಾಯಿ ದೆವ್ವವಾಗಿ ಕಾಡುತ್ತಿದ್ದಾಳೆ. ಹೋಮ ಹವನ,ವಿಶೇಷ ಪೂಜೆ ಮಾಡಬೇಕು ಎಂದು ಸೀಮಾ ವಂಚನೆ ಮಾಡಿದ್ದ. ಮಗುವಿನ ಹೆಸರಲ್ಲಿ ಪೂಜೆ,ನವಗ್ರಹ ಹೋಮ ಸೇರಿದಂತೆ ವಿವಿಧ ಹೋಮ ಮಾಡಿದ್ದೇನೆ ಎಂದು ನಂಬಿಸಿ ಮೋಸ ಮಾಡಲಾಗಿದೆ.
ವಿವಿಧ ಹೋಮದ ವಿಡಿಯೊ ಕಳಿಸಿ ನಂಬಿಸಿ ಪಂಗನಾಮ ಹಾಕಿದ್ದಾನೆ. ಪೋನ್ ಪೆ,ಆರ್ ಟಿ ಜಿ ಎಸ್ ಮೂಲಕ ಬರೊಬ್ಬರಿ ೨೮ ಲಕ್ಷ ಹಣ ಹಾಕಿಸಿಕೊಂಡು ವಂಚನೆ ಎಸಲಾಗಿದೆ. ಚಿನ್ನ ಮಾರಿ ತಾಯಿಯ ಡಿಪಾಜಿಟ್ ಹಣ ಕೊಟ್ಟು ಲಕ್ಷ್ಮೀ ಎಂಬಾಕೆ ಇದೀಗ ಕೈ ಸುಟ್ಟುಕೊಂಡಿದ್ದಾನೆ.
ಘಟನೆ ಸಂಬಂಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.