Close Menu
Ain Live News
    Facebook X (Twitter) Instagram YouTube
    Sunday, May 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ತಿಳಿದಿರಲಿ: ಅಡಿಕೆಯಲ್ಲಿ ಅಡಗಿರುವ ಆರೋಗ್ಯಕರ ಅಂಶಗಳನ್ನು ತಿಳಿದುಕೊಳ್ಳಿ!

    By AIN AuthorMay 25, 2025
    Share
    Facebook Twitter LinkedIn Pinterest Email
    Demo

    ನಮ್ಮ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆ ಹಾಗೂ ಅಡಿಕೆ ಎರಡನ್ನೂ ಶುಭವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಶುಭ ಸಮಾರಂಭಗಳಿಗೂ ಈ ಎರಡೂ ವಸ್ತುಗಳು ಬೇಕೆಬೇಕು. ಅಲ್ಲದೆ ನಮ್ಮ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ಇರುವಷ್ಟು ಬೆಲೆ ಯಾವುದಕ್ಕೂ ಇಲ್ಲ ಎಂದರೆ ತಪ್ಪಾಗಲಾರದು. ಊಟದ ನಂತರ ನಂತರ ಒಮ್ಮೆ ಎಲೆ ಅಡಿಕೆ ಹಾಕಲಿಲ್ಲ ಎಂದರೆ ಮಧ್ಯಾಹ್ನದ ಊಟವೂ ಅಪೂರ್ಣ ಎನ್ನಲಾಗುತ್ತದೆ. ಈ ಅಡಿಕೆ ತಿನ್ನುವುದರಿಂದ ದೇಹದ ಆರೋಗ್ಯದ ಮೇಲಾಗುವ ಪರಿಣಾಮ ಅಗಾಧ.

    ಬೇಸಿಗೆ ಕ್ರಿಕೆಟ್ ಶಿಬಿರ: ಪ್ರತಿಭಾವಂತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದ ಪರಿಷತ್ ಶಾಸಕ TA ಶರವಣ

    ಅಡಿಕೆ ಒಂದು ಪುಟ್ಟ ಕಾಯಿ. ಇದನ್ನು ಧಾರ್ಮಿಕ ಹಾಗೂ ವೈಜ್ಞಾನಿಕ ಸಂಗತಿಗಳಿಗೂ ಬಳಸುತ್ತಾರೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು. ಅಡಿಕೆಯನ್ನು ಬಳಸಿ ಸಾಕಷ್ಟು ಅನಾರೋಗ್ಯಗಳನ್ನು ಗುಣಪಡಿಸಬಹುದು. ಇತ್ತೀಚೆಗೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಬಹುದು ಎನ್ನುವುದನ್ನು ಸಂಶೋಧಿಸಲಾಗಿದೆ. ಅಡಿಕೆಯಿಂದ ಚಹಾ ತಯಾರಿಸಿ ಕುಡಿಯಬಹುದು. ಅದು ಸಹ ಆರೋಗ್ಯಕ್ಕೆ ಉತ್ತಮ ಔಷಧಿ.

    ಅಧಿಕ ಸಿಹಿ ಸೇವನೆ ಮಾಡುವವರ ಹಲ್ಲಿನಲ್ಲಿ ಸಾಮಾನ್ಯವಾಗಿ ಹುಳುಕು ಹಾಗೂ ರಂಧ್ರ ಉಂಟಾಗುವುದು. ಈ ಸಮಸ್ಯೆಯನ್ನು ತಡೆಯಲು ಅಡಿಕೆ ರಸವು ಸಹಾಯ ಮಾಡುವುದು. ಹಲ್ಲಿನಲ್ಲಿ ಇರುವ ಹುಳುಕು ಬೇರಿನ ಆಳಕ್ಕೆ ಹೋಗಿದ್ದರೆ ಅದು ಸಂವೇದನಾ ಶೀಲ ಹಲ್ಲಾಗಿ ಮಾರ್ಪಡುವುದು. ಅದರಿಂದ ಉಂಟಾಗುವ ನೋವುಗಳನ್ನು ಅಡಿಕೆಯ ರಸ ಶಮನಗೊಳಿಸುವುದು.

    ಮಧುಮೇಹ ಇರುವವರಲ್ಲಿ ಆಗಾಗ ಬಾಯಿ ಒಣಗುವುದು, ಬಾಯಲ್ಲಿ ಅತಿಯಾದ ದುರ್ಗಂಧ ಮತ್ತು ಕೆಟ್ಟ ಉಸಿರು ಉಂಟಾಗುವುದು. ಇಂತಹ ಸಮಸ್ಯೆಗಳಿಗೆ ಅಡಿಕೆ ಉತ್ತಮ ಪರಿಹಾರ ನೀಡುವುದು. ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಳ್ಳುವುದು ಅಥವಾ ಅಗೆಯುತ್ತಿರುವುದರಿಂದ ಅಧಿಕ ಲಾಲಾರಸ ಉತ್ಪತ್ತಿ ಆಗುವುದು. ಜೊತೆಗೆ ಬಾಯಿಂದ ಬರುವ ವಾಸನೆಯನ್ನು ತಡೆಯುವುದು. ಅಡಿಕೆಯಿಂದ ಬಾಯಿಗೆ ಸಂಬಂಧಿಸಿದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಸಹ ತಡೆಯಬಹುದು.

    ಸಾಕಷ್ಟು ಜನರು ಮಂದ ಬಣ್ಣದ ಹಲ್ಲು ಅಥವಾ ಹಳದಿ ಬಣ್ಣದ ಹಲ್ಲನ್ನು ಹೊಂದಿರುತ್ತಾರೆ. ಅತಿಯಾಗಿ ಕಾಫಿ, ಟೀ ಮತ್ತು ಇತರ ಅನುಚಿತವಾದ ಪಾನೀಯಗಳನ್ನು ಪದೇ ಪದೇ ಕುಡಿಯುತ್ತಿರುತ್ತಾರೆ. ಇವು ಹಲ್ಲುಗಳ ಮೇಲೆ ಹಳದಿ ಬಣ್ಣವನ್ನು ಸೃಷ್ಟಿಸುತ್ತವೆ. ನಿಧಾನವಾಗಿ ಅವು ಹಲ್ಲನ್ನು ಹುಳುಕನ್ನಾಗಿ ಮಾಡಿಸುವುದು ಮತ್ತು ಬಾಯಿಯ ಆರೋಗ್ಯವನ್ನು ಹಾಳುಮಾಡುವುದು. ಇಂತಹ ಸಮಸ್ಯೆ ಇರುವವರು ಅಡಿಕೆಯನ್ನು ಸುಟ್ಟಿ, ಪುಡಿಮಾಡಿಕೊಳ್ಳಬೇಕು. ನಂತರ ಆ ಪುಡಿಯನ್ನು ಹಲ್ಲುಗಳ ಮೇಲೆ ನೇರವಾಗಿ ಉಜ್ಜಬೇಕು. ಈ ಕ್ರಮವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಹಲ್ಲುಗಳು ಬಿಳುಪು ಮತ್ತು ಹೊಳಪನ್ನು ಪಡೆದುಕೊಳ್ಳುತ್ತವೆ.

    ಬಹುತೇಕ ಜನರು ಒಸಡಿನ ಸಮಸ್ಯೆಯಿಂದ ಬಳಲುತ್ತಾರೆ. ಒಸಡಿನ ಊತ, ರಕ್ತ ಸ್ರಾವ, ಸೆಳೆತಗಳಂತಹ ಸಮಸ್ಯೆಯನ್ನು ಹೊಂದಿರುತ್ತಾರೆ. ಅಂತಹವರು ಒಂದು ಕಪ್ ನೀರಿಗೆ ಅಡಿಕೆಯನ್ನು ಹಾಕಿ ಕುದಿಸಬೇಕು. ನಂತರ ಆ ನೀರಿನಲ್ಲಿ ಬಾಯಿ ಮುಕ್ಕುಳಿಸಬೇಕು. ಇಲ್ಲವೇ ಅಡಿಕೆಯನ್ನು ಸುಟ್ಟು, ಪುಡಿಮಾಡಿಕೊಳ್ಳಬೇಕು. ನಂತರ ಲವಂಗದ ಪುಡಿಯೊಂದಿಗೆ ಅದನ್ನು ಬೆರೆಸಿಕೊಳ್ಳಬೇಕು. ನಂತರ ಈ ಪುಡಿಯನ್ನು ನೀರಿನೊಂದಿಗೆ ಸೇರಿಸಿ, ಬಾಯನ್ನು ತೊಳೆಯಬೇಕು.

    ಆಗ ಒಸಡಿನ ಆರೋಗ್ಯ ಸುಧಾರಣೆ ಕಾಣುವುದು. ಒಸಡಿನ ಸೆಳೆತ ಅನುಭವಿಸುವವರು ಅಡಿಕೆಯ ಪುಡಿಯನ್ನು ತುಪ್ಪದಲ್ಲಿ ಹುರಿದು, ಅದನ್ನು ಓಂಕಾಳು ಅಥವಾ ಸೇಂಧಾ ಉಪ್ಪಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬೇಕು. ಆ ಪೇಸ್ಟ್ ಅನ್ನು ಬಾಧಿತ ಪ್ರದೇಶದಲ್ಲಿ ಅನ್ವಯಿಸಿ, ಸ್ವಲ್ಪ ಸಮಯ ಬಿಡುವುದರಿಂದ ಒಸಡಿನ ನೋವು ಶಮನವಾಗುವುದು.

    ಸಣ್ಣ ವಯಸ್ಸಿನಲ್ಲಿಯೇ ಕೆಲವರು ಅಜೀರ್ಣ ಸಮಸ್ಯೆಯನ್ನು ಹಾಗೂ ಮಲಬದ್ಧತೆಯನ್ನು ಅನುಭವಿಸುವರು. ಯಾರು ಅಜೀರ್ಣ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೋ ಅಂತಹವರು ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇದರಿಂದ ಅಜೀರ್ಣ ಸಮಸ್ಯೆಯು ಸುಧಾರಣೆ ಕಾಣುವುದು. ಸುಧಾರಿತ ಜೀರ್ಣ ಕ್ರಿಯೆಯು ಮಲಬದ್ಧತೆ ಉಮಟಾಗುವುದನ್ನು ತಡೆಯುವುದು. ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದು.

    ಮಹಿಳೆಯರ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಅಸಮತೋಲನದಿಂದ ಕೂಡಿದ್ದರೆ, ಲ್ಯುಕೋರಿಯಾ ಎನ್ನುವ ಹಳದಿ ಬಣ್ಣದ ಯೋನಿ ಸ್ರಾವ ಉಂಟಾಗುವುದು. ಇದು ಕೆಲವೊಮ್ಮೆ ವಾಸನೆಯಿಂದ ಕೂಡಿರುವ ಸಾಧ್ಯತೆಗಳು ಇರುತ್ತವೆ. ಅಡಿಕೆಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಅಥವಾ ಬಾಯಲ್ಲಿ ಅಡಿಕೆಯನ್ನು ಇಟ್ಟುಕೊಂಡು ರಸವನ್ನು ನುಂಗುತ್ತಾ ಇದ್ದರೆ ಹಾರ್ಮೋನ್‍ಗಳ ಅಸಮತೋಲನವು ಸುಧಾರಿಸುವುದು. ಋತುಚಕ್ರ ಆರಮಭವಾಗುವ ಮೊದಲು ಅಡಿಕೆಯ ರಸ ಸೇವಿಸಿದರೆ ಯೋನಿ ಸೆಳೆತ, ಹೊಟ್ಟೆನೋವು ಕಡಿಮೆಯಾಗುವುದು.

    ರಾತ್ರ್ರಿ ಪ್ರಯಾಣ ಅಥವಾ ರಾತ್ರಿವೇಳೆ ವಾಹನವನ್ನು ಓಡಿಸುವ ಸಮಯ ಬಂದಾಗ ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು. ಅದರ ರಸವು ಹೊಟ್ಟೆಗೆ ಹೋಗುತ್ತಿರಬೇಕು. ಹೀಗೆ ಮಾಡುವುದರಿಂದ ಮನಸ್ಸು ಜಾಗ್ರತವಾಗಿರುತ್ತದೆ. ಕಣ್ಣುಗಳು ಅಷ್ಟು ಬೇಗ ನಿದ್ರೆಗೆ ಜಾರದಂತೆ ನೋಡಿಕೊಳ್ಳುವುದು.

    ಹೊಟ್ಟೆ ಮತ್ತು ಕರುಳಿನ ದ್ರವ ತಿಂದ ಆಹಾರಗಳನ್ನು ಜೀರ್ಣಿಸಲು ವಿಫಲವಾದಾಗ ಅತಿಸಾರ ಉಂಟಾಗುವುದು. ಆಗ ದೇಹದಿಂದ ಅಧಿಕ ನೀರಿನಂಶವು ಹೊರ ಹೋಗುವುದು. ಇದು ನಿಯಂತ್ರಣಕ್ಕೆ ಬರದೆ ಹೋದರೆ ವ್ಯಕ್ತಿ ಸಾವಿಗೂ ಒಳಗಾಗಬಹುದು. ಅಂತಹ ಸಮಯದಲ್ಲಿ ಅಡಿಕೆ ರಸವನ್ನು ಸೇವಿಸುವುದು ಅಥವಾ ಬಾಯಲ್ಲಿ ಅಡಿಕೆಯನ್ನು ಜಗೆದು ರಸವನ್ನು ನುಂಗುವುದರಿಂದ ಹೊಟ್ಟೆ ಉಬ್ಬುವುದು, ಪದೇ ಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ಹಾಗೂ ಅತಿಸಾರದ ಸಮಸ್ಯೆಯು ನಿಯಂತ್ರಣವಾಗುವುದು. ವ್ಯಕ್ತಿ ಆರೋಗ್ಯದಲ್ಲಿ ಬಹುಬೇಗ ಚೇತರಿಕೆ ಕಾಣುವನು

    ಅಕಾಲಿಕ ಸ್ಖಲನವನ್ನು ತಡೆಯಲು ಅಡಿಕೆ ಅತ್ಯುತ್ತಮವಾದದ್ದು. ಇದು ಪುರುಷರಲ್ಲಿ ಬಂಜೆತನವನ್ನು ಉಂಟುಮಾಡುವುದು. ವೀರ್ಯಗಳು ಅಂಡಾಣು ಮೊಟ್ಟೆಯನ್ನು ಸೇರುವ ಶಕ್ತಿಯಲ್ಲೂ ವಿಫಲತೆಯನ್ನು ಅನುಭವಿಸುವುದು. ಅಂತಹವರು ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇಲ್ಲವೇ ಅಡಿಕೆಯ ರಸವನ್ನು ಸೇವಿಸಬೇಕು. ಅದು ಪುರುಷರಿಗೆ ಪುನರ್ ಯೌವನ ತಂದುಕೊಡುವುದು

    ಕೆಲವರಲ್ಲಿ ಸ್ನಾಯುವಿನ ನೋವು ಅಥವಾ ಸ್ನಾಯುವಿನಲ್ಲಿ ಬಲ ಇಲ್ಲದೆ ಇರುವುದು ಕಾಣಬಹುದು. ಅವರಲ್ಲಿ ಮಂದ ಮಾತುಗಳು ಉಂಟಾಗುತ್ತವೆ. ನಿಯಮಿತವಾಗಿ ಅಡಿಕೆಯ ರಸವನ್ನು ಕುಡಿಯುವುದು ಅಥವಾ ನುಂಗುವುದು ಮಾಡಿದರೆ ಸ್ನಾಯುವಿನಲ್ಲಿ ಶಕ್ತಿ ಹೆಚ್ಚುವುದು. ಮಾತುಗಳು ಸಹ ಸುಧಾರಣೆ ಕಾಣುತ್ತವೆ.

    ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ರಕ್ತ ಹೀನತೆ ಉಂಟಾಗುವುದು. ಅಪೌಷ್ಟಿಕ ಹಾಗೂ ಅಸಮತೋಲನದಿಂದ ಕೂಡಿರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು. ಅಡಿಕೆಯನ್ನು ಸೇವಿಸುವುದರಿಂದ ರಕ್ತ ಹೀನತೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದನ್ನು ಸುಲಭವಾಗಿ ತಡೆಯಬಹುದು

    Demo
    Share. Facebook Twitter LinkedIn Email WhatsApp

    Related Posts

    ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!

    May 25, 2025

    Karnataka Covid Guidelines: ಮತ್ತೆ ಬಂತು ಕೊರೊನಾ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ – ಇಲ್ಲಿದೆ ಸಂಪೂರ್ಣ ಮಾಹಿತಿ

    May 24, 2025

    ಅಪ್ಪಿತಪ್ಪಿಯೂ ಇವುಗಳನ್ನು ಕುಕ್ಕರ್’ನಲ್ಲಿ ಬೇಯಿಸಬೇಡಿ..! ಇದು ಅನಾರೋಗ್ಯವನ್ನು ಖರೀದಿಸಿದಂತೆ..

    May 24, 2025

    ಪ್ರತಿನಿತ್ಯ ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಗೊತ್ತಾ!?

    May 23, 2025

    ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದ್ರೆ ಸಾಕು ಸಂಪೂರ್ಣ ನಾರ್ಮಲ್ ಆಗುತ್ತೆ ಶುಗರ್ ಲೆವಲ್.!

    May 23, 2025

    ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ..? ಇಲ್ಲಿದೆ ರಂಗೋಲಿ ಕುರಿತು ಇಂಟ್ರಸ್ಟಿಂಗ್ ಮಾಹಿತಿ

    May 23, 2025

    ಗುಡ್ ನ್ಯೂಸ್: ಕ್ಯಾನ್ಸರ್ ರೋಗಿಗಗಳಿಗಾಗಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ!

    May 23, 2025

    ರಾತ್ರಿ ನೀವು ಚಪಾತಿ ತಿಂದು ಮಲಗ್ತೀರಾ!? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ!

    May 22, 2025

    ನಿತ್ಯವೂ ರೋಗಿಗಳ ಹಾರೈಕೆಯಲ್ಲಿರುವ ನರ್ಸ್‌ಗಳಿಗೆ ವಿಶೇಷ ದಿನಾಚರಣೆ!

    May 22, 2025

    ಹಿಮ್ಮಡಿ ಹೊಡೆದು ಧಗಧಗನೆ ಉರಿತಿದ್ಯಾ!? ಹಾಗಿದ್ರೆ ಈ ಮನೆಮದ್ದು ಫಾಲೋ ಮಾಡಿ!

    May 22, 2025

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025

    ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.