ರಾಜ್ಯ ಸರ್ಕಾರವು ಈ ಕೂಡಲೇ ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು, ತುಂಗಭದ್ರಾ ಕಾಲುವೆಗಳಿಗೆ ಟಿ.ಬಿ.ಡ್ಯಾಂ ನಿಂದ ಕಾಲುವೆಗೆ ಕೂಡಲೇ ನೀರು ಬಿಡುವಂತೆ ತುಂಗಭದ್ರಾ ರೈತ ಸಂಘದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಮಾತನಾಡಿ ಸರ್ಕಾರ ಮತ್ತು ತುಂಗಭದ್ರ ಮಂಡಳಿಯವರು ಸಂಬಂಧಪಟ್ಟ ಜಿಲ್ಲೆಗಳ ಸಂಸದರು -ಶಾಸಕರನ್ನು ಒಳಗೊಂಡಂತೆ ಐಸಿಸಿ ಸಭೆ ಕರೆದು ನೀರು ಬಿಡುವ ನಿರ್ಧಾರ ತೆಗೆದುಕೊಳ್ಳಬೇಕು.
ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?
ಜಲಾಶಯದಲ್ಲಿ ಈಗಾಗಲೇ 35 ಟಿ.ಎಂಸಿ. ನೀರು ಸಂಗ್ರಹವಾಗಿದ್ದು, 8,500 ಕ್ಯೂಸೆಕ್ಸ್ಗಳ ನೀರಿನ ಒಳ ಹರಿವೂ ಇದ್ದು ಇನ್ನೂ ಮರ್ನಾಲ್ಕು ದಿನಗಳಲ್ಲಿ 25ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗುವ ನಿರೀಕ್ಷೆ ಹೊಂದಲಾಗಿದೆ. ಆದರೂ ಈವರೆಗೂ ಐಸಿಸಿ ಸಭೆಯ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದರು.