ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆ ನೀರು ಹಾರಿದ್ದಕ್ಕೆ ವ್ಯಕ್ತಿಯ ಬೆರಳು ಕತ್ತರಿಸಿರುವ ಘಟನೆ ಜರುಗಿದೆ. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪಕ್ಕದ ಕಾರಿಗೆ ಮಳೆ ನೀರು ಹಾರಿದೆ.ಮಳೆ ನೀರು ಹಾರಿದ್ದಕ್ಕೆ ಕಾರು ಮಾಲಿಕನ ಕೈ ಬೆರಳು ಕಟ್ ಆಗಿದೆ.
ವ್ಯಕ್ತಿಯೊಬ್ಬನಿಂದ ಕ್ಷುಲ್ಲಕ ಕಾರಣಕ್ಕೆ ಇನ್ನೊಂದು ಕಾರು ಚಾಲಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆ ಜಯಂತ್ ದಂಪತಿಗಳು ತತೆರಳುತ್ತಿದ್ದರು. ಈ ವೇಳೆ ಮೆಜೆಸ್ಟಿಕ್ ಓಕುಳಿಪುರಂ ಅಂಡರ್ ಪಾಸ್ ನಲ್ಲಿ ನಿಂತಿದ್ದ ನೀರು ಪಕ್ಕದ ಕಾರಿಗೆ ಹಾರಿದೆ. ಕೂಡಲೇ ಕಾರು ನಿಲ್ಲಿಸಿ ಅವಾಚ್ಯ ಪದಗಳಿಂದ ಪಕ್ಕದ ಕಾರಿನ ವ್ಯಕ್ತಿ ನಿಂದಿಸಿದ್ದಾನೆ. ಮಳೆ ನೀರು ಹಾರಿಸಿದ್ದಕ್ಕೆ ಮೊದಲೆ ಕ್ಷಮೆ ಕೇಳಿದ್ದರೂ ವ್ಯಕ್ತಿ ಬಿಟ್ಟಿಲ್ಲ. ಜಯಂತ್ ಎಂಬವರ ಕಾರು ಹಿಂಬಾಲಿಸಿ ಅಡ್ಡಗಟ್ಟಿದ್ದಾನೆ.
KA02 MT0512 I20 ಕಾರಿನಲ್ಲಿ ಹೋಗುತ್ತಿದ್ದ ಆಸಾಮಿಯಿಂದ ಜಯಂತ್ ಕೈ ಬೆರಳು ಕಟ್ ಮಾಡಲಾಗಿದೆ. ಬಲಗೈ ಬೆರಳು ತುಂಡಾಗಿ ಜಯಂತ್ ಆಸ್ಪತ್ರೆಯಲ್ಲಿ ಸರ್ಜರಿಗೊಳಗಾಗಿದ್ದಾರೆ. ಜಯಂತ್ ಬೆರಳು ಸರ್ಜರಿ ಮಾಡಿ ಐದು ಸ್ಟಿಚ್ ಹಾಕಿದ್ದಾರೆ. 6 ತಿಂಗಳು ರೆಸ್ಟ್ ಮಾಡುವಂತೆ ಜಯಂತ್ ಗೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ತನ್ನದಲ್ಲದ ತಪ್ಪಿಗೆ 2ಲಕ್ಷ ಆಸ್ಪತ್ರೆ ಬಿಲ್ ಕಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,
ಕಾರು ಚಾಲಕನ ವಿರುದ್ದ ಎಫ್ ಐಆರ್ ದಾಖಲಿಸಿ ಪೊಲೀಸರಿಂದ ತನಿಖೆ ಶುರುವಾಗಿದೆ.