ಬೆಂಗಳೂರು:- ಬೆಂಗಳೂರಿನ ಆರ್.ಆರ್.ನಗರದ ಷಣ್ಮುಕ ದೇವಸ್ಥಾನದ ಸಮೀಪ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದಿರುವ ಘಟನೆ ಜರುಗಿದೆ.
ಮಳೆಗೆ ಹೆದರದೆ 2 ಗಂಟೆಗಳ ಕಾಲ ಕೆರೆಯಲ್ಲೇ ಕುಳಿತ ಹುಲಿ: ದೃಶ್ಯ ಕಂಡು ಪ್ರವಾಸಿಗರು ಖುಷ್!
28 ವರ್ಷದ ದೀಪು, 27 ವರ್ಷದ ಅರುಣ್ ಗುಂಡೇಟು ತಿಂದ ಆರೋಪಿಗಳು. ಬಂಧಿಸಲು ತೆರಳಿದ್ದ ವೇಳೆ ಆರೋಪಿಗಳು ಎಎಸ್ಐ ಕುಮಾರ್, ಕಾನ್ಸ್ಟೇಬಲ್ ಕರೀಂಸಾಬ್ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಜೆಜೆ ನಗರ ಪೊಲೀಸ್ ಠಾಣೆ ಪಿಐ ಕೆಂಪೇಗೌಡ, ಪಿಎಸ್ಐ ಪದ್ಮನಾಭ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡುರಸ್ತೆಯಲ್ಲೇ ಯುವಕನನ್ನು ಕೊಂದಿದ್ದ ಆರೋಪಿಗಳು;
ವಿಜಯ್ (26) ಎಂಬುವರನ್ನು ಮಾತುಕತೆಗೆ ಅಂತ ಜೆ.ಜೆ.ನಗರದ ಜನತಾ ಕಾಲೋನಿಗೆ ಕರೆಸಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜೆ.ಜೆ.ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು, ವಿಜಯ್ ಶನಿವಾರ (ಜೂ.14) ಜೈಲಿನಿಂದ ಹೊರಬಂದಿದ್ದನು.
ಶನಿವಾರ ರಾತ್ರಿ ವಿಜಯ್ನನ್ನು ಮಾತುಕತೆಗೆ ಅಂತ ಕರೆಸಿ ಆರೋಪಿಗಳು ಏರಿಯಾದಲ್ಲಿ ಅಟ್ಟಾಡಿಸಿ ಹತ್ಯೆಗೈದಿದ್ದರು.