ಚಾಮರಾಜನಗರ : ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಕೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಭೀಮ ಎಂಬ ಹುಲಿಯು ಅಧಿಕಾರಿ ಮತ್ತು ಸಫಾರಿ ವಾಹನದ ನಡುವೆಯೇ ಹೆಜ್ಜೆ ಹಾಕಿದ್ದು ಪ್ರವಾಸಿಗರು ರೋಮಾಂಚಿತರಾಗಿದ್ದಾರೆ.
ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಕೂಡ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರದಲ್ಲೇ ಸುಳಿದಾಡುತ್ತಾ ಪ್ರವಾಸಿಗರನ್ನ ಮನಸೂರೆಗೊಳಿಸುತ್ತಿತ್ತು. ಪ್ರಿನ್ಸ್ ಕಾಲವಾದ ನಂತರ ಅದೇ ರೀತಿ ಇದೀಗ ಭೀಮ ಎಂಬ ಹೆಸರಿನ ಖ್ಯಾತಿಯ ಹುಲಿಯು ಜೀಪಿನ ಮುಂದೆಯೇ ನಿರಾಂತಕವಾಗಿ ಹೆಜ್ಜೆ ಹಾಕಿ ತೀರಾ ಸನಿಹದಲ್ಲೇ ನೀರಿಗಿಳಿದು ರಿಲಾಕ್ಸ್ ಗೆ ಜಾರಿದ್ದನ್ನು ಕಂಡ ಪ್ರವಾಸಿಗರು ರೋಮಾಂಚಿತರಾಗಿದ್ದಾರೆ.
ಭೀಮನ ದರ್ಬಾರ್ ಹಾಗೂ ಭೀಮಾ ಹುಲಿಯ ದುನಿಯಾ ನೋಡಲು ಇದೀಗ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಾ ಇದೆ. ಹುಲಿಯ ಖದರ್ ನಡಿಗೆಯನ್ನು ನೋಡಲು ಬೇಸಿಗೆಯ ರಜಾ ದಿನದಲ್ಲೀಗ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚಾಗ್ತಲೇ ಇದೆ.