ಧಾರವಾಡ : ವಿರೋಧದ ನಡುವೆ ಮೃಣಾಲ್ ಸಕ್ಕರೆ ಕಾರ್ಖಾನೆಗೆ ಭೂಮಿ ಪೂಜೆ ನಡೆದಿದೆ. ಸಕ್ಕರೆ ಕಾರ್ಖಾನೆಯ ಶಂಕು ಸ್ಥಾಪನೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗಿಯಾಗಿದ್ದರು.
ಗ್ರಾಮ ಪಂಚಾಯಿತಿ ಮತ್ತು ರೈತರ ವಿರೋಧದ ನಡುವೆ ಧಾರವಾಡ ತಾಲ್ಲೂಕಿನ ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮದ ಸರಹದ್ದಿನಲ್ಲಿ ಮೃಣಾಲ್ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿಸಿದ್ದು, ವಿರೋಧಿಸಿ ಪ್ರತಿಭಟಿಸಿದ ಗ್ರಾಮಸ್ಥರ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತುಕತೆ ನಡೆಸಿದರು.
ಆಸ್ಪತ್ರೆಗೆ ಭೂಮಿ ಕೊಟ್ಟವರಿಗೆ ಸಿಗದೇ ಪರಿಹಾರ ; ಕೋರ್ಟ್ ಆದೇಶದಂತೆ ಡಿಹೆಚ್ ಓ ಕಾರು ಜಪ್ತಿ
ಯಾದವಾಡ ಹಾಗೂ ಕರಡಿಗುಡ್ಡ ಗ್ರಾಮದ ಸರಹದ್ದಿನಲ್ಲಿ ಮೃಣಾಲ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುರುವಾರ ಪೂಜೆ ನೆರವೇರಿಸಿದರು.