ಬೆಂಗಳೂರು:- ಕರ್ನಾಟಕ ರಾಜ್ಯ ಭರವಸೆ ಸಮಿತಿಯ ಅಧ್ಯಕ್ಷರು ಹಾಗೂ ಪರಿಷತ್ ಶಾಸಕ ಟಿಎ ಶರವಣ ಅವರು ಇಂದು ಬಿಹಾರ ರಾಜ್ಯ ಸರ್ಕಾರಿ ಭರವಸೆ ಸಮಿತಿಯ ಸದಸ್ಯರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸಮಿತಿಯ ಕಾರ್ಯವೈಕರಿ ಕುರಿತಂತೆ ಚರ್ಚೆ ನಡೆಸಿದರು.
ಸಭೆಯಲ್ಲಿ ಭರವಸೆಗಳ ಅನುಷ್ಠಾನ, ರಾಜ್ಯಗಳ ಅನುಭವಗಳ ವಿನಿಮಯ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆದಿದೆ. ಇವು ಉಭಯ ರಾಜ್ಯಗಳ ಮಧ್ಯೆ ಉತ್ತಮ ಆಡಳಿತ ಸಹಕಾರಕ್ಕೆ ಮತ್ತಷ್ಟು ದಾರಿ ತೆರೆದಂತಾಗಿದೆ.
ಇನ್ನೂ ಬಿಹಾರದಿಂದ ಆಗಮಿಸಿದ್ದ ನಿಯೋಗದಲ್ಲಿ ಭರವಸೆ ಸಮಿತಿಯ ಅಧ್ಯಕ್ಷ ಮತ್ತು ಶಾಸಕರಾದ ವೀರೇಂದ್ರ ನಾರಾಯಣ್ ಯಾದವ್, ಶಾಸಕರು ಹಾಗು ಸಮಿತಿಯ ಸದಸ್ಯರಾದ ಸರ್ವೇಶ್ವರ್ ಕುಮಾರ್, ಕುಮಾರ್ ನಾಗೇಂದ್ರ ರವರು ಉಪಸ್ಥಿತರಿದ್ದರು.