ಬೆಂಗಳೂರು: ಹಾಲು, ವಿದ್ಯುತ್ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಾಳೆಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಬಿಜೆಪಿ ನಾಯಕರ ಪ್ರತಿಭಟನೆಗೆ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಟಕ್ಕರ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಹಳ ಒಳ್ಳೆಯದು, ತಡವಾಗಿ ಆದರೂ ಬಿಜೆಪಿಯವರಿಗೆ ಜ್ಞಾನೋದಯ ಆಗಿದೆ. ಬೆಲೆ ಏರಿಕೆ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕಿತ್ತು. ಮೋದಿಯವರ ಆರ್ಥಿಕ ನೀತಿಯಿಂದ ಜನ ಸಾಮಾನ್ಯರ ಬದುಕು ಸಂಕಷ್ಟದಲ್ಲಿ ಇದೆ. ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ಇಂದು ಆರ್ಥಿಕವಾಗಿ ಹದಗೆಟ್ಟಿದೆ. ಜನಾಕ್ರೋಶ ಪ್ರತಿಭಟನೆ ಕೇಂದ್ರದ ವಿರುದ್ಧ ಮಾಡಬೇಕು. ನಮ್ಮ ಸರ್ಕಾರದ ಮಾಡಿದ್ರೆ ಪ್ರಯೋಜ ಇಲ್ಲ ಎಂದಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಸರಿಯಾಗಿ ಚರ್ಚೆ ಮಾಡಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ಸಮರ ಮುಚ್ಚಿ ಹಾಕಲು ಪ್ರತಿಭಟನೆಗೆ ಪ್ಲಾನ್ ಮಾಡಿದ್ದಾರೆ.
ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ, ಸಮನ್ವಯತೆಯೂ ಇಲ್ಲ. ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಅನಿವಾರ್ಯತೆ ಎದುರಾಗಿದೆ.
ಕೆಲಸಕ್ಕೆ ಬಾರದವರು ಹಲಾಲ್ ಅಂದರು. ಹನಿಟ್ರ್ಯಾಪ್ ಅಂದರು, ಇಷ್ಟೆಲ್ಲಾ ಚರ್ಚೆ ಆಯ್ತು.
ಯಾಕೆ ಬೆಲೆ ಏರಿಕೆ ಕುರಿತು ಚರ್ಚೆ ಆಗಲಿಲ್ಲ. ಎಲ್ಲಿ ಲೋಪ ಇದ್ಯಾ ಅಂತ ಮಾತಾಡಲಿಲ್ಲ.
ಯತ್ನಾಳ್, ವಿಜಯೇಂದ್ರ ನಡುವಿನ ಸಮರ ಮುಚ್ಚಿ ಹಾಕೋಕೆ ಪ್ರತಿಭಟನೆ ನಡೀತಿದೆ. ಬಿಜೆಪಿಯರಿಗೆ ನೈತಿಕತೆ, ಸಾಮರ್ಥ್ಯ ಇಲ್ಲ. ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ, ನಾಯಕತ್ವದ ಕೊರತೆ ಇದೆ. ಸಮಯನ್ವಯದ ಕೊರತೆ, ಈರ್ಷೆ ಎದ್ದು ಕಾಣ್ತಿದೆ. ಹೀಗಾಗಿ ಒಗ್ಗಟು ಪ್ರದರ್ಶಿಸೋ ಅನಿವಾರ್ಯತೆ ಇದೆ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.