ಬೆಂಗಳೂರು:- ಬಿಜೆಪಿ ಮುಖಂಡ ಪ್ರಿಯಾಂಗು ಪಾಂಡೆ ಮೇಲೆ ಗುಂಡಿನ ದಾಳಿ ಕೇಸ್ ಗೆ ಸಂಬಧಪಟ್ಟಂತೆ ಮತ್ತೋರ್ವ ಆರೋಪಿಯನ್ನು NIA ಅಧಿಕಾರಿಗಳು ಅರೆಸ್ಟ್ ಮಾಡಿದೆ. ಬಂಧಿತ ಆರೋಪಿಯನ್ನು ಮೋಹಿತ್ ಮಹತೋ ಅಲಿಯಾಸ್ ಸಾಹಿಲ್ ಎಂದು ಗುರುತಿಸಲಾಗಿದೆ.
ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!
2024ರ ಆ.28ರಲ್ಲಿ ಮಾಜಿ ಸಂಸದ ಅರ್ಜುನ್ ಸಿಂಗ್ ಮನೆಗೆ ತೆರಳುವ ಮಾರ್ಗಮಧ್ಯೆ ಭಾತ್ಪರಾ ಬಳಿ ಪ್ರಿಯಾಂಗು ಪಾಂಡೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಪ್ರಿಯಾಂಗು ಪಾಂಡೆ ಮತ್ತು ಅವರ ಕಾರು ಚಾಲಕ ಗಾಯಗೊಂಡಿದ್ದರು. ಸ್ಥಳೀಯ ಪೊಲೀಸರು 12 ಜನ ಆರೋಪಿಗಳನ್ನ ಬಂಧಿಸಿದ್ದರು. ಎನ್ಐಎ ಯಿಂದ ಈ ಪ್ರಕರಣದಲ್ಲಿ ಇಲ್ಲಿವರೆಗೂ ಒಟ್ಟು ಐದು ಜನರನ್ನು ಬಂಧಿಸಲಾಗಿದೆ.
ಭಾಟ್ಪಾರಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಬಾಂಬ್ ಎಸೆದಿದ್ದಾರೆ ಎಂದು ಪ್ರಿಯಾಂಗು ಪಾಂಡೆ ಆರೋಪಿಸಿದ್ದರು. ‘ನಾನು ನಮ್ಮ ನಾಯಕ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಹೋಗುತ್ತಿದ್ದೆವು. ಭಟ್ಪರಾ ಪುರಸಭೆಯಿಂದ ಜೆಟ್ಟಿಂಗ್ ಯಂತ್ರದಿಂದ ರಸ್ತೆಯನ್ನು ನಿರ್ಬಂಧಿಸಲಾಗಿತ್ತು’.
‘ನಮ್ಮ ಕಾರು ನಿಂತ ಕ್ಷಣ, ಸುಮಾರು 50 ರಿಂದ 60 ಜನರು ನನ್ನ ವಾಹನದ ಮೇಲೆ ಕನಿಷ್ಠ ಏಳರಿಂದ ಎಂಟು ಬಾಂಬ್ ಎಸೆದರು. ನಂತರ ಏಳು ಸುತ್ತು ಗುಂಡಿನ ದಾಳಿ ಮಾಡಿದ್ದರು. ಇದು ತೃಣಮೂಲ ಮತ್ತು ಪೊಲೀಸರ ಜಂಟಿ ಸಂಚು’ ಎಂದು ಪ್ರಿಯಾಂಗು ಪಾಂಡೆ ಆರೋಪಿಸಿದ್ದರು.